ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಾದಲೀಲೆ: ಬೇಂದ್ರೆ ಕಾವ್ಯ ವಾಚನ ಕಾರ್ಯಕ್ರಮದ ವರದಿ

'ದೀಪದ ಮಲ್ಲಿ' ಎಂಬ ನನ್ನ ಪದ್ಯದಲ್ಲಿ 'ಮೌನ'ದ ಮಾತು ಬರುತ್ತದೆ. ಆ ದೀಪದ ಮಲ್ಲಿ ನನ್ನ ಹತ್ತಿರಿರುವ ಒಂದು ಗೊಂಬೆ; ಶಿವಮೊಗ್ಗದಲ್ಲಿ ಒಬ್ಬರು ಅದನ್ನು ನನಗೆ ಕೊಟ್ಟರು. ಕೈಯಲ್ಲಿ ಒಂದು ಆರತಿ ಹಿಡಕೊಂಡು ನಿಂತುಬಿಟ್ಟಿದೆ 'ದೀಪದ ಮಲ್ಲಿ'ಯ ಗೊಂಬೆ! ಅದಕ್ಕೆ ನಾನು ಕೇಳಿಯೇ ಕೇಳುತ್ತೇನೆ: "ಯಾರ ಸಲುವಾಗಿ ಈ ಪ್ರಣತಿಯನ್ನು ಹಿಡಿದು ನಿಂತುಬಿಟ್ಟಿದ್ದೀಯಾ? ಒಳಗೆ ಎಣ್ಣೆ ಇಲ್ಲ, ಬತ್ತಿ ಇಲ್ಲ, ದೀಪವಂತೂ ಇಲ್ಲವೇ ಇಲ್ಲ! ಆದರೆ ನಿನ್ನ ಮುಖದ ಮೇಲೆ ಸ್ಮಿತ ಇದೆಯಲ್ಲ; ಆ ಸ್ಮಿತದಲ್ಲಿ ಎಲ್ಲ ಇದೆ- ಆ ದೀಪ, ಆ ಸ್ನೇಹ, ಆ ಪ್ರಣತಿ, ಆ ವರ್ತಿಕಾ. ಈ ಆರತಿ ಯಾರಿಗೆ ಎತ್ತಿರುವೆ, ತಾಯಿ?" ಹೀಗೆ ಕೇಳಿದರೆ, ಅದು ಕೊನೆಗೆ ಹೇಳುತ್ತದೆ: "ಶ್...! ನಾನು ಹ್ಯಾಂಗ ಸುಮ್ಮನಿದ್ದೀನಿ, ಹಾಗೆ ಸ್ವಲ್ಪ ಸುಮ್ಮನಿರು." ಸುಮ್ಮನಿದ್ದಾಗ ಕಾಣುವಂಥಾದ್ದು- ಆ ಸ್ನೇಹ, ಆ ಪ್ರಣತಿ, ಆ ವರ್ತಿಕಾ, ಆ ದೀಪಶಿಖೆ!

ರಾಶಿ ರಾಶಿ ಭವಿಷ್ಯ

ಬೊಗಳೆ ರಗಳೆ ಬ್ಯುರೋದಲ್ಲಿ ಭವಿಷ್ಯವಾಣಿಯಿಲ್ಲದೆ ನಮಗೆ ಭವಿಷ್ಯವೇ ಇಲ್ಲ ಎಂಬ ಓದುಗರ ದೂರಿನ ಹಿನ್ನೆಲೆಯಲ್ಲಿ ಇದೋ ಮತ್ತೊಮ್ಮೆ ಭವಿಷ್ಯ ನುಡಿಯಲಾಗುತ್ತಿದೆ. ನಿಮ್ಮ ಭವಿಷ್ಯ ನಮ್ಮ ಕೈಯಲ್ಲಿ, ನಮ್ಮ ಭವಿಷ್ಯ ನಿಮ್ಮ ಕೈಯಲ್ಲಿ! (bogaleragale.blogspot.com)

ಇಸ್ಮಾಯಿಲರ ಮದುವೆ

ಹಾಸನದಿಂದ ಸಕಲೇಷಪುರದೆಡೆ ಒಂದಷ್ಟು ಮೈಲಿ ದೂರ, ಅತ್ತ ಎಡಕ್ಕೆ ತಿರುಗಿ "ಮಡ್ ರೋಡ್" ಎಂದರೂ ನಾಚುವಂತ ಅಸಾಧ್ಯವಾದ ರೋಡಿನಲ್ಲಿ ಒಂದೆರಡು ಮೈಲಿ - ಅಲ್ಲಿ ಒಂದು ಬಸ್ಸು ಮಾತ್ರ ಹಿಡಿಸುವಷ್ಟು ಅಗಲದ ರೋಡು - ಪಕ್ಕದಲ್ಲೇ ಚೆಂದವಾದ ಒಂದು ಮನೆ. ದಾರಿಯುದ್ದಕ್ಕೂ ಅಲ್ಲಿಲ್ಲಿ ಮನೆಗಳು - ಒಂದೆರಡು ಮುಖ ಕಂಡರೂ ಹೆಚ್ಚು ಎಂಬಂತಿದ್ದರೂ ಮನೆಯ ಸುತ್ತಲು ಬೆಂಗಳೂರಿನಲ್ಲಿ ಮಾತ್ರ ಸಾಮಾನ್ಯವೆಂಬಷ್ಟು ಜನಜಂಗುಳಿ. ತಲುಪತ್ತಲೇ ಎದುರಿಗೆ ಈ ಜನಸ್ತೋಮವನ್ನು ನಿಯಂತ್ರಿಸುತ್ತ , ಬಂದವರನ್ನು ಸ್ವಾಗತಿಸುತ್ತ ಸ್ವಚ್ಛ ಕನ್ನಡದಲ್ಲಿ ಮಾತನಾಡುತ್ತ ಸ್ವಾಗತಿಸುತ್ತಿದ್ದ ಪಾಳ್ಯದ ಹಮೀದ. ಅತ್ತಿತ್ತ ಪತ್ರಿಕೆಯ ಆಫೀಸುಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ಸ್ನೇಹಿತರ ಮುಖಗಳು. ನಡೆಯುತ್ತಿದ್ದುದು ನಮ್ಮೆಲ್ಲರ ಆಪ್ತ ಸ್ನೇಹಿತ [:http://sampada.net/user/ismail|ಇಸ್ಮಾಯಿಲರ] ಮದುವೆ.

ಹಳೇ ವಿಂಡೋಸ್‌ಗಳಿಗೆ ಐ.ಎಮ್.ಇ

ವಿಂಡೋಸ್‌ ೯೮ ಮತ್ತು ಎಮ್.ಇ ಗಳಲ್ಲಿ ಯೂನಿಕೋಡ್‌ ಸಪೋರ್ಟ್‌ ಇಲ್ಲ ಆದರೆ ಯೂನಿಕೋಡ್‌ ಪಾಂಟ್‌ ಇದ್ದಲ್ಲಿ ಯೂನಿಕೋಡ್‌ನಲ್ಲಿ ಬರೆದ ಅಂತರ್ಜಾಲ ಪುಟಗಳನ್ನು ಓದಬಹುದು. ಆದರೆ ಬರೆಯಲು ಯಾವುದೇ ತಂತ್ರಾಶಗಳಿಲ್ಲ, ಕೆಲವು ಆನ್‌ಲೈನ್‌ ಟೂಲ್ಸ್‌ಗಳನ್ನು ಬಿಟ್ಟರೆ. ಹಾಗಾಗಿ ನಾನೇ ಒಂದು ಐ.ಎಮ್.ಇಯನ್ನು ತಯಾರಿಸಿದ್ದೇನೆ. ಈ ಐ.ಎಮ್.ಇ ಮೂಲಕ ಯೂನಿಕೋಡ್‌ನಲ್ಲಿರುವ ಎಲ್ಲಾ ಭಾರತದ ಭಾಷೆಗಳಲ್ಲಿ ಯಾವುದೇ ಅಂತರ್ಜಾಲ ಪುಟದಲ್ಲಿ ಬರೆಯಬಹುದಾಗಿದೆ. ಇದು ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ನಲ್ಲಿ ಮಾತ್ರ ಕೆಲಸ ಮಾಡುತ್ತದೆ.

ದೇವರು ನಾಚಿಕೆಪಡಬೇಕಾದ ವಿಷಯ ! ( ಓದಿದ ಕತೆ)

ತಲೆಬರಹ ನೋಡಿ ಆಸ್ತಿಕರು ಬೇಸರಮಾಡಿಕೊಳ್ಳಬೇಡಿ. ಇದು ನಾನು ಬಹಳ ಹಿಂದೆ ಓದಿದ ಒಂದು ಕತೆ. ಮುಂದೆ ಓದಿ.

ಉಜ್ಜಯಿನಿ ದಂಡಯಾತ್ರೆ ಪೂರ್ಣತೆಯ ಭಾಗ

ಉಜ್ಜಯಿನಿ ದಂಡಯಾತ್ರೆ ಪೂರ್ಣತೆಯ ಭಾಗಮುಂದೆ ಹೋಗಬೇಕಿತ್ತು. "ಉಜ್ಜಯಿನಿ ದರ್ಶನ"ಕ್ಕೆ ಮೃಚ್ಛಕಟಿಕದವರು ಏನಾದರೂ ತೀರ್ಥ ಕುಡಿಸಿಬಿಟ್ಟರೆ ಎಂಬ ಆತಂಕದಿಂದ ಸಹವಾಸ ಬೇಡ ಅಂದುಕೊಂಡು ಒಬ್ಬ ಮುಸಲ್ಮಾನ ವ್ಯಕ್ತಿಯ ಮೂರು ಚಕ್ರದ ರಿಕ್ಷಾ ಏರಲಾಯಿತು. ಆತನ ಹೆಸರು ಶಕೀಲ್ ಅಬ್ಬಾಸ್. 250 ರೂಪಾಯಿಗೆ ಉಜ್ಜಯಿನಿ ದರ್ಶನ ಮಾಡಿಸುವುದಾಗಿ ಒಪ್ಪಿಕೊಂಡಾಗ ಮೂರು ಲೋಕದ ದರ್ಶನವಾದ ಅನುಭವವಾಯಿತು. (ಚಿತ್ರ ಸಹಿತ ಇಲ್ಲಿದೆ : bogaleragale.blogspot.com)

'ಈಗೀಗ ನನ್ನ ಕಾಲು ನೆಲದ ಮೇಲಿಲ್ಲ'

ಇದು ಒಂದು ಹಿಂದಿ ಚಿತ್ರಗೀತೆ- ಆಜ ಕಲ ಪಾಂವ್ ಜಮೀನ ಪರ ನಹಿ ಪಡತೇ ಮೇರೆ -ಯ ಭಾವಾನುವಾದ .

ಈಗೀಗ ನನ್ನ ಕಾಲು ನೆಲದ ಮೇಲಿರುವದಿಲ್ಲ

ಸಿರಿಭೂವಲಯ - ಒಂದು ಅದ್ಭುತ ಕೃತಿ

ಹಿಂದೊಮ್ಮೆ 'ಸಿರಿಭೂವಲಯ' ಕುರಿತಾದ ಒಂದು ಲೇಖನ ಬಂದಿತ್ತು. ಈ ವಾರದ ತರಂಗದಲ್ಲಿ ಇನ್ನೂ ವಿವರವಾದ ಲೇಖನ ಬಂದಿದೆ. ಓದಿ.

ಕನ್ನಡದಲ್ಲಿ ನೀವು ಹೇಗೆ ಬರೀತೀರ?

ನನ್ನ ಪ್ರಶ್ನೆ ಸರಳವಾದುದು... ಅಂತರ್ಜಾಲದಲ್ಲಿ ಕನ್ನಡದಲ್ಲಿ ಬರೆಯಲು ನೀವು ಯಾವ ತಂತ್ರಾಂಶವನ್ನು ಉಪಯೋಗಿಸಿತ್ತೀರ?