"ವಿ ಟಿ ಯು ಸಹಯೋಗದಲ್ಲಿ ಕನ್ನಡದಲ್ಲಿ ಇಂಜಿನಿಯರಿಂಗ್ ಶಿಕ್ಷಣ" - ಅನಗತ್ಯ, ನೀವೇನಂತೀರಿ?
ಅಂತೂ ಇನ್ನೊಂದಿಷ್ಟು ನಿರುದ್ಯೋಗಿ ಕನ್ನಡಿಗ ತಂತ್ರಜ್ಞಾನ ಪದವೀಧರರನ್ನು ಹೊರಬಿಡಲು ನಮ್ಮ ಘನ ಸರ್ಕಾರ ತೀರ್ಮಾನಿಸಿದಂತಿದೆ.
ಅಂತೂ ಇನ್ನೊಂದಿಷ್ಟು ನಿರುದ್ಯೋಗಿ ಕನ್ನಡಿಗ ತಂತ್ರಜ್ಞಾನ ಪದವೀಧರರನ್ನು ಹೊರಬಿಡಲು ನಮ್ಮ ಘನ ಸರ್ಕಾರ ತೀರ್ಮಾನಿಸಿದಂತಿದೆ.
ಓದುಗರಿಗೆ ಸೂಚನೆ: ಪುಟ ೧೫೦ KB ಕಿಂತ ಹೆಚ್ಚು ದೊಡ್ಡದಿರುವುದರಿಂದ ಲೋಡ್ ಆಗಲು ಸಾಕಷ್ಟು ಸಮಯ ತೆಗೆದುಕೊಳ್ಳಬಹುದು
ಕಳೆದ ಶರದೃತುವಿನಲ್ಲೊಂದು ದಿನ, ನನ್ನ ಗೆಳೆಯ ಶೆರ್ಲಾಕ್ ಹೋಮ್ಸನ ಮನೆಗೆ ಹೋಗಿದ್ದೆ. ಅಲ್ಲಿ ಹಿರಿಯ ವ್ಯಕ್ತಿಯೊಬ್ಬ ನನ್ನ ಗೆಳೆಯನೊಂದಿಗೆ ಸುಧೀರ್ಘ ಚರ್ಚೆಯಲ್ಲಿ ಮುಳುಗಿದ್ದ. ಅವನು ನೋಡಲು ಸಾಕಷ್ಟು ದಪ್ಪನಾಗಿದ್ದು, ಕಡುಕೆಂಪು ಬಣ್ಣದ ಕೂದಲನ್ನು ಹೊಂದಿದ್ದ. ನಾನು ಅವರಿಬ್ಬರ ಮಧ್ಯೆ ಒಳನುಗ್ಗಿದ್ದಕ್ಕೆ ಕ್ಷಮೆ ಕೇಳಿ, ಬಾಗಿಲು ಮುಚ್ಚಿಕೊಂಡು ಹೊರಬರುವುದರಲ್ಲಿದ್ದೆ, ಅಷ್ಟರಲ್ಲಿ ನನ್ನನ್ನು ನೋಡಿದ ಹೋಮ್ಸ್, ಕೈ ಹಿಡಿದು, ಒಳಗೆ ಎಳೆದುಕೊಂಡು ಬಾಗಿಲು ಮುಚ್ಚಿದ.
"ಎಂಥಾ ಸಮಯ..?? ಸಮಯಕ್ಕೆ ಸರಿಯಾಗಿಯೇ ಬಂದಿದ್ದೀಯಾ ವಾಟ್ಸನ್." ಎಂದ ಲೋಕಾಭಿರಾಮವಾಗಿ.
"ಬಹುಶಃ ನೀನು ಯಾವುದೋ ಕೆಲಸದಲ್ಲಿರುವಂತೆ ಕಾಣುತ್ತದೆ"
"ಹೌದು, ಖಂಡಿತವಾಗಿಯೂ"
"ಹಾಗಿದ್ದರೆ ನಾನು ಪಕ್ಕದ ಕೋಣೆಯಲ್ಲಿ ನಿನಗಾಗಿ ಕಾಯುತ್ತೇನೆ."
"ಬೇಕಿಲ್ಲ.." ಎಂದವನೇ ಆ ಅಪರಿಚಿತ ವ್ಯಕ್ತಿಯ ಕಡೆ ತಿರುಗಿ, "ವಿಲ್ಸನ್, ಇವನು ನನ್ನ ಆತ್ಮೀಯ. ನಾನು ಕಂಡಿರುವ ಅತ್ಯಂತ ಕ್ಲಿಷ್ಟ ಹಾಗೂ ಸಂಕೀರ್ಣ ಕೇಸುಗಳನ್ನು ಬಗೆಹರಿಸಲು ನನ್ನ ಸಹಾಯಕನಾಗಿ ದುಡಿದಿದ್ದಾನೆ. ನಿಮ್ಮ ಕೇಸಿನಲ್ಲಿಯೂ ಇವನ ಸಹಾಯದ ಅಗತ್ಯವಿದೆ ಎಂದು ನನಗನ್ನಿಸುತ್ತಿದೆ" ಎಂದ.
ಆ ವ್ಯಕ್ತಿ ಕುಳಿತಿದ್ದ ಕುರ್ಚಿಯಿಂದ ಅರ್ಧ ಎದ್ದಂತೆ ಮಾಡಿ, ನನಗೆ ವಂದಿಸಿದ. ಅವನ ಕೊಬ್ಬಿನಿಂದಾವೃತವಾದ ಕಣ್ಣುಗಳಲ್ಲಿ ನನ್ನೆಡೆಗೆ ಒಂದು ಚಿಕ್ಕ ಪ್ರಶ್ನಾರ್ಥಕ ನೋಟ ಅಡಗಿದ್ದುದು ನನ್ನ ಗಮನಕ್ಕೆ ಬಂತು.
ಯಾವಾಗಲೂ ಕೇಡುಬಗೆಯದ ಸ್ನೇಹಿತನೆಂದರೆ, ಮೌನ. - ಕನ್ಫ್ಯೂಷಿಯಸ್
ನಾನು ಯಾವಾಗಲೂ ಹೇಳಿಲ್ಲವೆ? ರಾಜಕೀಯದಲ್ಲಿ, ನಿಮ್ಮ ಶತ್ರುಗಳು ಕೂಡ ನಿಮಗೆ ನೋವುಂಟು ಮಾಡಲಾರರು, ಆದರೆ ನಿಮ್ಮ ಮಿತ್ರರು ನಿಮ್ಮನ್ನು ಕೊಂದು ಬಿಡಬಲ್ಲರು.
ಶತ್ರುಗಳೊಡನೆ ಸ್ನೇಹ ಬೆಳೆಸಿದಾಗ, ಅವರಲ್ಲಿರುವ ನಮ್ಮ ಶತ್ರುವನ್ನು ಕೊಂದಂತಲ್ಲವೇ? - ಅಬ್ರಹಾಂ ಲಿಂಕನ್
ಕಷ್ಟಗಳೆಲ್ಲ ನನಗೆ ಬರಲಿ, ಶಾಂತ ಸಮಾನತೆ ನನ್ನ ಮಗುವಿಗಿರಲಿ. - ಥಾಮಸ್ ಪೇಯ್ನ್
ನಮ್ಮ ಶಾಂತಿಯ ಬದುಕಿಗಾಗಿ, ನಾವು ಯುಧ್ಧ ಮಾಡುತ್ತೇವೆ. - ಆರಿಸ್ಟಾಟಲ್
ನಮ್ಮ ದೇಶ/ಊರು ಕಸದ ಡಬ್ಬ ಆಗುತ್ತಿದೆ.
Franceನಿ೦ದ ಒ೦ದು ಯುದ್ಢದ ಹಡಗು ನಮ್ಮ ದೇಶಕ್ಕೆ ತನ್ನ ಕೊನೆಯ ಯಾತ್ರೆಗೆ ಬರುತ್ತಿದೆ.
"ರ೦ಗಣ್ಣನ ಕನಸ್ಸಿನ ದಿನಗಳು"ಬರೆದ M.R.ಶ್ರೀನಿವಾಸಮೂರ್ತಿ
ಅವರ ಬಗ್ಗೆ ಡಿ.ವಿ.ಜಿ. ಯವರ ಲೇಖನ-ಮೂಲ"ನೆನಪಿನ ಚಿತ್ರಗಳು"
[೧೩ ಚಿತ್ರ ಮತ್ತು ಎರಡು ವೀಡಿಯೋ ಇವೆ. ನೋಡಿ. ಇವನ್ನು ನಾನೇ ಸೇರಿಸುವಷ್ಟು ಕೌಶಲ ಇಲ್ಲ. ಗೆಳೆಯ ನಾಡಿಗ್ ಅವನ್ನೆಲ್ಲ ಸೇರಿಸುತ್ತೇನೆ ಅಂದಿದ್ದಾರೆ.]
ನಿನ್ನೆ, ೧೫ ಜನವರಿ ೨೦೦೬, ಕುಂತಿ ಬೆಟ್ಟಕ್ಕೆ ಹೋಗಿದ್ದೆ.
ಕುಂತಿ ಬೆಟ್ಟ ಪಾಂಡವಪುರದ ಹತ್ತಿರ ಇದೆ. ಮೈಸೂರಿನಿಂದ ಹೋಗುವುದಾದರೆ ಶ್ರೀರಂಗಪಟ್ಟಣ ದಾಟಿದ ಕೂಡಲೆ ಎಡಕ್ಕೆ ತಿರುಗಿ, ಬೆಂಗಳೂರಿನ ಕಡೆಯಿಂದ ಹೋಗುವುದಾದರೆ ಶ್ರೀರಂಗಪಟ್ಟಣಕ್ಕೆ ಮೊದಲೇ ಬಲಕ್ಕೆ ತಿರುಗಿ, ಪಾಂಡವಪುರ ರೇಲ್ವೇ ಸ್ಟೇಶನ್ನಿನ ಮುಂದಿನ ರಸ್ತೆಯಲ್ಲಿ ಸಾಗಿ, ಪಾಂಡವಪುರ ಊರು ಸೇರಿ, ಅಲ್ಲಿನ ಸಾರ್ವಜನಿಕ ಆಸ್ಪತ್ರೆಯ ಮುಂದಿನ ಸರ್ಕಲಿನಲ್ಲಿ ಬಲಕ್ಕೆ ತಿರುಗಿ ಎರಡು ಕಿಮೀ ಸಾಗಿದರೆ ನಿಮ್ಮ ಎಡ ಬದಿಗೆ ಒಂದು ಕಮಾನು ಗೇಟು, ಮತ್ತು ಅದರ ಮೇಲೆ ಕುಂತಿ ಬೆಟ್ಟ ಎಂದು ಬರೆದಿರುವುದು ಕಾಣುತ್ತದೆ. ಸುಮಾರು ಒಂದು ಕಿಮೀ ಸಾಗಿದರೆ ನಿಮ್ಮ ಎಡಗಡೆ ಒಂದು ಜೂನಿಯರ್ ಕಾಲೇಜಿನ ಬಿಲ್ಡಿಂಗ್, ಅಲ್ಲೇ ಮುಂದೆ ಮೆಟ್ಟಿಲುಗಳು.
ಮೆಟ್ಟಿಲುಗಳು ಒಂದು ನೂರು ಹತ್ತಿದರೆ ಸಮತಟ್ಟಾದ ಜಾಗ. ಮರಗಳ ಗುಂಪು, ಒಂದು ನೀರಿನ ಹೊಂಡ, ಒಂದೆರಡು ಹಳೆಯ ದೇವಾಲಯಗಳು, ಒಂದು ಕಲ್ಯಾಣ ಮಂಟಪ ಕಾಣುತ್ತವೆ. ಸುದಾರಿಸಿಕೊಳ್ಳಲು, ಸುಮ್ಮನೆ ಕೂರಲು ಒಳ್ಳೆಯ ಜಾಗ. ಅಲ್ಲೇ ದೊಡ್ಡ ಬಂಡೆಯ ಮೇಲೆ ಗಣೇಶನನ್ನು ಕೆತ್ತಿದ್ದಾರೆ. ಗಣೇಶನ ಎಡ ಬದಿಗೆ ಒಂದು ಪುಟ್ಟ ಆವರಣದಲ್ಲಿ ದೊಡ್ಡ ನಂದಿಯ ವಿಗ್ರಹ ಇದೆ.
ದೇವಾಲಯಗಳ ಹಿಂದೆ ಇರುವುದೇ ಕುಂತಿ ಬೆಟ್ಟ. ಬೆಟ್ಟ ಅನ್ನುವ ಹೆಸರು ಕೊಡುವಷ್ಟು ದೊಡ್ಡದಲ್ಲ, ಗುಡ್ಡದ ಹಾಗೆ ಇದೆ. ಕುಂತಿ ಬೆಟ್ಟಕ್ಕೆ ಮುಖ ಮಾಡಿ ನಿಂತರೆ ನಮ್ಮ ಬೆನ್ನ ಹಿಂದೆ ಇನ್ನೊಂದು ಸ್ವಲ್ಪ ದೊಡ್ಡ ಗುಡ್ಡ. ಅದನ್ನು ಒನಕೆ ಬೆಟ್ಟ ಅನ್ನುತ್ತಾರಂತೆ. ಇವಕ್ಕೆ ಯಾಕೆ ಆ ಹೆಸರು ಬಂತೋ ಗೊತ್ತಿಲ್ಲ. ಕುಂತಿ ಬೆಟ್ಟ, ಪಾಂಡವ ಪುರ ಇವುಗಳನ್ನು ನೋಡಿದರೆ ನಮ್ಮ ಜನ ಮಹಾಭಾರತ ಇಲ್ಲೂ ನಡೆದಿತ್ತು ಅನ್ನುವ ಭಾವನಾತ್ಮಕತೆಯಿಂದ ಆ ಹೆಸರುಗಳನ್ನು ಕೊಟ್ಟಿರಬಹುದು ಅನ್ನಿಸುತ್ತದೆ. ಆದರೆ ನೆನಪು ಬೇರೆ ಇನ್ನೂ ಕತೆಗಳನ್ನು ಹೇಳುತ್ತದೆ. ಪಾಂದವ ಪುರ ಮೊದಲಿಗೆ ಈರೋಡು ಎಂದು ಕರೆಸಿಕೊಳ್ಳುತ್ತಿತ್ತು ಎಂದು ನಮ್ಮ ಅಪ್ಪ ಹೇಳುತ್ತಿದ್ದರು. ಆಮೇಲೆ ಟಿಪ್ಪೂನ ಕಾಲದಲ್ಲಿ ಇಂಗ್ಲಿಷರ ವಿರುದ್ಧ ಅವನ ಯುದ್ಧಕ್ಕೆ ನೆರವು ನೀಡಲು ಬಂದ ಫ್ರೆಂಚ್ ಸೈನ್ಯ ಬೀಡು ಬಿಟ್ಟ ಜಾಗವೂ ಇದೇ. ಅದನ್ನು ಫ್ರೆಂಚ್ ರಾಕ್ಸ್ ಅನ್ನುತ್ತಿದ್ದರು. ಎಂಎ ಓದುವ ಕಾಲಕ್ಕೆ, ೧೯೭೩ರ ಸುಮಾರಿನಲ್ಲಿ ಪಾಂಡವ ಪುರ ಸಕ್ಕರೆ ಕಾರ್ಖಾನೆಯ ಹಿಂಭಾಗದಲ್ಲಿ, ರೇಲು ರಸ್ತೆಯ ಪಕ್ಕ ಇಗೋ ಇಲ್ಲಿ ಫ್ರೆಂಚ್ ಸೈನ್ಯ ಇತ್ತು, ಇಲ್ಲಿ ಬ್ರಿಟಿಷ್ ಸೈನ್ಯ ಇತ್ತು ಎಂಬ ಬೋರ್ಡುಗಳಿದ್ದವು. ರೈಲಿನಲ್ಲಿ ಓಡಾಡುವಾಗೆಲ್ಲ ಅದನ್ನು ನೋಡುತ್ತಿದ್ದ ನೆನಪು ಇದೆ. ಈಗ ಆ ಬೋರ್ಡುಗಳು ಇಲ್ಲ.
ಇರಲಿ, ಕುಂತಿ ಬೆಟ್ಟ ಸಮುದ್ರ ಮಟ್ಟದಿಂದ ೨೨೦೦ ಅಡಿ ಎತ್ತರ ಎಂದು ಕೆಲವೆಡೆಗಳಲ್ಲಿ ಓದಿದ್ದೇನೆ. ಆದರೆ ಪಾಂಡವ ಪುರ, ಮತ್ತು ಏರಿ ಬಂದ ಮೆಟ್ಟಿಲುಗಳನ್ನು ಬಿಟ್ಟರೆ ದೇವಾಲಯದ ಹಿಂದೆ ಸುಮಾರು ೨೫೦-೩೦೦ ಅಡಿ ಎತ್ತರದ ಗುಡ್ಡ.
ಇಲ್ಲಿ ಚೆಲುವು ಇರುವುದು ಗುಡ್ಡದ ಬಂಡೆಗಳ ಆಕಾರಗಳಲ್ಲಿ. ನಿಮ್ಮ ನಿಮ್ಮ ಕಲ್ಪನೆಗೆ ಅನುಗುಣವಾಗಿ ಯಾವ ಯಾವ ಆಕಾರದ ಕಲ್ಲುಗಳೆಲ್ಲ ಇವೆ!
ಹತ್ತಿದೆವು ನಾವು ಎಂಟು ಜನ. ತಂಡದ ಚಿಕ್ಕ ಸದಸ್ಯೆ ೧೨ ವರ್ಷದ ಶಿವಗಂಗಾ. ಜಾಂಬವಂತ ನಾನೇ. ನನ್ನ ಜೊತೆ ನನ್ನ ಶ್ರೀಮತಿ. ಆಕೆ ಅರ್ಧ ಹತ್ತಿ ಸುಸ್ತಾಗಿ ಕುಳಿತಳು. ಅವಳೊಡನೆ ಇನ್ನೊಬ್ಬ ಹದಿ ಹರೆಯದ ನಾಗರಿಕ ಹುಡುಗ ಕೂಡ ಹತ್ತಲಾರದೆ ಉಳಿದ. ಉಳಿದಂತೆ ನಾನು, ನನ್ನೊಡನೆ ಹದಿ ಹರೆಯದ ನಮ್ಮ ಕುಟುಂಬದ ಸದಸ್ಯರು.