ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಚೈನ್ ಮೈಲ್‍ಗಳು

ಚೈನ್ ಮೈಲ್‍ಗಳು ಬರುವುದು ಸರ್ವೇ ಸಾಮಾನ್ಯ. ಅದರಲ್ಲಿಯೂ ಅಡ್ವರ್ಟೈಸ್‍ಮೆಂಟ್‍ಗಳ ಹಾವಳಿಯಂತೂ ಬಹಳ. ಮೊದಲು ಒಬ್ಬರಿಗೆ ಅಂಚೆ ಕಳುಹಿಸಿ, ಇದನ್ನು ಇನ್ನಿತರ ಹತ್ತು ಜನಗಳಿಗೆ ಕಳುಹಿಸಿದರೆ ನಿಮಗೆ ಇಂತಹ ವಸ್ತು ಪುಕ್ಕಟೆ ಎಂದು ತಿಳಿಸುತ್ತಾರೆ. ಕೆಲವರು ಇವುಗಳನ್ನು ಸ್ಪ್ಯಾಮ್ ಮೈಲ್‍ಗಳು ಎಂದೂ ಪರಿಗಣಿಸುವರು. ಇವರ ಚಟುವಟಿಕೆಗಳು ಹೇಗಿರುತ್ತದೆ ಎಂಬುದು ಬಹಳ ಕೌತುಕವಾದ ವಿಷಯ.

ನಿರಾಕಾರ

ನಿರಾಕಾರ.

ನಿರಾಕಾರನು ಸಾಕಾರನಾದದ್ದು
ಚಮತ್ಕಾರ,
ಸಾಕಾರನಿಗೆ ಕಂಡ ನಿರಾಕಾರವೇ
ಸಾಕ್ಷಾತ್ಕಾರ,
ವಿಕಾರನಿಗೆ ಸಾಕಾರನು ತೋರುವ ನಿರಾಕಾರವೇ
ಪರೋಪಕಾರ,
ವಿಕಾರನನ್ನು ನಿರ್ವಿಕಾರಗೊಳಿಸಿ ಸಾಕಾರನನ್ನಾಗಿಸುವ ಕ್ರಿಯೆಯೇ
ಸಂಸ್ಕಾರ.
ನಿರಾಕಾರನ
ಅಸಮಾನತೆಯೇ 'ಅ' ಕಾರ,
ಉತ್ತುಂಗವೇ 'ಉ' ಕಾರ,
ಮಮಕಾರವೇ 'ಮ' ಕಾರ.
ಈ ಮೂರರ
ಗುಣಾಕಾರವೇ
'ಓಂ'
ಕಾರ.
ಪ್ರಣವನಾದ
ಓಂಕಾರದ
ಭಾಗಾಕಾರವೇ
ಚತುರ್ವೇದದ ಜಗದಾಕಾರ.
{ಅಹೋರಾತ್ರ}

ಪ್ರವಾಸ

“ಶ್ರೀಮತ್ವೆಕಟನಾಥಾರ್ಯ ಕವಿತಾಲಯಃ ಕೇಸರಿ” ಎಂದು ಧ್ಯಾನ ಶ್ಲೋಕವನ್ನು ಹೇಳಿ , ಉಪಾಕರ್ಮದ ಮಾರನೇ ದಿನ ಗಾಯತ್ರಿ ಜಪವನ್ನು ಮಾಡಲು ಕುಳಿತಾಗ, ಅಷ್ಟೋತ್ತರ ಸಹಸ್ರ ಬಾರಿ ಮಂತ್ರವನ್ನು ಜಪಿಸಬೇಕಿದ್ದರೂ, ಸಮಯದ ಅಭಾವದಿಂದ, ಜೊತೆಗೆ ಸೋಮಾರಿತನದಿಂದ ಅಷ್ಟೋತ್ತರ ಶತಕ್ಕೆ ಇಳಿಸಿದೆ.ಸಂಕಲ್ಪದಲ್ಲಿ ಆ ದಿನ ನಾನಿದ್ದ ಸ್ಥಳ ಹಾಗು ಸಮಯದ ಸಂಪೂರ್ಣ ಪರಿಚಯಕೊಟ್ಟು (ಅಂದ್ರೆ ಶ್ವೇತವರಾಹಕಲ್ಪದ, ಕಲಿಯುಗದ,ಪಾರ್ಥಿವ ಸಂವತ್ಸರದ, ದಕ್ಷಿಣಾಯನದ, ವರ್ಷಋತುವಿನ, ಸಿಂಹಮಾಸದ, ಪೌರ್ಣಮಿಯಂದು, ಭರತಖಂಡದ ಬೆಂಗಳೂರಿನಲ್ಲಿ…..) ಜಪ ಮಾಡಲು ಪ್ರಾರಂಭಿಸಿದೆ.

ಮಾಘೇ ಮೇಘೇ ಗತಂ ವಯಃ

ಮಾನ್ಸೂನು ಕೇರಳಕ್ಕೆ ಆಗಮಿಸಿದೆ . ಕರ್ನಾಟಕದಲ್ಲಿ ಮಳೆಯಾಗುತ್ತಿದೆ. ಇಲ್ಲಿ ಮುಂಬೈಯಲ್ಲಿ ಮಾನ್ಸೂನಿನ ಮುನ್ಸೂಚನೆಯಾಗಿ ಇವತ್ತು ಬೆಳಗ್ಗೆಯೇ ಮೋಡ ಮುಸುಕಿದ ವಾತಾವರಣವಿದೆ. ಯಥಾ ಪ್ರಕಾರ ಇರುವ ಧಗೆಯೂ ಹೆಚ್ಚಾಗಿದೆ. ಟೀವಿಯಲ್ಲಿ ಸಂಗೀತದ ಚ್ಯಾನೆಲ್ಲುಗಳೆಲ್ಲವೂ ಮೋಡ, ಮಳೆ, ಗಾಳಿಯ ಹಾಡುಗಳನ್ನು ಹೊರತೆಗೆದಿವೆ. ನಾನೂ ಕೂಡ ಕಾಳಿದಾಸನ ಮೇಘದೂತವನ್ನು ಹೊರತೆಗೆದೆ. ನೂರಿಪ್ಪತ್ತು ಪದ್ಯಗಳು ಇಲ್ಲಿವೆ . ಕಛೇರಿಗೆ ಬರುವ ದಾರಿಯಲ್ಲಿ ಓದತೊಡಗಿದೆ. ಸುಮಾರು ೧೦ ಪದ್ಯ ; ಮೂಲ ; ಭಾವಾನುವಾದ; ವಿವರಣೆ ಓದಲಿಕ್ಕೆ ಸಾಧ್ಯವಾಯಿತು. ಅಲ್ಲಿ ಈ ವಾಕ್ಯವೂ ಸಿಕ್ಕಿತು. "ಮಾಘೇ ಮೇಘೇ ಗತಂ ವಯಃ" . ಅಂದರೆ ಮಾಘ ಕವಿಯ ಕಾವ್ಯ ಮತ್ತು ಮೇಘದೂತ ಕಾವ್ಯ ಓದುವದರಲ್ಲಿ ನನ್ನ ಆಯುಷ್ಯವನ್ನು ಕಳೆದೆ ಎಂದರ್ಥ.ಇದು ಸಾರ್ಥಕ್ಯದ , ತೃಪ್ತಿಯ ಮಾತು.

ಸಂಪದದ ಸಾವಿರ ಸದಸ್ಯರು

ಮುಂದಿನ ವರ್ಷದೊಳಗೆ ಹತ್ತು ಸಾವಿರ ಸದಸ್ಯರ ಗುರಿ ಮುಟ್ಟೋಣ.
ಇಂದೇ ನಾವೆಲ್ಲರೂ ಒಬ್ಬೊಬ್ಬರು ಹತ್ತು ಜನರಿಗೆ ಸಂಪದದ ವಿಚಾರ ತಿಳಿಸೋಣ.

ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅರಿವು ಮೂಡಿಸುವ ಬಗೆ ಹೇಗೆ?

ಸ್ನೇಹಿತರೆ,

ಕನ್ನಡ ಸಾಹಿತ್ಯದ ಬಗ್ಗೆ ನಮ್ಮ ಜನರಲ್ಲಿ ಅರಿವು ಮೂಡಿಸಬೆಕಾದ ಕಾಲ ಇದು. ಹಾಗೆ ಮಾಡದೇ ಇದ್ದ ಪಕ್ಷದಲ್ಲಿ ನಮ್ಮ ಮಕ್ಕಳ ಕಾಲಕ್ಕೆ ನಮ್ಮ ಅಮೂಲ್ಯ ಸಾಹಿತ್ಯ ಮತ್ತು ಸಾಹಿತಿಗಳ ಜಾಗ, ವಸ್ತು ಸಂಗ್ರಹಾಲಯವಾಗುವುದೆಂದರೆ ಅತಿಶಯವಾಗುವುದಿಲ್ಲ. ಈಗಿನ ಜನಾಂಗದವರು ನಮ್ಮ ಸಾಹಿತ್ಯವನ್ನು ಓದುವಂತೆ ಪ್ರೇರೇಪಿಸಬೇಕು. ಸಂಪದ ಮತ್ತು ಇತ್ತೀಚೆಗೆ ನಡೆದಂತಹ ವಿಕಿಪೀಡಿಯ ಸಮಾರಂಭಗಳು ಈ ಪ್ರಯತ್ನಕ್ಕೆ ವೇದಿಕೆಯಾಗಬಹುದು.  ದಯವಿಟ್ಟು ತಮ್ಮ ಅಮೂಲ್ಯವಾದ ಸಲಹೆಗಳನ್ನು ಈ ಬ್ಲಾಗ್ನಲ್ಲಿ ಮಂಡಿಸಬೇಕಾಗಿ ವಿನಂತಿ. 

ಒಂದು ಸಣ್ಣ ಲೆಕ್ಕ

ಒಂದು ಸಣ್ಣ ಲೆಕ್ಕ

ನಾವು ಎಕೌಂಟೆಂಟುಗಳು ನೋಡಿ.. ಬೇಕಾದ, ಬೇಡವಾದ ಲೆಕ್ಕಗಳೆಲ್ಲ ತಲೆಯೊಳಗೆ ಹೋಗುತ್ತವೆ. ಕೆಲವು ಅಲ್ಲೇ ಉಳಿದರೆ ಕೆಲವು ಹೊರಗೆ ಹಾಕಲ್ಪಡುತ್ತವೆ!