ಕೂತು ಉಂಡರೆ ಕುಡಿಕೆ ಹೊನ್ನು ಸಾಲದು
- Read more about ಕೂತು ಉಂಡರೆ ಕುಡಿಕೆ ಹೊನ್ನು ಸಾಲದು
- Log in or register to post comments
ಹೆಣ್ಣು ಅಂದರೆ ಹೀಗಿರಬೇಕು ಹಣೆಯಲಿ ಕುಂಕುಮ ನಗುತಿರಬೇಕು
ಇದು ಚಲನಚಿತ್ರದ ಹಾಡು. ಆದರಿಲ್ಲಿ ಚಲನಚಿತ್ರದ ಬಗ್ಗೆ ನಾನು ಬರೆಯೋದಿಲ್ಲ. ಹಣೆಯ ಮೇಲೆ ನಗುನಗುತಿರುವ ಕುಂಕುಮದಿಂದ ಮೊಗವು ಆಕರ್ಷಕವಾಗಿರುವುದು. ಸಿಂಧೂರಮ್ ಸೌಂದರ್ಯ ಸಾಧನಂ ಎಂಬ ಉಕ್ತಿಯೊಂದಿದೆ. ಅದರ ಬಗ್ಗೆ ನನ್ನ ಚಿಂತನೆ ನಿಮ್ಮ ಮುಂದಿಡುತ್ತಿರುವೆ.
ಕುಂಕುಮ ಅಂದ ತಕ್ಷಣ ನೆನಪಿಗೆ ಬರುವುದು ಕೆಂಪು ಬಣ್ಣ. ಇದು ರಕ್ತದ ಸಂಕೇತ. ರಕ್ತವು ನಮ್ಮ ಜೀವನದಲ್ಲಿ ಅತಿ ಅವಶ್ಯಕ, ಅತ್ಯಮೂಲ್ಯ. ಹಾಗೇ ಕುಂಕುಮ ಹಿಂದೂ ಹೆಣ್ಣುಮಕ್ಕಳಿಗೆ ಅತ್ಯಮೂಲ್ಯ.
(ವೈಜ್ಞಾನಿಕ ಲೇಖನ)
ಪ್ರಾಚೀನ ಕಾಲದಲ್ಲಿಯೆ ಅರಗು ಮತ್ತು ಅರಗಿನ ಹಲವು ಉಪಯೋಗಗಳನ್ನು ಭಾರತೀಯರು ಅರಿತುಕೊಂಡಿದ್ದರೆಂದು ಅಥರ್ವವೇದದಲ್ಲಿ ಅರಗಿನ ಕುರಿತಾದ ಉಲ್ಲೇಖದಿಂದ ತಿಳಿದುಬರುತ್ತದೆ. ಮಹಾಭಾರತದ ಅರಗಿನ ಮನೆ (ಲಾಕ್ಷಾಗೃಹ)ಯ ಪ್ರಸಂಗ ಯಾರಿಗೆ ತಿಳಿದಿಲ್ಲ? ಭಾರತೀಯರಿಗೆ ಪರಿಚಿತವಾಗಿದ್ದ ಈ ವಸ್ತುವನ್ನು ಅರಬ್ಬಿ ನಾವಿಕರು ಪ್ರಪಂಚದ ಇತರೆಡೆಗೆ ಪರಿಚಯಿಸಿದರು.
ಅಷ್ಟು ಸಣ್ಣ ಹುಡುಗನ ಬಾಯಿಂದ ಈ ತರಹದ ಮಾತುಗಳನ್ನು ಕೇಳಿದ ಭಾಗೀರಥಮ್ಮನವರು, ಮಗ ಎಷ್ಟು ಬೇಗ ಮಾನಸಿಕವಾಗಿ ಬೆಳೆದು ಬಿಟ್ಟಿದ್ದಾನೆ,ನಮ್ಮೆಲ್ಲರ ಕಷ್ಟಗಳನ್ನು, ದುಃಖವನ್ನೂ ಅರಿತು ಈ ರೀತಿಯ ಮಾತನಾಡುತ್ತಿದ್ದಾನೆ ಎಂದು ಮನಗಂಡು, ಆನಂದದಿಂದ ಕಣ್ಣಲ್ಲಿ ನೀರು ತುಂಬಿಕೊಂಡು ಗದ್ಗದಿತರಾಗಿ ಹೇಳಿದರು "ಬೇಡ ಕಣೋ ಮಾರುತಿ.ಈ ತರ ಎಲ್ಲಾ ಮಾತಾಡಬೇಡ. ನೀನು ನಮ್ಮಗಳಿಗೋಸ್ಕರ ಇಲ್ಲಿಯ ತನಕ ಪಟ್ಟ ಶ್ರಮವೇ ಸಾಕಪ್ಪ. ನಮ್ಮದು ಹೇಗೋ ನಡೆಯುತ್ತೆ.ನೀನಿನ್ನೂ ಬೆಳೆದು ಫಲ ನೀಡಬೇಕಾದ ಮರ. ಈ ಸಸಿಯನ್ನ ಇಲ್ಲಿಯೇ ಚಿವುಟಿದರೆ ಆ ದೇವನೂ ನಮ್ಮನ್ನ ಮೆಚ್ಚಲಾರ. ಆದ್ದರಿಂದ ನೀನು ಶಿವಮೊಗ್ಗಾಕ್ಕೋ, ಮೈಸೂರಿಗೋ ಹೋಗಿ ಕಾಲೇಜು ಸೇರಿಕೊಂಡು ನಿನ್ನ ಓದನ್ನು ಮುಂದುವರೆಸು. ಒಳ್ಳೆಯ ಕೆಲಸಕ್ಕೆ ಸೇರಿಕೊಂಡು ನಿನ್ನ ಬಾಳನ್ನು ಹಸನು ಮಾಡಿಕೋ. ಆಮೇಲೆ ನಮ್ಮ ಬಗ್ಗೆ ಯೋಚನೆ ಮಾಡು.ಅಲ್ಲಿಯವರೆಗೆ ನಮ್ಮಗಳ ಯೋಚನೆಯನ್ನು ಬಿಟ್ಟುಬಿಡು".