ಕವನಗಳು

ವಿಧ: ಕವನ
November 09, 2024
ನನ್ನ ಮಾತು ನನ್ನ ಎಡೆಗೆ ಸಾಗಿ ಬರಲಿ ಎಂದಿಗು ಎನ್ನ ಒಲವೆ ಬಾಳ ಪಯಣ ನಿನ್ನ ಜೊತೆಗೆ ಮುಂದೆಗು   ಕಾಣ ಬರಲಿ ನಮ್ಮ ಸನಿಹ ಕೈಯ ಹಿಡಿದ ಸುದಿನವು ಮತ್ತೆ ಸೋಲು ಚಿತ್ತ ನೋವು ಬರದೆ ಇರಲು ಚಂದವು   ಹೊತ್ತು ಕಂತಿ ಮೆತ್ತಗಾಗೆ ಮತ್ತಿನಾಟ ಕರೆಯಿತು ಬೆಳಗು ಮೂಡೆ ಚುಕ್ಕಿ ಸರಿಯೆ ಮುತ್ತಿನೊಲವು ತಪ್ಪಿತು   ಜೀವ ಪಯಣ ಹೀಗೆ ಸಾಗೆ ನೋಡಿದಷ್ಟು ಹರುಷವು ಬತ್ತದಿರುವ  ಪ್ರೀತಿಯೊಳಗೆ ನಿತ್ಯವಿರಲಿ ಸತ್ಯವು   -ಹಾ ಮ ಸತೀಶ ಬೆಂಗಳೂರು
ವಿಧ: ಕವನ
November 08, 2024
ಗಝಲ್ ೧ ಪ್ರತಿಭೆಗಳನ್ನು ತುಳಿಯುತ್ತಾ ಸಾಗಿದ್ದೇವೆ ನಾವು ಹೊಸದೆನ್ನುತ್ತಾ ತಿಳಿಯದೇ ಬಾಗಿದ್ದೇವೆ ನಾವು   ಭಿನ್ನವಾದ ಧೋರಣೆಯ ನಡುವೆಯೇ ಬದುಕೇಕೆ ಪಾಪದವರನ್ನು ಹೊಸಕುತ್ತಲೇ ಬೀಗಿದ್ದೇವೆ ನಾವು   ತಿಳಿದವರಲ್ಲಿಂದು ನಾವೆನ್ನುವ ಅಹಂಕಾರವು ಬೇಕೆ ಹೊಸತಲ್ಲದ ವಸ್ತುಗಳಿಗಾಗಿಯೇ ಕೂಗಿದ್ದೇವೆ ನಾವು   ಅನ್ನವು ಬೆಂದಿದೆಯೇ ತಿಳಿಯಲು ಒಂದಗುಳ ಸಾಕು ಎಲ್ಲವೂ ಗೊತ್ತಿದ್ದರೂ ಹಲವರನ್ನು ತೂಗಿದ್ದೇವೆ ನಾವು   ಬೇಯುವರ ನಡುವಿನಿಂದ ನೀನು ದೂರವಿರು ಈಶಾ ಒಣ ಜಂಭದವರಿಗಿಂತ ಬದುಕಲ್ಲಿ ಮಾಗಿದ್ದೇವೆ ನಾವು…
ವಿಧ: ಕವನ
November 07, 2024
ಹರೆಯದಲಿ ಸವಿಜೇನು ತುಂಬಿದ್ದ ಸಮಯದಲಿ ಬೆಳಕಿಲ್ಲದೇ ಬೆಳೆದೆ ಹಳೆಯ ನೆನಪೇ ಕಂತಿರುವ ಸಮಯಲಿ ಎಲ್ಲ ಸಿಗುತಲೆ ಇರಲು ಬಹು ಆಸೆ ಕಳೆದೋಯ್ತು ಹಳೆಯ ನೆನಪೇ   ಜೀವನದಿ ಉತ್ಸಾಹ ಮತ್ತೆ ಚಿಮ್ಮುತ ಬರಲು ಶಕ್ತಿ ಕುಂದಿಹುದಿಲ್ಲಿ ಹಳೆಯ ನೆನಪೇ ಬಾಳೆಲೆಯನು ಹಾಕಿ ಸವಿಯುಂಡ ಗಳಿಗೆಯದು ಮರೆತು ಹೋಗದು ಎಂದೂ ಹಳೆಯ ನೆನಪೇ   ಹೊಸ ಬದುಕ ಕಟ್ಟಿದೆನು ಸತಿಯ ಜೊತೆಗೂಡಿ ನೋವ ಮೆಟ್ಟಿಲ ಮೇಲೆ ಹಳೆಯ ನೆನಪೇ ಕಸವಿರುವ ಕತೆಗಳನು ಗುಡಿಸಿ ಸ್ವಚ್ಛವ ಮಾಡೆ ಖುಷಿಯ ಕೊಟ್ಟಿಹ ದಿನವೂ ಹಳೆಯ ನೆನಪೇ   ಜೊತೆಗೂಡಿ ಎಲ್ಲರೊಳು…
ವಿಧ: ಕವನ
November 06, 2024
ಹರೆಯದಲಿ ಸವಿಜೇನು ತುಂಬಿದ್ದ ಸಮಯದಲಿ ಬೆಳಕಿಲ್ಲದೇ ಬೆಳೆದೆ ಹಳೆಯ ನೆನಪೇ ಕಂತಿರುವ ಸಮಯಲಿ ಎಲ್ಲ ಸಿಗುತಲೆ ಇರಲು ಬಹು ಆಸೆ ಕಳೆದೋಯ್ತು ಹಳೆಯ ನೆನಪೇ   ಜೀವನದಿ ಉತ್ಸಾಹ ಮತ್ತೆ ಚಿಮ್ಮುತ ಬರಲು ಶಕ್ತಿ ಕುಂದಿಹುದಿಲ್ಲಿ ಹಳೆಯ ನೆನಪೇ ಬಾಳೆಲೆಯನು ಹಾಕಿ ಸವಿಯುಂಡ ಗಳಿಗೆಯದು ಮರೆತು ಹೋಗದು ಎಂದೂ ಹಳೆಯ ನೆನಪೇ   ಹೊಸ ಬದುಕ ಕಟ್ಟಿದೆನು ಸತಿಯ ಜೊತೆಗೂಡಿ ನೋವ ಮೆಟ್ಟಿಲ ಮೇಲೆ ಹಳೆಯ ನೆನಪೇ ಕಸವಿರುವ ಕತೆಗಳನು ಗುಡಿಸಿ ಸ್ವಚ್ಛವ ಮಾಡೆ ಖುಷಿಯ ಕೊಟ್ಟಿಹ ದಿನವೂ ಹಳೆಯ ನೆನಪೇ   ಜೊತೆಗೂಡಿ ಎಲ್ಲರೊಳು…
ವಿಧ: ಕವನ
November 05, 2024
ಕನ್ನಡ ಭಾಷಾ ಮಹಿಮೆ!  ಕವಿಸಿರಿ ಕುವೆಂಪು- ಕನ್ನಡದಲ್ಲಿಯೇ ಬಿನ್ನಹಗೈದೊಡೆ ಹರಿವರಗಳ ಮಳೆ ಕರೆಯುವನು- ಎಂದು ಹೇಳಿದ ಮೇಲೇ...   ಕನ್ನಡದ ರಾಜಕಾರಣಿಗಳು- ಅಚ್ಚ ಕನ್ನಡದಲ್ಲಿಯೇ ವ್ಯವಹರಿಸುವುದರಿಂದ ಇಷ್ಟೊಂದು ಉಚ್ಛ ಸ್ಥಾನ-ಮಾನ ಸಿರಿ ಪಡೆದಿರಬಹುದೇ? *** ಡಬಲ್ ಧಮಾಕಾ  ಕನ್ನಡಿಗರಿಗೀ ವರ್ಷ ಡಬಲ್ ಧಮಾಕಾ- ದೀಪಾವಳಿಯೊಂದಿಗೆ ಬೆರೆತು ಬೆಳಗುತಿದೆ ಕನ್ನಡ ರಾಜ್ಯೋತ್ಸವಿದು ದೇದೀಪ್ಯಮಾನ...   ಸವಿ ಕನ್ನಡದ ರಾಜ್ಯೊತ್ಸವವಿದು- ದೀವಳಿಗೆಯ ಬೆಳಕಿನಲಿ ಬೆಳಗಲಿ ಜಾಜ್ವಲ್ಯಮಾನ! *** ಪವರ್ ಫುಲ್…
ವಿಧ: ಕವನ
November 04, 2024
ಮೌನ ಹೀಗೆಯೇ ಎಂದೂ ಹೇಳಬರುವುದಿಲ್ಲ ಒಳಗಿನ ಗೂಡಾರ್ಥ ಅರಿವಾಗುವುದೂ ಇಲ್ಲ !   ಹಲ ಕೆಲವರ ನಡೆ ನುಡಿಗಳೇ  ಮೌನಕೂ ನಿಲುಕದ ಉತ್ತರಗಳು ಶಬ್ದ ಅರ್ಥಗಳ ನಡುವೆ  ಹುದುಗಿರುವ ನಿಶಬ್ದಗಳು !   ಬಯಸಿದಾಗ ಹತ್ತಿರ ಬರುವ ಮನುಜರು,  ಕೆಲಸವಾಯಿತೋ ದೂರ ಸರಿವರು  ನಿಂತ ನೀರಿನಂತೆ !ಯಾಕೆಂದರೆ ?  ಘಟಾರದ ನೀರೂ ಹರಿದು ಹೋಗುತ್ತದೆ ;  ಜೊತೆಗೆ ನದಿಯ ನೀರೂ !  ಒಂದು ವಾಸನೆ ಇನ್ನೊಂದು ಸುವಾಸನೆ ,  ಅಷ್ಟೇ ವ್ಯತ್ಯಾಸ !   ಬೇರುಗಳು ಆಳಕ್ಕಿಳಿದಂತೆ  ಮರಕ್ಕೆ ಆಸರೆ ಹಾಗೇ ಓದು,  ಬರಹದಾಳಕ್ಕೆ ನಾವಿಳಿದಂತೆ…
ವಿಧ: ಕವನ
November 03, 2024
ಕತ್ತಲು ಹರಿಯಲು ಉರಿವ ಹಣತೆಯೇ ಬೇಕಿಲ್ಲ ಬೆಳಕು ಸೃಜಿಸುವುದು ಮನದ ಅಂತರ್ ದೃಷ್ಟಿಯಲ್ಲಿ ಸಾಲು ದೀಪಗಳ ನಡುವೆಯೂ ಕತ್ತಲ ತುಣುಕುಗಳಿರುತ್ತವೆ ಬೆಳಗಲಿಚ್ಚಿಸುವ ಎದೆಯೊಳಗೆ ಕಂದೀಲು ಅವಿತಿರುತ್ತದೆ ;   ಶತ್ರು ಕತ್ತಲಲೂ ಕಾಣಬಹುದು ವಿದ್ವೇಷಕೆ ಬೆಳಕಿನ ಹಂಗಿಲ್ಲ ಅಂತ್ಯವೇ ಅಂತಿಮ ಗುರಿಯಾದರೆ ದೀವಿಗೆಯ ಗೊಡವೆಯೇಕೆ ಪ್ರೀತಿ ಸೃಜಿಸುವ ಎದೆಯಲ್ಲಿ ಮುಳ್ಳೂ  ಕುಸುಮಿಸಬಹುದು ತೆರೆದ ಬಾಹುಗಳ ನಡುವೆ ಸಂಕೋಲೆಗೆ ಎಡೆಯಿರದು ;   ಕಾರ್ಗತ್ತಲಿನ ನಡಿಗೆಯಲೂ ಹೆಜ್ಜೆ ಗುರುತಿಸಬಹುದು ವಿಸ್ಮೃತಿಯ ಚಾದರಗಳಲಿ…
ವಿಧ: ಕವನ
November 02, 2024
ನಾಡ ತೋಟದಿ ಚೆಲುವು ಕಾಣುವಂಥ ಹೂವುಗಳಿಲ್ಲ ! * ಮದುವೆಯಾದ ಮರು ದಿನವೇ ಸವಿ ವಿಷವಾಯಿತು ! * ತೆಪ್ಪ ಇದ್ದಂತೆ ಬದುಕು ಸರಿಯಿರೆ ದಡ ಸೇರುವೆ ! * ಬದುಕೆಂದರೆ ತೆಂಗಿನೆಣ್ಣೆ, ತಪ್ಪಿತೋ ಕೊರಸಂಡಿಯು ! * ಮನಸ್ಸಿನಲ್ಲಿ ಸವಿಯಾಗಿರು , ಇಲ್ಲ ಹುಚ್ಚನಾಗುವೆ ! * ಹಲ ಕೆಲರ ಬರಹದಲಿಂದು ಬೆತ್ತಲೆಯೋಟ ಎಂದೂ ಕಾಣದಂತೇ ಇಹರಿಂದು ಘನಮಹಿಮರು ಇವರೆಂದೂ ! -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ  
ವಿಧ: ಕವನ
November 01, 2024
ದೀಪವೆಂದರೆ ಬೆಳಕು ಬೆಳಕು ಎಂದರೆ ದೀಪ ಜ್ಯೋತಿಯೊಳಗಿನ ಭಾವ ತಿಳಿಯದೇನು  ಅಂತರಾತ್ಮದ ನೆಣೆಗೆ ಮೌನದಾಳದ ಎಣ್ಣೆ ಹಾಕಿ ಉರಿಸುವ ರಶ್ಮಿ ತಿಳಿಯದೇನು    ಬೆಳಕು ಕಾಣದ ಜಗವ ಊಹಿಸಿರಿ ಜನರೆ ಬದುಕು ನಡೆಯಲು ಬಹುದೆ ತಿಳಿಯದೇನು ಗೂಡಾರ್ಥ ತಿಳಿಯದಿಹ ಜನರ ನಡುವೆಯೆ ನಾವು ಒಬ್ಬಂಟಿ ಎನ್ನುವುದು ತಿಳಿಯದೇನು   ಯಾವ ಶಾಸ್ತ್ರವೆ ಇರಲಿ ಮನು ಕುಲಕೆ ಒಳಿತಿಹುದು ತಿಳಿದು ಸಾಗುವ ಕಲೆಯು ತಿಳಿಯದೇನು  ಅವನೇನು ಇವನೇನು  ಎನ್ನುತಲಿ ಸಾಗಿದೊಡೆ  ನಮ್ಮ ನಾಶವು ನಮಗೆ ತಿಳಿಯದೇನು   -ಹಾ ಮ ಸತೀಶ ಬೆಂಗಳೂರು ಚಿತ್ರ…
ವಿಧ: ಕವನ
October 31, 2024
ನೀ ಮುಡಿವ ಗುಲಾಬಿಯಿಂದ ನನ್ನ ಮನವು ಅರಳುವುದು   ಹೂವ ಮನಸ್ಸು ನಿನ್ನದು ಬೇರೆವ ಗುಣವು ನನ್ನದು ನನ್ನ ನಿನ್ನ ಪ್ರೀತಿಯಿರಲು ಪ್ರೇಮದೊಳಗೆ ಮಿಂದಿಹುದು ಜೀವನದ ಪಯಣವಿದು ಬಹು ದೂರ ಬಂದಿಹುದು   ಬಾನಿನ ಬಯಲಲಿಂದು ಚಂದ್ರ ತಾರೆ ಸೇರುತಲಿ ಆಗಸದ ನೀಲಿಯಿಂದು ಕೆಂಪು ವರ್ಣ ತಾಳಿತಿಂದು ಬಾಳ ಚೆಲುವು ಅರಳಿತಿರಲು ತನುವ ಸೆಳೆದು ಬೆಸೆಯಿತಿಂದು   ಸುಂದರವಾದ ಹೃದಯವಿದು ವೀಣೆ ತಂತಿ ಮೀಟಿಹುದು ಮತ್ತೆ ಮತ್ತೆ ಸವಿದಿಹುದು ಜೇನ ಕಂಪ ಹರಡಿಹುದು ಪ್ರಣಯ ಗೆಲುವ ಕಾಣುತಲಿ ಒಲುಮೆ ಜೀವ ಪಡೆಯಿತಿಂದು -ಹಾ ಮ…