ಕವನಗಳು

ವಿಧ: ಕವನ
October 31, 2024
ನೀ ಮುಡಿವ ಗುಲಾಬಿಯಿಂದ ನನ್ನ ಮನವು ಅರಳುವುದು   ಹೂವ ಮನಸ್ಸು ನಿನ್ನದು ಬೇರೆವ ಗುಣವು ನನ್ನದು ನನ್ನ ನಿನ್ನ ಪ್ರೀತಿಯಿರಲು ಪ್ರೇಮದೊಳಗೆ ಮಿಂದಿಹುದು ಜೀವನದ ಪಯಣವಿದು ಬಹು ದೂರ ಬಂದಿಹುದು   ಬಾನಿನ ಬಯಲಲಿಂದು ಚಂದ್ರ ತಾರೆ ಸೇರುತಲಿ ಆಗಸದ ನೀಲಿಯಿಂದು ಕೆಂಪು ವರ್ಣ ತಾಳಿತಿಂದು ಬಾಳ ಚೆಲುವು ಅರಳಿತಿರಲು ತನುವ ಸೆಳೆದು ಬೆಸೆಯಿತಿಂದು   ಸುಂದರವಾದ ಹೃದಯವಿದು ವೀಣೆ ತಂತಿ ಮೀಟಿಹುದು ಮತ್ತೆ ಮತ್ತೆ ಸವಿದಿಹುದು ಜೇನ ಕಂಪ ಹರಡಿಹುದು ಪ್ರಣಯ ಗೆಲುವ ಕಾಣುತಲಿ ಒಲುಮೆ ಜೀವ ಪಡೆಯಿತಿಂದು -ಹಾ ಮ…
ವಿಧ: ಕವನ
October 30, 2024
ಕಳ್ಳಬೆಕ್ಕಿನ ನಡೆಯು ತಿಳಿದು ಬಂತೇ ನಿನಗೆ ಕಳ್ಳತನದಲಿ ಬರಹ ಕದಿವಂತೆ ನೋಡು| ಸುಳ್ಳು ಹೇಳಲು ಕಲಿತು ಕೃತಿಬೆರಕೆ ಮಾಡಿದರೆ ಹಳ್ಳ ಸೇರುವಿ ನೋಡು -- ಛಲವಾದಿಯೆ|| *** ಯಾರ ನ್ನೂ ಹಗುರ ವಸ್ತುಗಳಂತೆ ಭಾವಿಸದಿರಿ! ಒಂದು ಗ್ರಾಂ ವಜ್ರ ವೂ ಅತ್ಯಂತ ಶ್ರೇಷ್ಠ ! ತಿಳಿ ಯಿ ರಿ ?! *** ಹೇಳುತಿಹರು ಹಲವರು ಪಂಡಿತ ಮಹಾಶಯರು ಆಗಿರಬಹುದು ನಾನು ವಾಲ್ಮೀಕಿಯಾದಂತೆ ! *** ಹಲ ಕೆಲವರ ಮನ ಮನೆಗಳು ಒಳಗೊಳಗೆ ದೊಡ್ಡ ತೂತುಗಳು ಅದಕ್ಕಿಂತ ಸಾವಿರಾರು ಪಾಲು ಉತ್ತಮ ನಾನಾಗಿರಬಹುದು - ಛಲವಾದಿಯೆ !! ***…
ವಿಧ: ಕವನ
October 29, 2024
ಗಝಲ್ ೧ ದಡ್ಡಿ ನೀನು ನನ್ನ ಒಲುಮೆಯೊಳಿಂದು ಬೆರೆಯದೆ ಹೋದೆ ಕಡ್ಡಿ ತುಂಡಾದಂತೆ ಮಾತನಾಡಿ ಸವಿಯ ಅರಿಯದೆ ಹೋದೆ   ಜಪತಪವ ಮಾಡುವುದರಿಂದ ಪ್ರೇಮದೊರತೆ ಹುಟ್ಟುತ್ತದೆಯೆ ಬಾಡಿರುವ ಮುಖ ಕಮಲದ ಒಲುಮೆಯ ಕರೆಯದೆ ಹೋದೆ   ಹುಟ್ಟು ಸಾವುಗಳ ನಡುವಿನ ಜೀವನ ಚರಿತ್ರೆಯೇ ಸೋಜಿಗವು ಮೆಚ್ಚುವ ರಮಣಿಯ ವಿಶ್ವಾಸದ ಮೆಟ್ಟಿಲನು ಮರೆಯದೆ ಹೋದೆ   ಗತ್ತು ಗೈರತ್ತಿನ ನಡುವೆ ಬೆಳೆದವರ ಜೊತೆ ಸೇರುವುದು ಅಪಾಯವೆ ಹತ್ತಿರವಾದವರ ಕೈಹಿಡಿದು ಹೋದರೂ ನಾನು ಮೆರೆಯದೆ ಹೋದೆ   ಕೆಲವು ವ್ಯಂಜನಕ್ಕೆ ಒಳ್ಳೆಯದನ್ನು…
ವಿಧ: ಕವನ
October 28, 2024
ಯಾವ ಚೆಲುವಿನ ಭಾವ ಮೂಡಿ ನನ್ನೊಳು ಸೇರೆ ಪ್ರೀತಿ ಪ್ರೇಮದ ತೀರ ಕರೆಯಿತಿಂದು ಸವಿಯಾಸೆ ಮುಗಿಲಾಗಿ ಕ್ಷಣದೊಳಗೆ ಕರಗುತಲಿ ತನುವೊಳಗೆ ಹೃದಯವೂ ಬಂದಿಯಿಂದು   ಕತ್ತಲೆಯ ಸನಿಹದೊಳು ಮಲಗಿ ವರಗುತಲಿರೆ ಪ್ರಣಯ ಕಾವ್ಯಕೆಯಿಂದು ಚೆಲುವು ಬಂತು ಮೆತ್ತನೆಯ ಹಾಸಿಗೆಯು ಹೂವ ಹಾಸುತ ಕರೆಯೆ ಮೈಯೆಲ್ಲ ನಲಿವಿನಲಿ ಹೊರಳಿ ಕುಂತು   ಹಸಿಯ ಮನಸಿನ ಗೋಡೆ ಗಟ್ಟಿಗೊಳ್ಳುತ ಸಾಗೆ ಮತ್ತೆ ಕನಸಿಗೆ ಜೀವ ಶರಣು ಬರಲು ಬಂದ ಕರ್ಮವ ಪಡೆದು ಜೀವನವ ಸವೆಸುತಲಿ ನನಸ ಮಾರ್ಗದಿ ನಡೆಯೆ ಮುಕ್ತಿ ಸಿಗಲು   ಹಾ ಮ ಸತೀಶ ಬೆಂಗಳೂರು…
ವಿಧ: ಕವನ
October 27, 2024
ಆಡಳಿತದ ಅಂಬೋಣ  ನೈತಿಕತೆ ಇದ್ದರೆ ರಾಜೀನಾಮೆ ಕೊಡಿ- ಎಂದು ಹಗಲೆಲ್ಲಾ ಹೇಳಬೇಡಿ ವಿರೋಧ ಪಕ್ಷದವರೇ- ನಮಗೆ ನಾಚ್ಕೆ...   ಇವುಗಳ ಬಿಟ್ಟ ಮೇಲೇ- ನಮ್ಮ-ನಿಮ್ಮ  ರಾಜಕೀಯ ಪ್ರವೇಶ;  ನಮ್ಮಿಂದ ಇವೆಲ್ಲಾ  ಊರಿಂದಾಚ್ಗೆ! *** ಯುದ್ಧದ ಭಾಷ್ಯ  ಹಿಂದೆಲ್ಲಾ- ಸೈನಿಕರ ಕೊಂದು ಕೋಟೆಗಳ ವಶಪಡಿಸಿಕೊಳ್ಳುವುದೇ ಯುದ್ಧ...   ಇಂದು-  ನಗರಗಳ ಕೆಡವಿ; ನಾಗರೀಕರ ಕೊಂದು- ಜೀವಂತ ಶ್ಮಶಾನ ಮಾಡುವುದಕ್ಕೇ ಅದು ಬದ್ಧ! *** ತಾಯ್ನಾಡ ಕರೆ  ಕುಮಾರ ಸ್ವಾಮಿ- 2028ರ ಒಳಗೆ ಮತ್ತೆ ನಾನೇ ಸಿಎಂ...   ಪಿತೃ ಪ್ರೀತಿ…
ವಿಧ: ಕವನ
October 26, 2024
ಗಝಲ್ ೧ ಈಗೀಗ ಎಲ್ಲರೂ ಎಲ್ಲವೂ ಗೊತ್ತಿದೆ ಎನ್ನುವಂತೆ ಮಾತನಾಡುವವರೆ ನೋಡು ಹಾಗೆಯೇ ಹೀಗೆಯೇ ಎನುತ ನಮ್ಮ ಮುಂದೆಯೇ ಕುಳಿತಾಡುವವರೆ ನೋಡು   ಕಲಿತಿರುವುದಿಂದು ಸ್ವಲ್ಪವಾದರೂ ಗತ್ತು ಗೈರತ್ತಿಗೇನೂ ಕಡಿಮೆಯಿಲ್ಲವೋ ಏಕೆ ತಪ್ಪುಗಳಲ್ಲಿಯೆ ಮೀಯುತ್ತಿದ್ದರೂ ಎಲ್ಲರ ಜೊತೆಗೂ ಎಗರಾಡುವವರೆ ನೋಡು   ನಾನು ಸರಿಯಾಗಿರುವೆ ನೀನೇ ಸರಿಯಿಲ್ಲವೆನ್ನುವ ಮಂದಿಯಿಂದ ಏನಾದೀತಯ್ಯಾ ಬಣ್ಣದ ಮಾತುಗಳಲ್ಲೇ ಕಾಮನ ಬಿಲ್ಲನು ತೋರಿಸಿ ಹೊರಳಾಡುವವರೆ ನೋಡು   ವಿಮರ್ಶೆಗಳಿಂದು ಬರಹಗಾರರ ಉನ್ನತಿಗಾಗಿ ಇರದೆ ಸೋತಿರುವುದೇ…
ವಿಧ: ಕವನ
October 25, 2024
ಮೌನ ಬೆಳಕು ಇಂದೂ ನನಗೆ ಮುತ್ತಾ ಇತ್ತಿತ್ತ    || ಪ ||          ಸೊಗಸಲ್ಲಿ ಬಂದು ಕೂತು ನನ್ನನ್ನು ತಬ್ಬಿತ್ತ ಮನದೊಳಗೆ ಆಸೆಯ ಹರಡಿ ಮೈದಡವಿ ಸೆಳೆದಿತ್ತ ನಗುಮೊಗವ ಚೆಲ್ಲಿತ್ತ ಸಿಹಿಗನಸ ತುಂಬುತಲಿ ಮೈಬಳುಕಿಸಿ ನಡುತಿರುಗಿಸಿ ಕೈಹಿಡಿದು ನಿಂತಿತ್ತss       ||೧||   ಚೆಲುವಿಂದ ತಂಪುಗಾಳಿ  ಒಲವನ್ನು ಚಿಮ್ಮಿಸಿತ್ತ ಸವಿಯುಡುಗೆಯನ್ನು ತೊಡಿಸಿ ಸಿಹಿಯನ್ನು ಉಣಿಸಿತ್ತ ಮುನಿಸನ್ನು ಮುರಿಯುತ ತಾನು ಹರುಷವನು ನೀಡಿತ್ತ ಖುಷಿಯಾಗುತ ಮನಸೆಳೆಯುತ ಹಾಡಿತ್ತss  ||೨||   ಜೀವನದ ಕನಸನ್ನು  ನನಸಾಗಿ…
ವಿಧ: ಕವನ
October 24, 2024
ಗಝಲ್ ೧ ಮನವು ಹೊಳೆದು ಸವಿಯ ರೂಪ ಪಡೆದೆಯಿಂದು ಗೆಳತಿ ತನುವಿನೊಳಗೆ ಪ್ರೀತಿಯುಕ್ಕಿ ನಲಿದೆಯಿಂದು ಗೆಳತಿ   ಕದನವಿರದೆ ಒಂದೆ ಹೇಳಿ ಮುಂದೆ ಮುಂದೆ ಹೋದೆ ಚಿತ್ರ ಪಟದಿ ನೀನೆ ಇರಲು ನಿಂತೆಯಿಂದು ಗೆಳತಿ   ಜೀವದುಸಿರ ನೆಲದ ಮೇಲೆ ಕುಳಿತು ಮುಕ್ತ ಮಾತು ಕನಸಿನಾಟ ಮನೆಯ ಒಳಗೆ ಸೇಲೆಯಿಂದು ಗೆಳತಿ   ಮಾತು ಕಳೆದು ಹೋದ ಗಳಿಗೆ ಎಲ್ಲಿ ಇದ್ದೆ ಮಧುವೆ ಮೌನದಿಂದ ಒಲುಮೆಯನ್ನು ಸುರಿದೆಯಿಂದು ಗೆಳತಿ   ಹೊಸತು ಭಾವ ಹೊಸೆದ ಬಗೆಗೆ ನನಸು ಬಂತು ಈಶಾ ಸ್ನೇಹ ಚಿಮ್ಮಿ ಹೊಮ್ಮಿದಾಗ ಸವಿದೆಯಿಂದು ಗೆಳತಿ *** ಗಝಲ್…
ವಿಧ: ಕವನ
October 23, 2024
ಮಣ್ಣು ತಿನಿಸುವ ಕೆಲಸ ಸಾಹಿತ್ಯದಲಿ ಕೂಡದು ಇನ್ನೊಬ್ಬರ ಶ್ರಮವನು ತನ್ನದೆನ್ನುವುದು ಬೇಡದು ಸಾಹಿತ್ಯ ಸೇವೆಯೊಳು ತುಂಬಾ ಸ್ವಾರ್ಥವದು ತುಂಬಿದೆ ಹೀಗಾದರೆ ಚೆಲು ಬರಹ ಸಾಹಿತ್ಯದಲಿ ಮೂಡದು *** ಸುಂದರ ನೋಟದ ವಸ್ತುವಿನಲ್ಲಿ ವಿಷದ ಮುಳ್ಳನು ಗಮನಿಸಲ್ಲಿ  ಸವಿ ಇದೆಯೆಂದು ಹೋದೆಯೋ  ಹೊರಳುತ ಬದುಕುವೆ ಕೇಳಲ್ಲಿ  *** ಅರ್ಥವಿಲ್ಲದ ಬರಹ ಬರೆದು ಪ್ರಯೋಜನವೇನು ಚಪ್ಪೆ ಸಾರಿನ ರೀತಿ ಎನುವುದು ಓದುಗನಿಗಾಗದೇನು ತಿಳುವಳಿಕೆ ಇದ್ದರೂ ಇಲ್ಲದಂತೇ ಬರೆವುದು ತರವೇನು ಗದರಿಸಿ ಹೇಳಲು ಅವರೇನು ನಮಗಿಂತ…
ವಿಧ: ಕವನ
October 22, 2024
ಹೊತ್ತು ಕಂತಿದರೂ ಬರಲಿಲ್ಲ ನೀನಿಂದು ನನ್ನ ವೇದನೆ ನೂರು ಕನಸೆಲ್ಲ ಕರಗುತಲೆ ನನಸಿಂದು ಮೂಡಿಹುದು ನನ್ನೊಡಲ ಸವಿಯ ಹೀರು   ಊರೂರು ತಿರುಗುತಲಿ ಎಲ್ಲಿ ನೆಲೆಸಿರುವೆಯೊ ಬಂದಿಂದು ನನ್ನ ನೋಡು ಕೈಹಿಡಿದು ಸಂತೈಸು ಕಣ್ಣೀರ ಒರೆಸುತಲಿ ಬೆಸುಗೆಯೊಳು ಸುಖವ ನೀಡು   ಮಳೆಯಿಂದು ಸುರಿಯುತಲೆ ನಿನ್ನ ನೆನಪಾಗುತಲೆ ಮದನ ಮೋಹನನೇ ಆಗು ಸವಿಯಾಗು ಖುಷಿಯಲ್ಲಿ ನನ್ನ ಇನಿಯನೇ ಆಗು ಬಳಿ ಇರುತ ನಲ್ಲನಾಗು   -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ