ಎಲ್ಲ ಪುಟಗಳು

ಲೇಖಕರು: kpbolumbu
ವಿಧ: ಬ್ಲಾಗ್ ಬರಹ
February 22, 2024
ಜಗದ ಕನ್ನಡಿಯೊಳಾ ತೋರಿಕೆಯನಿರಗೊಡುತ ತನ್ನೊಳಿರವಿನ ನಿಜವ ತೋರ್ದಡಿಯ ಪೊಡಮಡುತ | ನಿದಿರೆಯಿಂದೆಚ್ಚರಿತು ತನ್ನಿರವಿನಚ್ಚರಿಯ ತಾನು ತಾನರಿಯೆ ಬಗೆಯ ತೋರ್ದಡಿಯ ಪೊಡಮಡುತ || ೧ ||   ಮೊಳಕೆಯೊಳಗಣ ಆ ಮುಗುಳುಗಳು ಬಿರಿವಡೆದು ತನ್ನೊಳಚ್ಚರಿಯನಿರಗೊಟ್ಟಡಿಯ ಪೊಡಮಡುತ | ದೇಶಕಾಲಗಳದೀ ತೋರಿಕೆಯನಣಿಗೊಳಿಸಿ ನಿರ್ವಿಕಲ್ಪವ ಮಾರ್ಪಡಿಪಡಿಯ ಪೊಡಮಡುತ || ೨ ||   ಮಿಡಿತವದೊಂದರಿಂದೀಯಿದರನಳಗೊಳಿಸಿ ಈಯಿದದೆಂಬುದನರಿಯಗೊಟ್ಟಡಿಯ ಪೊಡಮಡುತ | ನಿಜದರಿವನಿರಗೊಡುತ ಇಳೆಯೊಳಾ ಪರಮವನು ಮರುವಾರಿ ಬಾರಗೊಡದಡಿಯ …
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
February 21, 2024
ಛಂದ ಪುಸ್ತಕ 2009ನೇ ಸಾಲಿನ ಬಹುಮಾನ ಪಡೆದ ಕಥಾಸಂಕಲನ ಇದು. ಕಥಾಸ್ಪರ್ಧೆಯ ತೀರ್ಪುಗಾರರಾದ ಅಮರೇಶ ನುಗಡೋಣಿ ಹತ್ತಾರು ಕತೆಗಾರರ ಸುಮಾರು 100 ಕತೆಗಳನ್ನು ಓದಿ, ಇದನ್ನು ಆಯ್ಕೆ ಮಾಡಿದ್ದಾರೆ. "ತೀರ್ಪುಗಾರರ ಮಾತಿ”ನಲ್ಲಿ ಅವರು ಹೀಗೆ ಬರೆದಿದ್ದಾರೆ: “ಈ ಸಂಕಲನದಲ್ಲಿ ಹನ್ನೆರಡು ಕಥೆಗಳಿವೆ. ಹತ್ತು ವರ್ಷಗಳ ಅವಧಿಯಲ್ಲಿ ಈ ಕಥೆಗಳು ರಚನೆಯಾಗಿವೆ. ಸಂದೀಪ ನಾಯಕರ ಕಥೆಗಳು ಸಮಾನತೆಯನ್ನು ಕಾಯ್ದುಕೊಂಡಿವೆ. ಪಾತ್ರಗಳ ಸೃಷ್ಟಿಯಲ್ಲಾಗಲಿ, ಸನ್ನಿವೇಶಗಳ ನಿರ್ಮಾಣದಲ್ಲಾಗಲಿ, ಉದ್ಭವಿಸುವ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 21, 2024
ಜಯಶ್ರೀ ಕದ್ರಿಯವರ ನೂತನ ಕವನ ಸಂಕಲನ ‘ಕೇಳಿಸದ ಸದ್ದುಗಳು'ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಕವಯತ್ರಿಯಾದ ಎಂ ಆರ್ ಕಮಲ. ಅವರ ಪ್ರಕಾರ “ಜಯಶ್ರೀ ಕದ್ರಿಯವರಿಗೆ ಕವಿತೆಯೆನ್ನುವುದು ತುದಿ ಬೆರಳಿಗಂಟಿದ ಪರಾಗ. ಹೂವಿನ ಘಮಲು. ರಾಗವೊಂದನ್ನು ಜೀವದಲ್ಲಿ ಮೆಲ್ಲನೆ ಅರಳಿಸುವ ಸೋಜಿಗ. ಒಳಗಿನ ಕುದಿತ,ಇರಿತಗಳಿಂದ ಬಿಡುಗಡೆಯನ್ನು ಪಡೆವ ಹಾದಿ. ನಿಶ್ಯಬ್ಧಕ್ಕೆ ಶಬ್ಧವನ್ನು ತುಂಬುವ, ಭಾವಕ್ಕೆ ಪದಗಳನ್ನು ನೇಯುವ ಬೆಡಗು. ಲೆಕ್ಕವಿಡದೆ ಕತ್ತಲಲ್ಲಿ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 19, 2024
ವಿವಿದ ಲೇಖಕರಿಂದ ಬರೆಯಲ್ಪಟ್ಟ ಚೈನಾ ಮತ್ತು ಜಪಾನ್ ದೇಶದ ಪ್ರಸಿದ್ಧ ಕಥೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಖ್ಯಾತ ಅನುವಾದಕರಾದ ನೀಲತ್ತಹಳ್ಳಿ ಕಸ್ತೂರಿ ಇವರು. ಈ ಪುಸ್ತಕವನ್ನು ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯವರು ಹೊರತಂದಿದ್ದಾರೆ. ಈ ಕೃತಿಯಲ್ಲಿ ೮ ಕಥೆಗಳಿವೆ.  ಮೊದಲ ಕಥೆ ಹಾನನ ಅಕೃತ್ಯ ಇದರ ಮೂಲ ಲೇಖಕರು ಷಿಗೆ ನಯೋಯ. ಇವರು ಆಧುನಿಕ ಜಪಾನಿನ ಅತಿ ಪ್ರಮುಖ ಹಾಗೂ ಪ್ರಭಾವಶಾಲಿ ಲೇಖಕರಲ್ಲಿ ಒಬ್ಬರು. ಅವರ ಬರಹಗಳಲ್ಲಿ ಅಸಾಧಾರಣವಾದ ಒಂದು ಚೆಲುವು ಹಾಗೂ ಸೂಕ್ಷ್ಮ ದೃಷ್ಟಿಗಳ…
ಲೇಖಕರು: Kavitha Mahesh
ವಿಧ: ರುಚಿ
February 18, 2024
ಮೈದಾಹಿಟ್ಟು, ಅರಸಿನ, ಮೆಣಸಿನ ಹುಡಿ, ಜೀರಿಗೆ, ಉಪ್ಪು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ನಂತರ ಬಾಣಲೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಕಾಯಿಸಬೇಕು. ಅದಕ್ಕೆ ಹಿಟ್ಟಿನ ಮಿಶ್ರಣದಲ್ಲಿ ಬಾಳೆಕಾಯಿಗಳನ್ನು ಅದ್ದಿ ಬೋಂಡಾದಂತೆ ಕರಿಯಬೇಕು. ಈಗ ರುಚಿ ರುಚಿಯಾದ ಬಾಳೆಕಾಯಿ ಕಬಾಬ್ ಸವಿಯಲು ಸಿದ್ಧ. ಸಾಸ್ ಅಥವಾ ಚಟ್ನಿ ಜೊತೆ ತಿನ್ನಲು ಚೆನ್ನಾಗಿರುತ್ತದೆ. 
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 16, 2024
ಕನ್ನಡ ಮಹಿಳಾ ಕಾವ್ಯ’ ಪ್ರಾತಿನಿಧಿಕ ಸಂಗ್ರಹ ೨೦೨೦-೨೦೨೧- ಎಚ್.ಎಸ್. ಅನುಪಮಾ ಅವರ ಕವಿ ಪ್ರಕಾಶನದಿಂದ ಪ್ರಕಟಗೊಂಡಿರುವ ಈ ಕೃತಿಯನ್ನು ಪ್ರೊ. ಸಬಿಹಾ ಭೂಮಿಗೌಡ ಅವರು ಸಂಪಾದಿಸಿದ್ದಾರೆ. ಈ ಕೃತಿಯ ಕುರಿತು ತಿಳಿಸುತ್ತಾ ‘ಕನ್ನಡ ಸಾಹಿತ್ಯದ ಪ್ರಾತಿನಿಧಿಕ ಕವನ ಸಂಪುಟಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ತೀರ ಸೊರಗಿರುವುದನ್ನು ಸ್ತ್ರೀವಾದಿಗಳು ಆಧಾರ ಸಹಿತವಾಗಿ ದಾಖಲಿಸಿದ್ದಾರೆ. ಆ ಕಾರಣಕ್ಕಾಗಿ ಮಹಿಳೆಯರ ಬರಹಗಳಿಗೆ ಉತ್ತೇಜನ ನೀಡಲು ಆರಂಭವಾದ ಪ್ರತ್ಯೇಕ ಕಾವ್ಯ ಸಂಪುಟಗಳು ಅನಂತರದಲ್ಲಿ ಅಸ್ಮಿತೆಯ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 14, 2024
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದ ಅಜಿತ ಕುಮಾರ ಇವರು ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೈಲಿನಲ್ಲಿ ಆತ್ಮಸ್ಥೈರ್ಯ ಮತ್ತು ಆರೋಗ್ಯ ಕಾಪಾಡಲು ಕೈಗೊಂಡ ಯೋಗಾಭ್ಯಾಸದ ಕುರಿತಾದ ಸಮಗ್ರ ಪುಸ್ತಕ ‘ಯೋಗ ಪ್ರವೇಶ'. ೧೯೮೪ರಲ್ಲಿ ಪ್ರಥಮ ಮುದ್ರಣ ಕಂಡ ಈ ಕೃತಿಯು ಬಹಳ ಜನಪ್ರಿಯವಾಗಿತ್ತು. ೧೯೯೦ರಲ್ಲಿ ಅಜಿತಕುಮಾರರ ಅಕಾಲಿಕ ನಿಧನದ ಬಳಿಕ ೨೦೧೯ರಲ್ಲಿ ಹಾಗೂ ೨೦೨೨ರಲ್ಲಿ ಈ ಕೃತಿಯು ಮರು ಮುದ್ರಣವಾಯಿತು. ಇಂಥಹ ಒಂದು ಕೃತಿಯನ್ನು ಕನ್ನಡ ಸಾರಸ್ವತ ಲೋಕಕ್ಕೆ ಒಪ್ಪಿಸಿದ ಅಜಿತಕುಮಾರರ ಸಾಧನೆ ಸದಾ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 12, 2024
ಬೆಂಗಳೂರಿನ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಹೊರ ತಂದ ‘ಮಿಲಿಂದ ಪ್ರಶ್ನೆ' ಎಂಬ ಕೃತಿ ಮೂಲತಃ ಪಾಲಿ ಭಾಷೆಯಲ್ಲಿ ಬರೆಯಲ್ಪಟ್ಟಿದೆ ಎಂದು ಕೃತಿಯ ಅನುವಾದಕರಾದ ಖ್ಯಾತ ಸಾಹಿತಿ ಜಿ ಪಿ ರಾಜರತ್ನಂ ಅವರು ತಮ್ಮ ಮುನ್ನುಡಿಯಲ್ಲಿ ತಿಳಿಸುತ್ತಾರೆ. ಜಿ ಪಿ ರಾಜರತ್ನಂ ಅವರು 'ಪ್ರವೇಶ' ಎಂಬ ಮುನ್ನುಡಿ ಬರಹದಲ್ಲಿ ಈ ಕೃತಿಯ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ತಿಳಿಸುತ್ತಾ ಹೋಗಿದ್ದಾರೆ. ಅದರ ಆಯ್ದ ಭಾಗಗಳು ನಿಮ್ಮ ಓದಿಗಾಗಿ… “ ಪಾಲಿ ಭಾಷೆಯಲ್ಲಿರುವ ಸಾಹಿತ್ಯವು ಎರಡು ವಿಧವಾದುದೆಂದು ಸ್ಥೂಲವಾಗಿ…
ಲೇಖಕರು: Kavitha Mahesh
ವಿಧ: ರುಚಿ
February 11, 2024
ಆಲೂಗೆಡ್ಡೆ ಹೋಳುಗಳನ್ನು ಬೇಯಿಸಿ. ತೆಂಗಿನಕಾಯಿ ತುರಿ, ಅರಶಿನ, ಇಂಗು, ಹುರಿಗಡಲೆ ಹುಡಿಗಳನ್ನು ಸೇರಿಸಿ ರುಬ್ಬಿ. ಕಾದ ಎಣ್ಣೆಗೆ ಸಾಸಿವೆ-ಜೀರಿಗೆ ಹುಡಿ ಸೇರಿಸಿ ಒಗ್ಗರಣೆ ಮಾಡಿ. ಒಗ್ಗರಣೆಗೆ ಒಣಮೆಣಸಿನ ಕಾಯಿ ತುಂಡುಗಳನ್ನು ಹಾಕಿ ಬಾಡಿಸಿ. ನಂತರ ಬೇಯಿಸಿದ ಆಲೂಗೆಡ್ಡೆ ಹೋಳುಗಳು, ಅರೆದ ಮಿಶ್ರಣ, ಉಪ್ಪು ಹಾಕಿ ಗೊಜ್ಜಿನ ಹದಕ್ಕೆ ನೀರು ಹಾಕಿ ಕುದಿಸಿ ಒಲೆಯಿಂದ ಕೆಳಗಿಳಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಅಲೂಗೆಡ್ಡೆ ಗೊಜ್ಜು ತಯಾರು.
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 09, 2024
‘ಭಾವಾಂಬುಧಿ' ಎನ್ನುವ ಅಪರೂಪದ ಷಟ್ಪದಿ ಸಂಕಲನವನ್ನು ರಚಿಸಿದ್ದಾರೆ ಚನ್ನಕೇಶವ ಜಿ ಲಾಳನಕಟ್ಟಿ. ಇವರ ಬಗ್ಗೆ ಹಾಗೂ ಈ ಕೃತಿಯ ಬಗ್ಗೆ ಸೊಗಸಾದ ಬೆನ್ನುಡಿಯನ್ನು ಬರೆದಿದ್ದಾರೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಡಿ. ಮಲ್ಲಾರೆಡ್ಡಿಯವರು. ಇವರು ತಮ್ಮ ಬೆನ್ನುಡಿಯಲ್ಲಿ “ಕನ್ನಡ ಸಾಹಿತ್ಯ ಪರಂಪರೆಗೆ ಸುಮಾರು ೨೦೦೦ ವರ್ಷಗಳ ಸಮೃದ್ಧ ಇತಿಹಾಸವಿದ್ದು, ಕಾವ್ಯ ರಚನೆಯಲ್ಲಿ ಬೇರೆ ಬೇರೆ ಭಾಷೆಗಳಿಗಿಂತ ಉತ್ತಮ ಕಾವ್ಯವನ್ನು ರಚಿಸಿದ ಹೆಮ್ಮೆ ನಮ್ಮದಾಗಿದೆ. ಹಳೆಗನ್ನಡ, ಪೂರ್ವಕನ್ನಡ, ನಡುಗನ್ನಡ…