ವಿಧ: Basic page
April 03, 2008
ಮಲೆನಾಡಿನಲ್ಲಿ ಎರೆಯಪ್ಪ ಅನ್ನುವ ತಿಂಡಿ ಇದೆ. (ಇದನ್ನು ಕೆಲವು ಪ್ರದೇಶಗಳಲ್ಲಿ ಪಡ್ಡು ಎಂದೂ ಕರೆಯುತ್ತಾರೆ). ದೋಸೆ ಹಿಟ್ಟು ಬಟ್ಟಲು ಬಟ್ಟಲಾದ ಕಾವಲಿಯ ಮೇಲೆ ಹಾಕಿ ಬೇಯಿಸಲಾದ ತಿಂಡಿ ಇದು. ಕರ್ನಾಟಕದ ಬಾಕಿ ಪ್ರದೇಶಗಳಲ್ಲಿ ಏನನ್ನುತ್ತಾರೋ ತಿಳಿಯದು.
ಇದು ಥಾಯ್ ಲ್ಯಾಂಡಿನಲ್ಲಿಯೂ ಇದೆ. ದೋಸೆ ಹಿಟ್ಟಿನ ಬದಲಾಗಿ , ತೆಂಗಿನಕಾಯಿ ಹಾಲು , ಸಕ್ಕರೆಯ ಮಿಶ್ರಣ ಉಪಯೋಗಿಸುತ್ತಾರೆ (ಇನ್ನೂ ಏನು ಹಾಕಿರುತ್ತಾರೋ ಗೊತ್ತಿಲ್ಲ).
ಬೆಂದ ಮೇಲೆ ತೆಳ್ಳಗೆ ಪದರಪದರವಾಗಿದ್ದು ಚೆನ್ನಾಗಿರುತ್ತದೆ.
ವಿಧ: ಬ್ಲಾಗ್ ಬರಹ
April 03, 2008
1.ಆಡು ಮುಟ್ಟದ ಸೊಪ್ಪಿಲ್ಲ,ಆಟೊ ನುಗ್ಗದ ಗಲ್ಲಿ ಇಲ್ಲ.
2.ಮಾತೆಯ ಮಾತು ಕೇಳಿದರೆ ತಿರುಗುವ ಭೂಮಿಯೆ ನಿನ್ನ ಕೈಯಲ್ಲಿ,ಪ್ರೇಯಸಿಯ ಮಾತು ಕೇಳಿದರೆ.........?
ವಿಧ: ಬ್ಲಾಗ್ ಬರಹ
April 03, 2008
ಹಾಯ್ ಪುಟ್ಟಿ
"ಏನೇ ನಮ್ಮ ಅಪ್ಪಾ, ಅಮ್ಮನ್ನೇ ಗಯ್ಯಾಳಿ ಮನೆತನದವರು ಅಂತೀಯಾ? ನಿಂಗೆ ಕೊಬ್ಬು ತುಂಬಾ ಹೆಚ್ಚಾಗಿದೆ. ನೀನು ಏನು ಹೇಳಿದರೂ ನಾನು ತಿರುಗಿ ಮಾತಾಡಲ್ಲ ಅನ್ನೋ ಭಾವ ನಿನ್ನಲ್ಲಿ ಮೂಡಿದೆ. ನೋಡು ಇದು ನಿಂಗೆ ಲಾಸ್ಟ್ ವಾರ್ನಿಂಗ್. ಇನ್ನೊಂದು ಸಲ ಈ ರೀತಿ ಕಿರಿಕ್ ಮಾಡಿದ್ಯಾ ಅವಳು ಸರಿಯಿಲ್ಲ ಅಂತಾ ನಿಮ್ಮೂರಿಗೆಲ್ಲಾ ಹಬ್ಬಿಸುತ್ತೇನೆ. ನನ್ನಂತಹ ಪಾಪದ ಹುಡುಗನ ಜೊತೆಯೇ ಜಗಳ ಕಾಯೋ ಜಗಳಗಂಟಿ ಅಂತಾ ನಿಮ್ಮುರಿನ ಬಾಯಿಬಡುಕ ಹೆಂಗಸರಿದ್ದಾರಲ್ಲ, ಅದೇ ಸೀತಮ್ಮ, ಮೀನಾಕ್ಷಮ್ಮ...ಅವರ ಹತ್ರಾ…
ವಿಧ: ಚರ್ಚೆಯ ವಿಷಯ
April 03, 2008
ದಯವಿಟ್ಟು ಎಲ್ಲರೂ ಇದನ್ನೊಮ್ಮೆ ಓದಿ
http://thatskannada.oneindia.in/response/2008/0403-all-people-in-karnataka-should-unite.html
ವಿಧ: ಬ್ಲಾಗ್ ಬರಹ
April 03, 2008
ವರುಣ್
ಥೂ ಇಂಥ ಹಲ್ಕಾ ಅಂತ ಗೊತ್ತಿದ್ದರೆ ಇವನ ಹತ್ತಿರ ಕೆಲ್ಸಕ್ಕೆ ಸೇರ್ತಿರಲಿಲ್ಲ. ಎಷ್ಟು ಕಷ್ಟ ಪಟ್ಟಿದ್ದೆ ಇವನಿಗೋಸ್ಕರ. ಮದುವೆಗೂ ಕೇವಲ್ ಮೂರೆ ದಿನ ರಜಾ ಕೊಟ್ಟಿದ್ದ . ಆದರೂ ಅದೇನು ಒಳ್ಳೆಯ ಬುದ್ದಿ ಬಂತ್ಟೊ ಮದುವೆಗೆ ಬಂದ ಹೋದ ಮೇಲೆ ಪ್ರಮೋಷನ್ ಕೊಟ್ಟ . ಮನೆ ಕಟ್ಟಿಸುವಂತೆ ಹೇಳಿದ ಸಾಲಕ್ಕೆ ಶಿಫಾರಸ್ಸು ಮಾಡಿದ. ಹೆಂಡತಿ ದಿವ್ಯಳ ಮೈ ಮೇಲೆ ಒಡವೆಗಳನ್ನು ಮಾಡಿಸಿಕೊಡುವಂತೆ ಹೇಳಿದ . ಕಾರು ಎಲ್ಲ ಕೊಡಿಸಿದ . ಎಲ್ಲಾ ದಿವ್ಯಾಳ ಕಾಲ್ಗುಣ ಎಂದುಕೊಂಡರೆ ಅದು ಅವಳ ಅಂದದಿಂದ ಎಂದು…
ವಿಧ: ಬ್ಲಾಗ್ ಬರಹ
April 03, 2008
"ಯಾರು ತಮಿಳು ಮಾತನಾಡುವವನೊಂದಿಗೆ ತಮಿಳಿನಲ್ಲಿ, ತೆಲುಗು ಮಾತನಾಡುವವನೊಂದಿಗೆ ತೆಲುಗಿನಲ್ಲಿ, ಇಂಗ್ಲಿಷ್ ಮಾತನಾಡುವವನೊಂದಿಗೆ ಇಂಗ್ಲಿಷಿನಲ್ಲಿ, ಮತ್ತು ಕನ್ನಡ ಮಾತನಾಡುವವನೊಂದಿಗೆ ಇಂಗ್ಲಿಷಿನಲ್ಲಿ ಮಾತನಾಡುತ್ತಾನೊ ಅವನೇ ನಿಜವಾದ ಕನ್ನಡಿಗ" – ಅನಾಮಿಕ
ಆಹಾ, ಎಂಥ ಬಿರಿದು! ನಾಚಿಕೆಯಾಗಬೇಕು.
ಇಂಥ ಭಾಷಾಭಿಮಾನವಳ್ಳ ಕನ್ನಡಿಗರಿಗೆ, ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಪಟ್ಟವೇಕೆ, ರೇಲ್ವೆ ಹುದ್ಡೆಗಳಲ್ಲಿ ರಿಸರ್ವೇಶನ್ಗಳೇಕೆ, ಭಾರತದ ಸಾಫ್ಟ್ ವೇರ್ ರಾಜಧಾನಿಯೆಂಬ ಹೆಗ್ಗಳಿಕೆಯೇಕೆ (ಮತ್ತು…
ವಿಧ: Basic page
April 03, 2008
"ಖಡಾ ಪಾರ್ಸಿ ", ಶ್ರೀ ಮಾನೊಕ್ ಜಿ ರವರ ಒಂದು ಕಂಚಿನ ವಿಗ್ರಹ. ಸುಮಾರು ಒಂದು ಶತಮಾನದಿಂದ ಬಿಸಿಲು, ಮಳೆ ಗಾಳಿಯೆನ್ನದೆ ನಿಂತೇ ಇದೆ. ಆಗ ಭೈಕಲ್ಲಾ ಕ್ಷೇತ್ರದ ಆವರಣದ ಮಧ್ಯೆ ನಿಂತಿತ್ತು. ಮುಂಬೈ ನ ಅಗಾಧ ಬೆಳವಣಿಗೆಯಿಂದ, ಮೊದಲೇ ಚುಟುಕು ಜಾಗವಿರುವ ಕಡೆ, ಪ್ಲೈಓವರ್ ಕಟ್ಟಿದಾರೆ. ರಸ್ತೆಗಳಲ್ಲಿ ವಾಹನಗಳ ಓಡಾಟ ನೂರ್ಪಟ್ಟಾಗಿದೆ. ಹಾಗಾಗಿ, ಖಡಾ ಪಾರ್ಸಿಯವರ ಬಗ್ಗೆ ಕೇಳುವವರ್ಯಾರು ?
ಮುಂಬೈ ನ ಬೆಳವಣಿಗೆಗೆ, ಪೊರ್ಚುಗೀಸರು, ಇಂಗ್ಲೀಷರ ಕೊಡುಗೆ ಅನನ್ಯ. ನಂತರ ಅಗ್ರಸ್ಥಾನದಲ್ಲಿ…
ವಿಧ: ಬ್ಲಾಗ್ ಬರಹ
April 02, 2008
ಇಂದು ಬೆಂಗ್ಳೂರಿಂದ ಮೈಸೂರ್ಗೆ "ಐರಾವತ' ಹತ್ಕೊಂಡ್ ಬರ್ಬೇಕಾದ್ರೆ, 'ಗಾಳಿಪಟ' ಚಿತ್ರ ಹಾಕಿದ್ರು. ಯಾವ್ದೋ ಸಿನೆಮಾ ಹಾಲ್ನಲ್ಲಿ ಕೂತ್ಕೊಂಡ್ ಹ್ಯಾಂಡಿಕ್ಯಾಮಿಂದ ತೆಗೆದದ್ದು. ಕ್ವಾಲಿಟಿ ಕಚ್ಛಡವಾಗಿತ್ತು. ಅದನ್ನ ನನ್ ಪಕ್ಕದ್ ಸೀಟ್ನಲ್ಲಿ ಕೂತೋನ್ ಒಬ್ಬ ಅವ್ನ ಮೊಬೈಲ್ ಕ್ಯಾಮೆರಾ ಇಂದ ಸೆರೆ ಹಿಡೀತಿದ್ದ. ಅಫ್ ಕೋರ್ಸ್ ಹಾಡ್ಗಳನ್ನ್ ಮಾತ್ರ :-p
ವಿಧ: ಬ್ಲಾಗ್ ಬರಹ
April 02, 2008
ಇಂದು ಬೆಂಗ್ಳೂರಿಂದ ಮೈಸೂರ್ಗೆ "ಐರಾವತ' ಹತ್ಕೊಂಡ್ ಬರ್ಬೇಕಾದ್ರೆ, 'ಗಾಳಿಪಟ' ಚಿತ್ರ ಹಾಕಿದ್ರು. ಯಾವ್ದೋ ಸಿನೆಮಾ ಹಾಲ್ನಲ್ಲಿ ಕೂತ್ಕೊಂಡ್ ಹ್ಯಾಂಡಿಕ್ಯಾಮಿಂದ ತೆಗೆದದ್ದು. ಕ್ವಾಲಿಟಿ ಕಚ್ಛಡವಾಗಿತ್ತು. ಅದನ್ನ ನನ್ ಪಕ್ಕದ್ ಸೀಟ್ನಲ್ಲಿ ಕೂತೋನ್ ಒಬ್ಬ ಅವ್ನ ಮೊಬೈಲ್ ಕ್ಯಾಮೆರಾ ಇಂದ ಸೆರೆ ಹಿಡೀತಿದ್ದ. ಅಫ್ ಕೋರ್ಸ್ ಹಾಡ್ಗಳನ್ನ್ ಮಾತ್ರ :-p
ವಿಧ: Basic page
April 02, 2008
ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕಿನಲ್ಲಿರುವ, ಬೆಂಗಳೂರಿನಿಂದ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಸುಮಾರು ೧೦೦ ಕಿ.ಮಿ. ದೂರದಲ್ಲಿರುವ ಯಡೆಯೂರು ತೀರ್ಥಕ್ಷೇತ್ರ ದರ್ಶನಾರ್ಥಿಗಳಿಗೆ, ಲಿಂಗಾಯತ ಸಮುದಾಯಕ್ಕೆ ಮುಖ್ಯವಾಗಿ, ಪ್ರಮುಖವಾದ ಯಾತ್ರಾಸ್ಥಳ. ಇತ್ತೀಚೆಗೆ ಒಂದು ಅಂತರ ಜಾತಿ ವಿವಾಹಕ್ಕಾಗಿ ಅಲ್ಲಿಗೆ ನಾನು ಭೇಟಿ ಕೊಟ್ಟಾಗ ಅಲ್ಲಿನ ಪರಿಸರವನ್ನು ನೋಡಿ ಅತ್ಯಂತ ಸಂತೋಷವಾಯಿತು. ಭಕ್ತಿಯುಕ್ಕಿಸುವ ದೇವಾಲಯವಿದೆ. ಸಿದ್ದಲಿಂಗೇಶ್ವರಸ್ವಾಮಿಯ ದೇವಾಲಯ. ಹೋದವರಿಗೆ ಸುಲಭವಾಗಿ ದೊರಕುವ…