ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೊಟ್ಟೆ ನೋವಿನ ಪ್ರಸಂಗ


ಹೊಟ್ಟೆನೋವಿನ ಪ್ರಸಂಗ



ಅವತ್ತು ಸೀನೂಗೆ ಬೆಳ್ಬೆಳಿಗ್ಗೆನೆ ಸಿಕ್ಕಾಪಟ್ಟೆ ಹೊಟ್ಟೆನೋವು ಶುರ್ವಾಗ್ಬಿಡ್ತು. ಬಿಸಿನೀರು ಕುಡ್ದಿದ್ದಾಯ್ತು, ೨-೩ ಸಲ ಹಿತ್ತಲಕಡೆ ಹೋಗಿ ಬಂದಿದ್ದೂ ಆಯ್ತು, ಮನೇಲಿ ದೊಡ್ಡಜ್ಜಿ ಹೇಳಿದ್ರು ಅಂತ ಬಿಸಿ ನೀರಿಗೆ ಮೆಂತ್ಯ ಹಾಕಿ ಕುಡ್ದಿದ್ದೊ ಆಯ್ತು, ಏನೆ ಆದ್ರೂ ಹಾಳಾದ್ದು ಹೊಟ್ಟೆ ನೋವು ಮಾತ್ರ ಕಿರುಕುಳ ಕೊಡ್ತಾನೆ ಇದೆ.


ಸರಿ ಬೇರೆ ದಾರಿನೆ ಇಲ್ಲವಾದಾಗ ಸ್ನೇಹಿತ ಸುಬ್ಬುಗೆ ಕರೆಮಾಡಿ ಹೆಂಡ್ತಿನೂ ಜ್ಯೊತೆಲಿ ಕರ್ಕೊಂಡು
ಹತ್ತಿರದ ಆಸ್ಪತ್ರೆಗೆ ಬರ್ಲೇಬೇಕಾಯ್ತು.


ಆಸ್ಪತ್ರೆನಲ್ಲಿ ಡಾಕ್ಟ್ರು ಎಲ್ಲ ಪರೀಕ್ಷೆ ಮಾಡಿ ಕೊನೆಗೆ ನಿರ್ದಾರ ಮಾಡಿದ್ದು ಆಪರೇಶನ್ ಆಗಬೇಕು ಅಂತ.


ಸೀನುಗೆ ಇಂಜಕ್ಷನ್ ತಗೂಳೂದು ಅಂದ್ರೇನೆ ಭಯ ಅಂತದ್ರಲ್ಲಿ ಆಪರೇಶನ್ ಅಂದ್ರೆ... ನಡುಗಿಹೋದ.


ಕೊನೆಗೆ ಸ್ನೇಹಿತನ ಸಾಂತ್ವಾನ, ಹೆಂಡತಿಯ ಮುಖ ನೋಡಿ ವಿದಿ ಇಲ್ಲದೆ ಆಪರೇಶನ್ಗೆ ಒಪ್ಪಿಗೆ ಕೊಟ್ಟ.

ನೆನಪಿನ ಸಂಪುಟ ..

 

ಆ ಹಳೆ ನೆನಪುಗಳು ಇಂದು ಮಾತಾಗಿ ಬಂದವು.ಈ ಕಾಗದಕ್ಕೆ ಹೊಸ ರೂಪ ತಂದವು .ಚಿಕ್ಕವರಿದ್ದಾಗ ಶಾಲೆಯಲ್ಲಿನ ಆ ಹಳೇ ನೆನಪುಗಳೇ ಇವತ್ತು ಹೊಸ ನಗುವಿನ ಉಲ್ಲಾಸ ನೀಡಿದವು .ಶಾಲೆಯ ಎಲ್ಲ ಮಕ್ಕಳಿಗೆ ಗಾಂಧಿ ಜಯಂತಿ ಎಂದರೆ ಬಲು ಹಿಗ್ಗು .ಒಂದು ತಿಂಗಳ ಮುಂಚಿತವಾಗಿಯೇ ನಾವು ದಾರಿ ಕಾಯುತ್ತಿದ್ದೇವು. ನೀವು ನಾನು ಮತ್ತು ನಮ್ಮ ಶಾಲೆಯ ಮಕ್ಕಳು ಗಾಂಧೀಜಿಯವರ ಪ್ರೀಯರೆಂದು ಭಾವಿಸಿರಬಹುದು .ಆದರೆ ನಿಜವಾದ ಸತ್ಯ ಸಂಗತಿಯನ್ನು ಇಂದು ನೆನಪಿಸಿದರೆ ಮುಖದಲ್ಲಿ ತುಂಬಾ ನಗುವಿನ ನಾಚಿಕೆ ಕಾಣಬಹುದು .

 

ಮನಸಲ್ಲಿರುವ ಕನಸು.

 

 ಮೃದು ಮನಸಲಿ

 ಮಧುರ ಕನಸಲಿ

 ಗೆಳತಿ ನೀನು ಜೊತೆಯಲಿ ಬಂದೆ

 ಮಂದಹಾಸ ಬೀರಿ

 ಮೌನದ ತದಿಗೆಯಾಗಿ

 ಗೆಳತಿ ನೀನು ಮುದ್ದಾಡಲು ಬಂದೆ

 ಸ್ನೇಹ ಸುಖದಲಿ

 ಹೃದಯ ಕದ್ದು

 ಗೆಳತಿ ನೀನು ಪ್ರೀತಿಸಲು ಬಂದೆ

 ಸುಂದರ ವರ್ಣದ

 ಜಿಂಕೆಯ ನೋಟದಲಿ

 ಗೆಳತಿ ನೀನು ಮಿರುಗುತ ಬಂದೆ

 ಸ್ನೇಹದ ತೋರಣ

 ಪ್ರೀತಿಯ ಸಿಂಧೂರದಲಿ

 ಗೆಳತಿ ನೀನು ನನಗಾಗಿ ಬಂದೆ

 

||ನಾಳೆ ಬರೆಯೋಣ||

ಯೋಚಿಸಿದೆ ಇಂದು ಬರೆಯೋಣವೆಂದು
ಆಫೀಸಾಗಲಿ ಸಂಜೆ ನೋಡೋಣವೆನಿಸಿತು



ಮುಸ್ಸಂಜೆಯಲಿ ಏಕಾಂಗಿ
ಚಿತ್ತ ಎತ್ತಲೋ ಹೊರಟಿದೆ
ರಾಜಕೀಯದ ಕಾಲೆಳೆತ
ಮನಸು ಜಾರಿ ಬಿತ್ತು
ರಾತ್ರಿಯಾಗಲಿ ಬರೆಯೋಣವೆಂದು



ರಾತ್ರಿಯ ಚಂದ್ರಮನ ತಂಪುಕಿರಣ
ಏಕಾಂಗಿ ಬೇರೆ ಜೊತೆಗೆ ನಾಳೆಯ ಚಿಂತೆ
ಬೇಗ ಮಲಗೋಣ ನಾಳೆ ಬರೆಯೋಣವೆಂದು

ನಾಳೆ ಕಳೆಯಿತು
ನಾಳಿದ್ದು ಕಳೆಯಿತು
ಪಕ್ಕದ ಮನೆಯ ಹುಡುಗಿ ಆಗಲೇ ಋತುಮತಿ
ದಿನ-ರಾತ್ರಿ ಕಳೆದದ್ದು ಅದೆಷ್ಟೋ
ಆದರೂ ಅನಿಸಿತು ನಾಳೆ ಬರೆಯೋಣವೆಂದು



ಸಂಬಳ ಖಾಲಿಯಾಗಿತ್ತು
ತಿಂಗಳು ತಿಂಗಳು ಕಳೆದು
ಈಗ ನನ್ನವಳು ಗರ್ಭಿಣಿ
ಮನಕೆ ಚಿಂತೆ- ಅನಿಸಿತು ನಾಳೆ ಬರೆಯೋಣವೆಂದು

ಈ ನಿಲ್ಲದ ಜೀವನ..

" ಈ ನಿಲ್ಲದ ಜೀವನ ನಿಲ್ಲದ ಮನಸುಗಳ ನಡುವೆ

   ನಾ ಒಬ್ಬಂಟಿಯಾಗಿರುವೆ....

 

   ಉಳಿದಿಲ್ಲಾ ಸ್ನೇಹ ವಿಶ್ವಾಸ ಯಾರೊಬ್ಬರ ನಡುವೆ

   ಉಳಿದಿದೆ ದ್ವೇಷ,ಅಪನಂಬಿಕೆಗಳ ಕಣಿವೆ

 

   ಕಟ್ಟಬೇಕಾಗಿದೆ ಪ್ರೀತಿ ಸ್ನೇಹಗಳ ಸೇತುವೆ

   ಅದಕಾಗಿ ನಾ ಸ್ನೇಹಜೀವಿಯ ಹುಡುಕುತಿರುವೆ..!

 

 

 

 

ರಂಗೈಯ್ಯನ ಲಡ್ಡೂ ಪರ್ಸಾದ ಪುರಾಣ !!!! ಚಿತ್ರವಿಲ್ಲದ ಈ ಕಥೆ.

ನಮ್ಮ ಕಚೇರಿಯಲ್ಲಿ ರಂಗಯ್ಯ ಅಂತಾ ಒಬ್ಬ ಗ್ರೂಪ್ '' ಡಿ'' ನೌಕರ  ಇದ್ದ.ಗಿಡ್ಡನೆಯ ಇವನು ,ಒಳ್ಳೆಯ ಕೆಲಸ ಗಾರ ಕೆಲವರು ಇವನನ್ನು ಗುಳ್ಳೆ ನರಿ ಅಂತಾ ಕರೀತಿದ್ರು.ಆದರೂ ಇವನು ಒಮ್ಮೊಮ್ಮೆ ಇದ್ದಕ್ಕಿದಂತೆ ಎರಡು ,ಮೂರು ದಿನಗಳು ಪತ್ತೆ ಇರುತ್ತಿರಲಿಲ್ಲ , ನಂತರ ಕಚೇರಿಗೆ ಬಂದು  " ಹೇ ಹೇ ಹೇ ಸಾ ನಾನು ದೇವಸ್ಥಾನಕ್ಕೆ  ಒಗಿದ್ದೆ ಸಾ" ಅಂತಾ ತಲೆಕೆರೀತಾ ಬಂದು , "ಸಾ ಪರಸಾದ ತಂದೀವ್ನಿ ತಗಳಿ  ಸಾ" ಅಂತಾ , ಎಲ್ಲರಿಗೂ ಪರಸಾದ ಹಂಚೋವ್ನು.ಇಷ್ಟೆಲ್ಲಾ ಇದ್ರೂ ತಾನು ಕಚೇರಿಯಲ್ಲಿ ಡ್ಯೂಟಿಯಲ್ಲಿ ಇದ್ದಾಗ ಬೇಗ   ಕೆಲಸ ಮುಗಿಸೋವ್ನು  .