ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

“ಅಟ್ಟ” ಅಂದ್ರೆ ಮೇಲ್ಚಾವಣಿ ತಾನೇ?

ಪ್ರತಿ ಸಾರಿ ಅಂಗಡಿಗೆ ಅಡಿಗೆ ಸಾಮಗ್ರಿಗಳನ್ನ ತರಲು ಹೋದಾಗ ನನಗೆ ಸಿಕ್ಕಾಪಟ್ಟೆ ಗೊಂದಲ. ದಾಲ್ ಅಂದ್ರೆ ಏನು, ತೂರ್ದಾಲ್ ಅಂದ್ರೆ ಏನು, ಚಾವಲ್ ಅಂದ್ರೇನು ಅಂತ. ಸುಮಾರು ದಿನಗಳ ಮೇಲೆ ತಿಳಿಯಿತು ದಾಲ್ ಎಂದರೆ ಬೇಳೆ ಎಂದು. ‘ತೊಗರಿ ಬೇಳೆ’, ‘ಕಡಲೆ ಬೇಳೆ’ ಎಂದು ಕನ್ನಡ ಹೆಸರುಗಳನ್ನಿಡಲು ಇವರಿಗೇನು ದಾಡಿ ಎಂದುಕೊಳ್ಳುತ್ತಿದ್ದಂತೆಯೇ ಇನ್ನೊಂದು “ಅಟ್ಟ” ಎಂಬ ಪದಾರ್ಥ ಕಾಣಿಸಿತು. ಅಟ್ಟ ಎಂದರೆ ಮೇಲ್ಚಾವಣಿ ಎಂದರ್ಥ ಕನ್ನಡದಲ್ಲಿ. “ಇದ್ಯಾವ್ದಪ್ಪ ಇದು ಅಟ್ಟ?” ಅಂತ ಅಂಗಡಿಯವನನ್ನು ಕೇಳಿದ್ರೆ, “ಅದು ಗೋಧಿ ಹಿಟ್ಟು ಸಾರ್” ಎನ್ನೋದೇ.

 

“ಅಟ್ಟ” ಅಂದ್ರೆ ಮೇಲ್ಚಾವಣಿ ತಾನೇ?

ಪ್ರತಿ ಸಾರಿ ಅಂಗಡಿಗೆ ಅಡಿಗೆ ಸಾಮಗ್ರಿಗಳನ್ನ ತರಲು ಹೋದಾಗ ನನಗೆ ಸಿಕ್ಕಾಪಟ್ಟೆ ಗೊಂದಲ. ದಾಲ್ ಅಂದ್ರೆ ಏನು, ತೂರ್ದಾಲ್ ಅಂದ್ರೆ ಏನು, ಚಾವಲ್ ಅಂದ್ರೇನು ಅಂತ. ಸುಮಾರು ದಿನಗಳ ಮೇಲೆ ತಿಳಿಯಿತು ದಾಲ್ ಎಂದರೆ ಬೇಳೆ ಎಂದು. ‘ತೊಗರಿ ಬೇಳೆ’, ‘ಕಡಲೆ ಬೇಳೆ’ ಎಂದು ಕನ್ನಡ ಹೆಸರುಗಳನ್ನಿಡಲು ಇವರಿಗೇನು ದಾಡಿ ಎಂದುಕೊಳ್ಳುತ್ತಿದ್ದಂತೆಯೇ ಇನ್ನೊಂದು “ಅಟ್ಟ” ಎಂಬ ಪದಾರ್ಥ ಕಾಣಿಸಿತು. ಅಟ್ಟ ಎಂದರೆ ಮೇಲ್ಚಾವಣಿ ಎಂದರ್ಥ ಕನ್ನಡದಲ್ಲಿ. “ಇದ್ಯಾವ್ದಪ್ಪ ಇದು ಅಟ್ಟ?” ಅಂತ ಅಂಗಡಿಯವನನ್ನು ಕೇಳಿದ್ರೆ, “ಅದು ಗೋಧಿ ಹಿಟ್ಟು ಸಾರ್” ಎನ್ನೋದೇ.

 

ಮಾತುಪಲ್ಲಟ - ೧೩

♫♫♫ಮಾತುಪಲ್ಲಟ - ೧೩♫♫

ಇದು ಮಾತುಪಲ್ಲಟ ಸರಣಿಯ ಹದಿಮೂಱನೇ ಹಾಡು. ಹೊಸ ರೀತಿಯ ಬೞಕೆಗಳು ಮತ್ತು ಱ, ೞ ಪ್ರಯೋಗಗಳು ಯಾರಿಗೂ ಹಿಡಿಸಿರುವನ್ತಿಲ್ಲ. ಹಿಡಿಸಿದರೂ ಹಿಡಿಸದಿದ್ದರೂ ಮಾತುಪಲ್ಲಟ ಎನ್ದಿನನ್ತೆ ಮುನ್ದುವರಿಯಲಿದೆ. ಇಲ್ಲಿ ನನ್ನ ಉದ್ದೇಶ ಇನ್ನೊನ್ದು ಭಾಷೆಯ ಹಾಡುಗಳನ್ನು ಪರಿಚಚಯಿಸುವುದಲ್ಲ, ಕನ್ನಡ ಭಾಷೆಯಲ್ಲಿ ಸಾಧ್ಯವಾಗುವ ಪ್ರಯೋಗಗಳನ್ನು ಕಣ್ಡುಕೊಳ್ಳುವುದು.

♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣

ಚಿತ್ರ                 : ಶಂಕರಾಭರಣಂ(ತೆಲುಗು)♪
ಸಂಗೀತ            : ಶ್ರೀ ಕೆ. ವಿ. ಮಹಾದೇವನ್♪
ಮೂಲ ಸಾಹಿತ್ಯ    : ಶ್ರೀ ವೇಟೂರಿ ಸುನ್ದರರಾಮಮೂರ್ತಿ♪

ಭಾರತ ಮಾತೆಗೆ ಬೈಕಿನಲ್ಲಿ ಪ್ರಧಕ್ಷಿಣೆ ಮಾಡಿದ ಧೀರ ಕನ್ನಡಿಗ! - ಭಾಗ ೧

       ಬೈಕಿನಲ್ಲಿ ಊರೂರು ಸುತ್ತುವ ಹವ್ಯಾಸ ಹಲವರಿಗಿದೆ. ಅವರು ಯಾವುದೇ ವಾರಾ೦ತ್ಯಗಳಲ್ಲಿ ಅಥವಾ ಒ೦ದು ವಾರ ಅಥವಾ ಹತ್ತು ದಿನಗಳ ರಜೆ ಹಾಕಿಕೊ೦ಡು ತಮ್ಮ ಬೈಕಿನಲ್ಲಿ ಗೆಳೆಯರ ಗು೦ಪಿನೊ೦ದಿಗೆ ಮೋಜಿಗೆ ಅಥವಾ ಪ್ರಕೃತಿ ಸೌ೦ದರ್ಯ ಸವಿಯಲು ಹೊರಟು ಬಿಡುತ್ತಾರೆ. ಆದರೆ ಅ೦ಥಹದೇ ಹವ್ಯಾಸ ಹೊ೦ದಿದ ಶ೦ಕರ ಅಡಿಗ ಎ೦ಬ ೨೯ ವಯಸ್ಸಿನ ಕರುನಾಡಿನ ಯುವಕ ಕನ್ಯಾಕುಮಾರಿಯಿ೦ದ ಭವ್ಯ ಭಾರತದ ಗಡಿಯಲ್ಲಿ ತನ್ನ ವಿಭಿನ್ನವಾದ ಉದ್ದೇಶದಿ೦ದ ಭಾರತಕ್ಕೆ ಸ೦ಪೂರ್ಣ ಪ್ರಧಕ್ಷಿಣೆ ಹಾಕಿದ್ದಾನೆ. 

 

ನೀ ಜೊತೆಗಿದ್ದಿದ್ದರೆ....

ನೀ ಜೊತೆಗಿದ್ದಿದ್ದರೆ..


ಎಷ್ಟೊಂದು ಚೆಲುವಿರುತ್ತಿತ್ತು


ನೋವಲ್ಲೂ ನಲಿವಿರುತ್ತಿತ್ತು


ಸೋಲಲ್ಲೂ ಗೆಲುವಿರುತ್ತಿತ್ತು


 


ನೀ ಜೊತೆಗಿದ್ದಿದ್ದರೆ..


ಮಳೆಹನಿಯಲ್ಲೂ ಹಿತವಿರುತ್ತಿತ್ತು


ಬಿರುಬಿಸಿಲಲ್ಲೂ ನೆರಳಿರುತ್ತಿತ್ತು


ಕೊರೆವ ಛಳಿಯಲ್ಲೂ ಬಿಸಿಯಿರುತ್ತಿತ್ತು


 


ನೀ ಜೊತೆಗಿದ್ದಿದ್ದರೆ..


ತಂಗಾಳಿಗೆ ತಂಪಿರುತ್ತಿತ್ತು


ಮಲ್ಲಿಗೆಗೆ ಕಂಪಿರುತ್ತಿತ್ತು


ಬೆಳದಿಂಗಳಿಗೆ ಬೆಳಕಿರುತ್ತಿತ್ತು


 


ನೀ ಜೊತೆಗಿದ್ದಿದ್ದರೆ..


ಕಣ್ಣಂಚಲ್ಲಿ ಹೊಳಪಿರುತ್ತಿತ್ತು


ಹೊಳಪಿನಲ್ಲಿ ಕನಸಿರುತ್ತಿತ್ತು


ಕನಸುಗಳಿಗೆ ಗರಿ ಬರುತ್ತಿತ್ತು


 


ನೀ ಜೊತೆಗಿದ್ದಿದ್ದರೆ..


ತೋಳಲ್ಲಿ ಬಲವಿರುತ್ತಿತ್ತು


ಎದೆಯಲ್ಲಿ ಛಲವಿರುತ್ತಿತ್ತು


ತುಟಿ ತುಂಬಾ ನಗುವಿರುತ್ತಿತ್ತು


 


ನೀ ಜೊತೆಗಿದ್ದಿದ್ದರೆ..


ದುಃಖದಲೂ ಸುಖವಿರುತ್ತಿತ್ತು

ಎಲ್ಲೋ ಕೇಳಿದ್ದು....

ಇದನ್ನು ಬರೆದವರು ಯಾರು ಅಂತ ಗೊತ್ತಿಲ್ಲ, ಸ್ನೇಹಿತನೊಬ್ಬ ಮಾತಿನ ನಡುವೆ ನೆನಪಿಸಿದ ೨ ಸಾಲುಗಳು ಇಸ್ಟವಾದವು, ಹಂಚಿಕೊಳ್ಳುತ್ತಿದೆನೇ...


 


೧. ಕೈ ಕೈ ಹಿಡಿದು ನಡೆಯಬೇಕೆಂದುಕೊಂಡಿದ್ದೇವಲ್ಲ ಬದುಕೆಲ್ಲಾ....
ಇರಲಿ ಬಿಡು, ಬೀದಿಯಲಿ ಒಬ್ಬಂಟಿ ನಾನೊಬ್ಬನೇ ಅಲ್ಲ.


 


 


 


೨. ಯಾರ ಮನೆಯಂಗಳದ ರಂಗವಲ್ಲಿಯೇ ನೀನು....?
ನನ್ನ ಹೃದಯದ ಬೂದಿಯೆ.......

ಡೈರಿ


ಅಂದು ಮನೆಗೆ ಹೋಗುವ ಅವಸರದಲ್ಲಿದ್ದೆ ನಾನು, ಮಳೆಯೂ ಜೋರಾಗಿ ಬರುತಿತ್ತು.ಆಗಲೇ ನನ್ನ ಕೈಯಲ್ಲಿರುವ ಕೈಗಡಿಯಾರ ೪ ಗಂಟೆ ಅಂತ ತೋರಿಸುತಲಿತ್ತು , ೪ ೪೦ ಕ್ಕೆ ಆ ಟ್ರೈನ್ ಇದ್ದಿದ್ದು, ಬಸ್ ಬೇರೆ ಇರಲಿಲ್ಲ ಮಾಮೂಲಿನಂತೆ ಯಾವುದೊ ಬಂದ್ ಇತ್ತು ಅಂದೂ. ರಿಕ್ಷಾ ಗೆ ಕೈ ತೋರಿಸಿ ರೈಲ್ವೆ ಸ್ಟೇಷನ್ ಕಡೆಗೆ ಹೋಗಪ್ಪಾ ಅಂದೆ. ಒಂದು ಬದಿಯಲ್ಲಿ ನನ್ನ ಒದ್ದೆ ಕೊಡೆಯನ್ನು ಇಟ್ಟೆ ಮತ್ತು ಬೆನ್ನಿಗೆ ಹಾಕಿದ ಬ್ಯಾಗ್ ತೆಗೆದು ಬದಿಯಲ್ಲಿಯೇ ಇಟ್ಟೆ. ಆಗ ಅಲ್ಲಿ ಒಂದು ಡೈರಿ .

ಸ೦ಪದ ಸಮ್ಮಿಲನದ ವಿವರ

ಆತ್ಮೀಯರೇ


ಸ೦ಪದ ಸಮ್ಮಿಲನದ ಸ್ಥಳ ಮತ್ತು ದಿನಾ೦ಕಗಳ ವಿವರವನ್ನು ಮತ್ತೊಮ್ಮೆ ಕೊಡುತ್ತಿದ್ದೇನೆ. ಈಗಾಗಲೇ ಸೃಷ್ಟಿ ಕಲಾಲಯ೦ ದೊ೦ದಿಗೆ ಮಾತನಾಡಿ ಆಗಿದೆ. ನಿಮ್ಮ ಆಗಮನ ಮತ್ತು ಚಟುವಟಿಕೆಗಳಿಗಾಗಿ ಕಾಯುವುದಷ್ಟೇ ನಮ್ಮ ಕೆಲಸ