ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದೇವರು ಮತ್ತು ನಾನು – ಸ೦ಚಿಕೆ ೮ - ಚ೦ದಿರವದನ

ಹೋ೦ವರ್ಕ್ ಮುಗಿಸಿ ಇನ್ನೇನು ಚಿತ್ರಮ೦ಜರಿ ನೋಡಬೇಕೆ೦ದು ಹೊರಟಾಗಲೇ ಈ ಬಾರಿ ಮಳೆಯ ಕಡಿಮೆಯಾದ ಕಾರಣ ಹೇಳಿ ಕೆ.ಇ.ಬಿಯವರು ಕರೆ೦ಟ್ ತೆಗೆದರು.

 

“ಛೆ! ವಾರಕ್ಕೆ ಒ೦ದು ದಿನ ಒಳ್ಳೆಯ ಹಾಡು ನೋಡೋಣ ಅ೦ದ್ರೆ ಹಾಳಾದ್ದು ಈ ಕರೆ೦ಟು ಈಗ್ಲೇ ಹೋಗ್ಬೇಕಾ?” ಕೆ.ಇ.ಬಿ ಯವರನ್ನು ಬಯ್ಯುತ್ತಾ ಮೇಣದ ಬತ್ತಿ ಹಚ್ಚಲು ಹೊರಟರು ತಿಮ್ಮನ ಅಮ್ಮ.

 

“ಯೇಯ್! ಕಣ್ಣಾಮುಚ್ಚಾಲೆ!” ಎ೦ದು ಕಿರುಚುತ್ತಾ ಕತ್ತಲಲ್ಲಿ ಕಣ್ಣಾಮುಚ್ಚಾಲೆ ಆಡಲು ಹೊರಗೆ ಓಡಿದರು ಮಕ್ಕಳಿಬ್ಬರೂ.

 

ತಮ್ಮ ಗುಪ್ತ ಶಬ್ಧವನ್ನು ಮೊಳಗಿಸುವ ಮೊದಲೇ ಅಕ್ಕಪಕ್ಕದಲ್ಲಿದ್ದ ಮಕ್ಕಳೆಲ್ಲರೂ ಹೊರಗೆ ಬ೦ದಿದ್ದರು. ಯಾವಾಗಲೂ ಮೊದಲು ಔಟಾಗುತ್ತಿದ್ದ ಸ೦ತೋಷನನ್ನು ಎಣಿಸಲು ಹೇಳಿ ಎಲ್ಲರೂ ಗುಪ್ತ ಸ್ಥಳಗಳನ್ನು ಹುಡುಕಲು ಅಣಿಯಾದರು.

 

ಶಂಭೊ ಸಿದ್ದಲಿಂಗ:ಅಪ್ಪನಿಗೆ ಶುಗರ್

ಶಂಭೊ ಸಿದ್ದಲಿಂಗ:ಅಪ್ಪನಿಗೆ ಶುಗರ್


ಸಿದ್ದಲಿಂಗನ ಅಪ್ಪ ಮರಿಲಿಂಗನಿಗೆ ಏಕೋ ಮೈ ಹುಷಾರಿಲ್ಲ ಸದಾ ಸುಸ್ತು ಸಿದ್ದಲಿಂಗನ ಅಮ್ಮ ತನಗೆ ತಿಳಿದ ಎಲ್ಲ ಕಷಾಯಗಳನ್ನು ಮಾಡಿ ಕುಡಿಸಿದಳು ಅವನು ಹಾಗೆ. ಕಡೆಗೆ ಊರಲ್ಲಿದ್ದ ಆಯುರ್ವೇದ ಪಂಡಿತನ ಬಳಿಗೆ ಕರೆದೋಯ್ದ ಸಿದ್ದಲಿಂಗ ಅಪ್ಪನನ್ನು. ಆ ಪಂಡಿತ 'ಟೂ ಇನ್ ವನ್' ಅಂದರೆ ಜನಗಳಿಗೆ ಮಾತ್ರವಲ್ಲ ಅಲ್ಲಿಯ ದನಗಳಿಗೂ ಅವನೇ ಪಂಡಿತ ಹಾಗಾಗಿ ಅವನು ಮನೆಯಿಂದ ಹೊರಹೊರಟರೆ ದನಗಳು ಇವನನ್ನು ಕಂಡು ದೂರಹೋಗುತ್ತಿದ್ದವ್ವು (ಕಹಿ ಔಷದಿಯ ನೆನಪು).  

ಖಲೀಲ್ ಗಿಬ್ರಾನ್ ಕಥೆಗಳು: ಬುದ್ಧಿವಂತ ರಾಜ

ಪ್ರಖ್ಯಾತ ಲೇಖಕ, ಕವಿ, ಕಲಾವಿದ ಖಲೀಲ್ ಗಿಬ್ರಾನ್-ನ ದಿ ವೈಸ್ ಕಿಂಗ್ ಕಥೆಯನ್ನು ಅನುವಾದಿಸಲು ಪ್ರಯತ್ನಿಸಿದ್ದೇನೆ.

 

ಬುದ್ಧಿವಂತ ರಾಜ

 

 

ಒಂದು ಸಣ್ಣ ರಾಜ್ಯ. ಆ ರಾಜ್ಯಕ್ಕೆ ಒಬ್ಬ ರಾಜ, ರಾಜನಿಗೆ ನೂರಾರು ಪ್ರಜೆಗಳು.

 

ಹೇಳು ಹೇಗೆ ಬರೆಯಲಿ ಕವಿತೆ?

ನನ್ನ ಕವಿತೆಗಳ ಅಭಿಮಾನಿ ನೀನು
ಪ್ರತಿ ಸಾಲುಗಳಿಗೆ ಮೆಚ್ಚುಗೆ ನಿನ್ನದು
ಕವಿತೆ ಬರೆಯಲೂ ಕಷ್ಟ ಪಡುವ ಕವಿ ನಾನು
ಪದಗಳ ಮಧ್ಯೆ ಕಳೆದು ಹೋಗದಾಸೆ ನನ್ನದು

ಕವಿತೆ ಬರಿ, ಬರಿ ಎನ್ನುವ ನಿನ್ನ ಬೇಡಿಕೆಗಳಿಂದ
ಕವನ ಬರೆಯುವ ಪುನಃ ಒಂದು ಕನಸು
ಬಲವಂತದಿಂದ ಮಾಡಿಸುವ ಕೆಲಸಗಳಿಂದ
ಸೃಷ್ಟಿಯಾಗಲು ಗೀಚಿದರಷ್ಟೇ ಆಗುವುದೇ ನನಸು

ಈಗೀಗ ನನ್ನ ಕವನಗಳಲ್ಲಿ ಕಾಣದ ಕವಿತೆಗೆ
ಕೆಂಪಾಗಿ ಊದುವುದು ನಿನ್ನ ವದನ
’ಕವಿಯಾಗಿ ಉಳಿದಿಲ್ಲ ನೀವು’ ಎನ್ನುವ ಮಾತಿಗೆ  
ನನ್ನ ಮನದ ಉತ್ತರವೀಗ ಮೌನ

ಬಾಯಾರಿ ಬೆಂಗಾಡೆಂದು ಧರೆಯ ಜರಿದಾಗ
ಬದುಕಿಗೆ ನಿನ್ನ ಪ್ರೀತಿ ಒರತೆ
ನಿನ್ನ ಬಾಹುಗಳಲ್ಲಿ ಈಗ ನನ್ನ ನಾ ಮರೆತಿರುವಾಗ

ಕುಂ. ವೀರಭದ್ರಪ್ಪನವರ ಆತ್ಮಕಥೆ: ಗಾಂಧಿ ಕ್ಲಾಸು

ಸಾಹಿತ್ಯ ಅಕಾಡೆಮಿ (ಕೇಂದ್ರ ಹಾಗೂ ರಾಜ್ಯ) ಪ್ರಶಸ್ತಿ ವಿಜೇತ ಲೇಖಕ ಕುಂ. ವೀರಭದ್ರಪ್ಪನವರು ಕನ್ನಡದ ಸಾಹಿತ್ಯ ಲೋಕದ ಒಬ್ಬ ಅತಿ ವಿಶಿಷ್ಟ ಲೇಖಕರು. ದಶಕಗಳ ಕಾಲ ಬಳ್ಳಾರಿ ಹಾಗೂ ಆಂಧ್ರ ಗಡಿಯ ಕುಗ್ರಾಮಗಳಲ್ಲಿ ಶಿಕ್ಷರಾಗಿ ಸೇವೆ ಸಲ್ಲಿಸಿ ಆ ಸಮಯದ ಅನುಭವಗಳನ್ನು ಹಾಗೂ ಆ ಭಾಗದ ಜನಜೀವನವನ್ನು ತಮ್ಮ ಜನ್ಮಜಾತ ಪ್ರತಿಭೆಯಿಂದ ಅತಿ ವಿನೂತನ ರೀತಿಯ ಪದಪ್ರಯೋಗ, ವಾಕ್ಯಸಂರಚನೆಗಳಿಂದ ನಿರೂಪಿಸಿ ಗಮನ ಸೆಳೆಯುತ್ತಾರೆ. ನಗರದಲ್ಲಿ ವಾಸಿಸುವವರ ಗಮನಕ್ಕೇ ಬಾರದಂಥ ಲೋಕವೊಂದು ಇವರ ಬರಹಗಳಲ್ಲಿ ಅನಾವರಣಗೊಳ್ಳುತ್ತದೆ. ನಾನು ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾಗ ಇವರ "ದೇವರ ಹೆಣ" ಎಂಬ ವಿಶಿಷ್ಟ ಕಥೆ ಒಂದು ಪಾಠವಾಗಿತ್ತು.

ಯೋಚಿಸಲೊ೦ದಿಷ್ಟು... ೧೩

೧. ಉತ್ತಮ ಸ೦ಬ೦ಧಗಳು ಭರವಸೆಗಳನ್ನಾಗಲೀ ಮತ್ತು ಯಾವುದೇ ರೀತಿಯ ಶರತ್ತುಗಳನ್ನಾಗಲೀ ಬಯಸುವುದಿಲ್ಲ. ಅದು ಬಯಸುವುದು ಪರಸ್ಪರ ನ೦ಬಿಕೆ ಮತ್ತು ತಿಳುವಳಿಕೆಗಳನ್ನು ಹೊ೦ದಿದ ಇಬ್ಬರು ಉತ್ತಮ ವ್ಯಕ್ತಿಗಳನ್ನು! 


೨. ನಾವು ಮಾಡುವ ಬಹು ದೊಡ್ಡ ತಪ್ಪೆ೦ದರೆ ಯಾವುದೇ ವಿಷಯವಾಗಲೀ, ಅದರ ಅರ್ಧ ಬಾಗವನ್ನು ಕೇಳಿ,ಕಾಲು ಭಾಗವನ್ನ ಷ್ಟೇ ಅರ್ಥೈಸಿಕೊ೦ಡು, ಎರಡರಷ್ಟು ವಿಸ್ತಾರವಾಗಿ ಆ ವಿಷಯದ ಬಗ್ಗೆ ಇನ್ನೊಬ್ಬರಿಗೆ ತಿಳಿ ಹೇಳುವುದು!

ಗೋಲಿಗಳಿಗೀಗ ಭಾರೀ ಡಿಮಾಂಡ್!

ಗೋಲಿ ಆಟವಾಡುವಾಗಿನಿಂದ ನಾನು ಸೋತಿದ್ದೇ ಇಲ್ಲ ಎಂಬುದಾಗಿ ಕರ್ನಾಟಕ ಸರ್ಕಾರದ ಆಧಾರ ಸ್ತಂಭವಾಗಿ ಬಿಂಬಿತವಾಗಿರುವ ಸಚಿವರೊಬ್ಬರು ನೀಡಿರುವ ಹೇಳಿಕೆಯಿಂದ ರಾಜ್ಯದಲ್ಲೀಗ ಗೋಲಿಗಳಿಗೆ ಹಾಗೂ ಗೋಲಿ ಆಟದ ತರಬೇತುದಾರರಿಗೆ ಭಾರೀ ಬೇಡಿಕೆ ಹುಟ್ಟಿಕೊಂಡಿದೆ.

ಮೊದಲಿಗೆ ಬಾಲ್ಯದಲ್ಲಿ ನಮ್ಮ ಬಳಿ ಒಂದೂ ಗೋಲಿ ಇರಲಿಲ್ಲ. ಸ್ನೇಹಿತರಿಂದ ಹೇಗೋ ಸಂಪಾದಿಸಿದ್ದ ಒಂದು ಗೋಲಿಯನ್ನೇ ಆಧಾರವಾಗಿಟ್ಟುಕೊಂಡು ಆಟ ಆರಂಭಿಸಿದ ನಾವು ಇದೀಗ ಇಡೀ ರಾಜ್ಯಕ್ಕೇ ಬೇಕಿದ್ದರೂ ಗೋಲಿ ಹಂಚುವಷ್ಟು ಶಕ್ತರಾಗಿದ್ದೇವೆ ಎಂದು ಸಚಿವರು ಸುದ್ದಿ ಗೋಷ್ಠಿಯಲ್ಲಿ ಹೇಳಿದ್ದಾರೆ.

ಸಾಹಿರ್ ಲೂಧಿಯಾನ್ವಿ ಮತ್ತು ಸುರೇಶ್ ಹೆಗ್ಡೆ

  ಉರ್ದು ಕವಿ, ಹಿಂದಿ ಚಲನಚಿತ್ರಗೀತಕಾರ ಸಾಹಿರ್ ಲೂಧಿಯಾನ್ವಿ ಓರ್ವ ಭಗ್ನಪ್ರೇಮಿ. ಆತನ ಪ್ರೇಮ ಭಗ್ನಗೊಂಡದ್ದು ಒಮ್ಮೆಯಲ್ಲ, ಎರಡು ಬಾರಿ. ಅಮೃತಾ ಪ್ರೀತಮ್ ಮತ್ತು ಸುಧಾ ಮಲ್ಹೋತ್ರಾ ಇಬ್ಬರೂ ಆತನಿಗೆ ಗಗನಕುಸುಮಗಳಾದರು. ವಿವಾಹಕ್ಕೆ ಕೋಮು ಅಡ್ಡಬಂದಿತ್ತು. ಭಗ್ನಪ್ರೇಮದ ಹತಾಶೆ ಸಾಹಿರ್‌ನನ್ನು ಮದಿರೆಯ ದಾಸನನ್ನಾಗಿಸಿತು. ಅದೇ ವೇಳೆ ಇದೇ ಹತಾಶೆಯು ಆತನಿಂದ ಭಾವಪೂರ್ಣ ಕಾವ್ಯವನ್ನೂ ಸೃಷ್ಟಿಸಿತು.
  ’ಕಭೀ ಕಭೀ’ ಹಿಂದಿ ಚಲನಚಿತ್ರದಲ್ಲಿ ಸಾಹಿರ್‌ನ ಹೃದಯದಾಳದ ಅಂತಹ ಕೆಲ ಪಲುಕುಗಳನ್ನು ನಟ ಅಮಿತಾಭ್ ಬಚ್ಚನ್‌ನ ಬಾಯಿಂದ ನುಡಿಸಲಾಗಿದೆ. ಅಂತಹ ಒಂದು ಪಲುಕನ್ನು ಸಂಪದಿಗ ಮಿತ್ರ ಆತ್ರಾಡಿ ಸುರೇಶ್ ಹೆಗ್ಡೆ ಕನ್ನಡಕ್ಕೆ ಭಾವಾನುವಾದ ಮಾಡಿ ಇದೇ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ನೋಡಿ: