“ವಿಶ್ವಾಸ”ದ ಶಾಸಕಾಂಗದ “ರೇಟ್” ಮತ್ತು ಪೇಟೆ ಮಂಡಕ್ಕಿ ರೇಟ್!
ಸಾವಿರ-ಸಾವಿರ ದೀನರಿಗೆ ಬದುಕು ಕೊಟ್ಟ ಶಿವಸ್ವರೂಪೀ ಸ್ವಾಮಿಗಳ ಸ್ಮಾರಕಕ್ಕೆ ಮುಖ್ಯಮಂತ್ರಿಗಳು ಸರಕಾರದ ವತಿಯಿಂದ ಐದು ಕೋಟಿ ರೂಪಾಯಿಗಳ ಉದಾರ ಅನುದಾನ ಘೊಷಿಸಿದರು. ಅದೇ, ವಿಶ್ವಾಸ ಮತದ ನಿಷ್ಠೆಗಾಗಿ ಶಾಸಕರನ್ನು ಖರೀದಿಸಲು (ಗುಲಾಮಗಿರಿ ದೇಶದಲ್ಲಿ ಎಂದೂ ಕಾಯ್ದೇಶೀರವಲ್ಲದಿದ್ದರೂ!) ಪಕ್ಷಗಳು 20ರಿಂದ 40 ಕೋಟಿಯವರೆಗೆ ಬಿಡ್ ಕೂಗುತ್ತಿರುವ ಸುದ್ದಿ ಬಹಿರಂಗ ಗುಟ್ಟಾಗಿರುವುದೇ! ಈ ಹಿನ್ನೆಲೆಯಲ್ಲಿ ಸರಕಾರದ ಆ ಔದಾರ್ಯ ಉದಾರವೇ?
ಇಪ್ಪತ್ತೋ, ಮುವತ್ತೋ, ಮೂವತ್ತೈದಕ್ಕೋ Deal ಕುದುರಿಸಿಕೊಳ್ಳಬಹುದಾದ ನವಫುಢರಿಗಳಿಗೆ, ಸದ್ಯಕ್ಕಂತೂ Heart-searching ಎಂಬ ‘ಕಂದಾಚಾರ’ಕ್ಕೆ ಟೈಂ ಇಲ್ಲದಿರಬಹುದು, ಆದರೆ ಎಗ್ಗಿಲ್ಲದ ಈ ಐಶಾರಾಮಿಯಿಂದ ಹಾನಿಯಂತೂ ಖಂಡಿತಾ ಉಂಟು. ಅದು ದೇಶಕ್ಕೆ - ಅಂದರೆ ನಮಗೆ, ಜನತೆಗೆ. ಈ ಹಾನಿಯೂ ಬರೀ “ನೈತಿಕತೆಯ ಬದನೆಕಾಯಿ ಪುರಾಣ”ವಲ್ಲ, ಮೂರ್ತ ಸ್ವರೂಪದ, ಲೆಕ್ಕಾಚಾರಕ್ಕೆ ಸಿಕ್ಕುವ Macro-economics ಆಗಿರುವುದೇ! ಇದು ಅರ್ಥವಾಗುವಷ್ಟು ‘ವಿದ್ಯೆ’ ಆ ‘ಫಲಾನುಭವಿ’ಗಳಿಗಿರಲಿ, ಸರಾಸರಿ ಜನಸಾಮಾನ್ಯಕ್ಕಾದರೂ ಉಂಟೇ?
- Read more about “ವಿಶ್ವಾಸ”ದ ಶಾಸಕಾಂಗದ “ರೇಟ್” ಮತ್ತು ಪೇಟೆ ಮಂಡಕ್ಕಿ ರೇಟ್!
- Log in or register to post comments