ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಯಾವ ನಾಟಕ

ಅಲ್ಲಾ ಕಲಾ ಸುರೇಶ್ ಹೆಗ್ಡೆ, ಗೋಪಿನಾಥ ರಾವ್, ಗಣೇಶ್ ಅಂಗೇ ದುಬೈ ಮಂಜಣ್ಣ ನಮ್ಮ ಹಳ್ಳಿಗೆ ಬಂದಿರೋದು ಯಕಾಲಾ ಅಂದ ಗೌಡಪ್ಪ. ಏ ನಾಟಕ ಹೇಳ್ಕೊಡಕ್ಕಂತೆ ಅಂದ ಸುಬ್ಬ. ಯಾವ ನಾಟಕಲಾ ಅಂದ ನಿಂಗ. "ಸರ್ಕಾರಿ ಭೂಮಿ ಹೊಡೆಯೋದು ಹೆಂಗೆ" ಅಂದ ಸುಬ್ಬ. ಇದಕ್ಕೆ ಇವರೇ ಬೇಕೇನಲಾ. ಇದನ್ನ ಕಟ್ಟಾ ಮಗ ಜಗ್ಗ, ಯಡೂರಪ್ಪನ ಮಗ ರಾಘವೇಂದ್ರನ ಕರೆಸಿದರೆ ಇನ್ನೂ ಚೆನ್ನಾಗಿ ಹೇಳಿಕೊಡ್ತಾರೆ. ಸುಮ್ಕೆ ತಮಾಷೆ ಮಾಡ್್ಬೇಡ್ರಲಾ ಯಾವ ನಾಟಕ ಹೇಳ್ರಲಾ ಅಂದ ಗೌಡಪ್ಪ. "ಕಂಸ ವಧೆ", ಕಂಸ ಯಾರಲಾ. ನೀವೆಯಾ. ಮತ್ತೆ ಕಿಸ್ನ. ನಾನು ಅಂದ ಸುಬ್ಬ. ಮಗ ಸುಬ್ಬನ ಕೈಯಲ್ಲಿ ಸಿಕ್ಕರೆ ಸಾನೇ ಒದೆ ತಿನ್ ಬೇಕಾಯ್ತದೆ ಅಂದು. ನೋಡ್ರಲಾ ಕಿಸ್ನನ ಪಾತ್ರ ನಮ್ಮ ಕಟ್ಟಿಗೆ ಒಡೆಯೋ ಕಿಸ್ನ ಮಾಡಲಿ ಅಂದ. ಸರಿ ಪಾತ್ರಕ್ಕೆ ಸುಬ್ಬಿ, ನಿಂಗ, ಗೌಡಪ್ಪನ ಮೂರನೇ ಹೆಂಡರು ಎಲ್ಲರಿಗೂ ಹೇಳಿದ್ದಾತು.

ಸೋತದ್ದು ಯಾರಿಂದ?

ಇಂದು ಕೊನೆಗೂ, ನೀ ಮೆಚ್ಚಿದ್ದ  
ಅಂಗಿಯ ದಾನ ಮಾಡಿದಾಗ
ನಿನ್ನ ನಾ ಗೆದ್ದೆನೇ ಅಥವಾ
ಬಂಜರು ಮನದಲ್ಲಿ
ಭಣಗುಟ್ಟುವ ನಿನ್ನ ಕನವರಿಕೆಗಳಿಗೆ
ಮಂಗಳ ಹಾಡಿದೆನೇ ?
ಅದರಲ್ಲಿ ಹುಟ್ಟಲಿರುವ ಹೊಸ
ಕನಸುಗಳಿಗೆ ನೀರೆರೆದೆನೇ?

ಕೊಡು ಕೊಳ್ಳುವುದರಿಂದ
ನೆನಪುಗಳು ಮರೆಯುವುದಾದರೆ
ಇನ್ನೂ ನಿನ್ನ ದನಿ ಕೇಳಿದಂತಾಗಿ
ಮನವು ವ್ಯಾಕುಲವಾಗುವುದೇಕೆ ?
ನೀ ಬರಲೇ ಬಾರದು
ಎಂದು ಗೊತ್ತಿರುವ ಮನಸ್ಸಿಗೂ
ವರ್ತಮಾನವನು ಕದಡುವ
ಭಂಡ ಧೈರ್ಯವೇಕೆ ?

ಸೋಲೊಪ್ಪದ ಮನಸ್ಸು
ಗೆಲ್ಲಲಾರದ ವಾಸ್ತವ
ನಿನ್ನ ಮರೆತೇ ಬಿಡುವೆನೆಂದು
ಹಟ ತೊಟ್ಟು ನಿನ್ನ ನೆನಪುಗಳ
ಉರಿಸುತ್ತಿರುವ ನಾನು

ಮಕ್ಕಳು ಮಾಡಿದ್ ತಪ್ಪಿಗೆ..............!

ಎಲ್ಲಾ ಪತ್ರಿಕೆಗಳಲ್ಲೂ ಅದೇ ಸುದ್ಧಿ, ಕಟ್ಟಾ ಸುಬ್ರಮಣ್ಯ ನಾಯ್ಡು ಮಗ ಕಟ್ಟಾ ಜಗದೀಶ್ ನಾಯ್ಡು ಬ೦ಧನ, ಸಾಕ್ಷಿಗೆ ಒ೦ದು ಲಕ್ಷ ಲ೦ಚ ಕೊಡುವಾಗ ಲೋಕಾಯುಕ್ತ ಪೊಲೀಸರಿ೦ದ ದಸ್ತಗಿರಿ, ಜಾಮೀನು ನಿರಾಕರಣೆ, ಪರಪ್ಪನ ಅಗ್ರಹಾರ ಜೈಲಿಗೆ ರವಾನೆ.  ಅದರ ಜೊತೆಗೆ ಸಿಎ೦ ಯಡ್ಯೂರಪ್ಪನವರ ಮುತ್ತಿನ೦ಥ ಮಾತುಗಳು, "ಮಕ್ಕಳು ಮಾಡಿದ ತಪ್ಪಿಗೆ ಅಪ್ಪನನ್ನು ಜವಾಬ್ಧಾರನನ್ನಾಗಿಸುವುದು ಸಾಧ್ಯವಿಲ್ಲ", ಇದರ ಬಗ್ಗೆ ನಮ್ಮೂರಿನ ಹೋಟೆಲ್ಲಿನಲ್ಲಿ ಬೆಳ್ಳ೦ ಬೆಳಿಗ್ಗೆ ಅತ್ಯ೦ತ ಕುತೂಹಲದಿ೦ದ ಚರ್ಚೆ ನಡೆಯುತ್ತಿತ್ತು.  ಆ ಚರ್ಚೆಯ ಕೆಲ ತುಣುಕುಗಳು ಇ೦ತಿವೆ:

ರಾಷ್ಟ್ರೀಯ ಸ್ವಯಂ ಸೇವಕ ಸಂಘ - ೯

ಕೆಲ ಕಾರಣಗಳಿಂದಾಗಿ ಕೆಲದಿನ ಈ ಸರಣಿಯನ್ನು ಮುಂದುವರೆಸಲು ಆಗಿರಲಿಲ್ಲ. ಶ್ರೀ ವಿನಯ ಅವರು ಈಗಾಗಲೇ ೨ ಬ್ಲಾಗ್ ಗಳನ್ನು ಬರೆದಿದ್ದಾರೆ. ಅಲ್ಲಿಂದ ನಾನು ಮುಂದುವರೆಸುತ್ತಿದ್ದೇನೆ. ಅವರು ಬರೆದ ಬ್ಲಾಗ್ ಗಳ ಕೊಂಡಿ ಇಲ್ಲಿವೆ....

 

ರಾಷ್ಟ್ರೀಯ ಸ್ವಯಂಸೇವಕ ಸಂಘ-೭

ರಾಷ್ಟ್ರೀಯ ಸ್ವಯಂ ಸೇವಕ ಸಂಘ - ೮

 

ಸರಸಂಘಚಾಲಕರಾಗಿ....

ಸಂಪದಕ್ಕೆ ಹೊಸಬ

ಎಲ್ಲಾರಿಗೂ ವಾಲಿಕುಂ ಅಸ್ಸಲಾಮ್. ಓಹ್ ನಮ್ದೂಕೆ ತಪ್ಪಾತು ಇಲ್ಲಿ ಕನ್ನಡ ಮಾತ್ರಾಗೆ ಬರೆಯಬೇಕು. ಒಸಿ ನಮ್ದೂಕೆ ಇಸ್ಯ ಹೇಳ್ ಬಿಡ್ತೀನಿ. ನಮ್ದೂಕೆ ಎರಡು ಷಾದಿಗೆ ಆಗಿದೆ. ಹಾಗೇ ಈಗ ಮತ್ತೊಂದಕ್ಕೆ ನಿಖಾ ಮಾಡಿಕೊಂತಾ ಇದೀನಿ.ಅದರ ಹೆಸರು ಷಂಷಾ ಬೇಗಮ್. ಹಮಕೋ 6ಬಚ್ಚೇ ಹೈ. ಮಾಫ್ ಕರನಾ. ಏ ಅಂದರ್ ಕೀ ಬಾತ್ ಬಹರ್್ ರಖ್್ ದಿಯಾ. ನಮ್ದೂಗೆ ಬಸ್ ಡ್ರೇವಿಂಗ್ ಮಾಡ್ತದೆ. ಅಂಗೇ ಅವಾಗವಾಗ ನಮಾಜ್್ಗೆ ಮಾಡಿ ದೇವರಿಗೆ ಆಸೀರ್ವಾದಾಗೆ ಕೇಳ್ತೀವಿ. ಸಬ್್ಕೋ ಸಲಾಮತ್ ರಖನಾ ಕರಕೇ.
ಅರೆ ಇಷ್ಕಿ. ತುಜೆ ಮಾಲೂಂ, ನಮ್ದೂಕೆ ದೋಸ್ತಿಗೆ ಇಲ್ಲಾ. ಲೇ ಇಸ್ಮಾಯಿಲ್ ಸಂಪದ ಅಂತಾ ಒಂದು ಕನ್ನಡದಾಗೆ ಐತೆ. ನಿಂದೂ ಬರೆಯಲಾ ಅಂತು. ಇದ್ರಾಗೆ ಕೋಮಲ್ ಅಂಗೇ ಗೌಡಪ್ಪ ಬರೀತಾ ಇದಾರೆ ಅಂತಾ ಗೊತ್ತಾದ್ ಮ್ಯಾಕೆ ನಮ್ದೂಗೆ ಬರೀಬೇಕು ಅನಸ್ಕಿಲ್ವಾ. ಅದಕ್ಕೆ ಅಂತಾ ನಮ್ದೂಗೆ ಸುರುಹ್ಚಕಂಡತು. ನೋಡಿ ನಮ್ದೂಗೆ ಏನಾದ್ರೂ ತಪ್ಪೂಗೆ ಮಾಡಿದ್ರೆ ಮಾಫ್ ಕರನಾ.

ನೀವೆಂದರವರೇನೆಂದು ಭಾವಿಸಿದ್ದಾರೋ ಅದರಾಚೆಗೆ ನಿಮಗವರು, ಅವರಿಗೆ ನೀವು ಇಲ್ಲಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೭

(೨೪೧) ಎಲ್ಲರೂ ಸಮಾನರು ಎಂಬುದನ್ನು ಆಟವು ಒಪ್ಪದು. ಎಲ್ಲರೂ ಸಮಾನರಾಗಿರಬೇಕು ಎಂಬುದು ಮಾರ್ಕ್ಸ್-ವಾದದ ಕನಸು. ಇಂತಹ ’ಸಮಾನತೆ’ಯ ಸೃಷ್ಟಿಗಳಿಂದ ಜಾಣ ದೇವರು ಸ್ವತಃ ತನ್ನನ್ನೇ ಹೊರಗಿರಿಸಿಕೊಂಡುಬಿಟ್ಟಿದ್ದಾನೆ.


(೨೪೨) ನಿಸರ್ಗದ ವಿರುದ್ಧದ ಸೋಲುವ ಯುದ್ಧವನ್ನು ಗೆಲುವೆಂದು ಭಾವಿಸುವ ಮಾನವನ ಪ್ರಯತ್ನದ ಫಲವೇ ’ನಗರ’.


(೨೪೩) ಭೂಮಿಯ ಬೃಹತ್ ಕಸದಬುಟ್ಟಿಗಳ ಔಪಚಾರಿಕ ಹೆಸರೇ ’ನಗರೀಕರಣ’.


(೨೪೪) " ’ಅಭ್ಯಾಸವು ಬೋಧನೆಗಿಂತಲೂ ಮಿಗಿಲು’ ಎಂಬ ಈ ವಾಕ್ಯವೂ ಒಂದು ಬೋಧನೆಯೇ" ಎಂದು ಭಾವಿಸುವುದು ಒಂದು ದುರಭ್ಯಾಸವಲ್ಲವೆ?!

ಬಾಬ್ರಿ ಮಸೀದಿ, ಇತಿಹಾಸ ಹಾಗೂ ರಾಷ್ಟ್ರೀಯ ಭಾವೈಕ್ಯತೆ

ಜನಮನಗಳ ನೆನಪಿನಾಳದಲ್ಲಿ ಹುದುಗಿಹೋಗಿದ್ದ ಬಾಬ್ರಿ - ರಾಮ ಜನ್ಮಭೂಮಿ ವಿವಾದ ಮರುಕಳಿಸಿ ಬಂದು ನಮ್ಮ ಮುಂದೆ ನಿಂತಿದೆ. ಈ ತೀರ್ಪನ್ನು ಒಪ್ಪದಿದ್ದರೆ, ಅಂತಿಮ ತೀರ್ಪಿಗೆ ಇನ್ನೊಂದೇ ಮೆಟ್ಟಿಲು!

ಬಾಬ್ರಿ ಮಸೀದಿ, ಇತಿಹಾಸ ಹಾಗೂ ರಾಷ್ಟ್ರೀಯ ಭಾವೈಕ್ಯತೆ

ಜನಮನಗಳ ನೆನಪಿನಾಳದಲ್ಲಿ ಹುದುಗಿಹೋಗಿದ್ದ ಬಾಬ್ರಿ - ರಾಮ ಜನ್ಮಭೂಮಿ ವಿವಾದ ಮರುಕಳಿಸಿ ಬಂದು ನಮ್ಮ ಮುಂದೆ ನಿಂತಿದೆ. ಈ ತೀರ್ಪನ್ನು ಒಪ್ಪದಿದ್ದರೆ, ಅಂತಿಮ ತೀರ್ಪಿಗೆ ಇನ್ನೊಂದೇ ಮೆಟ್ಟಿಲು!


 


ಈ ನಡುವೆ ಒಂದು ತಲೆಮಾರು ಸಂದಿದೆ. ಇಂದಿನ ಪೀಳಿಗೆಗೆ ಈ ವಿಷಯದಲ್ಲಿ ಅಷ್ಟೇನೂ ಆಸಕ್ತಿಯಿಲ್ಲದಿರಬಹುದು. ಇರಲೂ ಬೇಕಾಗಿಲ್ಲ ಎಂಬುದು ನನ್ನ ಅನಿಸಿಕೆ. ಎರಡು ದಶಕಗಳ ಹಿಂದೆ ದೇಶದಲ್ಲಿ ತಾಂಡವವಾಡುತ್ತಿದ್ದ ನಿರುದ್ಯೋಗ, ವಸತಿ, ಶಿಕ್ಷಣ ಮೊದಲಾದ ಸಮಸ್ಯೆಗಳು ಇಂದು ತಕ್ಕಮಟ್ಟಿಗೆ ಇಳಿಮುಖವಾಗಿವೆ (ಕನಿಷ್ಟ ಪಟ್ಟಣಗಳಲ್ಲಿ). ಮಾಹಿತಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಹಾಗಾಗಿ ಇಂದಿನ ಯುವಜನತೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಅವಕಾಶಗಳು ಹೆಚ್ಚಾಗಿರುವುದರಿಂದ ಕೆಲವು ಭಾವನಾತ್ಮಕ ವಿಷಯಗಳಿಗೆ "ಅಗತ್ಯ"ಕ್ಕಿಂತಲೂ ಹೆಚ್ಚು ಸ್ಪಂದಿಸಲು ಸಮಯವಿಲ್ಲ. ಇದರಲ್ಲಿ ನನಗೆ ತಪ್ಪೇನೂ ಕಂಡುಬರುವುದಿಲ್ಲ. ಈದನ್ನು ಅವರು ಮುಕ್ತವಾಗಿ ಹೇಳಿಕೊಂಡರೆ ಅವರಿಗೆ ಜೀವನದಲ್ಲಿ ಅನುಭವ ಸಾಲದೆಂದೋ ಅಥವಾ ಇತಿಹಾಸವನ್ನು ಕಡ್ಡಾಯವಾಗಿ ಓದಬೇಕೆಂದೋ ಉಪದೇಶಗಳು ಢಾಳಾಗಿ ಸಿಗುತ್ತವೆ!