ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಾನಿರುವೆ………..ಭಾಗ ೨

"ಯಾರದು"
ನಿಧಾನವಾಗಿ ತಲೆ ಎತ್ತಿತು ಆ ಅಕ್ರತಿ ಆಶ್ಚಯ್ರದಿ೦ದ ನೋಡುತ್ತಿದ್ದ ನಿಶ್ಚಿ೦ತ್.ಹೊಳೆವ.ಕಣ್ಣುಗಳು ಅತ್ತು ಕೆ೦ಪಗಾಗಿದ್ದವು.ಚೆ೦ದುಟಿ ನಡುಗುತ್ತಿತ್ತು.ಮುದ್ದು ಮುಖ ನಿಸ್ತೇಜವಾಗಿತ್ತು.ಅಪ್ಸರೆ ಎ೦ದ ಮನದಲ್ಲೇ
"ಯಾರಮ್ಮಾ ನೀನು ಯಾಕಳ್ತಿದೀಯಾ"

ಸೂರ್ಯಮೂರ್ತೇ ನಮೋಸ್ತುತೇ!

ಸೂರ್ಯಮೂರ್ತೇ ನಮೋಸ್ತುತೇ!

ಶನಿವಾರ ಬೆಳಿಗ್ಗೆ ರವಿಯು ಉದಯಿಸುತ್ತಿರುವಾಗ ನಮ್ಮ ಮನೆಯ ಮಹಡಿಯಿಂದ ಹೀಗೆ ಕಾಣಿಸಿದ. ಆಗ ಸೆರೆಹಿಡಿದ ಚಿತ್ರ.

ಉದಯರವಿ

ಇಟಲಿಯ ಪಿಡ್ಜ ಹಾಗು ಬೆಂಗಳೂರಿನ ದೋಸೆ

ಗೆಳೆಯ : ಮಗ, ಸಾಯಂಕಾಲ ಮೆಟ್ರೋ ಹತ್ತಿಕೊಂಡು ಬಂದುಬಿಡು. ರಸ್ತೆ ಪಕ್ಕದಲ್ಲಿ ಪಿಡ್ಜ ತಿನ್ನೋಕೆ ಹೋಗೋಣ
ನಾನು : ಸರಿ ಮಗ
ಸರಿ ಸುಮಾರು ೬ ಗಂಟೆಗೆ ನಾನು ಮೆಟ್ರೋ ಹತ್ತಿಕೊಂಡು ಗೆಳೆಯ ಹೇಳಿದ ಸ್ಥಳಕ್ಕೆ ಬರ್ತೀನಿ. ನೋಡಿದರೆ ಎಲ್ಲರು ರಸ್ತೆ ಪಕ್ಕದಲ್ಲಿ ಪೇಪರ್ ತಟ್ಟೆಯಲ್ಲಿ ಪಿಡ್ಜ ತಿಂತ ನಿಂತಿದ್ದಾರೆ.

ಗೆಳೆಯ : * ಇಟ್ಯಾಲಿಯನ್ ಭಾಷೆಯಲ್ಲಿ*

ನನಗೆ ಬೇಕಿಲ್ಲ

ಅರ್ಥ ಹೊಳೆಯದ ಕವಿತೆ ನನಗೆ ಬೇಕಿಲ್ಲ
ಅರ್ಥಗರ್ಭಿತವಿರಲಿ ಎಷ್ಟೇ ಅದು
ಅರ್ಥೈಸುವೊತ್ತಡಕೆ ಮನ ಮುದುಡಲಲ್ಲ
ಕವಿತೆ ಓದುವುದು ನಾ ಮನ ಅರಳಲೆಂದು.

ಪ್ರೀತಿ ತೋರದ ಕೊಡುಗೆ ನನಗೆ ಬೇಕಿಲ್ಲ
ಧಾರಾಳವಾಗಿರಲಿ ಎಷ್ಟೇ ಅದು
ಪಡೆದು ಅಡಿಯಾಗುವುದು ನನಗಿಷ್ಟವಿಲ್ಲ
ಸರಳ ಪ್ರೇಮದ ಕೊಡುಗೆ ನಾನು ಬಯಸುವುದು.

ಪದವಿಗಂಟಿದ ಘನತೆ ನನಗೆ ಬೇಕಿಲ್ಲ

ಎಷ್ಟೊಂದು ಪ್ರಧಾನಿಗಳು!

ಭಾರತದ ಪ್ರಧಾನಮಂತ್ರಿಯ ಹುದ್ದೆಗೆ ಈ ಸಲ ಭಾರೀ ಪೈಪೋಟಿ ಏರ್ಪಟ್ಟಿದೆ.

’ಮನಮೋಹಕ’ವಾಗಿ ದೇಶ ಆಳಿದ್ದಾರೆ, ಆದ್ದರಿಂದ ಮನಮೋಹನ್ ಸಿಂಗರೇ ಮುಂದುವರಿಯಲಿ ಎಂದು ಸೋನಿಯಾ ಹೇಳುತ್ತಿದ್ದಾರೆ.

’ರಾಹುಕಾಲ’ ಕಳೆದಿದೆ, ರಾಹುಲ್ ಗಾಂಧಿಗೆ ಇನ್ನು ಪ್ರಧಾನಿ ಪಟ್ಟ ಕಟ್ಟಬಹುದು ಎಂದು ಸ್ವಯಂ ಎಂಎಂ ಸಿಂಗರೇ ಸಂಗೀತ ಹಾಡುತ್ತಿದ್ದಾರೆ.

ಕೃಷಿಕರ ಯುಗಾದಿ

ಯುಗಾದಿ ಯಾವುದೇ ದೇವ-ದೇವತೆಗಳ ಸೋಂಕಿಲ್ಲದ ನಿಸರ್ಗದ ಹಬ್ಬ. ಜನಪದರಿಗೆ ಹೊಸವರ್ಷದ ಮೊದಲ ದಿನ. ಹೊಸ ಮಳೆಗಾಲಕ್ಕೆ ಶ್ರೀಕಾರ. ಒಳ್ಳೆಯದು - ಕೆಟ್ಟದ್ದನ್ನು ಸಮನಾಗಿ ಸ್ವೀಕರಿಸುವ ಆಶಯದಿಂದ ಬೇವು-ಬೆಲ್ಲ ಬಾಯಿಗೆ ಹಾಕಿಕೊಳ್ಳುತ್ತಾರೆ. ಹೊಸ ಬಟ್ಟೆ ತೊಟ್ಟು ಹೊಟ್ಟೆ ತುಂಬಾ ಒಬ್ಬಟ್ಟು ತಿಂದು ಆಗತಾನೇ ಎಳೆ ಚಿಗುರಿಡುತ್ತಿರುವ ಹೊಂಗೆ ಮರದ ನೆರಳಲ್ಲಿ ಹಳ್ಳಿಗರು ಮಲಗುವುದು ಸಾಮಾನ್ಯ. ಇಸ್ಪೀಟು ಈ ಹಬ್ಬಕ್ಕೆ ಹೇಗೆ ತಳುಕು ಹಾಕಿಕೊಂಡಿತೆಂಬುದು ತಿಳಿಯುತ್ತಿಲ್ಲ. ಯುಗಾದಿ ಮರುದಿನ ಹೊಸತಡುಕು, ಚಂದ್ರ ದರ್ಶನ. ಮಾಂಸಾಹಾರಿಗಳಿಗೆ ಸಡಗರ. ಕೆಲವೆಡೆ ಸಾಮೂಹಿಕ ಬೇಟೆಯೂ ಉಂಟು.

ಯುಗಾದಿ ಸಂಪೂರ್ಣ ಬಿಡುವಿನ ಕಾಲದಲ್ಲಿ ಅಥವಾ ವಿರಾಮದ ಕೊನೆಯ ಮತ್ತು ದುಡಿಮೆಯ ಆರಂಭ- ಇವೆರಡರ ನಡುವೆ ಬರುವಂತಹುದು. ಹಾಗಾಗಿಯೇ ಈ ಹಬ್ಬದಲ್ಲಿ ಸಿಹಿ-ಕಹಿಯ ಮಿಶ್ರಣವಿರುತ್ತದೆ. ಯುಗಾದಿ ಬರುವ ಸ್ವಲ್ಪ ದಿನ ಮುಂಚೆ ಕಾಮನ ಹಬ್ಬ ಬಂದಿರುತ್ತದೆ. ಕಾಮನ ಹಬ್ಬವನ್ನು ಹಳ್ಳಿಗರು ಕದಿರೆ ಹುಣ್ಣಿಮೆ ಎಂತಲೂ ಕರೆಯುತ್ತಾರೆ. ಕಾಮನ ಹಬ್ಬ ನಿಸರ್ಗದ ವರ್ಷದಲ್ಲಿ ಕೊನೆಯ ಹಬ್ಬ. ಹಳೆಯ ವಸ್ತುಗಳನ್ನು ಸುಟ್ಟು ಹೊಸ ವಸಂತದ ಆಗಮನಕ್ಕೆ ಸಿದ್ಧವಾಗುವ ಪರ್ವ ಕಾಲ. ಇದಾದ ಸ್ವಲ್ಪ ದಿನಕ್ಕೆ ಬರುವ ಯುಗಾದಿ ನಿಸರ್ಗ ವರ್ಷದ ಮೊದಲ ಹಬ್ಬ. ಯುಗದ ಆದಿ. ಶಾಲಿವಾಹನ ಶಕೆಯ ಹೊಸ ಸಂವತ್ಸರದ ಶುರು.

ಮಾನಸ ಸರೋವರ ಯಾತ್ರೆ

ಮಾನಸ ಸರೋವರ ಯಾತ್ರೆ 

ಎಲ್ಲಿದೆ?
ಮಾನಸ ಸರೋವರ ಭಾರತ - ನೇಪಾಳ ಗಡಿಯಲ್ಲಿರುವ ಕೈಲಾಸ ಪರ್ವತದಲ್ಲಿದೆ. ಸಮುದ್ರಮಟ್ಟದಿಂದ ಸುಮಾರು ೧೪,೯೫೦ ಅಡಿಗಳಷ್ಟು ಎತ್ತರದಲ್ಲಿದೆ. ಇಲ್ಲಿಗೆ ಹೋಗುವುದು ಜೀವನದ ಅತಿ ಮುಖ್ಯ ಕರ್ತವ್ಯ ಎಂಬುದು ನಂಬಿಕೆ.

ಮಾನಸ ಸರೋವರ


ಮಾನಸ ಸರೋವರ ವಿಶೇಷ.
ಕೈಲಾಸ ಪರ್ವತ ಶಿಖರವು ಪ್ರಪಂಚದ ಅತಿ ಎತ್ತರದ ಶಿಖರಗಳಲ್ಲಿ (ಸುಮಾರು ೨೩,೦೦೦ ಅಡಿಗಳು) ಒಂದು. ಇದಕ್ಕೆ ಅನೇಕ ಹೆಸರುಗಳಿವೆ. ಮೇರು, ಸುಮೇರು, ಸುಷುದ್ನು, ಹೇಮಾದ್ರಿ, ದೇವಪರ್ವತ, ಗಾನಪರ್ವತ, ರಜತಾದ್ರಿ, ರತ್ನ ಸ್ತಂಭ ಎಂಬ ಹೆಸರುಗಳೂ ಇವೆ. ಇದಕ್ಕೆ ರಾವಣ ಪರ್ವತ, ಹನುಮಾನ್ ಪರ್ವತ, ಪದ್ಮ ಸಂಭವ, ಮಂಜುಶ್ರೀ, ವಜ್ರಧರ, ಅವಲೋಕಿತೇಶ್ವರ ಎಂದೂ ಕರೆಯುತ್ತಾರೆ. ಇದು ಪಾರ್ವತಿ-ಪರಮೇಶ್ವರರ ಆವಾಸಸ್ಥಾನ. ಶಿವಶಕ್ತಿಯರು ಒಂದುಗೂಡಿದ ಜಾಗ. ಪ್ರಕೃತಿ ಪುರುಷರ ಮಿಲನ ಸ್ಥಾನ. ಜೀವಾತ್ಮ ಪರಮಾತ್ಮರ ಐಕ್ಯ ಸ್ಥಾನ. ವಿಶ್ವದ ರಚನೆ, ಸ್ಥಿತಿ, ಲಯಗಳಿಗೆ ಕಾರಣೀಭೂತವಾದ ಕೇಂದ್ರಬಿಂದು (Pillar of the Universe) ಮುಂತಾದವು. ಇದು ವರ್ಷದ ಎಲ್ಲಾ ಕಾಲವೂ ಹಿಮಾಚ್ಛಾದಿತವಾಗಿರುವುದು. ಈ ಸ್ಥಳವನ್ನು ದೂರದಿಂದ ದರ್ಶನ ಮಾಡಬಹುದೇ ಹೊರತು ಹತ್ತಲಾಗುವುದಿಲ್ಲ. ಇಚ್ಛೆಪಟ್ಟರೆ ಅದರ ಪರಿಕ್ರಮ ಮಾಡಬಹುದು. ಅದರ ಮಾರ್ಗ ೫೦ ಕಿ. ಮೀ. ಅದರಲ್ಲಿ ನಂದಿ ಗೊಂಫ್, ದಿರಾಚಕ್, ಗೌರಿಕುಂಡ, ಜಾನುಲಾ ಪಾರ್ಕ್ ಎಂಬ ಸ್ಥಳಗಳು ಬರುವುವು.

ಬಿಗ್ ಬಜಾರ್, ಬಿಗ್ ತಪ್ಪು!

ಬಿಗ್ ಬಜಾರ್ ಸೂಪರ್ ಮಾರ್ಕೆಟ್-ನವರು ಕಳೆದ ಕೆಲವು ದಿನಗಳಿಂದ ಎಫ್ ಎಂ ವಾಹಿನಿಗಳಲ್ಲಿ ಹಿ೦ದಿಯಲ್ಲಿ ಜಾಹಿರಾತು ನೀಡುತ್ತಿದಾರೆ.
"ನಾವು ಕೋಟಿ ಲೆಕ್ಕದಲ್ಲಿ ಸಾಮಾನು ಕೊಳ್ಳುತ್ತೇವೆ, ಅದಕ್ಕೇ ಕಮ್ಮಿ ಬೆಲೆಯಲ್ಲಿ ಮಾರಬಲ್ಲೆವು" ಅನ್ನೋ ಜಾಹೀರಾತು ಹಿ೦ದಿಯಲ್ಲಿ ಪ್ರಸಾರ ಆಗ್ತಿದೆ.

ನಾನೂ ಹಾಕಿದೆ ನನ್ನ ಮೊದಲ ಓಟು :)

ಅಂದು ಬುಧವಾರ ಮಧ್ಯಾಹ್ನ ತರಗತಿ ಮುಗಿಸಿ ವಿದ್ಯಾರ್ಥಿನಿ ನಿಲಯಕ್ಕೆ ಬಂದಾಗಿತ್ತು. ಪುನಃ ಊಟ ಮಾಡಿ ತರಗತಿಗೆ ಹೋಗಬೇಕಿತ್ತು.

ಹಂಪಿಯ ಕೆಲವು ಚಿತ್ರಗಳು

 
ನಮಸ್ಕಾರ ಸ್ನೇಹಿತರೇ ಕಳೆದ ಬ್ಲಾಗ್ ನಲ್ಲಿ ಹಂಪಿಯ ಹಲವು ಪೋಟೋಗಳನ್ನು  ಹಾಕಿದ್ದೆ ಈಗ ಇನ್ನಷ್ಟು ಪೋಟೋಗಳನ್ನು ಹಾಕ್ತಾ ಇದ್ದೇನೆ ಹೇಗಿವೆ ಇವು.....
 
 
ಹಂಪಿಯಲ್ಲಿ ನಾ ಕಂಡ ಸೂರ್ಯಾಸ್ಥಮ