ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಎಲ್ಲೇ ಇರು, ಹೇಗೇ ಇರು...

ಪ್ರೀತಿಯ ಗೆಳತಿ,

ತುಂಬ ಸ್ವಸ್ಥ ಮನಸ್ಸಿನಿಂದ ಕೂತು ಇದನ್ನು ಬರೆಯುತ್ತಿದ್ದೇನೆ. ಕಣ್ಣೀರು ಒರೆಸಿಕೊಂಡು ಓದು, ಇಲ್ಲದಿದ್ದರೆ ಕಣ್ಣು ಮಂಜಾಗಿ ಅಕ್ಷರಗಳು ಕಾಣದೆ ಹೋದಾವು.

ಕನ್ನಡ ಕಥೆಗಳ ಹೊಸ ಜಾಡು

ಕನ್ನಡ ಕಥೆಗಳ ಹೊಸ ಜಾಡು
-ಕಲಿಗಣನಾಥ ಗುಡದೂರು
ಕನ್ನಡದಲ್ಲಿ ಕಳೆದ ಒಂದೂವರೆ ದಶಕದಿಂದ ಕಥೆಗಳನ್ನು ಬರೆಯುತ್ತಿರುವೆ ಎಂಬ ನೆಪಕ್ಕೆ ನನ್ನಂತಾ ನಾನ್ ಅಕಾಡೆಮಿಕ್ ಪರಿಸರದ ಶುದ್ಧ ಹಳ್ಳಿಗನಾದ ನನ್ನನ್ನು 'ಕನ್ನಡ ಕಥೆಗಳ ಹೊಸ ಜಾಡು' ಕುರಿತು ಮಾತನಾಡಲು ಹಚ್ಚಿರುವ ಮಿತ್ರ ಕೆ.ರಂಗನಾಥರ ಸಾಹಸಕ್ಕೆ ಏನೆನ್ನಬೇಕೊ? ನನಗಂತೂ ಕಥೆ ಬರೆದಷ್ಟು ಕಥೆಗಳ ಬಗ್ಗೆ ಮಾತನಾಡುವುದು ಸಲೀಸಲ್ಲ ಹಾಗೂ ಮುಜುಗರದ ಸಂಗತಿ. ಕನ್ನಡ ಸಾಹಿತ್ಯ ಪ್ರಸಾರಕ ಮತ್ತು ಪರಿಚಾರಕರಾಗಿದ್ದ ಪ್ರೊ.ಚಿ.ಶ್ರೀನಿವಾಸರಾಜು ಮೇಸ್ಟ್ರು ನೆನಪಿನಲ್ಲಿ ನಡೆಯುತ್ತಿರುವ 'ಕನ್ನಡ ಸಾಹಿತ್ಯದ ಇತ್ತೀಚಿನ ಒಲವುಗಳು' ಎಂಬ ಈ ವಿಚಾರ ಸಂಕಿರಣ ಬಹು ಅರ್ಥಪೂರ್ಣ. ಗುಲ್ಬರ್ಗದಲ್ಲಿ ಎಂ.ಎ. ಓದುತ್ತಿದ್ದಾಗ ಬರೆದ 'ಉಡಿಯಲ್ಲಿಯ ಉರಿ' ಕಥೆಗೆ 'ಪ್ರಜಾವಾಣಿ ದೀಪಾವಣಿ ಕಥಾ ಸ್ಪಧರ್ೆ-19997'ರಲ್ಲಿ ಪ್ರಥಮ ಬಹುಮಾನ ಬಂದಾಗ ಮೇಸ್ಟ್ರು ಗುಲ್ಬರ್ಗದಲ್ಲಿದ್ದ ಕವಿ ಜಿ.ಎನ್.ಮೋಹನ್ ಮನೆಗೆ ಬಂದಿದ್ದರು. ಅವರನ್ನು ಅತ್ಯಂತ ಸನಿಹದಿಂದ ಕಂಡು ಮಾತನಾಡಿಸಿದ್ದು, ಅವರು ನನ್ನ ಬೆನ್ತಟ್ಟಿ ಬರೆಯೆಂದು ಹಾರೈಸಿದ್ದು ನನಗಂತೂ ನೆನೆದಾಗಲೆಲ್ಲಾ ಚೈತನ್ಯ ತುಂಬುವ ಸಂಗತಿ. ಆ ವರ್ಷದ ಕಥಾ ಸ್ಪಧರ್ೆ ತೀಪರ್ುಗಾರರಿಬ್ಬರಲ್ಲಿ ಅವರೂ ಒಬ್ಬರು. ಹೀಗೆ ಸ್ವಲ್ಪ ಮಟ್ಟಿಗೆ ಮೇಸ್ಟ್ರು ಅವರ ಸಂಪರ್ಕಕ್ಕೆ ಬಂದಿದ್ದು ಮತ್ತೆ ಅವರು ಬೆಳೆಸಿದ ನನ್ನಂತಾ ನೂರಾರು ಯುವ ಲೇಖಕರ ಮಧ್ಯೆ ಕನ್ನಡ ಸಾಹಿತ್ಯ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಕ್ರೈಸ್ಟ್ ಕಾಲೇಜಿನ ಈ ಅಂಗಳದಲ್ಲಿ ನಿಂತು 'ಸಣ್ಣ ಕಥೆಗಳ ಹೊಸ ಜಾಡು' ಹುಡುಕ ಹೊರಟಿರುವುದಕ್ಕೂ ಏನೋ ಸಂಬಂಧವಿದೆ.

ಹೇಗಿರಬೇಕು ನನ್ನವನು

ನನ್ನವನು ಬಿಳಿ ಕುದುರೆಯೇರಿ ಬರುವ ರಾಜಕುಮಾರನಾಗಿರಬೇಕೆಂದೇನಿಲ್ಲ,
ನನ್ನಲ್ಲಿ ಕನಸ ಬಿತ್ತುವ ರೈತನಾದರೆ ಸಾಕು.

ನನ್ನನ್ನು ಅವನು ರತಿ ಮೇನಕೆ ಎಂದು ಹೊಗಳಬೇಕಿಲ್ಲ,
ನನ್ನತನಕೆ ಬೆಲೆಕೊಟ್ಟರೆ ಸಾಕು.

ನನ್ನ ಕಣ್ಣುಗಳನ್ನು ಕಮಲ, ಮೀನಿಗೆ ಹೋಲಿಸಬೇಕಿಲ್ಲ,
ನಾ ಮಲಗಿದ್ದಾಗ ಅವಕ್ಕೆ ಮುತ್ತಿಟ್ಟರೆ ಸಾಕು.

ನನ್ನವನು ಸುರಸುಂದರಾಂಗನಾಗಿರಬೇಕೆಂದೇನಿಲ್ಲ,

ನೀ ಬರದೇ

ನೀ ಬರದೇ ಹೃದಯಕ್ಕೆ ಶೂನ್ಯ ಕವಿದಿದೆ. ಮಾತು ಮೌನವಾಗಿದೆ.
ನೀ ಬಂದಾಗ ಈ ಹೃದಯ ಪಿಸುಗುಟ್ಟುವುದನ್ನು ಕೇಳಿಸಿಕೊ.
ನೀನಿರದೆ ಅದು ಸಂಕಟಪಟ್ಟಿದನ್ನು ಹೇಳುವುದು.
ನೀ ಬಂದಾಗ ನನ್ನ ಕಣ್ಣುಗಳನ್ನೊಮ್ಮೆ ನೋಡು,
ನೀನಿರದೆ ಅದು ಕಂಗೆಟ್ಟಿದನ್ನು ಹೇಳುವುದು.

ತೊಟ್ಟಿಲಲ್ಲಿ ಪಾಪು

"ಚೈತ್ರದಲ್ಲಿ ಬೃಂದಾವನ ತಂಪು
ಆಗ ಕೋಗಿಲೆಯ ಕೂಗು ಕಂಠದ ಇಂಪು"

"ಅರಳುವ ಗುಲಾಬಿಯ ರಂಗು ಕೆಂಪು
ಸಂಪಿಗೆಯ ಸುವಾಸನೆಯ ಕಂಪು"

"ನಲ್ಲನ ಪಕ್ಕ ಮಲಗುವಾಗ ನಲ್ಲೆಯ ಮುಖವಾಗುವುದು ಕೆಂಪು
ಸ್ವಲ್ಪ ದಿನಗಳ ನಂತರ ತೂಗುವುದು ತೊಟ್ಟಿಲಲ್ಲಿ ಪಾಪು"

ಶ್ರಿಮಂತ ಬಡವರು..

ಅದೊಂದು ಶ್ರೀಮಂತ ಕುಟುಂಬ.ಗಂಡ ಹೆಂದತಿ ಮತ್ತು ಅವರ ಒಂದು ಮುದ್ದಾದ ಮಗು. ಗಂಡ ಹೆಂಡತಿಗೆ ಮಗನೆಂದರೆ ತುಂಬಾ ಪ್ರೀತಿ. ಅವರಲ್ಲಿದ್ದ ಶ್ರಿಮಂತಿಕೆಯಿಂದ ಮಗನನ್ನು ತುಂಬಾ ಮುದ್ದಿನಿಂದ ಬೆಳೆಸುತ್ತಿದ್ದರು. ಮಗ ಬಯಸಿದ ಪ್ರತಿಯೊಂದು ಬಯಕೆ ಯನ್ನು ಇಡೇರಿಸುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ ತಂದೆಗೆ ತನ್ನ ಶ್ರಿಮಂತಿಕೆಯ ಬಗ್ಗೆ ತುಂಬಾ ಅಹಂಕಾರವಿತ್ತು.