ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮುಸ್ಸಂಜೆ ಮಾತು ಚಿತ್ರದ ಹಾಡುಗಳು

ಅಂತರ್ಜಾಲದಲ್ಲಿ "ಮುಸ್ಸಂಜೆ ಮಾತು" ಚಲನ ಚಿತ್ರದ ಹಾಡುಗಳು .mp3 format ನಲ್ಲಿ ಎಲ್ಲಿ ದೊರೆಯುತ್ತದೆ???

ತಿಳಿದವರು ದಯವಿಟ್ಟು ತಿಳಿಸಿ... 

ಅನಿಲ್.ರಮೇಶ್ 

ಕನ್ನಡಿಗರ ಸ್ಥಿತಿ

ಭಾರತ ಬಿಟ್ಟು, ಬೆಂಗಳೂರ್ ಬಿಟ್ಟು ಬಂದದ್ದಾಯ್ತು ಇಲ್ಲಿ
ದೊಡ್ ದೇಶದಾಗೆ ದುಡ್ ನಂಜ್ ಕೊಂಡು ಮನಸೋಗ್ತೈತೆ ಅಲ್ಲಿ!
ಕೆಲಸ ಸಿಗ್ದು, ದುಡ್ಡಿಲ್ಲಾಂತ ಏನೋ ಬಂದ್ವು ಇಲ್ಲಿ,
ಕೆಲಸ ದುಡ್ಡು ಎರಡೂ ಇದ್ರೂ ನಮ್ಮೋರಿಲ್ಲಾ ಇಲ್ಲಿ!
ಅಲ್ಲಿದ್ದವರ್ಗೆ ಇಲ್ಗ್ ಬರ್ ಬೇಕೂಂತ ಏನೋ ಭಾರಿ ಹುಚ್ಚು
ಇಲ್ಲಿದ್ರೂನೆ ಅಲ್ಲಿದ್ ನೆನಸೋದ್ ಏನಿದ್ ನನ್ಗೆ ಪೆಚ್ಚು!

ದಿನ(ಕರ)ಚರಿ

ಮಿಸುಗುತಿರುವಾಗ ಹಾಸಿಗೆಯಲಿ ಸೂರ್ಯ
ಎಚ್ಚರಗೊಂಡ ನಿಶೆ ಸೂರ್ಯನ ಮೈಯಾವರಿಸಿದ್ದ
ಸೆರಗನ್ನು ಮೆಲ್ಲನೆ ಬಿಡಿಸಿಕೊಂಡು ಅಲ್ಲಿಂದ
ಸರಿದು ಒಳ ನೆಡೆದಳು.
ಕಣ್ಣು ಹೊಸಕಿ, ಎರಡೂ ಕೈ ಮೇಲೆತ್ತಿ
ಕಾಲು ನಿಡಿದಾಗಿಸಿ ಲಟ ಲಟ ಎನಿಸಿ
ಎದ್ದು ಕುಳಿತು ಮೈ ಮುರಿದ ಸೂರ್ಯ
ಪಕ್ಕಕ್ಕೆ ತಿರುಗಿದ.
ನಿಶೆ ಇಲ್ಲ! "ಓ ನನಗಾಗಿ ತಿಂಡಿಯ
ಸಿದ್ಧತೆಯಲ್ಲಿದ್ದಾಳೆ.ಸಮಯ ಪ್ರಜ್ಞೆ

ಕಾದಲ್

ಕಾದಲ್, ಕಾದಲ, ಕಾದಲೆ ಮತ್ತು ಕಾದಲ್ಮೆ ಇವು ಪ್ರೀತಿಗೆ ಸಂಭಂಧಿಸಿದಂತೆ ಇರುವ ಹೞಗನ್ನಡದಲ್ಲಿ ಬೞಕೆಯಾಗುತ್ತಿದ್ದ ಪದಗಳೂ. ಈಗಲೂ ಬೞಸಬಾರದೆಂದೇನಿಲ್ಲ. ಬೞಸಬಹುದು.

ಸಂಬಂಧಗಳು

ಮನುಷ್ಯ ಸಂಬಂಧಗಳ ಹೊರತಾಗಿ ಬಾಳಲು ಸಾಧ್ಯನಾ, ಬದುಕು ನಿರ್ಮಾಣ ಆಗೋದೆ, ಸಂಬಂಧಗಳ ಪೋಣೆಸಿಟ್ಟ ಎಳೆಯಿಂದಲ್ಲವಾ, ಆ ಎಳೆ ನಿರ್ಮಾಣ ಆಗಿರೋದು ದೈವದತ್ತ ಆಗಿರ ಬಹುದು, ಪ್ರಕೃತಿ ಇರಬಹುದು, ಅಥವಾ ಯಾವುದೋ ಕಾಣದ ಕೈ ಇರಬಹುದು. ಮನುಷ್ಯ ಸಂಬಂದಗಳನ್ನು ತೊರೆದು ಬದುಕಲು ಸಾಧ್ಯಾನಾ,
ತೊರೆದು ಬದುಕ ಬಹುದು ಅನ್ನೋದಾದರೆ, ನೋವಿನ ಎಳೆಯೊಂದು ಅಲ್ಲಿ ಕಾಡೊಲ್ಲವಾ.

ಕನ್ನಡ ಉಚ್ಚಾರಣೆ..

ಕನ್ನಡ ಪದಗಳ ಉಚ್ಚಾರಣೆ ಬಂದರೆ ಡಾ| ರಾಜ್ ಕನ್ನಡಿಗರಿಗರಿಗೆ ಮಾದರಿ ಎನ್ನಬಹುದು. ರೇಡಿಯೋ ಜಾಕಿಗಳು ಕೆಲವೊಮ್ಮೆ ಅವರನ್ನನುಕರಿಸುವಾಗ ಅಥವಾ ಕಲಾವಿಧರು ಅವರನ್ನನುಕರಿಸುವಾಗ ಗಮನಿಸಬೇಕಾದ ಒಂದಂಶ ಎಂದರೆ ಪದಗಳ ಉಚ್ಚಾರಣೆ ಮತ್ತು ಪ್ರತಿ ಅಕ್ಷರವನ್ನು ಒತ್ತುಕೊಟ್ಟು ಸ್ಫುಟವಾಗಿ ಉಚ್ಚರಿಸುವುದು. ಉದಾ..’ಬಹಳ ಚೆನ್ನಾಗಿದೆ’.

ಶಿಕ್ಷಣಸ್ಥ ದಲಿತರ ಹಾಡಿ ಕಳಸನಕೊಪ್ಪಕ್ಕೆ ಬೇಕಿದೆ ಜಲಸಾಕ್ಷರತೆಯ ಪೂರ್ಣಪಾಠ

ಒಂದು ಮಾತು. ಕಳಸನಕೊಪ್ಪದ ಜನರ ಈ ಸೋಲಿನ ಕಥೆ ಇತರರಿಗೆ ಪಾಠವಾಗಲಿ. ಸುಧಾರಣೆಗೆ ನಾಂದಿ ಹಾಡಲಿ. ಇಂತಹ ಪರಿಸರ ಅಸ್ನೇಹಿ ಪ್ರಯೋಗಗಳು ನಿಲ್ಲಲಿ. ಪರ್ಯಾಯ ಪ್ರಯೋಗಗಳ ಚಿಂತನ-ಮಂಥನ ನಡೆಯಲಿ ಎಂಬ ಉದ್ದೇಶದಿಂದ ಈ ಲೇಖನ.
~.~.~.~.~.~

ಗಾಂಧೀಜಿಯ ಗ್ರಾಮ ಸ್ವರಾಜ್ಯ ನನಸಾಗಿ ಮತ್ತೆ ಕನಸಾಗುವತ್ತ ಸಾಗಿದ ಅಪರೂಪದ ಅಧೋಮುಖ ಬೆಳವಣಿಗೆ ನಿಮ್ಮ ಗಮನಕ್ಕೆ ಬಂದಿದೆಯೇ? ಕಳಸನಕೊಪ್ಪದ ಜನ ಸಕಾಲದಲ್ಲಿ ಜಲಸಾಕ್ಷರರು ಆಗದ್ದರಿಂದ ಈ ಅಧೋಮುಖ ಪ್ರಗತಿ ಕಾಣಿಸಿದೆ. ಇನ್ನಾದರೂ ಅವರು ‘ಜಲಯೋಧ’ ರು ಆಗಬೇಕಿದೆ.

‘ಕಳಸನಕೊಪ್ಪ’ ಗಾಂಧೀಜಿ ಕಂಡ ವಿಧಾಯಕ ಕಾರ್ಯಗಳ ಮಾದರಿ ಕ್ಷೇತ್ರ. ಗ್ರಾಮ ಸ್ವರಾಜ್ಯದ ಕಲ್ಪನೆ ಸಾಕಾರಗೊಳಿಸಿ ಉತ್ತರ ಕರ್ನಾಟಕ ಭಾಗದಲ್ಲೇ ‘ಕಲಶ’ಪ್ರಾಯ ಗ್ರಾಮ ಎನಿಸಿತ್ತು. ಗ್ರಾಮ ಭಾರತದಲ್ಲಿರುವ ಜನ ಆರ್ಥಿಕವಾಗಿ ಸ್ವಾವಲಂಬಿಗಳಾದರೆ ದೇಶದ ಅಭಿವೃದ್ಧಿ ಕಟ್ಟಿಟ್ಟದ್ದು ಎಂಬುದಕ್ಕೆ ತಾಜಾ ನಿದರ್ಶನವಾಗಿತ್ತು. ಇದು ೨೦೦೪-೦೫ನೇ ಸಾಲಿನ ಕಥೆ.

ರೇಷ್ಮೆ ಇಲಾಖೆಯ ತಾಂತ್ರಿಕ ಸಹಾಯ, ಕೃಷಿ ವಿಶ್ವವಿದ್ಯಾಲಯದ ವಿಜ್ನಾನಿಗಳ ಸಲಹೆ, ಸೂಚನೆಗಳು ಹಾಗು ಸ್ವಂತದ್ದೇ ಸಹಕಾರ ಸಂಘದಿಂದ ಲಭ್ಯವಿರುವ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಕ್ರೋಢೀಕರಿಸಿಕೊಂಡು ಇವರು ಸ್ವಾವಲಂಬಿ ಜೀವನ ನಡೆಸಿದಂಥವರು. ರೇಷ್ಮೆ ಇಲಾಖೆಯ ಹಿರಿಯ ಅಧಿಕಾರಿ ಡಿ.ಎಚ್.ಅಳಗುಂಡಗಿ ಅವರ ಮಾರ್ಗದರ್ಶನದಲ್ಲಿ ೩೫ ಕೊಳವೆ ಬಾವಿಗಳನ್ನು ಕೊರೆಯಿಸಿಕೊಂಡು ೬೦೦ ಎಕರೆ ನೀರಾವರಿ ಮಾಡಿಕೊಂಡವರು. ಅಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ರೇಷ್ಮೆ ಬೆಳೆದವರು. ಇವರಿಗೆ ದಶಕಗಳ ಕಾಲ ಇದೊಂದೇ ಉದ್ಯೋಗವಾಗಿತ್ತು. ಮಕ್ಕಳು ಮಹಿಳೆಯರು ಎಲ್ಲರೂ ಇದರಲ್ಲಿ ತೊಡಗಿಸಿಕೊಂಡಿದ್ದರು.

ನವ್ಯ, ನವೋದಯ, ಬಂಡಾಯ.....

ನವ್ಯ, ನವೋದಯ, ಬಂಡಾಯ ಇತ್ಯಾದಿ ಪದಗಳನ್ನು ಕೆಲವು ಲೇಖನಗಳಲ್ಲಿ ಬಳಸುತ್ತಿರುತ್ತಾರೆ. ಇವು ಸಾಹಿತ್ಯಗಳನ್ನು ವರ್ಗೀಕರಣಗೊಳಿಸುವ ವಿಧಗಳಿರಬಹುದು. ನವ್ಯ, ನವೋದಯ, ಬಂಡಾಯ ಸಾಹಿತ್ಯಗಳೆಂದರೇನು? ಈಗಿರುವ ಸಾಹಿತಿಗಳು ಯಾವ ವರ್ಗಕ್ಕೆ ಸೇರುತ್ತಾರೆ? ಗೊತ್ತಿದ್ದವರು ತಿಳಿಸಿ..

ಮರನ್, ನೆಲನ್, ಪೊಲನ್, ಕಡನ್, ಕೊಳನ್

ನಿಜವಾಗಿ ಮರ, ಹೊಲ (ಪೊಲ), ನೆಲ, ಕಡ ನಕಾರಾಂತಗಳು. ಹೞಗನ್ನಡದಲ್ಲಿ ಪದಾಂತವಾದ ನ್‍ ಮತ್ತು ಮ್‍ ಗಳಿಗೆ ಅನುಸ್ವಾರವನ್ನೆ ಬೞಸುತ್ತಿದ್ದಱಿಂದ ಈ ಪದಗಳೆಲ್ಲ ಮಕಾರಾಂತವಾಗಿ ಕೊನೆಗೆ ಮಕಾರ ಲೋಪವಾದುವು. ಮರನೇಱಿದಂ. ಪಾೞ್ನೆಲನೆನಗೆ. ಪೊಲನಂ, ಕೊಳನಂ, ನೋಡಿ: ಖಂಡುಗ ಉಣ್ಣೋರ ಮನೆಗೆ ಕಡನ(೦) ಯಾರು ಕೊಟ್ಟಾರು?