ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್

ಮೈಸೂರಿನ ೨೫೪೩೭೫೯ ಸಂಕ್ಯೆಗೆ ದೂರವಾಣಿ ಕರೆ ಮಾಡಿದರೆ, ನೀವಿನ್ನು ಎಂದಿನ ಗಂಭೀರ ಧ್ವನಿ "ನಮಸ್ಕಾರ, ಜಿ.ಟಿ.ನಾರಾಯಣರಾವ್" ಎಂದಿಗೂ ಕೆಳದು. ಸರಸ್ವತೀಪುರಂನಲ್ಲಿರುವ "ಅತ್ರೀ" ಮನೆಯ ಗೇಟನ್ನು ಮೆಲ್ಲಗೆ ತೆರೆದರೂ ಸಾಕು, ಮನೆಯೊಳಗಿಂದ ಹೊರ ಬಂದು, ಎರಡೂ ಕೈ ಜೋಡಿಸಿ ನಮಸ್ಕಾರ ಮಾಡುತ್ತ "ಸುಖ ಪ್ರಯಾಣವಾಯಿತೇ" ಎಂದು ಕೇಳಿ ಸ್ವಾಗತಿಸುತ್ತಿದ್ದ ಜಿ.ಟಿ.ನಾರಾಯಣ ರಾವ್, ಹೃಸ್ವವಾಗಿ ಜಿಟಿಎನ್ ಇನ್ನಿಲ್ಲ. "ಮುಗಿಯದ ಪಯಣ" ಕೃತಿಯ ಕರ್ತೃ ಇಹದ ಬಾಳಿನ ಪಯಣ ಮುಗಿಸಿ ವಿಶ್ವ ರಹಸ್ಯದಲ್ಲಿ ಲೀನವಾಗಿದ್ದಾರೆ.

ಜಿಟಿಎನ್ ಗುರುವಾರ (೨೬.೬.೨೦೦೮) ಸಂಜೆ ಸ್ನೇಹಿತರ ಮನೆಯಲ್ಲಿ ಸಂಗೀತಕ್ಕೆ ಸಂಬಂಧಿಸಿದ ಲೇಖನವನ್ನು ಕಂಪ್ಯೂಟರ್ ಪರದೆ ಮೇಲೆ ಓದುತ್ತ ಇದ್ದಾಗ "ಎಲ್ಲ ಮಂಜಾಗುತ್ತಿದೆ" ಎಂದರಂತೆ. ಮನೆಯವರು ಶರಬತ್ತು ಕೊಟ್ಟರು. ಕುಡಿದು ಮತ್ತೆ ಓದಲು ತೊಡಗುತ್ತಿದ್ದಂತೆ ನಿದ್ದೆಗೆ ಜಾರಿದರು. ಆ ನಿದ್ದೆ ಮಾತ್ರ ದೀರ್ಘ ನಿದ್ರೆಯಾಯಿತು. ಮತ್ತೆಂದೂ ಏಳದ ನಿದ್ರೆಯಾಯಿತು. ಈ ಭುವಿಯ ಯಾವ ಶಕ್ತಿಯೂ ಅವರನ್ನು ನಿದ್ದೆಯಿಂದ ಎಚ್ಚರಿಸಲು ಸಾಧ್ಯವಾಗದ ನಿದ್ದೆಯದು.
ಅವರಿಗೆ ಎಂಬತ್ತಮೂರರ ವಯಸ್ಸು. ವಯಸ್ಸಿಗೆ ಅನುಗುಣವಾಗಿ ದೇಹ ಕೃಷವಾಗಿತ್ತು - ಹಕ್ಕಿಯಂತಾಗಿತ್ತು. ಆದರೆ ಜೀವನೋತ್ಸಾಹ ಅದೇ ಇತ್ತು. ಜಿಟಿಎನ್ ಸ್ಮೃತಿ ಕಳೆದುಕೊಂಡ ಸುದ್ದಿ ಬಂದಾಗ ಅವರು ಮತ್ತೆ ಚೇತರಿಸಿಕೊಳ್ಳಬಹುದೆಂಬ ನಿರೀಕ್ಷೆ ಇತ್ತು. ಏಕೆಂದರೆ ನಾಲ್ಕೈದು ವರ್ಷಗಳ ಹಿಂದೆ ಅವರ ದೇಹ ಸ್ಥಿತಿ ತೀರ ಹದಗೆಟ್ಟಿತ್ತು. ಆ ಸಂದರ್ಭದಲ್ಲಿ ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದಾಗ ಅವರು ಹೇಳುತ್ತಿದ್ದರು "ಸೋರುತಿಹುದು ಮನೆಯ ಮಾಳಿಗೀ" ಅವರಿಗೆ ತಮಾಷೆ. ನಮಗೆ?ಮ್ಮ "ಮುಗಿಯದ ಪಯಣ" ದಲ್ಲಿ "ಯಮ ಸದನ ನೋಡಿ ಬಂದೆ" ಎಂಬ ಅಧ್ಯಾಯದಲಿ ಈ ಬಗ್ಗೆ ಬರೆದಿದ್ದಾರೆ. ಸಾವು ಬದುಕಿನ ಹೋರಾಟದಲ್ಲಿ ಜಯಶಾಲಿಯಾಗಿ ಮರಳಿದ ಜಿಟಿಎನ್ ಅವರಿಗೆ ನಾನು ಬರೆದೆ "ಜವರಾಯ ಬಂದರೂ ನಿಮ್ಮನ್ನು ಕರೆದೊಯ್ಯಲಿಲ್ಲ, ನಮಗಾಗಿ" ಆದರೆ ಈ ಬಾರಿ ಹಾಗಾಗಲೇ ಇಲ್ಲ. ಜವರಾಯ ತಣ್ಣಗೆ ಬಂದ ಯಾರಿಗೂ ಹೇಳದೇ - ಅವರನ್ನು ಓಯ್ದೇ ಬಿಟ್ಟ.
ಮೈಸೂರಿಗೆ ಧಾವಿಸಿ, ಅತ್ರಿ ಮನೆ ತಲುಪುವಾಗ ನಡು ಮಧ್ಯಾಹ್ನ. ಹೊರಗಡೆ ಜನರೋ ಜನರು. ಒಳಗೆ ಹಜಾರದಲ್ಲಿ ಜಿಟಿಎನ್ ಮಲಗಿದ್ದರು ಹೂವಿನ ರಾಶಿಯನ್ನೇ ಹೊದ್ದು. ಮೂಕದಲ್ಲೊಂದು ನಗುವಿನ ಸೆಳೆ. ಪಕ್ಕದ ಅವರ ಆಧ್ಯಯನ ಕೊಠಡಿಯಲ್ಲಿ ಪುಸ್ತಕಗಳ ರಾಶಿ. ಬಿಳಿ ಹಾಳೆಯ ಮೇಲೆ ಬರೆಡಿಟ್ಟ ಟಿಪ್ಪಣಿ, ಅತ್ರಿಸೂನು ಕವನದ ಸಾಲುಗಳು. ಎಲ್ಲವೂ ಇದ್ದುವು. ಆದರೆ ಇವೆಲ್ಲವುಗಳಿಗೆ ಅರ್ಥ ಕೊಡುವ, ಮಾತು ನೀಡುವ, ಚಿತ್ರವಾಗುವ, ರೂಪಕವಾಗುವ ಆ ಚೇತನ ಮಾತ್ರ ಅಲ್ಲಿರಲಿಲ್ಲ. ಅನಿಕೇತನ ಹುಡುಕುತ್ತ ಹೊರಟಿತ್ತೇ? ಗೊತ್ತಿಲ್ಲ.

ವಿಧ್ಯಾಭ್ಯಾಸ ಮತ್ತು ಕಾಲೇಜು

ಇತ್ತೀಚೆಗೆ ಮಿತ್ರರೊಂದಿಗೆ ಇಂದಿನ ವಿಧ್ಯಾಭ್ಯಾಸ ಕ್ರಮದ ಬಗ್ಗೆ ಹರಟುತ್ತಿದ್ದೆವು. ಅದರಲ್ಲಿ ನಗರಗಳಲ್ಲಿನ ಕಾಲೇಜು/ಇಂಗಿನಿಯರಿಂಗ್ ಕಾಲೇಜುಗಳಲ್ಲಿ ಓದುತ್ತಿರುವ ವಿಧ್ಯಾರ್ಥಿಗಳ ಕೆಲವು ಭಾವನೆಗಳನ್ನು ಕೇಳಿ ಆಶ್ಚರ್ಯವಾಯಿತು. ಅದೆಂದರೆ ಒಂದೋ ಎರಡೋ ವಿಷಯಗಳಲ್ಲಿ ಫೇಲ್ ಆಗುವುದು ಪ್ರತಿಷ್ಠೆಯ ಲಕ್ಷಣವಂತೆ !!

ಎಲೆ ಮರಗಳೇ ಕೇಳಿ

ಎಲೆ ಮರಗಳೇ ಕೇಳಿ
ಎಲೆ ಗಿಡಗಳೇ ಕೇಳಿ
ಕೊಲೆಗಡುಕ ಮಾನವರು
ಕರುಣೆ ಇಲ್ಲದ ಕಾಡು
ಕಲ್ಲೆದೆಯ ಜನರು
ಕಡಿಯುತಿಹರಲ್ಲಿ
ನಿಮ್ಮದೇ ಬಂಧುಗಳು

ಎಷ್ಟು ದಿನ ಈ ಮೌನ
ಎಷ್ಟ ದಿನ ಈ ಧ್ಯಾನ
ಬಾಯಿ ಇಲ್ಲದ ಜೀವ
ಬದುಕುವುದು ಬಲು ದುರಳ
ಬಾಯಿತೆರೆಯಿರಿ ನೀವು
ಬೆದರಿಕೆಯ ಹಾಕಿ

ನಿಮ್ಮಿಂದಲೇ ಉಂಡು
ನಿಮ್ಮಿಂದಲೇ ಬೆಳೆದು
ನಿಮ್ಮನ್ನೇ ಇಂದು
ನುಂಗುತಿಹರವರು

ಅರಿಯದಾದರು ಏಕೆ?

ತಪ್ಪಿದ ಲೆಕ್ಕ

ಏಕಿಷ್ಟು ಅವಸರವೋ
ಎಲ್ಲಿಗೋಡುವರಿವರು
ನಾಳೆ ಮಾಡುವರು ಏನು ನಾನು ಕಾಣೆ
ಅಷ್ಟು ಅವಸರವದೇಕೋ ನಾನು ಕಾಣೆ.

ದೂರದಲಿ ಇದ್ದ ಜನರೆಲ್ಲರೂ
ಹತ್ತಿರವೇ ಆಗುವರು ಇನ್ನಷ್ಟೂ
ಇಲ್ಲೆ-ಇಲ್ಲೆ ಇದ್ದ ಜನರೆಲ್ಲರೂ
ಗಾವುದ ಗಾವುದ ಸರಿಯುವರು ಮತ್ತಷ್ಟೂ.

ವೈದ್ಯರಾದರು ಜನರು ಎಷ್ಟು-ಎಷ್ಟು
ರೋಗಗಳು ಹೆಚ್ಚಿದವು ಮತ್ತಷ್ಟು
ವಿದ್ಯೆ ಪಡೆದರು ಜನರು ಎಷ್ಟು ಎಷ್ಟು

ಓ ನಲ್ಲೇ

ಓ ನಲ್ಲೇ

ಓ ನಲ್ಲೇ ...
ಎಲ್ಲಿ ಹೋಗುವೆ ನಿಲ್ಲೇ.
ನಾ ಕೊಟ್ಟ ಪ್ರೇಮಪತ್ರವೆಲ್ಲೇ.
ಹೇಳು ನಿನ್ನ ನಿರ್ಧಾರವನ್ನಿಲ್ಲೇ....

ಅಲೆದೆ ನಿನ್ನ ಹಿಂದೆ ರೋಡು ಪಾರ್ಕೆನ್ನದೆ
ನೀ ಹೋದೆ ನನ್ನೆದೆ ತಿರುಗಿ ನೋಡದೆ
ನಾ ಮಾಡಿದ ತಪ್ಪಾದರೂ ಏನು...?
ಹೀಗೇಕೆ ನನ್ನ ಕೊಲ್ಲುತಿರುವೆ ...

ಕಾಲೇಜಿನ ಕೊಠಡಿಯಲ್ಲೂ ನಿನ್ನ ಧ್ಯಾನ
ಪ್ರಾಧ್ಯಾಪಕರಿಂದ ನನಗೆ ಬುದ್ದಿ ಮಾತಿನ ವಿಧಾನ

ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ

ಗಿಡಗಳಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ತ್ರಾಸು ಕೊಡಬೇಕು!?

ನನ್ನಲ್ಲಿ ಗಿಡಗಳಿಗೆ ತ್ರಾಸು ಕೊಡಬೇಕು ಎಂಬ ಚಿಂತನೆ ಮೂಡಲು ವಿಶೇಷ ಕಾರಣವಿದೆ. ಇತ್ತೀಚೆಗೆ ನಮ್ಮ ಮನೆಯ ಅಂಗಳದಲ್ಲಿ ಕೆಂಪು ದಾಸವಾಳ ಗಿಡದ ದಪ್ಪ ಪೊಟರೆಗಳಲ್ಲಿ ಒಂದಲ್ಲ..ಎರಡಲ್ಲ..ಮೂರು ಬುಲ್-ಬುಲ್ ಜೋಡಿ ಹಕ್ಕಿಗಳು ಮೂರು ಗೂಡು ಕಟ್ಟಿದ್ದವು. ನಮ್ಮ ಮನೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.

ಬೆಕ್ಕು, ನಾಯಿ ಗಿಡದ ಪಕ್ಕ ಸುಳಿದರೆ ಮನೆ ಮಂದಿ ಓಡಿ ಬಂದು ತಮ್ಮ ಮೊಟ್ಟೆ ಉಳಿಸಿಕೊಡುವಂತೆ, ಅಪಾಯದ ಮುನ್ಸೂಚನೆ ಎಂಬಂತೆ ಬುಲ್-ಬುಲ್ ದಂಪತಿಗಳು ಕೂಗುತ್ತಿದ್ದವು. ಆ ಧಾವಂತದಲ್ಲಿ ನಮ್ಮ ಮನೆಯಲ್ಲಿ ಎಲ್ಲರೂ ಪಕ್ಷಿ ತಜ್ನರು, ಪ್ರಿಯರು ಹಾಗು ರಕ್ಷಕರು ಹೀಗೆ ನಾನಾ ಅವತಾರ ತಾಳಿದ್ದರು. ಪಾಪ ಅವುಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯ್ದವಳು ನನ್ನ ತಂಗಿ ದಿವ್ಯಾ.

೬-೭ ದಿನ ಹೀಗೆಯೇ ಕಳೆಯುತ್ತಿದ್ದಂತೆ ಪ್ರತಿಯೊಂದು ಗೂಡಿನಲ್ಲಿ ೩ ಮೊಟ್ಟೆಗಳು ಮಿನುಗತೊಡಗಿದವು. ಬಿಳಿ ಮೊಟ್ಟೆಯ ಮೇಲೆ ಕಂದು, ಕೆಂಪು ಬಣ್ಣದ ಚುಕ್ಕೆಗಳು. ಮನೆಯ ಚಿಕ್ಕಮಕ್ಕಳನ್ನು ದಂಡಿಸಿದ್ದಾಯಿತು. ಮೊಟ್ಟೆ ಬಾಚಲು ಯತ್ನಿಸುವ ಬೆಕ್ಕು, ನಾಯಿ, ಕಾಗೆ ಹಾಗು ಗಿಡುಗಗಳ ಕಾವಲು ಕಾಯ್ದಿದ್ದಾಯಿತು. ಆದರೆ ೧೦ನೇ ದಿನ ಮೊಟ್ಟೆಯೊಡೆದು ಪುಟ್ಟ-ಪುಟ್ಟ ಬುಲ್-ಬುಲ್ ಮರಿಗಳು ಬರಬಹುದು ಎಂದು ಕಾಯ್ದಿದ್ದ ನಮಗೆಲ್ಲ ಆಘಾತ ಕಾಯ್ದಿತ್ತು.

ನಾನು ಒಂದು ಕವನದೊಂದಿಗೆ ಸಂಪದದ ಚಿಗುರು ಗೂಡನ್ನು ಸೇರಲು ಬಯಸುತ್ತೇನೆ.

ಇದು ನನ್ನ ಮೊದಲ ಪುಟ..
"ಸಂಪದ"ಕ್ಕೆ ನನ್ನ ಭಾವಗಳ ಮೊದಲ ಇಣುಕು ನೋಟ..
ಸವಿ ನೆನಪುಗಳ ಸುಮಧುರ ಕಾವ್ಯ ಸಂಪುಟ..
ನಾ ಸೇರುತಿಹೆನಿದೋ ಕನ್ನಡದ ಕವಿಗಳ ಕೂಟ..
ಇದೋ ಈ ಕವನದಲ್ಲಿದೆ ಪ್ರೆಮಿಯೊಬ್ಬನ ಭಾವುಕ ನೋಟ.

ಪ್ರೀತಿ ನೀನು ಮಧುರ ..
ಅಲ್ಲ ನೀನು ಅಮರ..ಅಮರ..
ಪ್ರೀತಿ ನೀನು ನನ್ನ ಭಾವಕೆ ಜೀವ, ನಿರಂತರ..
ನೀನೆ ಮೋಹಕ ಮತ್ತಿನ ಭ್ರಮೆಯ ಕನಸು ಸಾಗರ..
ಕನಸಿನಲ್ಲು ಸವಿಯ ಕಂಡು ,

Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?

ಇದಕ್ಕೆ ಕನ್ನಡದಲ್ಲಿ ಬೇರೆ ಒರೆ ಇದೆಯೇ ಅಥವಾ ಇಂಗ್ಲೀಶ್‌ನ್ನೇ ಇರುವ ಹಾಗೆ ಬಳಸಬೇಕೆ?