ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಾಲ್ಕೇ ಸಾಲಿನಲ್ಲಿ ಕತೆ ಬರೆಯಬಲ್ಲಿರಾ?

ಇದೊಂದು ಕಥಾ ಸ್ಪರ್ಧೆ.

ಕೇವಲ ನಾಲ್ಕೇ(ಅದಕ್ಕೂ ಕಡಿಮೆ ಇದ್ದರೆ ಪರವಾಗಿಲ್ಲ) ಸಾಲಿನಲ್ಲಿ ಕತೆ ಹೇಳಬೇಕು (ಬರೆಯಬೇಕು)

ಉದಾಹರಣೆಗೆ ೧

ಟೈಟಲ್ : ಕಾಯುವಿಕೆ

೧) ಬಾಡಿ ಹೋದ ತನ್ನ ಬಾಳು ಮತ್ತೆ ಚಿಗುರಾಗಬೇಕೆಂದು ಪ್ರೀತಿಯ ನೀರ ಉಣಿಸುವವನಿಗಾಗಿ ಕಾಯುತ್ತಿದ್ದ್ದಂತೆ ಅವನು ಬಂದು ಅವಳ ಬಾಳ ಬಳ್ಳಿಯನ್ನೆ ಚಿವುಟಿ ಹೋದ.

ಉದಾಹರಣೆ ಎರೆಡು

ಟೈಟಲ್: ಕೊನೆ ಆಸೆ

ಅಹಲ್ಯೆಯ ಸ್ವಗತ..

ಕತ್ತಲ ಬದುಕಿನ
ಸುತ್ತಲೂ ಹಾರುವ
ಬೆಳಕಿನ ಹಕ್ಕಿಗಳು
ಮಾನ ಕಳೆಯುತ್ತವೆ
ಕತ್ತಲಿನಲ್ಲಿ ಎಣ್ಣೆಯನ್ನು
ಸೆಳೆಯುತ್ತಾ ನಗುವ
ದೀಪದ ಕುಡಿಗಳು
ನನ್ನದೆ ಬಟ್ಟೆಯ ಚೂರುಗಳಿಂದ
ನನ್ನೆದೆಯನ್ನು ಸುಡುತ್ತವೆ
ಆಗೆಲ್ಲಾ ವ್ಯರ್ಥವಾಗುತ್ತಿದ್ದ
ಕಣ್ಣೀರಿನ  ಹನಿಗಳೆ  ಈಗ
ಬೆಂಕಿಯಾರಿಸಿ ಕತ್ತಲಾಗಿಸುತ್ತವೆ

ದೇಹ ಮತ್ತು ಆತ್ಮ - ಭಾಗ ೨

ನಾನು ಈ ಹಿಂದೆ, ಮನುಷ್ಯನಿಗೆ ಆತ್ಮದ ಪರಿಜ್ಞಾನ ಹುಟ್ಟಿನಿಂದಲೆ ಏಕಿಲ್ಲವೆಂದು ಕೇಳಿದ್ದೆ(http://sampada.net/forum/9238). ಅದಕ್ಕೆ, ಮಾಧವರ ಉತ್ತರ ಹೀಗಿತ್ತು :

ಜನರಿಗೆ ಬೇಡವಾದ ಬಡಾಯಿದಾಸ

ವಾಟಾಳ್‌ ನಾಗರಾಜ್‌ ಮತ್ತೊಮ್ಮೆ ಹೀನಾಯ ಸೋಲು ಕಂಡಿದ್ದಾರೆ.

ಈ ವ್ಯಕ್ತಿಯ ಬಗ್ಗೆ ಒಂದಾನೊಂದು ಸಮಯದಲ್ಲಿ ಗೌರವವಿತ್ತು. ಅವರ ಚಳುವಳಿಗಳು, ಘೋಷಣೆಗಳು ರೋಮಾಂಚನ ಹುಟ್ಟಿಸುತ್ತಿದ್ದವು. ಆಗ ನಾನಿನ್ನೂ ಹೈಸ್ಕೂಲಲ್ಲಿ ಓದುತ್ತಿದ್ದೆ. ಪತ್ರಿಕೆಯಲ್ಲಿ ತಗ್ಗು ಬಿದ್ದಿರುವ ಕೆನ್ನೆಯ, ಉಬ್ಬುಹಲ್ಲುಗಳ ವ್ಯಕ್ತಿಯ ಘೋಷಣೆಗಳನ್ನು ಓದಿ ಮೈ ನವಿರೇಳುತ್ತಿತ್ತು. ಮುಂದೆ ಕಾಲೇಜಿಗೆ ಬಂದಾಗ ಆ ಅಭಿಮಾನ ಇನ್ನಷ್ಟು ಜಾಗೃತವಾಯಿತು. ವಾಟಾಳ್‌ ನಾಗರಾಜ್‌ ಹುಟ್ಟಿದ್ದೇ ಕನ್ನಡ ಮತ್ತು ಕರ್ನಾಟಕದ ಹಿತರಕ್ಷಣೆಗೆ ಅಂತ ಮಾತಾಡಿಕೊಳ್ಳುತ್ತಿದ್ದೆವು.

ಮುಂದೆ ಆ ಭಾವನೆ ಕುಸಿಯತೊಡಗಿತು. ಬೇರೆ ಬೇರೆ ವೃತ್ತಿಗಳಲ್ಲಿ ಏಳೆಂಟು ವರ್ಷ ಸರ್ವೀಸ್‌ ಮಾಡಿ, ಕೊನೆಗೆ ಪತ್ರಿಕೋದ್ಯಮಕ್ಕೆ ಬಂದಾಗ, ವಾಟಾಳ್‌ ಅಸಲಿಯತ್ತು ಸ್ಪಷ್ಟವಾಗಿ ಕಾಣಿಸತೊಡಗಿತು. ಪತ್ರಿಕೋದ್ಯಮದಲ್ಲಿ ಎರಡು ರೀತಿಯ ದುರಂತಗಳಿರುತ್ತವೆ. ಕೆಲವೊಂದು ವಿಷಯಗಳ ಬಗ್ಗೆ ತುಂಬ ಸ್ಪಷ್ಟವಾದ ಮಾಹಿತಿ ಇರುತ್ತದೆ. ಆದರೆ, ಅದನ್ನು ಬರೆಯಲು ಅಥವಾ ಪ್ರಸಾರ ಮಾಡಲು ಆಗುವುದಿಲ್ಲ. ಏಕೆಂದರೆ, ಬೇಕಾದ ಸಾಕ್ಷ್ಯಾಧಾರ ಸಿಗುವುದಿಲ್ಲ. ಅಂತಹ ಮಾಹಿತಿಗಳು, ನಮ್ಮ ನಮ್ಮ ಖಾಸಗಿ ಮಾತುಕತೆಯಲ್ಲಿಯೇ ಉಳಿದುಬಿಡುತ್ತವೆ. ಇನ್ನೊಂದಿಷ್ಟು ವಿಷಯಗಳಿರುತ್ತವೆ. ಅದರ ಬಗ್ಗೆ ಅನಗತ್ಯವಾಗಿ ಬರೆಯುವ, ವಿಸ್ತರಿಸುವ, ವೈಭವೀಕರಿಸುವ ಮನಸ್ಸಿರುವುದಿಲ್ಲ. ಉದಾಹರಣೆಗೆ ಹೇಳುವುದಾದರೆ, ಉಡುಪಿ ಶಾಸಕ ಪದ್ಮಪ್ರಿಯ ಅವರ ಸಾವು.

ದೇಹ ತಂಪಾಗಲು ಏನು ಮಾಡಬೇಕು?

ದೇಹ ತಂಪಾಗಲು, ಪಿತ್ತ-ತಲೆನೋವು ಕಡಿಮೆಯಾಗಲು ಯಾವುದಾದರೂ ಮನೆಮದ್ದು ಅಥವಾ ಆಯುರ್ವೇದೀಯ ಪರಿಹಾರ ಇದ್ದರೆ ತಿಳಿಸಿ. ನಿಮ್ಮ ಸಲಹೆಗಳು ತುರ್ತು ಅಗತ್ಯವಿದೆ.

ಸಲ್ಮಾ

ಎಲ್ಲರು ಪ್ರತಿನಿತ್ಯ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬೆಂಗಳೂರ ಸಿಟಿ ಯಲ್ಲಿ ತಿರುಗಾಡುವುದು ಅಷ್ಟು ಸುಲಭವಲ್ಲ. ಆದರೆ ಬೆ,ಮ.ಸಾ.ಸಂಸ್ಥೆಯ ನಿವಾ೵ಹಕರು ನಾಗರಿಕರನ್ನು ದಾರಿ ತಪ್ಪಿಸುತ್ತಿರುವುದು ಸರಿಯಲ್ಲ,
ಹೊಸಕೊಟೆಯಿಂದ ಎಂ.ಜಿ. ರಸ್ತಗೆ ಬರಬೇಕಿದ್ದ ಐದು ಜನರನ್ನ ಮೆಜಸ್ಟಿಕಗೆ ಕರೆದು ಕೊಂಡು ಹೊಗಿರುವುದು ಎಷ್ಟು ಸಮಂಜಸ.