ಅಪರೂಪದ ತಾಳದಲ್ಲೊ೦ದು ಕಛೇರಿ
ಪರ್ಕಸಿವ್ ಆರ್ಟ್ಸ್ ಸೆ೦ಟರ್, ಬೆ೦ಗಳೂರು - ಇವರು ೨೭ನೇ ಸೆಪ್ಟೆ೦ಬರ್ ೨೦೦೮ರ೦ದು "ಸಾಲ೦ಕೃತ ಸಿ೦ಹನ೦ದನ" ಎ೦ಬ ಒ೦ದು ವಿಶೇಷ ಕರ್ನಾಟಕ ಶಾಸ್ತ್ರೀಯ ಸ೦ಗೀತ ಕಛೇರಿಯನ್ನು ಏರ್ಪಾಡಿಸಿದ್ದಾರೆ.
ಪರ್ಕಸಿವ್ ಆರ್ಟ್ಸ್ ಸೆ೦ಟರ್, ಬೆ೦ಗಳೂರು - ಇವರು ೨೭ನೇ ಸೆಪ್ಟೆ೦ಬರ್ ೨೦೦೮ರ೦ದು "ಸಾಲ೦ಕೃತ ಸಿ೦ಹನ೦ದನ" ಎ೦ಬ ಒ೦ದು ವಿಶೇಷ ಕರ್ನಾಟಕ ಶಾಸ್ತ್ರೀಯ ಸ೦ಗೀತ ಕಛೇರಿಯನ್ನು ಏರ್ಪಾಡಿಸಿದ್ದಾರೆ.
ಚಿಂತೆಯ ಸರಮಾಲೆ
ಅಜ್ಜಿಗೆ ಮೊಮ್ಮಗಳ ಚಿಂತೆ. ಮೊಮ್ಮಗಳಿಗೆ ಪ್ರೀಯಕರನ ಚಿಂತೆ.
ಶಿಕ್ಷಕನಿಗೆ ಕಲಿಸುವ ಚಿಂತೆ. ವಿದ್ಯಾರ್ಥಿಗೆ ಓದುವ ಚಿಂತೆ.
ಉದ್ಯೋಗಿಗೆ ಉದ್ಯೋಗದ ಚಿಂತೆ.ವ್ಯಾಪಾರಿಗೆ ವ್ಯಾಪಾರದ ಚಿಂತೆ.
ಮಂತ್ರಿಗೆ ರಾಜ್ಯದ ಚಿಂತೆ. ಪೋಲಿಸರಿಗೆ ಗಲಭೆಯ ಚಿಂತೆ
ಯಜಮಾನನಿಗೆ ಸಂಸಾರದ ಚಿಂತೆ.ಸೊಸೆಗೆ ಬೇರೆ ಸಂಸಾರ ಮಾಡುವ ಚಿಂತೆ
ಮುಂಚಿನಿಂದಲೂ ಗ್ನು/ಲಿನಕ್ಸ್ ಆಪರೇಟಿಂಗ್ ಸಿಸ್ಟಂ ತಂತ್ರಾಂಶದ ಕಡೆಗೆ ಹೆಚ್ಚು ಒಲವಿರುವ "ಗೀಕ್&"ಗಳಿಗೆ ಮಾತ್ರ ಸೀಮಿತವಾದದ್ದು ಎಂಬ ಅನಿಸಿಕೆಯಿದೆ. ಗ್ನು/ಲಿನಕ್ಸ್ ನ ಬಹುತೇಕ ಅಂಶವಾದ ಸ್ವತಂತ್ರ ತಂತ್ರಾಂಶ(free software -- free as in freedom) ಹಾಗೂ ಅದರಲ್ಲಿರುವ ಸ್ವಾತಂತ್ರ್ಯದ ಆಸ್ಥೆ ಕೂಡ ಕಂಪ್ಯೂಟರ್ ಸಾಫ್ಟ್ವೇರ್ ತಿಳಿದವರಿಗೆ ಮಾತ್ರ ಎಂಬ ಪರಿಕಲ್ಪನೆಯಿದೆ.
ಆದರೆ ಈ ಭಾನುವಾರ ಸೆಪ್ಟೆಂಬರ್ ೨೧, ೨೦೦೮ರಂದು ಮೈಸೂರು ವಿಶ್ವವಿದ್ಯಾಲಯದ ಫಿಸಿಕ್ಸ್ ಡಿಪಾರ್ಟಮೆಂಟ್ ನಲ್ಲಿ "ಗೀಕ್"ಗಳು, ಗ್ನು/ಲಿನಕ್ಸ್ ಆಸಕ್ತರು, ಬಳಸುವವರು ಎಲ್ಲರೂ ಒಟ್ಟಾಗಿ ಸ್ವತಂತ್ರ ತಂತ್ರಾಂಶ ಹಾಗೂ ಗ್ನೂ/ಲಿನಕ್ಸ್ ಬಗ್ಗೆ ಮಾಹಿತಿ ಒದಗಿಸುವ ಪ್ರಯತ್ನ ಮಾಡಲಿದ್ದಾರೆ. ಸ್ವತಂತ್ರ ತಂತ್ರಾಂಶದಲ್ಲಿರುವ ಸ್ವಾತಂತ್ರ್ಯದ ಕುರಿತು ತಿಳಿಸಲಿದ್ದಾರೆ, ಅಲ್ಲದೆ ಗ್ನು/ಲಿನಕ್ಸ್ ಕುರಿತು ಸಾಮಾನ್ಯ ಕಂಪ್ಯೂಟರ್ ಬಳಕೆದಾರರಿಗೆ ಮಾಹಿತಿ ಒದಗಿಸಲಿದ್ದಾರೆ ಅವರಲ್ಲಿರುವ ಪ್ರಶ್ನೆಗಳಿಗೆ ಉತ್ತರ ಒದಗಿಸುವ ಪ್ರಯತ್ನ ಮಾಡಲಿದ್ದಾರೆ, ಗ್ನು/ಲಿನಕ್ಸ್ ನಲ್ಲಿ ಕನ್ನಡ ಬಳಸುವುದು ಹೇಗೆ ಎಂಬುದನ್ನು ತೋರಿಸಿಕೊಡಲಿದ್ದಾರೆ.
ಈ ಚಿತ್ರ ನನಗೆ ಈ-ಮೇಲ್ ಮೂಲಕ ಬಂದದ್ದು...
ಈ ಚಿತ್ರದಲ್ಲಿರುವುದು ಇಪ್ಪತ್ತು ವರ್ಷಗಳ ಹಿಂದೆ ಉಪಯೋಗಿಸುತ್ತಿದ್ದ ೧ ಜಿಬಿ ಡಿಸ್ಕ್ ಮತ್ತು ಈಗ ಚಾಲ್ತಿಯಲ್ಲಿರುವ ೧ ಜಿಬಿ ಮೆಮೊರಿ ಕಾರ್ಡ್...
ಇದರ ಬಗ್ಗೆ ಹೆಚ್ಚು ಮಾಹಿತಿ ಇಲ್ಲದ ಕಾರಣ ಮುಂದೆ ಏನು ಬರೆಯಬೇಕು ಅಂತ ಗೊತ್ತಾಗಲಿಲ್ಲ...
ನಿಮಗೆ ಏನಾದರೂ ತಿಳಿದಿದ್ದರೆ ಪ್ರತಿಕ್ರಿಯೆ ಮೂಲಕ ಪ್ರಕಟಿಸಿ...
ಮೋಡದ ಒಳಗೆ ಹನಿಗಳ ಬಳಗ
ಒಂಟಿ ಕಾಲಲ್ಲಿ ಕಾದು ನಿಂತಿವೆ ಭೊಮಿಗೆ ಬರಲು
ನನ್ನ ಒಳಗೊಳಗೆ ಒಲವಿನ ಯೋಗ
ತುದಿಗಾಲಲ್ಲಿ ನಿಂತು ಕಾದಿದೆ ಚಿಮ್ಮುತ ಬರಲು
ಕಾವ್ಯ ಕುಸುರಿ ಗೊತ್ತಿಲ್ಲ,ಹಾಡುಗಾರ ನಾನಲ್ಲ
ನಿನ್ನೆ ಪ್ರೀತಿ ಮಾಡುವೆ ನಾನು ಇಷ್ಟೇ ಹಂಬಲ
ನಿನ್ನೆ ಪ್ರೀತಿ ಮಾಡುವೆ ನಾನು ಇಷ್ಟೇ ಹಂಬಲ
ನಿಂತಲ್ಲಿ ನಾ ನಿಲ್ಲಲಾರೆ,ಎಲ್ಲರು ಹಿಂಗತಾರೆ
ಇದು ಏ.ಕೆ. ರಾಮಾನುಜನ್ ಅವರು ಸಂಗ್ರಹಿಸಿದ್ದ ಒಂದು ಜಾನಪದ ಕಥೆ. ರಾಮ ವನವಾಸವನ್ನು ಮುಗಿಸಿಕೊಂಡು ಬಂದ. ಒಂದು ದಿನ ಆಸ್ಥಾನದಲ್ಲಿ ಕುಳಿತಿದ್ದ. ಸಭೆ ನಡೆದಿತ್ತು. ರಾಮನ ಕೈಯಲ್ಲಿದ್ದ ಮುದ್ರೆಯುಂಗರ ಜಾರಿ ನೆಲಕ್ಕೆ ಬಿದ್ದಿತು. ಉಂಗುರ ಬಿದ್ದಲ್ಲಿ ರಂಧ್ರವಾಗಿ, ಉಂಗುರ ಅದರಲ್ಲಿ ಜಾರಿ ಭೂಮಿಯೊಳಕ್ಕೆ ಹೋಗಿ ಬಿಟ್ಟಿತು.
ರಾಮ ಆ ಉಂಗುರವನ್ನು ಹುಡುಕಿಕೊಂಡು ಬರಲು ಹನುಮಂತನಿಗೆ ಹೇಳಿದ. ಹನುಮಂತ ಸೂಕ್ಷ್ಮ ರೂಪವನ್ನು ತಳೆದು ಭೂಮಿಯೊಳಕ್ಕೆ ಇಳಿದ. ಉಂಗುರ ಹುಡುಕುತ್ತಾ ಪಾತಾಳ
ಲೋಕಕ್ಕೆ ತಲುಪಿದ. ಅಲ್ಲಿನ ಜನ ಅವನ ಮೇಲೆ ಬಿದ್ದು ಕಾದಾಡಲು ತೊಡಗಿದರು.ಇತ್ತ ರಾಮನ ಸಭೆಗೆ ವಸಿಷ್ಠ, ಇಂದ್ರ ಮೊದಲಾದವರೆಲ್ಲ ಬಂದರು. 'ರಾಮ, ನಿನ್ನ ಅವತಾರದ ಅವಧಿ ಮುಗಿದಿದೆ, ಇನ್ನು ದೇವಲೋಕಕ್ಕೆ ವಾಪಸ್ಸು ಬಾ' ಎಂದು ಕರೆದರು. ರಾಮ ಹೊರಟುಬಿಟ್ಟ. ಇತ್ತ ಹನುಮಂತನನ್ನು ಪಾತಾಳದ ಅರಸನಲ್ಲಿಗೆ ಒಯ್ದರು. 'ಯಾರು ನೀನು?' ಅರಸ ಕೇಳಿದ. 'ನಾನು ಹನುಮಂತ, ರಾಮನ ಬಂಟ, ಅವನ ಉಂಗುರ ಬಿದ್ದು ಹೋಯಿತು, ಹುಡುಕಿ ಬಂದಿದ್ದೇನೆ' ಎಂದ ಹನುಮಂತ. ಪಾತಾಳದ ಅರಸ ಅಲ್ಲಿದ್ದ ಒಂದು ತಟ್ಟೆಯನ್ನು ತೋರಿಸಿ 'ಅಗೋ, ಅಲ್ಲಿರುವ ತಟ್ಟೆಯಲ್ಲಿ ಹಲವು ಉಂಗುರಗಳಿವೆ, ನಿನ್ನ ರಾಮನ ಉಂಗುರ ತೆಗೆದುಕೋ' ಎಂದ.
ಹನುಮಂತ ಹೋಗಿ ನೋಡಿದರೆ ಅಲ್ಲಿ ಸಾವಿರಾರು ರಾಮಮುದ್ರಿಕೆಗಳಿದ್ದವು. ತಬ್ಬಿಬ್ಬಾಯಿತು.
ಆಕೆ ಅವನ ಬಳಿ ತುಟಿ ಬಿಚ್ಚಿ ಮಾತನಾಡದಿದ್ದರೂ, ಕಣ್ಣಿನ ಮಾತುಗಳು ಸಾವಿರ ಪದಗಳನ್ನು ಮೀರಿಸಿದ್ದವು. ಪ್ರೀತಿಯ ದ್ಯೋತಕವಾಗಿ ಮಳ್ಳಿಗೆಯ ಬಳ್ಳಿಯನ್ನು ಆಕೆಗೆ ನೀಡಿ ಬೇಗ ಬರುವೆನೆಂದು ತಿಳಿಸಿ ಊರಿಗೆ ಮರಳಿದ. ಆಕೆ ಅದನ್ನು ಜೋಪಾನವಾಗಿ ಬೆಳೆಸಿದಳು. ಬಳ್ಳಿ ಮಾವಿನ ಮರದ ಆಸರೆಯಲ್ಲಿ ವಿಸ್ತಾರವಾಗಿ ಬೆಳೆಯಿತು.
ಇವತ್ತು ಬೆಳಿಗ್ಗೆ ಎದ್ದ ತಕ್ಷಣ ಪತ್ರಿಕೆ ಬಿಚ್ಚಿದೆ. ಮುಖಪುಟದ ಲೇಖನ ಓದಿದೆ. ಮನಸ್ಸಿಗೆ ತುಂಬ ಖೇದವಾಯಿತು. ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಜಗತ್ತಿನ ಅತೀ ಬುದ್ಧಿವಂತ ಹಾಗು ಭೂಮಿಯ ಮೇಲಿನ ಏಕೈಕ ‘ವಿಚಾರವಂತ ಪ್ರಾಣಿ’ ಚಿರತೆಯನ್ನು ಜೀವಂತವಾಗಿ ಬಂಧಿಸುವ ಬದಲು, ಬಾಲಿಶವಾಗಿ ಅಟ್ಟಾಡಿಸಿ ಕೊಂದಿದ್ದು, ಆ ಮೂಕಪ್ರಾಣಿ ತನ್ನ ಆತ್ಮ ರಕ್ಷಣೆಗಾಗಿ..ರೊಚ್ಚಿಗೆದ್ದು ಕೊನೆಗೆ ಅನಿವಾರ್ಯವಾಗಿ ಹೋರಾಟಕ್ಕಿಳಿದು ವೀರಮರಣ ಅಪ್ಪಿದ್ದು..ಏಕೋ ಮಾನಸಿಕ ಕಿರಿಕಿರಿ ಉಂಟುಮಾಡಿತು.
‘ಚಿರ ನಿದ್ರೆಗೆ ಜಾರಿದ ಚಿರತೆ’, ‘ನಗರಕ್ಕೆ ಬಂದು ನರಕಯಾತನೆ ಕಂಡ ಚಿರತೆ’, ‘ಮನುಷ್ಯ ಮೃಗನಾದ..ಚಿರತೆ ಚಿರನಿದ್ರೆಗೆ ಜಾರಿತು’ ಹೀಗೆಯೇ ತರಹೇವಾರಿ ಶೀರ್ಷಿಕೆಗಳು ನನ್ನ ತಲೆ ತಿರುಗಿಸಿದವು.
ನೋಡಿ..ಜಗತ್ ಪ್ರಸಿದ್ಧ ಶ್ರೀ ಜಯಚಾಮರಾಜೇಂದ್ರ ಮೃಗಾಲಯ ಇರುವುದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ. ಅಲ್ಲಿ ನೂರಾರು ಪ್ರಭೇಧದ ಕಾಡು ಪ್ರಾಣಿಗಳನ್ನು ಪಂಜರದಲ್ಲಿ ಇಡಲಾಗಿದೆ. ಅವುಗಳ ದೇಖರೇಖಿಗೆ ವನ್ಯ ಜೀವಿ ತಜ್ನರು, ಪಶು ವೈದ್ಯರು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಪಡೆಯೇ ಇದೆ. ಅಕಸ್ಮಾತ್ ಈ ಭಯಂಕರ ಪ್ರಾಣಿಗಳು ಪಂಜರದಿಂದ ತಪ್ಪಿಸಿಕೊಂಡರೆ? ಅಥವಾ ನೀರು, ಆಹಾರ ಕೊಡಲು ತೆರಳಿದ ಮೃಗಾಲಯದ ಸಿಬ್ಬಂದಿಗಳ ಮೇಲೆ ಹಟಾತ್ ದಾಳಿ ನಡೆಸಿದರೆ ಅರವಳಿಕೆ ಮದ್ದು ನೀಡಿ, (ಕೊಲ್ಲದೇ) ಧರಾಶಾಯಿಗೊಳಿಸಿ ಸೆರೆ ಹಿಡಿದು ಬೋನಿಗೆ ತಳ್ಳುವ ವ್ಯವಸ್ಥೆ ಇಲ್ಲವೇ? ಬೋನಿಗೆ ತಳ್ಳಿದ ಮೇಲೆ ಅವುಗಳಿಗೆ ಸಕಾಲಿಕವಾಗಿ ಚಿಕಿತ್ಸೆ ನೀಡುವ ವ್ಯವಸ್ಥೆ ಇಲ್ಲವೇ?
ನೂರೊಂದು ಮಾತೇಕೆ ಬೇಕು
ನಿನ್ನ ಕಣ್ಣ ಕಿಟಕಿಯಿಂದ ನಿನ್ನ
ಒನಪೆಲ್ಲ ತೋರುತಿರಲು.
ಕಟ್ಟಲಾದೀತೇ ಆ ಬೆಡಗು
ಬಿನ್ನಾಣವನು ಮಾತಲ್ಲಿ,
ಕಣ್ಣಲ್ಲೇ ಹರಿಯಲಿ ಬಿಡು,ಜಗವೇ
ಮೂಕತನದಿ ಸಾಗುತಿರಲು.
ಈ ವ್ಯಂಗ್ಯ ಚಿತ್ರ ನೊಡಿ ನಿಮ್ಮ ಅನಿಸಿಕೆ ಬರೆದರೆ... ನಮ್ಮಂತವರಿಗೆ ಈ ಕ್ಷೇತ್ರದಲ್ಲಿ ಬೆಳೆಯಲು ಉಪಯೋಗ ವಾಗುತ್ತದೆ..