ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗುಂಗು

ಗುಂಗು

ನಾ ನಿನ್ನನ್ನೇ
ಓಲೈಸುತ್ತೇನೆ ಸಖಿ
ನಿನ್ನೊಲವಿನ ಹಂಗಿನಿಂದಲ್ಲ
ನನ್ನಲ್ಲಿ ನೀ ಮೂಡಿಸಿದ
ಭಾವಗಳ ಗುಂಗಿನಿಂದ

ನನ್ನ ಐಟಿ ಸಹಬಾಂಧವರಿಗೊಂದು ಪತ್ರ...

ಸ್ನೇಹಿತರೆ,

ಕೆಲವು ನಿರ್ವಹಿಸಲೇಬೇಕಿದ್ದ ಕೌಟುಂಬಿಕ ಜವಾಬ್ದಾರಿ ಮತ್ತು ಅನಾರೋಗ್ಯಗಳಿಂದಾಗಿ ಮೂರು ವಾರದಿಂದ ಅಂಕಣ ಬರೆಯಲಿಲ್ಲ. ಆದರೆ ಇದೇ ಸಮಯದಲ್ಲಿ ಮನಸು ಮಾತ್ರ ತೀವ್ರವಾದ ಕ್ರಿಯಾಶೀಲತೆಗೆ ತುಡಿಯುತ್ತಿತ್ತು. ಹಿಂದೆಂದೂ ಕಾಣದ ರೀತಿಯಲ್ಲಿ ಭ್ರಷ್ಟ ಆಮಿಷಗಳನ್ನು ಒಡ್ಡಲಿರುವ ಬರಲಿರುವ ಕರ್ನಾಟಕದ ಚುನಾವಣೆ ಮತ್ತು ಈ ಬಾರಿ ಬಹುಸಂಖ್ಯೆಯಲ್ಲಿ ಆಯ್ಕೆಯಾಗಲಿರುವ ಜನಪ್ರತಿನಿಧಿಗಳ ಅರ್ಹತೆ ಮತ್ತು ಯೋಗ್ಯತೆಯ ಬಗ್ಗೆ ಆಲೋಚಿಸುತ್ತಿದ್ದೆ; ಚರ್ಚಿಸುತ್ತಿದ್ದೆ. ನಮ್ಮ ಕಾಲದ ಸವಾಲುಗಳ ಮತ್ತು ಸಮಸ್ಯೆಗಳ ಅರಿವೆಯೇ ಇಲ್ಲದ, ಸಾರ್ವಜನಿಕ ಜೀವನಕ್ಕೆ ಬೇಕಾದ ಕನಿಷ್ಠ ಅರ್ಹತೆಗಳೂ ಇಲ್ಲದ, ಕನಿಷ್ಠ ಶಿಕ್ಷಣವೂ ಇಲ್ಲದ, ಕೇವಲ ದುಡ್ಡು-ಜಾತಿ-ಮತವೆ ಗರಿಷ್ಠ ಯೋಗ್ಯತೆಯಾಗಿ ಹೊಂದಿರುವ ಜನರು ಈ ಬಾರಿ ಬಹುಸಂಖ್ಯೆಯಲ್ಲಿ ನಮ್ಮ ಪ್ರತಿನಿಧಿಗಳಾಗಲಿದ್ದಾರೆ. ಬೆಂಗಳೂರಿನಲ್ಲಂತೂ ಚುನಾವಣಾ ವೆಚ್ಚದ ಮಿತಿಯಾದ ಹದಿನೈದು ಲಕ್ಷದ ಮಿತಿಯ ನೂರಕ್ಕೂ ಹೆಚ್ಚಿನ ಪಟ್ಟು ಹಣವನ್ನು ಗಣಿಗಾರಿಕೆಯ ಮತ್ತು ರಿಯಲ್ ಎಸ್ಟೇಟಿನ ಕಪ್ಪುಹಣ ಹೊಂದಿರುವವರು ಹರಿಸಲಿದ್ದಾರೆ. ಇದು ಸೃಷ್ಟಿಸಲಿರುವ ಭವಿಷ್ಯ ಹೀನಾಯವಾದದ್ದಾಗಿರುತ್ತದೆ. ನ್ಯಾಯ-ನೀತಿ-ಮೌಲ್ಯ-ಅರ್ಹತೆಗಳ ಮೇಲೆ ನಡೆಯದ ಈ ಚುನಾವಣೆ ನಮಗೆ ಮಾತ್ರವಲ್ಲ ನಮ್ಮ ಮಕ್ಕಳಿಗೂ ನಿಕೃಷ್ಟರನ್ನು ನಾಯಕರನ್ನಾಗಿ ದಯಪಾಲಿಸಲಿದೆ.

ಇದಕ್ಕೆ ನಮ್ಮ ಉತ್ತರವೇನು?

ಬೇರೆಯವರು ಬರೆದ ಪುಸ್ತಕಗಳ ಬಗ್ಗೆಯೇ ಬರೆಯುವುದರ ಬಗ್ಗೆ ಬರೆಯುತ್ತ...

ಇದ್ದಕ್ಕಿದ್ದ ಹಾಗೆ ಕೊಂಡು ತರುತ್ತಿದ್ದ ಪುಸ್ತಕಗಳ ರಾಶಿ ಹೆಚ್ಚುತ್ತ ಹೋದುದು ಗಮನಕ್ಕೆ ಬಂದು ಗಾಭರಿಯಾಯಿತು. ೨೦೦೬ರಲ್ಲಿ ಒಮ್ಮೆ ಇಡೀ ವರ್ಷ ಓದಿದ ಪುಸ್ತಕಗಳ ಲೆಕ್ಕ ತೆಗೆದಿದ್ದೆ. ಸಾಧಾರಣವಾಗಿ ನನ್ನ ಡೈರಿಯಲ್ಲಿ ನಾನು ಓದಿದ ಒಳ್ಳೆಯ ಪುಸ್ತಕಗಳ ಬಗ್ಗೆ, ನನ್ನ ನಿರೀಕ್ಷೆಯನ್ನು ತೀರ ಸುಳ್ಳಾಗಿಸಿದ ಪುಸ್ತಕಗಳ ಬಗ್ಗೆ ನನ್ನ ಮನಸೋ ಇಚ್ಛೆ ಬರೆದಿಡುತ್ತ ಬಂದಿದ್ದೇನೆ. ಅದರ ಆಧಾರದ ಮೇಲೆ ನೋಡಿದಾಗ ಇಪ್ಪತ್ತನಾಲ್ಕಕ್ಕಿಂತ ಕಡಿಮೆ ಪುಸ್ತಕಗಳನ್ನು ಓದಿದ್ದು ಗಮನಕ್ಕೆ ಬಂದು ಇನ್ನಷ್ಟು ಗಾಭರಿಯಾಗಿತ್ತು. ೨೦೦೭ರಲ್ಲಿ ಇದನ್ನು ಶತಾಯಗತಾಯ ಮುವ್ವತ್ತಾರು, ನಲವತ್ತಕ್ಕೆ ಏರಿಸುವುದಷ್ಟೇ ಸಾಧ್ಯವಾಗಿದ್ದು ನನಗೆ. ಇದು ಇನ್ನು ಹೀಗೇ ಆದರೆ ನನ್ನ ಉಳಿದ ಆಯುಷ್ಯ ಅಂತ ಏನು ತುಂಬ ಆಶಾವಾದಿಯಾಗಿ ನಾನೂ ಬಹುಮಂದಿಯಷ್ಟು ಕಾಲ ಬದುಕೇ ಬದುಕುತ್ತೇನೆಂದುಕೊಳ್ಳುವುದಿದೆ, ಹಾಗೆ ಯೋಚಿಸಿದರೂ ಹೆಚ್ಚೇನೂ ಓದುವುದು ಸಾಧ್ಯವಾಗಲಿಕ್ಕಿಲ್ಲ ಎನಿಸಿತು. ಇಲ್ಲಿ ವಾರಕ್ಕೊಂದು ಪುಸ್ತಕದ ಬಗ್ಗೆ ಬರೆಯುವ ನಿಯಮಕ್ಕೆ ಬದ್ಧನಾಗಿ ಬರೆಯುವುದಾದರೆ ಅದರ ಆಕರ್ಷಣೆಯಿಂದಲಾದರೂ ನನ್ನ ಓದು ಸುಧಾರಿಸಬಹುದು ಎನ್ನುವ ಸ್ವಾರ್ಥದಿಂದ ಅದನ್ನು ಮಾಡಲು ಹೊರಟೆ.

ಇದು ಸ್ವಲ್ಪ ಫಲಿಸಿದಂತಿದೆ. ಹೀಗೆ ಮಾಡಿದರೆ ನೀನು ಕತೆ ಕಾದಂಬರಿ ಬರೆಯುವುದು ಯಾವಾಗ ಮಹರಾಯ, ನಿನ್ನ ಕ್ರಿಯೇಟಿವ್ ರೈಟಿಂಗ್ ಹಾಳಗುವುದಿಲ್ಲವ ಎಂದ ಸ್ನೇಹಿತರಿದ್ದಾರೆ. ನನಗೆ ಅದೆಲ್ಲ ಮುಖ್ಯವೆನಿಸಿಲ್ಲ. ಇಲ್ಲಿ ನನ್ನ ಬದುಕು ನನಗೆ ಮುಖ್ಯ, ಅದಕ್ಕೆ ನನ್ನ ಬರಹಕ್ಕಿಂತ ಓದು ಹೆಚ್ಚು ಪ್ರತಿಫಲ ನೀಡುತ್ತ ಬಂದಿರುವ ಹವ್ಯಾಸವಾಗಿ ಕಂಡಿದೆ. ಕೆಲವೊಮ್ಮೆ ವಾರಕ್ಕೆ ಮೂರು ಪುಟ್ಟ ಪುಟ್ಟ ಪುಸ್ತಕಗಳನ್ನು ಓದಿದ್ದೂ ಇದೆ. ಓದಿದ ಪುಸ್ತಕಗಳ ಬಗ್ಗೆ ಬರೆಯುತ್ತ ಕೂರುವ ವೇಳೆಯಲ್ಲೇ ಇನ್ನೊಂದು ಪುಸ್ತಕ ಸ್ವಲ್ಪ ಓದುವುದು ಒಳ್ಳೆಯದಲ್ಲವ ಅನಿಸಿದ್ದೂ ಇದೆ. ಓದಿದ ಪುಸ್ತಕದ ಬಗ್ಗೆ ಬರೆಯದಿರುವುದೇ ಒಳ್ಳೆಯದು ಅನಿಸಿದ್ದೂ ಇದೆ. ನಾನು ಓದಿದೆ ಎನ್ನುವ ಒಂದೇ ಕಾರಣಕ್ಕೆ ಅದು ಎಲ್ಲರೂ ಓದಬೇಕಾದ ಪುಸ್ತಕ ಆಗಬೇಕಿಲ್ಲವಲ್ಲ.

ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು

Amar Chitra Katha - Abhimanyu
ಚಿತ್ರ ಕೃಪೆ: AmarChitraKatha.com

Ajatashatru

ತನ್ನ ಹೆಸರಿಗೆ ತಕ್ಕಂತೆ ಅಮರ ಚಿತ್ರ ಕಥೆ ಇವತ್ತಿಗೂ ಭಾರತದ ಸಂಸ್ಕೃತಿಯ ಮಜಲುಗಳನ್ನು ಹೊತ್ತು ಎಂದಿನ ಕಳೆಯನ್ನು ಉಳಿಸಿಕೊಂಡಿದೆ. ಚಿಕ್ಕವನಿದ್ದಾಗ ನನಗೆ ಈ ಪುಸ್ತಕಗಳನ್ನು ಕೊಳ್ಳಲಾಗುತ್ತಿರಲಿಲ್ಲ. ಅಮ್ಮನ ಕೈಗೆ ಎಟುಕದ ಬೆಲೆ ಇರುತ್ತಿತ್ತು ಈ ಪುಸ್ತಕಗಳಿಗೆ (ಅಪ್ಪ ನನಗೆ ಎಂದಿಗೂ ಪುಸ್ತಕ ಕೊಡಿಸುವ ಗೋಜಿಗೆ ಹೋಗುತ್ತಿರಲಿಲ್ಲ). ಹೀಗಾಗಿ ಇವುಗಳು ಎಟುಕುತ್ತಿದ್ದುದು ಲೈಬ್ರೆರೀಲೆ. ಮಳೆ ಬರುತ್ತಿದ್ದರೂ ದೂರದ ಲೈಬ್ರೆರೀಗೆ ಛತ್ರಿ ಹಿಡಿದು ಅರ್ಧ ನೆಂದು ತೊಪ್ಪೆಯಾಗಿ ಹೋಗುತ್ತಿದ್ದೆ - ಅಷ್ಟೊಂದು ಹುಚ್ಚಿರುತ್ತಿತ್ತು. ಆದರೆ ನನ್ನ ಅಣ್ಣ ಅಕ್ಕನ ಮಕ್ಕಳಿಗೆ ಹೀಗಿಲ್ಲ - ನಾವೆಲ್ಲರೂ ಯಾವುದಾದರೊಂದು ಪುಸ್ತಕ ಕಂಡ ಕೂಡಲೆ ಕೊಂಡು ಮನೆಗೆ ತರುತ್ತಿರುತ್ತೇವೆ. ತಮಾಷೆಯೆಂದರೆ ನನ್ನ ಅಣ್ಣನ ಮಗನಿಗೆ ಈ ಪುಸ್ತಕ ಓದೋದಕ್ಕಿಂತ ನಿಕಲೋಡಿಯನ್ ಚ್ಯಾನಲ್ಲಿನಲ್ಲಿ ಬರೋ "ಹತ್ತೋರಿ", ಪೋಗೋ ಚ್ಯಾನಲ್ಲಿನಲ್ಲಿನ "ನಾಡ್ಡಿ", "ಮಿ. ಬೀನ್" ಮುಂತಾದವೇ ಬಲು ಇಷ್ಟ!
ಟಾಟಾ ಸ್ಕೈ ಹೊತ್ತು ತರುವ ಡಿಜಿಟಲ್ ಸಿಗ್ನಲ್ಲು ಕ್ಲಾರಿಟಿ ಇರುವ ಚೆಂದದ ಚಿತ್ರಗಳನ್ನು ಮೂಡಿಸಿ ಪುಸ್ತಕ ಓದು ಇನ್ನಷ್ಟು ದೂರ ಮಾಡಿಬಿಟ್ಟಿದೆ.

Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು?

Rainbow ಗೆ ಕನ್ನಡದ ಸರಿಯಾದ ಪದ ಯಾವುದು?

ಕೆಲವರು ಮಳೆ ಬಿಲ್ಲು ಅಂತ ಇಂಗ್ಲೀಷಿನವರ ತರ ಆಡ್ತಾರೆ ಬಿಡಿ!

"ಕಾಮನ ಬಿಲ್ಲು" ಸರೀನೋ ? "ಕಮಾನು ಬಿಲ್ಲು" ಸರೀನೋ?

ಶ್ರೀ

ಸಾಮಾನ್ಯವಾಗಿ ಹೆಸರಿನ ಹಿಂದೆ ಶ್ರೀ ಎಂದು ಸೇರಿಸುವುದು ರೂಢಿ. ಇದೇ ತಮಿಳಿನಲ್ಲಿ ’ತಿರು’ ಆಗಿದೆ ಅಲ್ಲವೇ? ಏನು ಇದರರ್ಥ?