ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬರಾಕ್ ಒಬಾಮ ಮತ್ತು ಜಾನ್ ಮೆಕೈನ್: ಯಾರು ಸರಿ?

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 12, 2008 ರ ಸಂಚಿಕೆಯಲ್ಲಿನ ಲೇಖನ.)

ಕಾಲ್ಪನಿಕ ಕತೆಗಳನ್ನು ಬರೆಯುವ ಕತೆಗಾರರನ್ನೂ ಮೀರಿಸುವಂತಹ ಅದ್ಭುತವಾದ ಐತಿಹಾಸಿಕ ಸಂದರ್ಭದಲ್ಲಿ ಇವತ್ತು ಅಮೆರಿಕ ಬಂದು ನಿಂತುಬಿಟ್ಟಿದೆ. ಈ ದೇಶದ ಕೋಟ್ಯಾಂತರ ಜನರು ಮತ್ತು ಕೆಲವು ಅರ್ಹ ವ್ಯಕ್ತಿಗಳು ಸೇರಿಕೊಂಡು ಈ ಇತಿಹಾಸ ನಿರ್ಮಿಸ ಹೊರಟಿದ್ದಾರೆ. ಈಗಾಗಲೆ ಒಂದು ಹಂತದ ಇತಿಹಾಸ ನಿರ್ಮಾಣವಾಗಿ ಹೋಗಿದೆ. ಕೇವಲ ನಲವತ್ತು-ಐವತ್ತು ವರ್ಷಗಳ ಹಿಂದೆ ಅಮೆರಿಕದ ಕೆಲವು ದಕ್ಷಿಣ ರಾಜ್ಯಗಳ ರೆಸ್ಟಾರೆಂಟ್‌ಗಳಿಗೆ, ಟಾಯ್ಲೆಟ್‌ಗಳಿಗೆ, ಬಸ್ಸಿಗೆ ಕಾಯುವ ಕೋಣೆಗಳಿಗೆ, ಮತ್ತೂ ಇನ್ನೂ ಅನೇಕ ಸಾರ್ವಜನಿಕ ಸ್ಥಳಗಳಿಗೆ ಯಾವೊಬ್ಬ ಕಪ್ಪು ಮನುಷ್ಯನಿಗೂ ಪ್ರವೇಶವಿರಲಿಲ್ಲ. ಬಿಳಿಯರಿಗೇ ಒಂದು ಜಾಗ, ಕರಿಯರಿಗೇ ಒಂದು ಜಾಗ ಎಂದು ಆಗ ಬೇರ್ಪಡಿಸಲಾಗಿತ್ತು. ಶಾಲಾಕಾಲೇಜುಗಳೂ ಅಷ್ಟೆ. ಬಸ್ಸಿನಲ್ಲಿ ಯಾರಾದರೂ ಬಿಳಿಯ ಸ್ತ್ರೀ/ಪುರುಷ ಬಂದರೆ ಅವರಿಗೆ ಕರಿಯರು ಎದ್ದು ಸೀಟು ಬಿಡಬೇಕಿತ್ತು. ಬಿಳಿಯ ಕ್ರಿಶ್ಚಿಯನ್ನರ ಮತಾಂಧ ಗುಂಪಾದ ಕೂ ಕ್ಲಕ್ಸ್ ಕ್ಲಾನ್ (KKK) ಇನ್ನೂ ಕೆಲವೆಡೆ ಸಕ್ರಿಯವಾಗಿತ್ತು. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ನೇತೃತ್ವದಲ್ಲಿ ನಾಗರಿಕ ಹಕ್ಕುಗಳ ಹೋರಾಟ ನಡೆಯುತ್ತಿದ್ದಾಗ ಕೆಕೆಕೆ ಮತಾಂಧರು ಕೆಲವು ಕಡೆ ಕರಿಯರನ್ನು ಮತ್ತು ಚಳವಳಿಕಾರರನ್ನು ಮರಕ್ಕೆ ನೇತು ಹಾಕಿ ನೇಣು ಬಿಗಿಯುತ್ತಿದ್ದರು. ಕರಿಯರನ್ನು ಬೆದರಿಸಲು ಅವರುಗಳ ಮನೆಯ ಮುಂದೆ ಶಿಲುಬೆ ಸುಡುತ್ತಿದ್ದರು. ಆಗ ಅಮೆರಿಕದ ಜನಸಂಖ್ಯೆಯಲ್ಲಿ ಶೇ. 14 ರಷ್ಟಿದ್ದ ಕಪ್ಪು ಜನಾಂಗದ ಬಹುಪಾಲು ಜನರು ಮತದಾರರ ಪಟ್ಟಿಯಲ್ಲಿಯೇ ಇರಲಿಲ್ಲ.

ಆದರೆ ಕಳೆದ ಐವತ್ತು ವರ್ಷಗಳಲ್ಲಿ ಆಗಿರುವ ಬದಲಾವಣೆ ನೋಡಿ. ತಮ್ಮ ಹಿಂದಿನ ತಲೆಮಾರಿನ ವರ್ಣಭೇದ, ಅಸಮಾನತೆ, ಜನಾಂಗೀಯದ್ವೇಷ ಮುಂತಾದ ಕೀಳು ಸಂಗತಿಗಳನ್ನೆಲ್ಲ ದಾಟಿಕೊಂಡು ಒಬ್ಬ ಕಪ್ಪು ಮನುಷ್ಯನನ್ನು ಅಮೆರಿಕದ ಅಧ್ಯಕ್ಷನನ್ನಾಗಿ

ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!

ಜಾಸ್ತಿ ಬರೆಯಲು ಸಮಯವಿಲ್ಲ. ಆದರೂ ಮೊನ್ನೆ ನಡೆದ ತಮಾಷೆ ಪ್ರಸಂಗ ಹಂಚಿಕೊಳ್ಳಬೇಕೆನ್ನಿಸಿತು. ಅಮೆರಿಕೆಗೆ ಮಗಳ ಬಾಣಂತನಕ್ಕೆ ಬಂದಿರುವ ಹಿರಿಯ ಮಹಿಳೆಯೊಬ್ಬರು ಸಿಕ್ಕಿದ್ದರು. ಅಪ್ಪಟ ಕನ್ನಡಿಗರೆ. ಆದ್ರೆ, ನಾನು ಕನ್ನಡದಲ್ಲಿ ಕೇಳಿದ್ದಕ್ಕೆಲ್ಲ ಇಂಗ್ಲೀಷಿನಲ್ಲಿ ಉತ್ತರಿಸುತ್ತಿದ್ದರು. ಅದೂ ಹರಕು ಮುರಕು ಇಂಗ್ಲೀಷು :-) ಯಾಕೆ ಹೀಗೇಂತ ಯೋಚಿಸಿದೆ.

ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!

 

ಲ೦ಡನ್ನಿನಲ್ಲಿದ್ದಷ್ಟು ಕಾಲ (ಎ೦ಟು ತಿ೦ಗಳು ಅಥವ ಇನ್ನೂರ ನಲವತ್ತು ದಿನ ಅಥವ ಒ೦ದು ವರ್ಷ ಮೈನಸ್ ನಾಲ್ಕು ತಿ೦ಗಳು) ನನಗೆ ನಾಪಿತನಾಗಿದ್ದ ಟರ್ನರನ ಕುಲಕಸುಬಿನದ್ದೇ ಚಿ೦ತೆ. ಅ೦ದರೆ ಟರ್ನರ್ ನನಗೆ ನಾಪಿತನಗಿದ್ದನೆ೦ದಲ್ಲ! ನಾಪಿತನಾಗಿದ್ದ ಟರ್ನರನ ತ೦ದೆಯ ಬಗ್ಗೆ ನನ್ನ ಸ್ಮೃತಿ ಚಿರ೦ತನವಾಗಿತ್ತು. ಜಾನ್ ಬರ್ಜರ್ ಇವನ ಬಗ್ಗೆ, ಇವನ ಕುಲಕಸುಬಿನ ಬಗ್ಗೆ ಅದ್ಬುತವಾಗಿ ಬರೆದಿದ್ದಾನೆ—ಒ೦ದೆಡೆಯಲ್ಲ, ಹಲವೆಡೆ. ಏಕೆ೦ದರೆ ನನ್ನ ತಲೆಕೂದಲು ಆ ಚಳಿಯಲ್ಲಿ ಬೆಳೆದದ್ದೇ ಬೆಳೆದದ್ದು. ಯಾರಾದರೂ ಚಳಿಗಾಲದಲ್ಲಿ ತಲೆಗೂದಲು ಬೆಳೆವುದು ನಿಧಾನವಲ್ಲವೆ? ಎ೦ದು ಪ್ರಶ್ನಿಸಬಹುದು. ಹಾಗೆನ್ನುವವರ ತಲೆಯಲ್ಲಿ ತರ್ಕ, ವೈಜ್ನಾನಿಕ ಜ್ನಾನವೆ೦ಬೆರೆಡು ರೀತಿಗಳನ್ನು ಬಿಟ್ಟು ಬೇರೆ ರೀತಿಯ ರೂಪಕಗಳಲ್ಲಿ ವಿಶ್ವವನ್ನು ಗ್ರಹಿಸುವ ಕ್ರಮ ತಿಳಿಯದು ಎ೦ದೇ ನನ್ನ ಭಾವನೆ.

ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?

ಕೊಲಂಬಿಯ ಪೋಸ್ಟ್ ಆಫೀಸ್ ಬಗ್ಗೆ ಬರೆದ ಲೇಖನಕ್ಕೆ ಪೂರಕವಾಗಿ ಒಂದೆರಡುಮಾತುಗಳನ್ನು ಹೇಳಬಯಸುತ್ತೇನೆ. ನಮ್ಮ ಮುಂಬೈ ನ ಘಾಟ್ಕೋಪರ್ ಅಂಚೆಕಚೇರಿಯ ಚಿತ್ರವನ್ನು ನಾನು ಹಿಂದೆ ಪರಿಚಯಿಸಿದ್ದೆ. ಅದಕ್ಕೂ ಅಮೆರಿಕದ ಕೆಲಸದ ಪದ್ಧತಿಗಳಿಗೂ ಅಂತರ. ಬಡತನ, ಮುಖ್ಯವಲ್ಲ. ಬಡವನನ್ನೂ ಶುಚಿಯಾದ ಬಟ್ಟೆಧರಿಸಲು ಯಾರು ತಡೆಹಿಡಿದಿದ್ದಾರೆ ? ನಾವೆಲ್ಲಾ ಕಾಣುತ್ತಿರುವ ಪರಿಸ್ಥಿತಿ ಸರ್ವವಿತ.

ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..

I cried when I did not have shoes.
I stopped my crying when I saw a man having one leg.
Life is full of mysteries. Sometimes we understand;
and most of the times we do not!

ಎಂಬ ಕಿರು ಸಂದೇಶ ಹೊತ್ತ ಎಸ್.ಎಂ.ಎಸ್ ಬೆಳಿಗ್ಗೆ ನನ್ನ ಮೊಬೈಲ್ ಗೆ ತೂರಿಬಂತು. ಭಾರವಾಗಿದ್ದ ಮನಸ್ಸು ನಿರಾಳವಾಗಿ ಜೀವನ್ಮುಖಿಯಾಗಿತ್ತು. ಅಷ್ಟರಲ್ಲಿಯೇ ನನ್ನ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಬಂತು. ಸಹಿಸಲು ಅಸಾಧ್ಯವಾದ ವೇದನೆಯಾಯಿತು. ಇನ್ನು ಹೆತ್ತೊಡಲಿನ ಸಂಕಟ, ಸ್ನೇಹಿತರ, ಸಂಬಂಧಿಕರ ನೋವು ಆ ದೇವರಿಗೇ ಪ್ರೀತಿ. ಬೇಕು ಎಂಬ ಬೆಂಕಿ, ಬೇಡ ಎಂಬ ಗಾಳಿ ಕೂಡಿಕೊಂಡು ದೊಡ್ಡದೊಂದು ಜ್ವಾಲೆ ಭುಗಿಲೆದ್ದು ಎಲ್ಲರ ಸದುದ್ದೇಶಗಳನ್ನು ಭಸ್ಮ ಮಾಡುತ್ತದೆ ಅನ್ನಿಸಿತು.

IT - ಸಿಂಪ್ಟಮ್ಸ

ನೀವು ಈ IT ಇಂಡಸ್ಟ್ರಿ ನಲ್ಲಿ ತುಂಬ ದಿನಗಳಿಂದ ಇದ್ರೆ ... ಈ ಕೆಳಗಿನವು ನಿಮ್ಮ ಸಿಂಪ್ಟಮ್ಸ ಆಗಿರ್ತವೆ.

1. ನಿಮ್ಮ ಮನರಂಜನೆಯ ಮುಖ್ಯ ಮೂಲ , ಮುಖ ಪರಿಚಯವೂ ಮರೆತು ಹೋಗಿರುವಅಂತ?! ವ್ಯಕ್ತಿಗಳ forwards.. (ಮತ್ತು ಇಲ್ಲಿನವರಿಗೆ ಸಂಪದದ ಚರ್ಚೆ/ ಬ್ಲಾಗುಗಳು :) )











2. ನೀವು ನೀರಿಗಿಂತ ಹೆಚ್ಚಾಗಿ ಕಾಫಿ ಅತ್ವ ಟೀ ಕುಡಿಯುತ್ತೀರಿ.











ಬಿಟ್ಟು ಹೋದವಳಿಗಾಗಿ

ನಾನು ಪ್ರೀತಿಸಿದ ಹುಡುಗಿ ನನ್ನ ಪ್ರೀತಿಸಲಿಲ್ಲ
ನನ್ನ ಪ್ರೀತಿಸಿದ ಹುಡುಗಿಯ ನಾ ಪ್ರೀತಿಸಲಿಲ್ಲ
ಜೀವನದುದ್ದಕ್ಕೂ ಒಂಟಿತನವೇ ಕಾಡಿತಲ್ಲ
ಸುಖ ದುಃಖಗಳೆರಡು ನನ್ನಲ್ಲೇ ಹಂಚಿ ಹೋದವಲ್ಲ

ಅವಳಿಗಾಗಿ ನಾ ಮಾಡಿದೆ ಎಲ್ಲ ತ್ಯಾಗ
ಬಯಸುವೆ ಅವಲಿಗಿರಲೆಂದು ಸದಾ ಭೋಗ
ಚಡಪಡಿಸುತ್ತಿರುವ ಮನಕೆ ಬೇಕು ಒಲವಿನ ಸಹಯೋಗ

ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..

ಕೆಲವೊಮ್ಮೆ ಶಾಲಾಮಕ್ಕಳನ್ನು ನೋಡುವಾಗ ಹಾಗನ್ನಿಸುತ್ತದೆ. ಸುಡು ಬಿಸಿಲಿರುತ್ತದೆ. ಆಹೊತ್ತಿನಲ್ಲೂ ನೀಲಿಬಣ್ಣದ ಕೋಟು, ಕಪ್ಪು ಬೂಟಿನೊಳಕ್ಕೆ ತಮ್ಮನ್ನು ತುರುಕಿಕೊಂಡು, ೭-೮ ಕೆ.ಜಿ.

ನೀರವತೆ!

ಇದೇನು ಕಕ್ಕುಲತೆಯೋ ಕಾಣೆ!
ಇರೆಂದೊಡನಿರದೆ...
ಬಿಡದೆ ತಿರು ತಿರುಗಿ ಬಂದು
ಮನಸಿನುಲ್ಲಾಸಗಳ
ಹುಚ್ಚೆದ್ದು ಕುಣಿಸಿ
ರಮಿಸಿ ವಿರಮಿಸಿ
ಶಾಂತವೆನುತಿರುವಾಗ
ಮತ್ತದೇ ನೀರವತೆ!

ಮನದ ದುಗುಡವನೆಲ್ಲ
ಕಿತ್ತೊಗೆದು
ಅಣಿಯಾದಂತೆಲ್ಲ...
ತಿರುತಿರುಗಿ ಕಾಡುವಾ
ನೀರವತೆ!

-ಸವಿತ

’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?

ನಾನು ಹಾಯ್ ಬೆ೦ಗಳೂರಿನ ಅಭಿಮಾನಿ.ಆದರೆ ಇತ್ತೀಚೆಗೆ ಯಾಕೋ ಪತ್ರಿಕೆ ಕೀಳು ಮಟ್ಟಕ್ಕೆ ತಲುಪಿದೆಯೆನಿಸುತ್ತಿದೆಯೆನಿಸುತ್ತದೆ.ಟಾಬ್ಲಾಯ್ಡ್ ಪತ್ರಿಕೆಗಳಲ್ಲಿ ಸ್ವಲ್ಪ ಗುಣಮಟ್ಟದ ಪತ್ರಿಕೆಗಳಲ್ಲಿ ಹಾಯ್ ಬೆ೦ಗಳೂರು ಒ೦ದಾಗಿತ್ತು.ಆದರೆ ಇತ್ತೀಚಿನ ಲೇಖನಗಳನ್ನು ,ಲೇಖನದ ಶೈಲಿಯನ್ನು ಗಮನಿಸಿದಾಗ ಯಾಕೋ ಪತ್ರಿಕೆ ಅಡ್ಡದಾರಿ ಹಿಡಿದಿದೆ ಎನಿಸುತ್ತಿದೆ.ಸ೦ಪದದಲ್ಲಿ ಯ