ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ
ಸುದ್ದಿಸೂಳೆಯ ಬೆನ್ನತ್ತಿ ಹೊರಟಿರುವ ಮಾಧ್ಯಮಗಳು!(ಭಾಗ 2)
ಮಲ್ಲವ್ವ ತಾಯಿಯ ಒಲವೇ ಶ್ರೀರಕ್ಷೆ ಹುಣಸವಾಡಿಯ ಬಡ ತಾಯಂದಿರಿಗೆ..
"ಉಶ್ಯಪ..ಅಂತೂ ಕೂಸು ಬದುಕಿಕೊಂಡ್ತ್ರಿ. ಹುಣ್ಣಿಮಿ ಚಂದ್ರನಾಂಗ ಮುಖಾಐತ್ರಿ ಮಹಾಲಕ್ಷ್ಮಿದು. ಪ್ರಯತ್ನ ನಂದ್ರಿ. ಜೀವದಾನ ಆ ಭಗವಂತಗ ಬಿಟ್ಟಿದ್ದು. ತಾಯಿ-ಮಗು ಇಬ್ಳಾರೂ ಅರಾಮ ಅದಾರ್ರಿ. ಅಯ್ಯೋ! ನಂದ..ಹೇಳಾಕತೇನಿ! ನಿಮ್ಮನ ಯಾಕ? ಏನು? ಅಂತ ಆಸರಿಕೆ, ಬ್ಯಾಸರಿಕೆ ಕೇಲ್ಲೇ ಇಲ್ಲಾ..ತಪ್ಪಾತ್ರೀಪಾ.."
ಹೀಗೆ ಪಟಪಟನೇ ಖುಷಿಯಲ್ಲಿ ಮಾತನಾಡುತ್ತ, ತನ್ನ ಮುಗ್ಧತೆ ಪ್ರದರ್ಶಿಸಿದರು ಸೂಲಗಿತ್ತಿ ಶ್ರೀಮತಿ ಮಲ್ಲವ್ವ ಪೂಜಾರಿ. ಇವರ ಮಾತಿನ ಧಾವಂತ, ಮಗು-ತಾಯಿ ಇಬ್ಬರನ್ನು ಬದುಕಿಸಿದ ಪ್ರಸನ್ನತೆ ಜೊತೆಗೆ ಆ ಬಡವಿಯ ಹೃದಯ ಶ್ರೀಮಂತಿಕೆ ನಮ್ಮ ಹೃದಯ ತಟ್ಟಿತ್ತು.
ವಿಷ್ಣು ನಾಯಕ್ ಹೇಳುವಂತೆ- "ಧೂಳ್ರೊಟ್ಟಿ ನೀ ತಿಂದು ಬಾಳ್ರೊಟ್ಟಿ ನಮಗಿತ್ತು, ಮುಕ್ಕಾಲು ಶತಮಾನ ಬಾಳ್ದ ಚುಕ್ಕಿ" ಸಾಲು ನೆನಪಾಗಿತ್ತು ಮಲ್ಲವ್ವನ ನೋಡಿ.
ಹಳಿಯಾಳ ತಾಲೂಕಿನ ಹುಣಸವಾಡಿ ಗ್ರಾಮದ ಪ್ಲಾಟ್ ನಲ್ಲಿ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮಲ್ಲವ್ವ ಬಾಳುತ್ತಿದ್ದಾರೆ. ಆರ್ಥಿಕವಾಗಿ ಅಷ್ಟೇನೂ ಸ್ಥಿತಿವಂತಳಲ್ಲ. ಹೊಲ- ಗದ್ದೆಗಳ ಕೂಲಿಯಿಂದ ಬಂದ ಹಣದಲ್ಲಿ ಮನೆ ನಡೆಯಬೇಕು. ಮಕ್ಕಳ ಶಾಲಾ ಕಾಲೇಜು ಫೀ ಭರ್ತಿಯಾಗಬೇಕು. ಹಳಿಯಾಳ ತಾಲ್ಲೂಕು ನಾಟಿ ವೈದ್ಯ ಪರಿಷತ್ ಗೆ ಮೆಂಬರಶಿಪ್ ಪಡೆಯಬೇಕು. ಏನೆಲ್ಲ ‘ಇಲ್ಲ’, ಎಷ್ಟೆಲ್ಲ ‘ಇದೆ’. ಈ ಎಲ್ಲ ‘ಇಲ್ಲ’..‘ಇವೆ’ಗಳ ಮಧ್ಯೆ ಸೂಲಗಿತ್ತಿ ಮಲ್ಲವ್ವ ಸುತ್ತಲಿನ ಹತ್ತೆಂಟು ಹಳ್ಳಿಗಳಿಗೆ ಮಹಾತಾಯಿ.
ಕನ್ನಡಕ್ಕೆ ಶಾಸ್ತ್ರೀಯ ಸ್ತಾನ ನೀಡುವುದರಲ್ಲಿ ವಿಳಂಬ - ಕ.ರ.ವೇ. ಪ್ರತಿಭಟನೆ
ತಮಿಳಿಗೆ ಇರುವ ಎಲ್ಲಾ ಅರ್ಹತೆಗಳೂ ಕನ್ನಡಕ್ಕೆ ಇದ್ದರೂ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವುದರಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಕ್ರಮವನ್ನು ವಿರೋಧಿಸಿ ರಾಜ್ಯಾದ್ಯಂತ ಕ.ರ.ವೇ ಪ್ರತಿಭಟನೆ ನಡೆಸಿತು. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೆಳಗಿನ ಕೊಂಡಿಯಲ್ಲಿ ನೋಡಿ
http://www.karnatakarakshanavedike.org/modes/view/76/classical-status-for-kannada.html
http://karave.blogspot.com/2008/08/blog-post_09.html
ಮಗುವನ್ನು ಅಡಾಪ್ಟ್ ಮಾಡಿಕೊಂಡರೆ ಸೋಮಾರಿತನವೇ ?
ಒಂದು ಚರ್ಚೆಯಲ್ಲಿ ನಾನು ಮಗುವೊಂದನ್ನು ದತ್ತು ತೆಗೆದುಕೊಂಡು ಅದನ್ನು ಬೆಳೆಸುವ ವಿಚಾರ ಬಂತು.
ಅದು ನನ್ನ ಜೀವನದ ಆಕಾಂಕ್ಷೆಯೂ ಹೌದು. ನನ್ನ ಅಕ್ಕನೂ ಇದೇ ಮಾತನ್ನು ಹೇಳಿದಳು
ಅದಕ್ಕೆ ನನ್ನವರು ಹಾಗು ನನ್ನ ಭಾವ ಹೇಳಿದ್ದೇನೆಂದರೆ
- Read more about ಮಗುವನ್ನು ಅಡಾಪ್ಟ್ ಮಾಡಿಕೊಂಡರೆ ಸೋಮಾರಿತನವೇ ?
- 6 comments
- Log in or register to post comments
ಬೆತ್ತಲೆ ಚಿತ್ರ ನೋಡಲು ’ಕನ್ನಡ ಪ್ರಭ’ದ ಶಿಫಾರಸ್ಸು !
ಹಿಂದಿನಟಿಯೊಬ್ಬಳು ಬೆತ್ತಲೆ ಫೋಸು ಕೊಟ್ಟಿದ್ದಾಳೆ. ಅದು ಆ ಇಂಗ್ಲೀಷ್ ಪತ್ರಿಕೆಯಲ್ಲಿದೆ ನೋಡಿ ಎಂದು ನಮ್ಮ ಕನ್ನಡಪ್ರಭ ಪತ್ರಿಕೆ ಇವತ್ತು[http://www.kannadaprabha.com/Cinema/cineItems.asp?ID=KPJ20080810104625&Title=Manaranjane&lTitle=%C8%DA%DF%AB%DA%C1%DAMd%AB%E6&Topic=0&Dist=0|ಶಿಫಾರಸ್ಸು ಮಾಡಿದೆ.] ಜೊತೆಗೆ ಸ್ಯಾಂಪಲ್ಲಿಗೆ ಎರಡು ಚಿತ್ರಗಳನ್ನು ಬೇರೆ ಕೊಟ್ಟಿದೆ. ! ಧನ್ಯರಾದರು ಕನ್ನಡಿಗರು. ಮಾಧ್ಯಮಗಳಿಂದ ಉದ್ಧಾರಾದರು ದೇಶದ ಜನರು.
ಅಭಿನವ್ ಬಿಂದ್ರಾ : ಭಾರತಕ್ಕೆ ಒಲಂಪಿಕ್ಸ್ ನ ಮೊದಲ ಚಿನ್ನ
(ಚಿತ್ರ : beijing2008.cn)
ಒಲಂಪಿಕ್ಸ್ ನಲ್ಲಿ ಭಾರತದ ಅಭಿನವ್ ಬಿಂದ್ರಾ ೧೦ಮೀಟರ್ ಏರ್ ರೈಪ್ಲಲ್ ನಲ್ಲಿ ಮೊತ್ತ ಮೊದಲ ವೈಯುಕ್ತಿಕ ಚಿನ್ನವನ್ನ ಪಡೆಯುವುದರ ಮೂಲಕ ಹೊಸ ಇತಿಹಾಸವನ್ನ ದಾಖಲಿಸಿದ್ದಾರೆ. ಈ ಗೆಲುವು ಇತರೆ ಭಾರತೀಯ ಆಟಗಾರರನ್ನು ಹುರಿದುಂಭಿಸಲಿ.
ಅವಭಿನವ್ ಬಿಂದ್ರಾ ತಮ್ಮೆಲ್ಲಾ ವೈಯುಕ್ತಿಕ ದಾಖಲೆಗಳನ್ನ ಹಿಂದಿಕ್ಕಿ ಈ ಚಿನ್ನ ವನ್ನ ಗೆದ್ದಿದ್ದಾರೆ.
Rank | Event | Year | Venue | Result |
Olympic Games | ||||
7 | 10m Air Rifle | 2004 | Athens, GRE | 694.6 |
World Championships | ||||
1 | 10m Air Rifle | 2006 | Zagreb, CRO | 699.1 |
Asian Championships | ||||
4 | 10m Air Rifle | 2005 | Bangkok, THA | 695.3 |
ಕೆಲವು ಮಿಂಚುಸೂಜಿಗಲ್ಗದಿರುಗಳಿಗೆ ಕನಡ ಹೆಸರುಗಳು
Radio waves=ಮೆಲ್ಗದಿರ್. ಇವುಗಳ ತೀಕ್ಷ್ಣತೆ ಕಡಿಮೆಯಿದ್ದು ಅಡ್ಡಬರುವ ಗಾಜು, ಕಾಗದ ಮುಂತಾದ ಸಣ್ಣ ವಸ್ತುಗಳಿಂದ ತಡೆಯಲ್ಪಡುವುದಱಿಂದ ಈ ಹೆಸರು ಮೆಲ್=ಮೆಲ್ಲಿತು, ಮೆಲ್ಲ ಕದಿರ್=ಕಿರಣ.
Infrared rays=ಕಿೞ್ಗೆಂಗದಿರ್=ಕಿಗ್ಗೆಂಗದಿರು= ಕೆೞಕೆಂಪು ಕದಿರುಗಳು.
Light rays=ಕದಿರ್ ಅಥವಾ ಕಣ್ಗದಿರ್=ಕಣ್ಣಿಗೆ ಕಾಣುವ ಬೆಳಕು ಅಥವಾ ಬೆಳಕು.
Ultraviolet rays=ಮೇಲೂದಾಗದಿರ್
- Read more about ಕೆಲವು ಮಿಂಚುಸೂಜಿಗಲ್ಗದಿರುಗಳಿಗೆ ಕನಡ ಹೆಸರುಗಳು
- 1 comment
- Log in or register to post comments
ಬಂತು ನೋಡಿ ಭಾರತಕ್ಕೆ ಒಲಿಂಪಿಕ್ಸ್ ಚಿನ್ನ
ಅಭಿನವ್ ಬಿಂದ್ರಾಗೆ ಶೂಟಿಂಗಿನಲ್ಲಿ ಚಿನ್ನ ಬಂತು!ವೈಯುಕ್ತಿಕ ಸ್ಪರ್ಧೆಯಲ್ಲಿ ಇದು ಭಾರತದ ಮೊದಲ ಒಲಿಂಪಿಕ್ಸ್ ಚಿನ್ನವಂತೆ.
http://www.ndtv.com/olympics/storypage.aspx?storyid=SPOEN20080060970
- Read more about ಬಂತು ನೋಡಿ ಭಾರತಕ್ಕೆ ಒಲಿಂಪಿಕ್ಸ್ ಚಿನ್ನ
- 1 comment
- Log in or register to post comments
ನೆನಪಿನಂಗಳದಿಂದ...08-08-08 08:08:08pm
ನಿಮ್ಮ ಜೀವನದ ಮರೆಯಲಾರದಂತಹ ಸಂತೋಷವಾದ ದಿನ ಯಾವುದು ಯಾಕೆ.....? "Unforgettable day in Your Life" ತಾರೀಕಿನೊಂದಿಗೆ ತಿಳಿಸಿ"
- Read more about ನೆನಪಿನಂಗಳದಿಂದ...08-08-08 08:08:08pm
- 3 comments
- Log in or register to post comments