ಮರೆಯದಿರಿ ಕಸ್ತೂರಿ ಕನ್ನಡವ -ರಘೋತ್ತಮ್ ಕೊಪ್ಪರ
ಮರೆಯದಿರಿ ಕಸ್ತೂರಿ ಕನ್ನಡವ -ರಘೋತ್ತಮ್ ಕೊಪ್ಪರ
- Read more about ಮರೆಯದಿರಿ ಕಸ್ತೂರಿ ಕನ್ನಡವ -ರಘೋತ್ತಮ್ ಕೊಪ್ಪರ
- 1 comment
- Log in or register to post comments
ಮರೆಯದಿರಿ ಕಸ್ತೂರಿ ಕನ್ನಡವ -ರಘೋತ್ತಮ್ ಕೊಪ್ಪರ
ಮನಸಾರೆ ಮುಕ್ಕಾಲು ಮೊಳ,
ಮಲ್ಲಿಗೆ ತಂದಿದ್ದರೆ ಸಾಕಿತ್ತು,
ಮೊರದಷ್ಟಗಲವಾಗುತ್ತಿತ್ತು,
ಮಡದಿಯ ಮೊಗ, ಮುಂಚೆಲ್ಲಾ..
ಈಗೀಗ, ಮುಕ್ಕಾಲು ಸಂಬಳ,
ಖರ್ಚು ಮಾಡಿ, ಅವಳ ರಮಿಸಿದರೂ..
ಒಂದು ಸಣ್ಣ ಹೂನಗೆ ನಕ್ಕು,
ಸುಮ್ಮನಾಗುವಳಲ್ಲಾ..
ಗೆಜ್ಜೆ ಹೆಜ್ಜೆ- ರಂಗಭೂಮಿ ಪತ್ರಿಕೆ
ಅದೇ ಹಳೆಯ ರೆಸ್ಟೋರೆಂಟು..
ನನಗೂ ಅದಕ್ಕೂ,
ಅದೇನೋ ಬಿಡಿಸಲಾಗದ ನಂಟು..
ಅದೇ ಮೂಲೆಯ ಮೇಜು..
ಮೇಜಿನ ಮೇಲಿನ, ಅದೇ ಹೊಳಪುರಹಿತ ಗ್ಲಾಸು..
ಅಭ್ಯಾಸವಾಗಿದ್ದಂತೆ, ತಂದಿಟ್ಟ ಮಾಣಿ..
ಮುಗುಳ್ನಗುತ್ತಾ.. ಎರಡು ಕಾಫಿ..
ಕೇಳಲೋ ಬೇಡವೋ ಎಂಬಂತೆ ಕೇಳಿದ "ಲೇಟೇನೋ ಅಮ್ಮಾವ್ರು"..
ಒಂದು ಕ್ಷಣ ಸಿಡಿಮಿಡಿ..
ಉತ್ತರಗಳಿಗೆಲ್ಲಾ ತಡಕಾಡಿ,
"ಹಾ" ಎಂಬೊಂದು ಕ್ಷೀಣ ಉತ್ತರ..
ಕರ್ನಾಟಕದ ಹಣೆಬರಹ!
ಅಂತೂ ಇಂತೂ ಕರ್ನಾಟಕದ ರಾಜ ಭವನದಲ್ಲಿ ಮತ್ತೆ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿವೆ. ಯಡ್ಯೂರಪ್ಪನವರ ತಂಡ ಮತ್ತೆ ಬಣ್ಣಹಚ್ಚಿಕೊಂಡಿದೆ, ಗೆಜ್ಜೆ ಗಿಜ್ಜೆ ಎಲ್ಲಾ ಕಟ್ಟಿಯಾಯಿತು. ಹೊಸ ಪ್ರಸಂಗ! ಇನ್ನೇನೂ ಠಾಕೂರರ ಮತ್ತು ದೆಹಲಿಯಿಂದ ಒಪ್ಪಿಗೆ ಮಾತ್ರ ಬರುವುದು ಬಾಕಿ! ದೆಹಲಿ ಒಡೆಯರು ಒಪ್ಪಿಗೆ ಕೊಡುವುದು ಮಾತ್ರ ಸಂಶಯ.
ಅತಿ ಹೆಚ್ಚು ಮಾರಾಟವಿರುವ ಪತ್ರಿಕೆಯಾದ ವಿಜಯ ಕರ್ನಾಟಕದ ಅಂತರ್ಜಾಲ ಆವೃತ್ತಿ ಕೆಲವು ದಿನಗಳಿಂದ ಕಾಣುತ್ತಿಲ್ಲ. ಇವತ್ತು ಅನೇಕ ದಿನಗಳ ನಂತರ ಆ ಕೊಂಡಿ ಸರಿಯಾಗಿ ಕೆಲಸ ಮಾಡಿ ಅಂತರ್ಜಾಲ ಪುಟ ಸರಿಯಾಗಿ ಕಾಣಿಸಿತು, ಆದರೆ ಪುಟಗಳ ಮೇಲೆ ಕ್ಲಿಕ್ಕಿಸಿದರೆ ಮೇಲೆ ಬರುವ ಪುಟಗಳಲ್ಲಿ ಏನು ಕಾಣ್ತಾ ಇಲ್ಲ. ಹಿಂದಿನ ಕೆಲವು ದಿನಗಳ ಪತ್ರಿಕೆಗಳು ಸಹ ಇಲ್ಲ.
ತಲೆಯಲ್ಲೇಳುವ ಅನುಮಾನ
ಮಾತಿನಲ್ಲಿ ಪ್ರಶ್ನೆಯಾಗುವುದು ಬಿಟ್ಟು
ಕಗ್ಗಂಟಾಗಿ ಎದೆಗಿಳಿದು
ಗಪ್ಪಾಗಿ ಬಿಗಿಯುವವರೆಗೂ
ಪದ್ಯ
ನುಡಿ ನಾಚಿಕೆಯಿಂದ ದೂರದಲ್ಲೇ ತುಟಿಕಚ್ಚಿ ನಿಲ್ಲುತ್ತದಲ್ಲ...!
ನಾನಾರೆಂಬುದಕ್ಕೆ ಉತ್ತರವನ್ನು ಹುಡುಕಲೆತ್ನಿಸಿದವರು ಅನೇಕ. ಭೌತವಾದದ ಹಿನ್ನಲೆಯಲ್ಲಿ ಚಾರ್ವಾಕರ ದರ್ಶನದ ಸ್ವರೂಪವನ್ನು ನೋಡುವುದಾದರೆ, ದೇವರು, ಆತ್ಮದ ಅಸ್ತಿತ್ವ ನಿರಾಕರಿಸಿದ ಇವರು ಭೂಮಿ, ಜಲ, ಅಗ್ನಿ,ವಾಯು ಎಂಬ ನಾಲ್ಕು ಭೌತಿಕ ಅಂಶಗಳೇ ಜಗತ್ತಿನ ಮೂಲದ್ರವ್ಯವೆಂದರು.
ಭರತಖಂಡದ ಮಹಾಕಾವ್ಯಗಳಲ್ಲೊಂದಾದ ಮಹಾಭಾರತ ಎಲ್ಲರಿಗೂ ಪೂಜನೀಯ. ಮೂಲ ವ್ಯಾಸಭಾರತದ ನಂತರದಲ್ಲಿ ಕನ್ನಡವೂ ಸೇರಿದಂತೆ ಎಲ್ಲಾ ಭಾರತೀಯ ಭಾಷೆಗಳಲ್ಲೂ ಹಲವಾರು ಮಹಾಭಾರತಗಳು ರಚಿತವಾಗಿವೆ. ಆದರೆ ಮೂಲ ಭಾರತಕ್ಕೂ ಮತ್ತು ಇತರೆ ಭಾಷೆಗಳಲ್ಲಿ ನಂತರ ರಚಿತವಾದ ಭಾರತಕ್ಕೂ ಕೆಲವೊಂದು ವ್ಯತ್ಯಾಸಗಳಿರುವುದು ಕಂಡುಬಂದಿದೆ. ಕಾರಣಗಳು ಹಲವಿರಬಹುದು.
ಅಂತರ್ಜಾಲ ಬಳಸುವ ಬಹುತೇಕ ಎಲ್ಲರಿಗೂ ವಿಕಿಪೀಡಿಯಾ ಬಗ್ಗೆ ತಿಳಿದೇ ಇರುತ್ತದೆ.ಅಂತರ್ಜಾಲದ ಪ್ರಮುಖ ವೆಬ್-ಸೈಟ್ಗಳಲ್ಲಿ ಒಂದಾದ ಆಂಗ್ಲ ವಿಕಿಪೀಡಿಯಾದಲ್ಲಿ ಸುಮಾರು ೨೦ ಲಕ್ಷಕ್ಕೂ ಹೆಚ್ಚು ಲೇಖನಗಳಿವೆ.ಗೂಗಲ್,ಯಾಹು ಮುಂತಾದ ಸರ್ಚ್-ಇಂಜಿನ್ಗಳಲ್ಲಿ ಹುಡುಕಿದಾಗ,ಸಾಮಾನ್ಯವಾಗಿ ವಿಕಿಪೀಡಿಯಾ ಲೇಖನಗಳು ಮೊದಲ ಹತ್ತು ಸರ್ಚ್-ರಿಸಲ್ಟಗಳಲ್ಲಿ ಬಂದೇ ಬರುತ್ತದೆ.ಈ ದೃಷ್ಟಿಯಿಂದ ನೋಡಿದರೆ, ವಿಕಿಪೀಡಿಯಾ ಲೇಖನವು ವಿಷಯಾಸಕ್ತರಿಗೆ ಮಾಹಿತಿಯ ಮೊದಲ ಕೊಂಡಿಯಾಗಿರುತ್ತದೆ. ವಿಕಿಪೀಡಿಯಾದಲ್ಲಿ ಲೇಖನಗಳ ಗುಣಮಟ್ಟವನ್ನಾಧರಿಸಿ ಅವುಗಳನ್ನು ಶ್ರೇಣಿಕರಿಸಲಾಗುತ್ತದೆ. ಈ ರೀತಿ ಉತ್ಕೃಷ್ಟ ಲೇಖನಗಳನ್ನು "Featured Articles" ಎಂದು ಕರೆಯುತ್ತಾರೆ. ಭಾರತದ ಬಗೆಗಿನ ಲೇಖನಗಳ ಪೈಕಿ ಕನ್ನಡ-ಕರ್ನಾಟಕ ಬಗೆಗಿನ ಲೇಖನಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಶ್ರೇಣಿಗೆ ಸೇರುತ್ತವೆ. ಕಳೆದ ಒಂದು ವರ್ಷದಲ್ಲಿ ಕನ್ನಡ-ಕರ್ನಾಟಕದ ಬಗೆಗಿನ ಲೇಖನಗಳು ಇನ್ನುಳಿದ ಭಾರತೀಯ ಲೇಖನಗಳಿಂತ ಹೆಚ್ಚಾಗಿ Featured ಆಗಿವೆ. ವಿಕಿಪೀಡಿಯಾದ ಹಲವಾರು ಕನ್ನಡಿಗ ಲೇಖಕರ ಸಕ್ರಿಯ ಚಟುವಟಿಕೆಯಿಂದ ಕರ್ನಾಟಕದ ಇತಿಹಾಸವನ್ನು ಸಾರುವ ಬಹುತೇಕ ಎಲ್ಲಾ ಲೇಖನಗಳು "Featured" ವರ್ಗಕ್ಕೆ ಸೇರಿದೆ. ಇಂತಹ "Featured" ಲೇಖನಗಳನ್ನು ವಿಕಿಪೀಡಿಯಾದ ಮುಖ್ಯಪುಟದಲ್ಲಿ ಪ್ರಕಟಿಸಲಾಗುತ್ತದೆ. ಇದಲ್ಲೆದೆ, ವಿಕಿಪೀಡಿಯಾದ ಮುಖ್ಯಪುಟದಲ್ಲಿ ಬರುವ "Did you know" (ನಿಮಗಿದು ಗೊತ್ತೆ) ಅಂಕಣದಲ್ಲಿ ವಾರಕ್ಕೆ ಕನಿಷ್ಟ ೨-೩ ಬಾರಿಯಾದರೂ ಕನ್ನಡ-ಕರ್ನಾಟಕದ ಲೇಖನಗಳು ಪ್ರಕಟಗೊಳ್ಳುತಿರುತ್ತವೆ.