ರಾಮಾವತಾರ ಮತ್ತು ಹುಡುಕಾಟ
ರಾಮಾವತಾರ
ನನ್ನೊಡನೆ
ಪ್ರೀತಿಯ ಉತ್ಕಟತೆಯಲ್ಲಿ ಮೈಮರೆಯುವಾಗ
- Read more about ರಾಮಾವತಾರ ಮತ್ತು ಹುಡುಕಾಟ
- 2 comments
- Log in or register to post comments
ರಾಮಾವತಾರ
ನನ್ನೊಡನೆ
ಪ್ರೀತಿಯ ಉತ್ಕಟತೆಯಲ್ಲಿ ಮೈಮರೆಯುವಾಗ
ಯಾವುದಾದರೂ ಬರಹವನ್ನು ನೋಡಿದಾಗ ಅದರ ಬರಹಗಾರ ಹೀಗೆ ಇರಬಹುದು ಎಂದು ತಿಳಿಯುವುದಕ್ಕೆ ಸಾಧ್ಯ ಇದೆಯೇ.
ನವಿರು ಲೇಖನಗಳನ್ನು ನೋಡಿದಾಗ ಲೇಖಕ/ಲೇಖಕಿ ಹೀಗೆಯೆ ನವಿರಾಗಿರುತ್ತಾರೆ ಎಂದು ಹೇಳಲು ಸಾಧ್ಯವಿದೆಯೇ?
ಒರಟು ಲೇಖನಗಳನ್ನು ಬರೆಯುವವರು ಸ್ವಭಾವತ: ಒರಟಾಗಿರುತ್ತಾರೆಯೇ?
ನಿಮ್ಮ ಗಳ ಅಭಿಪ್ರಾಯವೇನು?
ಮಾಹಿತಿ ತಂತ್ರಜ್ಞಾನ ದೈತ್ಯ ಮೈಕ್ರೊಸಾಫ್ಟ್ ನೀಡಿದ್ದ ಬೃಹತ್ ಮೊತ್ತದ ಆಹ್ವಾನವನ್ನು ನಿರಾಕರಿಸುವ ಮೂಲಕ ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಲ್ಲಿರುವ ಮತ್ತೊಂದು ದೈತ್ಯ ಸಂಸ್ಥೆ ಯಾಹೂ! ಸದಾ ತನ್ನ ಪ್ರಯೋಗಶೀಲ ಚಟುವಟಿಕೆಗಳ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದು, ಈಗ ವಿಶ್ವದ ಐಟಿ ಸಂಸ್ಥೆಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ. ಮೈಕ್ರೊಸಾಫ್ಟ್ ಮತ್ತು ಯಾಹೂ!
"
ನೆನ್ನೆ ಪಾರ್ಟಿಯೊಂದಕ್ಕೆ ಹೋಗಿದ್ದೆ.
ನಾನು ಯಾವಾಗಲೂ ಮಾಝ ಕುಡಿಯೋದು
ಸ್ನೇಹಿತೆಯೊಬ್ಬಳು ನನಗೆ ಏನೋ ಒಂದು ಪಾನೀಯ ಕೊಟ್ಟಳು
ನನಗೇನು ಗೊತ್ತು ಅದು ಸಿಗ್ನೇಚರ್ ಬ್ರಾಂಡ್ ಅಂತ.
ಸರಿ ಒಂದು ಮೂರು ಪೆಗ್ ಏರಿಸಿಯೇ ಬಿಟ್ಟೇ. ರುಚಿಯಲ್ಲಿ ಇರಿಸು ಮುರಿಸಾದರೂ ....................
ಚೆನ್ನಾಗಿತ್ತು.
ಅಷ್ಟೇ
ನದೀಂ ದಿಂತನ ನದೀಂ ದೀಂ ತನ
1. ಮೈಸೂರಿನಲ್ಲಿ ಮೊಟ್ಟಮೊದಲ ಸಮಾರಂಭ. 'ರಾಜೆಂದ್ರವಿಲಾಸ್ ಸಭಾಂಗಣ. (೨೭ ನೆಯ ಜೂನ್ ೨೦೦೮, ಶುಕ್ರವಾರ ಸಾಯಂಕಾಲ ೬ ಘಂಟೆಗೆ)
ಅಧ್ಯಕ್ಷರು : ಶ್ರೀ. ಶ್ರೀ. ಸುತ್ತೂರು ಶಿವರಾತ್ರೀಶ್ವರ ಸ್ವಾಮೀಜಿಯವರು.
ಪುಸ್ತಕವನ್ನು ಬಿಡುಗಡೆಮಾಡುವವರು : ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ, ಡಾ.ವಿವೇಕ್ ರೈ ರವರು.
ಪರಿಚಯ ಭಾಷಣ : ಡಾ. ಹೊಳಲ್ಕೆರೆ ಚಂದ್ರಶೇಖರ್ .
ಹೀಗೇ ಸುಮ್ಮನೆ, ಓರ್ಕುಟ್ ನಲ್ಲಿ ಸುತ್ತು ಹಾಕ್ತಾ ಇದ್ದೆ. ಹಳೆಯ ಸ್ನೇಹಿತರು ... ಸಿಕ್ಕ ಹಾಗೇ ಹಳೆಯ ನೆನಪುಗಳು ಬಿಚ್ಚಿಕೊಂಡವು. ಓರ್ಕುಟ್ ನ ಒಂದು ಸೈಟ್ನಲ್ಲಿ ಸೈಂಟ್ ಆನ್ಸ್ ಹೈ ಸ್ಕೂಲ್ ನ ಕಮ್ಯುನಿಟಿ ಲಿಂಕ್ ಸಿಕ್ತು. ಅದ್ರಲ್ಲಿ ಯಾರೋ" ನಿಮ್ಮ ಫೇವರಿಟ್ ಟೀಚರ್ ಯಾರು " ಅಂತ ಪ್ರಶ್ನೆ ಕೇಳಿದ್ದ್ರು. ಸಂಧ್ಯಾ ಮಿಸ್, ಕಾರ್ಮ್ ಲೀಟಾ ಮಿಸ್, ಡೋರಿನ್ ಮಿಸ್ ... ಹೀಗೇ ಹಲವು ಹೆಸರುಗಳು ಕಂಡವು.
ನಾನು ಶಾಲೆ ಕಲಿತದ್ದು , ಮಂಗಳೂರಿನ ಸೈಂಟ್ ಆನ್ಸ್ ಕನ್ನಡ ಪೈಮರಿ ಶಾಲೆಯಲ್ಲಿ. ಆದ್ರೆ ನನಗೆ ಹೈಸ್ಕೂಲಿನ ಎಲ್ಲ ಟೀಚರ್ಸ್ ಪರಿಚಯ. ಯಾಕಂದ್ರೆ, ನನ್ನ ಅಪ್ಪ ಸೈಂಟ್ ಆನ್ಸ್ ಹೈಸ್ಕೂಲಿನಲ್ಲಿ ಟೀಚರ್ ಆಗಿದ್ರು. . ನಾನು ಮತ್ತು ನನ್ನ ತಮ್ಮ ಮಧ್ಯಾಹ್ನ ಅಪ್ಪನ ಸ್ಟಾಫ್ ರೂಮ್ಗೆ ಊಟ ಮಾಡಲು ಹೋಗ್ತಾ ಇದ್ದೆವಲ್ಲಾ, ಹಾಗಾಗಿ ಎಲ್ಲ ಟೀಚರ್ಸ್ ನಂಗೆ ಗೊತ್ತಿದ್ರು. ಹಾಗೇ ಓರ್ಕುಟ್ ನಲ್ಲಿ ನನ್ನ ಪ್ರೈಮರಿ ಶಾಲೆಯ ಲಿಂಕ್ ಸಿಗುತ್ತಾ ಅಂತ ಹುಡುಕಿದೆ. ಉ ಹೂಂ. ಇಲ್ಲ. ಆದ್ರೆ. ಅದೇ ನೆಪ ಆಯ್ತು.
ಹಾಗೇ ಕೂತು, ನನ್ನ ಹಳೆಯ ಟೀಚರ್ಸ್ ಗಳ ನೆನಪು ಮಾಡ್ದೆ. ನಾವು ಚಿಕ್ಕವರಿರುವಾಗ, ಟೀಚರ್ ಗಳ ಹೆಸರು ನಮಗೆ ಗೊತ್ತೇ ಇರಲಿಲ್ಲ. ಒಂದನೇ ಕ್ಲಾಸ್ ಟೀಚರ್ , ಎರಡನೇ ಕ್ಲಾಸ್ ಟೀಚರ್ , ಮೂರನೇ ಕ್ಲಾಸ್ ಟೀಚರ್ , ನಾಲ್ಕನೇ ಕ್ಲಾಸ್ ಟೀಚರ್ .... ಹೀಗೆ. ಯಾವಾಗ ಟೀಚರ್ ಗಳ ಹೆಸರು ನನಗೆ ಗೊತ್ತಾಯ್ತು ಅಂತ ನೆನಪಾಗ್ತಾ ಇಲ್ಲ. ಗ್ರೇಸಿ ಟೀಚರ್, ಲೀಟಾ ಟೀಚರ್, ಮೇರಿ ಟೀಚರ್ ... ಅಂತ ಅವರ ಹೆಸರುಗಳು. ಆದರೆ, ಅವರ ಹೆಸರು ಗಳೊಂದಿಗೆ ಅವರ ಮುಖಗಳು ತಳಕು ಹಾಕುವುದೇ ಇಲ್ಲ. ಒಂದನೇ ಕ್ಲಾಸ್ ಟೀಚರ್ ಅಂತ ಹೇಳಿದ ಕೂಡಲೇ, ಟೀಚರ್ ನೆನಪಾಗ್ತಾರೆ. ಶಾಲೆಯ ದಿನಗಳೆಲ್ಲ ಕಣ್ಮುಂದೆ ಓಡಾಡ್ತವೆ.
****ಜಾತಿ ಪದ್ಧತಿ 'ಸಲ್ಲ' ಎಂದ ಬಸವಣ್ಣ****
ಎಲ್ಲ ಕೆಲಸಗಳೂ ಸಮವೇ. ಕಾಯಕದಲ್ಲಿ ಮೇಲು-ಕೀಳು ಎಂಬುದಿಲ್ಲ. ಜಗದಲಿ ಕಿವಿಯಿಂದ ಹುಟ್ಟಿದವರಾರು ಇಲ್ಲ..
ಹೀಗಿರುವಾಗ ಉಚ್ಚನೀಚ ಭಾವನೆಗಳು ಸಲ್ಲ. ಬಸವಣ್ಣನವರು ವ್ಯಕ್ತಿಯ ಶ್ರೇಷ್ಟತೆ
ನಿರ್ಣಯ ಆಗುವುದು ಹುಟ್ಟಿದ ಜಾತಿಯಿಂದಲ್ಲ ಬದುಕುವ ರೀತಿಯಿಂದ ಎಂದು ಈ ವಚನದಲ್ಲಿ ಮಾರ್ಮಿಕವಾಗಿ
ತಿಳಿಸಿದ್ದಾರೆ.
ಮೊನ್ನೆ ತಾನೇ ಅನಿವಾಸಿ ಅವರು ದಾಸರ ಪದದಲ್ಲಿ ಹೆಣ್ಣಿನ ಚಿತ್ರಣ ಸರಿಯಾಗಿಲ್ಲ ಅನ್ನುವ ಬರಹವೊಂದನ್ನು ಹಾಕಿದ್ದರು. ಅದನ್ನು ಓದುತ್ತಾ ನನಗೂ ಸ್ವಲ್ಪ ಯೋಚನೆ ಹತ್ತಿತು. ಒಂದು ವಿಧದಲ್ಲಿ ನೋಡಿದರೆ, ಹಿಂದಿನ ಕಾವ್ಯನಾಟಕಗಳಲ್ಲಿ ಹೆಚ್ಚು ನಾಯಕ ಪಾತ್ರ ಪ್ರಧಾನವೇ. ಮೂಲದ ವ್ಯಾಸ ಭಾರತದಲ್ಲಿ ಹೇಗೋ ಗೊತ್ತಿಲ್ಲ, ಆದರೆ ಕುಮಾರವ್ಯಾಸನ ಕನ್ನಡ ಭಾರತದಲ್ಲಂತೂ ಅಂತಹ ಮುಖ್ಯವಾದ ದ್ರೌಪದಿಯ ಪಾತ್ರಕ್ಕೇ ಹೆಚ್ಚಿ ನ್ಯಾಯ ದೊರೆತಿಲ್ಲ ಎಂದು ನನ್ನ ಅಭಿಪ್ರಾಯ. ಸೀತೆ ದ್ರೌಪದಿಯರಂತಹ ಪಾತ್ರಗಳು ದು:ಖವನ್ನು ಅನುಭವಿಸಲೇ ಹುಟ್ಟಿದ ಹಾಗೆ ಕಾಣುತ್ತವೆ. ಈ ಇಬ್ಬರಿಗೂ ಉದ್ದನೆ ಕೂದಲಿತ್ತೆಂಬ ನಂಬಿಕೆ ಇರುವುದರಿಂದ, ಜಡೆಗೆ ಕತ್ತರಿ ಹಾಕದ ಹಿಂದಿನ ಕಾಲದವರು ಹೆಣ್ಣುಮಕ್ಕಳಿಗೆ ಉದ್ದ ಕೂದಲಿದ್ದರೆ ಸೀತೆಯಂತೆ, ದ್ರೌಪದಿಯಂತೆ ಕಷ್ಟ ಅನುಭವಿಸುವಳೋ ಎಂದು ಯೋಚನೆ ಮಾಡುತ್ತಿದ್ದರು.
ಅದಿರಲಿ. ಮೊನ್ನೆ ಸೀತೆಯ ಮೇಲೆ ವಿಜಯದಾಸರು ಬರೆದ ಒಂದು ರಚನೆಯನ್ನು ಮೊದಲಬಾರಿಗೆ ಕೇಳಿದೆ. ಹೆಚ್ಚಾಗಿ ಹರಿದಾಸರು ವಿಠಲನ ಮೇಲೆ, ಇಲ್ಲದಿದ್ದರೆ ರಾಮ ಕೃಷ್ಣನ ಮೇಲೆ ಬರೆದವರು. ಸೀತೆಯನ್ನು ಕೇಂದ್ರವಾಗಿಟ್ಟುಕೊಳ್ಳುವಂತಹ ಹಾಡುಗಳು ಕಡಿಮೆಯೇ. ಸರಳವಾಗಿದ್ದೂ ಸುಂದರವಾದ ಈ ಹಾಡು ನನಗೆ ಬಹಳ ಹಿಡಿಸಿತು. ಅದಕ್ಕೇ ಇಲ್ಲಿ ಬರೆಯುತ್ತಿದ್ದೇನೆ.
ಆತ್ಮೀಯ ಸಂಪದಿಗರಿಗೆಲ್ಲಾ ನನ್ನ ನಮಸ್ಕಾರಗಳು..................
ಈಗ ನಿಮ್ಮೊಂದಿಗೆ ನನ್ನ ಸಂತೋಷ ಹಂಚಿಕೊಳ್ಳುವ ಸಮಯ.
ನಮ್ಮ ಜೀವನದಲ್ಲಿ ಮತ್ತೊಂದು ಜೀವ ಸೇರ್ಪಡೆಯಾಯಿತು.
ನಾನು ಮತ್ತೊಂದು ಹೆಣ್ಣು ಮಗುವಿನ ತಂದೆಯಾದೆ.
ತಾಯಿ ಮತ್ತು ಮಗು ಆರೊಗ್ಯವಾಗಿದ್ದಾರೆ.
ಈಗ ಬಂತು ಸಮಸ್ಯೆ "ಮಗುವಿಗೊಂದು ಹೆಸರು".
ಮತ್ತೊಂದು ದಿನ ಮತ್ತೊಂದು ಹಾಡು
ಭಾರವೆನಿಸಿತು ಮನ ಮತ್ತದೇ ಪಾಡು
ಹತ್ತಿಳಿಯಿತು ಎಲ್ಲಿಂದೆಲ್ಲಿಗೆ
ಅದೃಷ್ಟ
ಪಾದರಸದಂತೆ ಹೊತ್ತಿನೊಡನಾಡಟದಲಿ
ಉಳಿಯಬಾರದೆ ಕೊಂಚ
ಮಿಗಲಿಲ್ಲ ಒಂದಿನಿತು ಹರಿದರಿದು ಸೋರಿ
ಕೊನೆಯಿರದ ತೊರೆಯಾಯ್ತು
ಸಮಯ
ಆಲೋಚನೆಯು ಹುತ್ತ ಇರುವೆಗಳ
ಬಯಲಾಯ್ತು ಜೀವನ