ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನಸು...

ನಾ ಕಂಡೆ ಕನಸೊಂದ
ಸಿಹಿಯುಂಡ ಬದುಕೊಂದ
ನಗೆಯ ಕಡಲೊಂದ

ಹರಿಯಿತು ಬೆಳಕು
ಮುರಿಯಿತು ಕನಸು
ಕತ್ತಾಲಾಯಿತು ಬದುಕು...

ಮಿಥುನ್ ನಂಬರ್ ಟೂ - ಜಯಂತ್ ಕಾಯ್ಕಿಣಿ ಕಥೆ .

ಮಲೆನಾಡಿನ ಒಂದು ಹಳ್ಳಿಯಲ್ಲಿ ಒಬ್ಬ ಹುಡುಗ ; ಆಗ ಎಲ್ಲೆಲ್ಲೂ ಕಾಣಿಸಿಕೊಳ್ತಿರುವ ಸಿನೇಮಾ ಪೋಸ್ಟರಿನಲ್ಲಿನ ಮಿಥುನ್ ಚಕ್ರವರ್ತಿಗೆ ಸ್ವಲ್ಪ ಹೋಲಿಕೆ ಇದೆ ಅಂತ ಅನೇಕರು ಹೇಳಿದಾಗ ಅವನೂ ಮಿಥುನ್ ತರ ಹೇರ್ ಸ್ಟೈಲ್ ಮಾಡ್ಕೊಂಡು ಅವನ ಸಿನೇಮ ಅನೇಕ ಸಲ ನೋಡಿ ಅವನ ಹಾವ ಭಾವ ಅನುಕರಿಸಲು ಆರಂಭಿಸುತ್ತಾನೆ . ಒಂದು ದಿನ ಸಿನೇಮಾ ಸೇರಲು ಮುಂಬೈಗೇ ಓಡಿ ಬರುತ್ತಾನೆ ...

ಗಾಂಧಿ ತತ್ವಗಳು ಮತ್ತು ಮಾರ್ಟಿನ್ ಲೂಥರ್ ಕಿಂಗ್

ಮಾರ್ಟಿನ್ಲೂಥರ್ಕಿಂಗ್ (೧೯೨೯-೧೯೬೮) ಗಾಂಧಿತತ್ವಗಳ ಆರಾಧಕ. ಅಮೆರಿಕಾದಲ್ಲಿನ ನೀಗ್ರೋ ಹೋರಾಟದ ಮಾರ್ಗದರ್ಶಕ ಕೂಡ. ಶಾಂತಿಗಾಗಿ ನೋಬಲ್ ಪ್ರಶಸ್ತಿ ಪಡೆದ ಮಾರ್ಟಿನ್ಲೂಥರ್ ಕಿಂಗ್ ನ ಈ ಚರಿತ್ರಾರ್ಹ ಭಾಷಣ, ಸೇಡು ಆದರ್ಶವಾಗಿರುವ ಇಂದಿನ ದಲಿತ ಚಳುವಳಿಯ ಪರ್ಯಾಯ ಚಿಂತನೆಗೆ ಮಾದರಿಯಾಗಬಹುದೇನೋ......?

"ಇಂದು ನಾವು ಯಾವ ಒಬ್ಬ ಪ್ರಸಿದ್ಧ ಅಮೆರಿಕಾದವನ (ಅಧ್ಯಕ್ಷ ಲಿಂಕನ್) ಸದಾಶಯದಲ್ಲಿ ನಾವಿದ್ದೇವೋ ಆ ಮಹಾಶಯನು ನೂರು ವರ್ಷಗಳ ಹಿಂದೆ ಬಂಧವಿಮೋಚನೆಯ ಪ್ರಕಟಣೆಗೆ ತನ್ನ ಸಹಿ ಮಾಡಿದ್ದ. ಜೀವಚೈತನ್ಯವನ್ನು ಹಿಂಡುವ ಅನ್ಯಾಯವೆಂಬ ಜ್ವಾಲೆಯಲ್ಲಿ ಕಮರಿದ್ದ ಲಕ್ಷಾನುಲಕ್ಷ ನೀಗ್ರೋಗಳಿಗೆ ಈ ಮಹತ್ವದ ತೀರ್ಪು ಆಶಾಕಿರಣವಾಗಿ, ದಾಸ್ಯದ ಕರಾಳ ರಾತ್ರಿಗೆ ಸಂತಸದ ಬೆಳಕನ್ನು ದರ್ಶಿಸುವ ಸಂತನಾಗಿ ಬಂದಿತು.
ಆದರೆ, ನೂರು ವರ್ಷಗಳ ನಂತರವೂ ಸಹ ನೀಗ್ರೋಗಳು ಮುಕ್ತರಾಗಿಲ್ಲ. ನೂರು ವರ್ಷಗಳ ನಂತರವೂ ನೀಗ್ರೋಗಳು ಪ್ರತ್ಯೇಕತೆಯ ಕೈಬೇಡಿಗಳಿಂದ, ತಾರತಮ್ಯದ ಸರಪಳಿಗಳಿಂದ ಬಂಧಿತರಾಗಿತೆವಳುತ್ತಿದ್ದಾರೆ.

ಬಹಿರಂಗ ಕಾಮಕೇಳಿಯಲ್ಲಿ ಜನ ಮತ್ತು ರಾಜಕಾರಣಿಗಳು - ಛೇ... ಛೀ... ಥೂ... ಅಯ್ಯೋ...

ಕಳೆದ ಹಲವಾರು ವಾರಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕಾರಣ ಕೇವಲ ಅರೆಮಬ್ಬಿನ ಕೋಣೆಯಲ್ಲಷ್ಟೆ ಕಾಣಸಿಗುವ ವಿಕೃತ ರಂಜನೆಯನ್ನು ಜನರಿಗೆ ಬಹಿರಂಗವಾಗಿ ನೀಡುತ್ತಿದೆ. ಆದರೆ ತಾವು ನೋಡುತ್ತಿರುವ ಈ ವ್ಯಭಿಚಾರದ ನಾಟಕ ತಾವೆ ಸೃಷ್ಟಿಸಿದ ಒಂದು ಅಂಕ ಮತ್ತು ಅದರಲ್ಲಿ ತಾವು, ತಮ್ಮ ಮನೆಯವರು, ತಮ್ಮ ಮುಂದಿನ ಪೀಳಿಗೆಯವರೂ ಪಾಲ್ಗೊಂಡಿದ್ದಾರೆ ಎನ್ನುವುದನ್ನು ಆ ಕ್ಷಣಿಕ ಉದ್ರೇಕೋನ್ಮತ್ತ ಸ್ಥಿತಿಯಲ್ಲಿ ಜನ ಮರೆತಿದ್ದಾರೆ.

ಯಾವ ಪಕ್ಷಕ್ಕೂ ಬಹುಮತ ನೀಡದೆ, "ನೀನು ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಲು ಯೋಗ್ಯ" ಎಂಬ ಸಂದೇಶವನ್ನು ಜನ ಯಾವೊಬ್ಬನಿಗೂ ನೀಡದೆ ಇದ್ದಾಗ ಕರ್ನಾಟಕದ ಎಲ್ಲಾ ನಾಚಿಕೆಗೆಟ್ಟ ರಾಜಕಾರಣಿಗಳೆಲ್ಲ

ಪಲಾಯನ

 

ತಾನು ಬರೆದ ಬೃಹತ್‌ಗ್ರಂಥವನ್ನು
ಪಕ್ಕಕ್ಕೆ ಸರಿಸಿ
ನನ್ನನ್ನು ಹಿಡಿದು ಮುದ್ದಿಸುತ್ತಾನೆ ನನ್ನ ನಲ್ಲ;
ಅದರೊಳಗಿರುವ ಜೊಳ್ಳಿನ ಬಗ್ಗೆ
ನನ್ನ ಟೀಕೆಗೆ ಹೆದರಿಯೇ ಇರಬೇಕೆಂದು
ಅನುಮಾನಿಸಿದಾಗ
ಅವನ ಸಿಟ್ಟಿಗೆ ಪಾರವೇ ಇಲ್ಲ!

ಪ್ರತೀಕಾರ

ನದಿ ತೀರದಲ್ಲೀಗ..
ಕಲ್ಲುಗಳೇ ಇಲ್ಲ..
ನನ್ನವಳ ನಿರೀಕ್ಷೆಯಲ್ಲಿ,
ನಾನೇ.. ನೀರುಪಾಲು ಮಾಡಿದೆನಲ್ಲ..

ಎದೆಯಲ್ಲೀಗ.. ಅವಳು,
ಅವಳಾಗೇ... ಉಳಿದಿಲ್ಲಾ..
ಮನದ ಕೊಳದಲ್ಲೀಗ..
ಬರೀ.. ಕಲ್ಲುಗಳೇ ತುಂಬಿವೆಯಲ್ಲ..

ಅಪರಾಧಿ ಭಾವ,
ಬೆಂಬಿಡದೆ ಕಾಡುತ್ತಿದೆಯಲ್ಲಾ.!!
ಅವಳ ನಿರೀಕ್ಷೆಯಲ್ಲೆಸೆದ ..
ಆ ಕಲ್ಗಳೇ...ಹೀಗೆ ತಿರುಗಿ
ಹಗೆ ಸಾಧಿಸುತ್ತಿವೆಯೇ ??..ತಿಳಿಯುತ್ತಿಲ್ಲವಲ್ಲಾ..

ಸಂಸ್ಕೃತದಿಂದ ಕನ್ನಡಕ್ಕೆ, ಕನ್ನಡಿಗರಿಗೇನು ಪ್ರಯೋಜನ?

ಬಹಳ ಪ್ರಾಚೀನ ಭಾಷೆ ಸಂಸ್ಕೃತದಿಂದ ಇಂದು ಭಾರತೀಯರಿಗೆ ಬಹಳಷ್ಟು ಪ್ರಯೋಜನವಾಗಿದೆ.

ಆಯುರ್ವೇದ ಗ್ರಂಥಗಳಿರುವುದು ಸಂಸ್ಕೃತದಲ್ಲಿಯೇ. ದೇಶದಲ್ಲಿ ಇಂದಿಗೂ ಹಲವಾರು ಶಾಸನಗಳು, ಗ್ರಂಥಗಳು ಉತ್ಪತನದ ಸಮಯದಲ್ಲಿ ದೊರೆಯುತ್ತಿವೆ. ಇವು ನಿಜವಾಗಿಯೂ ಜ್ಞಾನದ ಭಂಡಾರಗಳು.

ಪತಂಜಲಿಯ ಯೋಗ ಸೂತ್ರಗಳಿರುವುದೂ ಸಂಸ್ಕೃತದಲ್ಲಿಯೇ.