ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಚಂದಿರಗೊಂದು ಕಾಗದ

ಚಂದಿರಗೊಂದು ಕಾಗದ
************

ಅಮ್ಮಾ,
ಚಂದಿರಗೊಂದು ಕಾಗದ
ಬರೆಯುವೆ ಹಗಲೂ ಬಾರೆಂದು.
ನಿನ್ನನು ನೋಡಿ ಮಮ್ಮು
ತಿನ್ನುವೆ ಮೊಗವನು ತೋರೆಂದು.

ಉರಿವ ಸೂರ್ಯನ ಹೇಗೆ
ನೋಡಲೇ ನೀನು ಉಣಿಸುವಾಗ ?
ತಾರೆಯ ಜೊತೆಯಲಿ ಚಂದಿರ
ನಿಂತಿರೆ ಊಟಕೆ ರುಚಿ ಆಗ.

ನನ್ನಯ ಕಾಗದ ಓದಲು
ಅವನಿಗೆ ಬರುವುದೇ ಕನ್ನಡ ?
ಬಾರದೆ ಇದ್ದರೆ ನೀನೇ
ಕಲಿಸೇ ನನ್ನಯ ಸಂಗಡ.

ಮಂಪರಿನಲ್ಲಿ ಘಾಟಿ

ಬೆಂಗಳೂರಿನಿಂದ ಮೂಡುಬಿದ್ರೆಯ ದಾರಿಯಲ್ಲಿ ತೆವಳುತ್ತಿರುವ ಬಸ್ಸು. ನಡುರಾತ್ರಿ. ಬಸ್ಸಿನ ಅಲ್ಪ ಬೆಳಕಿನಲ್ಲಿ ಸರಿದು ಹೋಗುತ್ತಿದ್ದ ಮನೆ, ಅಂಗಳ, ಹಿತ್ತಲು, ಹಾಡಿ, ಕಾಡು... ಬಸ್ಸಿನ ಕ್ಷಣಿಕ ಬೆಳಕಿನಲ್ಲಿ ತೋರಿ ಕಾಣೆಯಾಗುತ್ತಿದ್ದ ದೇವಸ್ಥಾನ, ಮಸೀದಿ, ಇಗರ್ಜಿ ಗೋಪುರಗಳು...

ನನ್ನ ಗೆಳತಿ...

ಸುಮನ್ನಿರೋ ಚ೦ದ್ರಮ ಮಲಗಿರುವಳು ನನ್ನ ಗೆಳತಿ...

ಮೆಲ್ಲಗೆ ಬೀಸೋ ಗಾಳಿಯೆ ಮಲಗಿರುವಳು ನನ್ನ ಗೆಳತಿ...

ಚ೦ಚಲವಾಗದಿರು ಮನವೆ ಮಲಗಿರುವಳು ನನ್ನ ಗೆಳತಿ...

ಅರಿಯೋ ಒಹ್ ಹುಚ್ಹು ಹೃದಯವೆ ಮಲಗಿರುವಳು ಅವಳು...

ಅವಳೇ ನನ್ನ ಗೆಳತಿ...

ನನ್ನ ಪುಟ್ಟ ಹೃದಯ...

ಕಣ್ಣಾ ಗೊ೦ಬೆಯಲ್ಲಿ ನಿನ್ನ ಚೆಲುವ ಸೆರೆ ಹಿಡಿದು ನಲಿಯುವ ಹೃದಯ...

ತಾಯ ಮಡಿಲಿನಲ್ಲಿ ಮಲಗಿ, ಜೊಗುಳದ ಹಾಡಿಗೆ ಮೈ ಮರೆತು ಮಿಡಿಯುವ ಹೃದಯ...

ಕುರುಡು ಪ್ರೇಮಕ್ಕೆ ಕಣ್ಣಾಗಿ, ಪ್ರೇಮಿಗೆ ಒಲವಿನ ಆಸರೆ ಈ ನನ್ನ ಹೃದಯ...

ನಿನ್ನ ಕಾಲಡಿಯಲ್ಲಿ ನಲುಗಿದ ಗುಲಾಬಿ ಹೂವಿನ ನೋವಿನ ನಗು ಈ ನನ್ನ ಪುಟ್ಟ ಹೃದಯ...

ಹೀಗೇ ಸುಮ್ಮನೆ

ಅಂದು ನಾನಂದುಕೊಂಡೆ ನನ್ನ ಹೊರಗಿರುವರ ಹೃದಯಕ್ಕೆ ಮಿಡಿಯಲು ಬಾರದೆಂದು...
ವರುಷಗಳ ಕಾಲ ಅದನು ಅಲಕ್ಷಿಸುತಲೇ ಮುನ್ನಡೆದೆ...
ಅದೀಗ ಮಿಡಿಯಲಾರಂಭಿಸಿದೆ, ಮಾತನಾಡುತಿದೆ..
ನನ್ನೊಡನೆಯಲ್ಲ, ಇನ್ನೊಂದು ಹೃದಯದೊಡನೆ!

'ದೇಶಕಾಲ'ಕ್ಕೆ ಮೂರು ವರ್ಷ

ದೇಶ ಕಾಲ - ವಿವೇಕ್ ಶಾನಭಾಗರ ತ್ರೈಮಾಸಿಕ ಪತ್ರಿಕೆಗೆ ಮೂರುವರ್ಷಗಳಾಗುತ್ತಿವೆ. ಈ ಅವಧಿಯಲ್ಲಿ ಸದ್ದಿಲ್ಲದೆ ಅದು ಸಾಧಿಸಿರುವುದು ಬಹಳ. ಅಲ್ಲಿ ಪ್ರಕಟವಾದ ಕತೆ, ಕವನ, ಲೇಖನ, ಪರಿಚಯಿಸಲ್ಪಟ್ಟ ಬರಹಗಾರರು, ವಿಚಾರಗಳು ವೈವಿಧ್ಯಮಯ ಎಂತೋ ಮುಂದಿನ ಸಂಚಿಕೆ ಬರುವ ಮುನ್ನಿನ ಮೂರು ತಿಂಗಳ ಕಾಲ ತಲೆಗೆ ಸಾಕಷ್ಟು ಕೆಲಸ ಕೊಡಬಲ್ಲವು ಕೂಡ ಆಗಿದ್ದವು. ಇಂಥ ಗುಣಮಟ್ಟವನ್ನು ಕಾಯ್ದುಕೊಂಡು ಬರುವ, ಅಂಥ ಬರಹಗಾರರನ್ನು, ಲೇಖನಗಳನ್ನು ಹುಡುಕಿಕೊಂಡು ಹೋಗಿ ಹೆಕ್ಕಿ ತಂದು ಸಮಯಕ್ಕೆ ಸರಿಯಾಗಿ ಪತ್ರಿಕೆಯನ್ನು ಓದುಗರ ಕೈಗಿಡುವ ಕೆಲಸ ಸುಲಭವಲ್ಲದ್ದು. ಆದರೆ ವಿವೇಕ್ ಈ ಬಗ್ಗೆ ಮಾತನಾಡಿದ್ದೇ ಇಲ್ಲವೆನ್ನಬಹುದು. ತಮ್ಮಷ್ಟಕ್ಕೆ ಕೆಲಸ ಮಾಡುತ್ತ ಹೋಗುವುದು ಅವರ ಗುಣ.

ದೇಶಕಾಲ ಸುರುವಾದಾಗ ಕನ್ನಡದ ಉತ್ತಮ ಕತೆಗಾರ ಎಂ.ಎಸ್.ಶ್ರೀರಾಮ್ ತಮ್ಮ ಬ್ಲಾಗ್ ಕನ್ನಡವೇ ನಿತ್ಯದಲ್ಲಿ ಕನ್ನಡದ ಸಣ್ಣಪತ್ರಿಕೆಗಳ ಬಗ್ಗೆ ಬರೆದಿದ್ದರು. ಮಯೂರ(ಜೂನ್ ೨೦೦೬)ದಲ್ಲಿ ಕೂಡ ಅಂತಹುದೇ ಒಂದು ಲೇಖನವನ್ನು ಸಂಪಾದಕ ಜಿ.ಪಿ.ಬಸವರಾಜು ಬರೆದಿದ್ದರು. ಆದರೆ ಈಗ ಬರುತ್ತಿರುವ ಸಂಚಯ, ಸಂಕಲನ, ಸಂಕ್ರಮಣ, ಮಾತುಕತೆ, ಅಭಿನವ, ಕನ್ನಡ ಅಧ್ಯಯನ, ಗಾಂಧಿ ಬಜಾರ್ ಮುಂತಾದ ಇನ್ನೂ ಅನೇಕ ಸಣ್ಣಪತ್ರಿಕೆಗಳ ಕಾಣ್ಕೆ, ಸಮಸ್ಯೆಗಳ ಬಗ್ಗೆ ಹೇಳುವವರಿಲ್ಲ. ಆಸಕ್ತರಿಗೆ ಸರಿಯಾದ ಮಾಹಿತಿ ಕೂಡ ನೀಡುವವರಿಲ್ಲ. ಅವು ನಿಂತು ಹೋದರೆ, ಪುನರಾರಂಭಗೊಂಡರೆ ಸ್ವತಃ ಚಂದಾದಾರರಿಗೂ ತಿಳಿಯುವುದಿಲ್ಲ! ಯಾಕೆಂದರೆ, ಜೀವಂತ ಇರುವಾಗಲೂ ಇವು ನಿಯಮಿತ ಕಾಲಕ್ಕೆ ಮುಖ ತೋರಿಸುವುದು ಸ್ವಲ್ಪ ಅನುಮಾನವೇ! ವಾರದಾಗ ಒಂದು ಸರತಿ ಬಂದು ಹೋಗಾಂವ ಎಂದು ಖಚಿತವಾಗಿ ಹೇಳುವಂತಿಲ್ಲ!

interpretation of chikkaath paintings

In most of my painting as a primary source, I have influenced by in general traditional style of painting and in particular with the paintings of Aminbavi. Aminbavi is in the dist of Dharwad, where paintings especially one can view at Santheswara Matt. Probably time of Ca.1875 A.D. In Santheswara Matt paintings were prominently done on wooden panels than which are placed according to Architectural design. Paintings of Aminbavi are very much similar to other miniatures tradition as such Jain and Rajasthani in its approach towards pictorial surface, flat background and religious protagonists as such stories of Krishna Arjuna, Shiva penacing of Manmata Vijaya, Saraswathi also includes secular colonial themes.

interpretation of chikkaath paintings

In most of my painting as a primary source, I have influenced by in general traditional style of painting and in particular with the paintings of Aminbavi. Aminbavi is in the dist of Dharwad, where paintings especially one can view at Santheswara Matt. Probably time of Ca.1875 A.D. In Santheswara Matt paintings were prominently done on wooden panels than which are placed according to Architectural design. Paintings of Aminbavi are very much similar to other miniatures tradition as such Jain and Rajasthani in its approach towards pictorial surface, flat background and religious protagonists as such stories of Krishna Arjuna, Shiva penacing of Manmata Vijaya, Saraswathi also includes secular colonial themes.

ಇದು ಯಾಕೆ ಹಿಂಗೆ?

ನಮಸ್ಕಾರ,

ನನಗೆ ಒಂದು ವಿಷಯ ಯಾವಾಗಲೂ ಕಾಡ್ತಾ ಇರುತ್ತೆ.

ರೂಪ ಎಂಟರ್‍ಪ್ರೈಸಿಸ್---- (ಇದನ್ನ ಓದುವುದು ರೂಪಾ ಅಂತ)

ಇದನ್ನ ಇನ್ನೂ ಸ್ವಲ್ಪ ಬಿಡಿಸಿ ಹೇಳಬೇಕಂದರೆ...

ರೂಪ ಅಂದರೆ ಅಂದವನ್ನು ವರ್ಣಿಸುವ ಪದ ಹೌದು ತಾನೆ?

ರೂಪಾ ಅಂದರೆ ಒಂದು ಹೆಸರು
ಬೆಂಗಳೂರಿನ ಬಹುತೇಕ ನಾಮ ಫಲಕಗಳಲ್ಲಿ ಈ ರೀತಿ (ರೂಪ ಅಂತ)ದೋಷಗಳನ್ನು ಕಂಡಿದ್ದೇನೆ.
ಇದು ಯಾಕೆ ಹೀಗೆ....

ಹೀಗೊಂದು ಪತ್ರ

ಹಿಂಗ್ಯಾಕೆ ನಮ್ಮೂರಲ್ಲೇ ಆಗುತ್ತೆ? ಎಂಬ ಲೇಖನಕ್ಕೆ ನನ್ನ ಪತ್ರ (thatskannada.com)

ಶಾಸ್ತ್ರಿಯವರೇ,

ನಾನೂ ನಿಮ್ಮ ಹಾಗೆ ಪಾಶ್ಚಿಮಾತ್ಯ ದೇಶದಲ್ಲಿರುವವನೇ (ಇಂಗ್ಲಂಡ್). ಆದರೇ ನನ್ನ ಅನುಭವ ನಿಮ್ಮ ಲೇಖನಕ್ಕೆ ತೀರ ತದ್ವಿರುದ್ಧ. ನನಗೇ ಇಲ್ಲಿನ ಖಾಲಿ ರಸ್ತೆಗಳು (ನಮ್ಮ ದೇಶದಲ್ಲಿ ಕರ್ಫೂ ಆದಾಗ ಮಾತ್ರ ಕಾಣುವಂಥಹ), ತುಂಬ ಕೃತಕವಾಗಿ Good Morning, Good evening, BYE, ಮತ್ತು ಮಾತು ಮಾತಿಗೆ Thanks, Sorry, excuse me ಎನ್ನುವುದನ್ನು ಕೇಳಿ ತಲೆ ಚಿಟ್ಟು ಹಿಡಿಯುತ್ತದೆ.

ನಾವು ನಮ್ಮ ದೇಶದ ಏರೋಪ್ಲೇನ್ ಹತ್ತಿದಾಗ ನಮ್ಮ ಸಂಕೋಚಗಳನ್ನೆಲ್ಲ ಬಿಟ್ಟು, ಪಾಶ್ಚಾತ್ಯರ ಢಾಂಬಿಕ (pseudo)ನಯ-ನಾಜೂಕುಗಳನ್ನು ಬಿಟ್ಟು ಹಗುರಾಗುತ್ತೇವೆ, ಅದಕ್ಕೆಂದೇ ಹತ್ತು ಸಾರಿ ಗಗನಸಖಿಯರನ್ನು ಕರೆಯುತ್ತೇವೆ. ಫಾರಿನ ಏರ್-ಲೈನಿನಲ್ಲಿ ಯಾಕೆ ಹೀಗಾಗೋಲ್ಲ ಅಂತ ಕೇಳ್ತೀರಲ್ಲಾ, ಒಂದು ಸಲ ಬಿಟ್ಟು ಎರಡು ಸಲ ಗಗನಸಖಿಯರನ್ನು ಕರೆದು ನೋಡಿ, ಕಂದು ಚರ್ಮದ ನಮ್ಮ ಬಣ್ಣದ ಬಗ್ಗೆ ತಮ್ಮತಮ್ಮಲ್ಲೇ ಮಾತಾಡಿಕೊಳ್ಳುತ್ತಾರೆ, ಅದಕ್ಕೆ ನಾವು ನೀವೆಲ್ಲ ಸುಮ್ಮನಿರುವುದು.

ಇನ್ನು ಕಸದ ಬುಟ್ಟಿಯಲ್ಲಿ ಬೀಸಾಕುವುವುದರ ವಿಚಾರಃ ದಿನಕ್ಕೆ ಸಾವಿರಾರು ಬಾರಿ CCTVಯಲ್ಲಿ ನಮ್ಮನ್ನು ರೆಕಾರ್ಡ್ ಮಾಡುವ ಈ Big Brother ಪಾಶ್ಚಾತ್ಯ ದೇಶಗಳಲ್ಲಿ ಕಸ ಬೀಸಾಕಿದರೆ ಕೌನ್ಸಿಲ್ನಿಂದ ತಪ್ಪಿಸಿಕೊಳ್ಳುವ ಛಾನ್ಸೇ ಇಲ್ಲ, ಮೇಲಾಗಿ ಕಸಕ್ಕೆ ಸಾವಿರಾರು ರೂಪಾಯಿ ದಂಡತೆರಬೇಕಾದ ಪರಿಸ್ಥಿತಿ. ನಮ್ಮ ದೇಶವಿನ್ನೂ Big Brother ಆಗಿಲ್ಲ ಸ್ವಾಮಿ, ಅದಕ್ಕೇ ಹಾಯಾಗಿ ನಾವು ಪಾನ್-ಬೀಡಾ ತಿಂದು ರಸ್ತೆಗಳಲ್ಲಿ ಆರಾಮವಾಗಿ ಉಗಿಯುತ್ತೇವೆ.

ಒಂದು ಭೇಲ್-ಪುರಿಗೆ ಇಲ್ಲಿ ಇಂಗ್ಲಂಡಿನಲ್ಲಿ ನಾನು ಕೊಡುವುದು ಕೇವಲ ೩೦೦ ರೂಪಾಯಿ ಮಾತ್ರ (ನಿಮ್ಮ ಅಮೇರಿಕದಲ್ಲಿ ಎಷ್ಟು ಅಂತ ಗೊತ್ತಿಲ್ಲ). ಭಾರತದಲ್ಲಿ ನೀವು ಅಷ್ಟು ದುಡ್ಡು ಕೊಟ್ಟು ತಿನ್ನುವಿರಾದರೆ, ಅಮೇರಿಕದಲ್ಲಿ ಸಿಗುವುದಕ್ಕಿಂತ ಚೆನ್ನಾಗಿ, ಶುಚಿಯಾಗಿ ಮಾಡಿ ಇನ್ನೂ ಜಾಸ್ತಿ quantity ಕೊಡುತ್ತಾರೆ. ಆದರೆ ನಿಮಗೆ ಭಾರತಕ್ಕೆ ಬರುತ್ತಿದ್ದಂತೆ , ಅಯ್ಯೋ, ಭೇಲ್-ಪುರಿಗೆ ೧೫ ರೂಪಾಯಿಯೇ, ೧೦ ರೂಪಾಯಿಗೆ ಸಿಗುತ್ತಿತ್ತಲ್ಲ ಅಂತ ಚಡಪಡಿಸುತ್ತೀರಿ. ಸುಮ್ಮನಿರಿ ಸಾರ್, ಈ ಥರ ಮಾತಾಡುವ NRIಗಳನ್ನು ದಿನನಿತ್ಯ ಕೇಳಿಸಿಕೊಳ್ಳುತ್ತಲೇ ಇರುತ್ತೇನೆ, ಬ್ಲಾಗುಗಳಲ್ಲಿ ಓದುತ್ತಲೇ ಇರುತ್ತೇನೆ.

ಇನ್ನು STOP ಸಿಗ್ನಲ್-ಗಳ ವಿಚಾರಃ ಪ್ರತಿ ಮೂಲೆಯಲ್ಲಿರುವ CCTVಗಳು, ಜೇಬನ್ನೆಲ್ಲ ಬರಿದು ಮಾಡುವ ಇನ್ಸುರನ್ಸ್ ಪಾಲಿಸಿಗಳು, ಸಣ್ಣ ತಪ್ಪಿಗೂ ಡ್ರೈವಿಂಗ್ ಲೈಸನ್ಸನ್ನೇ ರದ್ದು ಮಾಡುವ ಕಾನೂನುಗಳು - ಏಲ್ಲ ರಸ್ತೆಗಳು ಖಾಲಿ ಇದ್ದಾರೂ ಯಾವನಿಗೆ ಸ್ವಾಮಿ STOP ಸಿಗ್ನಲ್ ದಾಟಿ ಕಾರ್ ಓಡಿಸುವ ಧೈರ್ಯವಾಗುತ್ತೆ?