ಸೃಷ್ಟಿ !
ಇವತ್ತು ನಾನು ಬಿಗ್ ಬ್ಯಾಂಗ್ ಸಿದ್ಧಾಂತ ಮತ್ತು ಈ ಸೃಷ್ಟಿ ಯ ಬಗ್ಗೆ ಬರೆಯಲು ಯತ್ನಿಸುತ್ತಿದ್ದೀನಿ.
- Read more about ಸೃಷ್ಟಿ !
- 6 comments
- Log in or register to post comments
ಇವತ್ತು ನಾನು ಬಿಗ್ ಬ್ಯಾಂಗ್ ಸಿದ್ಧಾಂತ ಮತ್ತು ಈ ಸೃಷ್ಟಿ ಯ ಬಗ್ಗೆ ಬರೆಯಲು ಯತ್ನಿಸುತ್ತಿದ್ದೀನಿ.
ನೆನ್ನೆ ನವರಾತ್ರಿ ಹಬ್ಬದ ಮೊದಲ ದಿನ ದ ಬಗ್ಗೆ ಬರೆದಿದ್ದೆ. ಇವತ್ತು ಇನ್ನು ದಸರೆಯ ಎರಡನೆಯ ದಿವಸ.ನಮಗೆಲ್ಲ ತಿಳಿದ ಹಾಗೆ ನವರಾತ್ರಿ ಕನ್ನಡಿಗರಿಗೆ ದೊಡ್ಡ ಹಬ್ಬ. ವಿಜಯ ನಗರದ ಅರಸರ ಕಾಲದಲ್ಲಿ ದಸರೆಯ ಸಂಭ್ರಮ ನಡೆಯುತ್ತಿದ್ದದ್ದರ ವಿಷಯವಾಗಿ, ಆ ಕಾಲದಲ್ಲಿ ಬಂದಿದ್ದ ಪರ್ಶಿಯನ್ ಹಾಗೂ ಫ್ರೆಂಚ್ ಯಾತ್ರಿಕರ ಬರಹಗಳಿಂದ ತಿಳಿದುಬರುತ್ತದೆ. ಆ ವೈಭವಕ್ಕೆ, ಈಗಲೂ ಹಂಪೆಯಲ್ಲಿರುವ ಮಹಾನವಮಿ ದಿಬ್ಬವೂ ಸಾಕ್ಷಿಯಾಗಿದೆ. ನಂತರ, ಈ ಸಂಪ್ರದಾಯ ಮೈಸೂರಿನ ಅರಸರಲ್ಲೂ ಮುಂದುವರೆದದ್ದು ಆಶ್ಚರ್ಯವೇನಿಲ್ಲ.
ರಾಜರು ತಮ್ಮ ಇಷ್ಟದೇವಿ ಮೈಸೂರಿನ ನಗರ ದೇವತೆ, ಚಾಮುಂಡಿಯ ಮೇಲೆ ೧೦೮ ಕೃತಿಗಳನ್ನು ರಚಿಸಲು ಕೇಳಿದರಂತೆ, ಅಂತೆಯೇ ಮುತ್ತಯ್ಯ ಭಾಗವತರು ೧೦೮ ಕೃತಿಗಳನ್ನು ರಚಿಸಿದರು - ಕನ್ನಡದಲ್ಲಿರುವ ಈ ಕೃತಿಗಳ ಸಾಹಿತ್ಯವನ್ನು ದೇವೋತ್ತಮ ಜೋಯಿಸರೆಂಬುವರು ಬರೆದುಕೊಟ್ಟರಂತೆ.
ಮರಳಿ ಬರಲಿದೆ ಸಮಾಜವಾದ!
ವಿನಾಶ ಕಾಲೇ ವಿಪರೀತ ಬುದ್ಧಿ!
ಇತಿಹಾಸ, ಪುರಾಣ ಹಾಗೂ ಅಶ್ಲೀಲ ರಾಜಕಾರಣ
ಸೌಂದರ್ಯ ವರ್ಷಗಳುರುಳಿದಂತೆ ಕಮ್ಮಿಯಾಗುತ್ತಾ ಹೋಗುವುದು ಸಾಮಾನ್ಯ.ಆದರೆ ಕೆಲವರಲ್ಲಿ ವಯಸ್ಸಾದಂತೆ ಸೌಂದರ್ಯ ವರ್ಧಿಸುತ್ತಾ ಹೋಗುವುದು.
ಅದೊಂದು ನಕ್ಷತ್ರ. ಅನಂತವಾದ ವಿಶ್ವದ ಯಾವುದೋ ಮೂಲೆಯಲ್ಲಿ, ಕ್ಷಮಿಸಿ, ವಿಶ್ವಕ್ಕೆ ಮೂಲೆಯೆಂಬುದೇ ಇಲ್ಲವಲ್ಲ; ವಿಶ್ವದ ಯಾವುದೋ ಒಂದು ಕಡೆ ಹುಟ್ಟಿಕೊಂಡಿತ್ತು. ಅದರ ಹುಟ್ಟಿನಲ್ಲಿ ವಿಶೇಷವೇನಿರಲಿಲ್ಲ, ಬೇರೆಲ್ಲಾ ನಕ್ಷತ್ರಗಳು ಹುಟ್ಟಿದ ರೀತಿಯಲ್ಲೇ ಇದೂ ಹುಟ್ಟಿತ್ತು. ಅದು ಹುಟ್ಟಿದಾಗ ಹೆಸರು ಇಡುವವರು ಯಾರೂ ಇರಲಿಲ್ಲವೆಂದೋ ಏನೋ ಅದಕ್ಕೆ ಹೆಸರಿರಲಿಲ್ಲ.
ಕನ್ನಡದಲ್ಲಿ ’ಸ್ಲೇಟ್’ ಗೆ ಏನಂತೀರಾ?
ನಿಮಗಿದು ಗೊತ್ತೇ?
ಇಂದ,
ಗಿರೀಶ ರಾಜನಾಳ.
ಅಂದಳು ಗೆಳತಿ,
ಕಾಣದ ದೇಶಕೆ ವಲಸೆ
ಹೋಗುವ ಯೋಜನೆ,
ಸದ್ಯದಲ್ಲೇ.. ಇದೆಯೆಂದು..
ಓ! ಕೂಲ್, ಅಭಿನಂದನೆಗಳು
ಬಡಬಡಿಸ ಹತ್ತಿತ್ತು ಬಾಯಿ,
ಎಲ್ಲೋ ಎದ್ದ, ಕ್ಷೀಣ ದನಿಯ,
ಮರೆಮಾಚಲೇನೋ ಎಂಬಂತೆ..
ನಿಯಂತ್ರಣ ತಪ್ಪಿದಂತೆ, ಒಂದೆ ಸಮನೇ
ಕುಲುಕುತಿದ್ದವು ಕೈಗಳು, ಒಳಗಿದ್ದ ನಡುಕದ,
ವಿಜೃಂಭಣೆಯೇನೋ, ಎಂಬಂತೆ..
ಸಂತಸ, ಹೆಮ್ಮೆ ಸೂಚಿಸುತ್ತಿತ್ತು ಮೊಗ,
ಎಂದೆಂದೂ ಕಾಣದ ಕಾಂತಿಯ..
ಏಕಾಂತದಲ್ಲೆಲ್ಲೋ.. ಕಾಡುವ ದನಿ..
ಯಾವುದೋ ಪಿಸುಮಾತು, ಮತ್ತಾವುದೋ ಸ್ವರ..
ಯಾರದೋ ಕೇಕೆ, ಮತ್ತಾರದೋ ಆಕ್ರಂದನ..
ಒಮ್ಮೆ, ಕಟ್ಟು ಬಿಚ್ಚಿದ ಅಶ್ವಗಳ ನಾಗಾಲೋಟದಂತೆ..
ಮತ್ತೊಮ್ಮೆ, ಯಾರೋ ಹಾಕಿದ ಲಯಬದ್ದ ತಾಳದಂತೆ..
ಎಷ್ಟೋ ಬಾರಿ.. ಮಲಗಿದ್ದಿದೆ, ಶಪಿಸಿ..
ಯಾವುದೀ ದರಿದ್ರ ದನಿಯೆಂದು..
ಬಹಳ ತಡವಾಯಿತೋ ಏನೋ.. ತಿಳಿದದ್ದು
ಈ ರೀತಿ ವರ್ತಿಸುವ ಹೃದಯ, ನನ್ನಲ್ಲೇ.. ಇದೆಯೆಂದು..