ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದೇಹ ಮತ್ತು ಆತ್ಮ

ಪ್ರತಿ ಮಾನವ ಜನ್ಮದ ಗುರಿಯೂ, ಆಕಾರವುಳ್ಳ ಈ ದೇಹದ ಪರಿಧಿಯನ್ನು ಮೀರಿ ನಿರಾಕಾರವಾದ ಆತ್ಮವನ್ನು ಅರಿತುಕೊಳ್ಳುವುದೆಂದು ಜ್ಞಾನಿಗಳು ಹೇಳಿದ್ದಾರೆ. ಇದು ನಿಜವಾದರೆ, ಹುಟ್ಟಿನಿಂದಲೆ ಮಾನವನಿಗೆ ದೇಹ-ಆತ್ಮದ ಪರಿಜ್ಞಾನ ಏಕಿಲ್ಲ? ಅದನ್ನು ಸಾಧನೆ ಮೂಲಕ ಏಕೆ ತಿಳಿದುಕೊಳ್ಳಬೇಕು? ತಿಳಿದವರು ಕೃಪೆ ಮಾಡಿ ವಿವರಿಸಿ.

ಪ್ರಮಾಣವಚನವನ್ನು ಓದಿಸಬೇಕೇ? ಬೋಧಿಸಬೇಕೇ?

ಸಂವಿಧಾನಕ್ಕೆ ನಿಷ್ಠರಾಗಿರಬೇಕಾದ ಶಾಸಕರು ಹಾಗೂ ಮಂತ್ರಿ ಮಹೋದಯರು ತಮ್ಮ ನಿಷ್ಠೆಯು ಸಂವಿಧಾನದ ಕಡೆಗೆ ಇಲ್ಲ ಎಂದು ರಾಜಾರೋಷವಾಗಿ ಘೋಷಣೆ ಮಾಡುತ್ತಿರುವುದನ್ನು ಕಳೆದ ಕೆಲ್ಲವು ಕಾಲದಿಂದ ನೋಡುತ್ತಿದ್ದೇವೆ.

 ಈ ರೀತಿ ಪ್ರಮಾಣ ವಚನ ಸ್ವೀಕರಿಸುವುದು ಸಂವಿಧಾನಾತ್ಮಕವಾಗಿ ಸಿಂಧು ಎನಿಸಿಕೊಳ್ಳುತ್ತದೆಯೇ?

ನುಡಿ ದ್ವಿಭಾಷಾ ತಂತ್ರಾಂಶದ ಕುರಿತ ಸರ್ಕಾರೀ ಸುತ್ತೋಲೆ

ಕನ್ನಡದಲ್ಲಿ ಅದೆಂಥದೋ ದ್ವಿಭಾಷೆಯನ್ನೇ ಮಾನಕವಾಗಿ ಬಳಸಬೇಕೆಂಬ ಆದೇಶ ಹೊರಬಿದ್ದಿದೆಯಂತೆ, ಆಕ್ಷೇಪವೇನಾದರೂ ಇದ್ದಲ್ಲಿ ಇದೇ ೨೧ರೊಳಗೆ ತಿಳಿಸಬಹುದಂತೆ ಎಂಬ ಒಕ್ಕಣೆಯ ಸರ್ಕಾರೀ ಓಲೆಯ ಬಗ್ಗೆ ಪ್ರಕಟನೆಯಿತ್ತಲ್ಲ, ಅದು ಹೆಚ್ಚಿನ ಚರ್ಚೆಗೊಳಗಾಗದೆ ಹಾಗೇ ಮರೆಯಾಯಿತಲ್ಲ. ಅದರ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದೇನೆ.

ವ್ಯಾಘ್ರನ ತ್ಯಾಗ

ವ್ಯಾಘ್ರನ ತ್ಯಾಗ
ಈಗ್ಗೆ ೧೦ ಅಥವಾ ೧೨ ವರ್ಷಗಳ ಕೆಳಗೆ ನನ್ನ ಶಾಲೆಯಲ್ಲಿ ೫ನೇ ತರಗತಿಯಲ್ಲಿ ಕನ್ನಡ ಮಾಸ್ಟರ್ ಒಬ್ಬರು ರಾಗವಾಗಿ ಪುಣ್ಯಕೋಟಿಯ ಕಥೆಯನ್ನು ಹಾಡಿಸುತ್ತಿದ್ದರು. ಅದರಲ್ಲಿ ಬಂದ ಸಾಲುಗಳು,
“ಎನ್ನ ಒಡಹುಟ್ಟಕ್ಕ ನೀನು ನಿನ್ನ ಕೊಂದು ನಾನೇನ ಪಡೆವೆನು
ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು.”
ಈ ಸಾಲುಗಳು ನನ್ನ ಮನವ ಕಲಕಿತು. ಹೀಗೆ ಪುಣ್ಯಕೋಟಿಯನ್ನುಳಿಸಿ ತನ್ನ ಪ್ರಾಣವ ತೆತ್ತ ಹುಲಿಯ ಬಗ್ಗೆ ನನಗೆ ಒಂದು ಗೌರವ ಭಾವ ಹುಟ್ಟಿತು. ಹೀಗಾಗಿ ಒಂದು ರೂಪಕ ತಯಾರು ಮಾಡಿ ನನ್ನ ಮಕ್ಕಳ ಕೈಲಿ ಮಾಡಿಸಿದ್ದೆ.ಅದನ್ನೆ ಇಲ್ಲಿ “ವ್ಯಾಘ್ರನ ತ್ಯಾಗ” ಎಂಬ ಹೆಸರಿನಲ್ಲಿ ಕಳಿಸಿದ್ದೇನೆ.
ಅಂಕ ೧
ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದಿ
ತ್ಯಾಗ ಮಾಡಿ ಪ್ರಾಣಬಿಟ್ಟ
ಒಂದು ವ್ಯಾಘ್ರನ ಕಥೆಯಿದು.
ಹಾರಿ ನೆಗೆದು ಪ್ರಾಣ ತೊರೆದ
ಅರ್ಬುದಾನೆಂದೆಂಬ ವ್ಯಾಘ್ರನ
ತ್ಯಾಗ ಭಾವವ ಬಿಡಿಸಿ ಹೇಳುವ
ಒಂದು ಸುಂದರ ಕಥೆಯಿದು.

ಬಿಡುಗಡೆ

ಗಾರ್ಮೆಂಟ್ಸ್ ನಿಂದ ಆಗ ತಾನೆ ಬಂದು ಉಸ್ ಅಂತ ಕೂತವಳಿಗೆ ಮಗಳ ನೆನಪು ಬಂತು ಕೂಡಲೆ ಪಕ್ಕದ ಮನೆಗೆ ಹೋದಿ ಕರೆ ತಂದಳು.ಗಂಡ ಇನ್ನೂ ಬಂದಿರಲಿಲ್ಲ .ಮಗಳಿಗೆ ಕಾಫಿ ಕೊಟ್ಟು ತಾನುಹಾಲಿಲ್ಲದ ಕಾಫಿ ಹೀರುತ್ತಿದ್ದಂತೆ ಆ ಕಾಫಿಯ ಕಪ್ಪೆಲ್ಲ ತನ್ನ ಬದುಕಲ್ಲೆ ತುಂಬಿದಂತೆ ಭಾಸವಾಗತೊಡಗಿತು.

ಬದುಕಿನ ಅನಿಶ್ಚಿತತೆ ಕಾಡತೊಡಗಿತು

ಅವಳಿಗೆ ಗೊತ್ತಿತು ಹೀಗೆ ಆಗುತ್ತದೆ ಎಂದು

ಅಫ್ಜಲ್‍ ಗುರುಗೆ ಅಡ್ವಾಣಿ ಪಿ.ಎಮ್ ಆಗಬೇಕಂತೆ

ಮೂರು ವರ್ಷದ ಮೇಲೆ ಅಫ್ಜಲ್ ಗುರು ಬಾಯಿ ಬಿಟ್ಟಿದ್ದಾನೆ
ಅದೂ ಅಂತಿಥ ಮಾತಲ್ಲ
ಕಾಂಗ್ರೆಸ್ಸ್‌ನ ಜಂಘಾಬಲವನ್ನೆ ಉಡುಗಿಸುವ ಮಾತು
ತನ್ನ ಗಲ್ಲಿನ ವಿಷಯ್ದದಲ್ಲಿ ಕೇವಲ ಬಿಜೆಪಿ ಮಾತ್ರ ದೃಢ ನಿರ್ಧಾರ ತಳೆಯಬಲ್ಲುದು
ಕಾಂಗ್ರೆಸ್ನದು ವೋಟಿನ ರಾಜಕಾರಣ ಅಂತ ಬಡಾಯಿಸಿದ್ದಾನೆ
ನಿಜಕ್ಕೂ ಒಬ್ಬ ಭಯೋತ್ಪದಕನ ಬಾಯಲ್ಲಿ ಇಂತಹ ಮಾತುಗಳು ತೀವ್ರ ಆಶ್ಚರ್ಯಕರ
ನೀವೆನಂತೀರಾ?

ಗದೆ ಮತ್ತು ಗಧೆ

ಇತ್ತೀಚೆಗೆ ರನ್ನನ" ಗದಾಯುದ್ದ" ಓದುತ್ತಿದ್ದೇನೆ.ಲೇಖಕರು ಡಾ! ಎಲ್ ಬಸವರಾಜು. ನನಗಿರುವ ಸ೦ಶಯವೆ೦ದರೇ, ಈ ಪುಸ್ತಕದ ಹೆಸರು "ಸರಳ ಗದಾಯುದ್ದ", "ಗದೆ" ಮತ್ತು "ಗಧೆ " ಇದರಲ್ಲಿ ಯಾವುದು ಸರಿ...?

"ನೀನಾರಿಗಾದೆಯೋ ಎಲೆ ಮಾನವ"

ನೆನ್ನೆ ಮನೆ ಕೆಲಸ ಮುಗಿಸಿ ತಡವಾಗಿ ಮಲಗಿದ್ದರಿಂದ ಬೆಳಿಗ್ಗೆ ೫.೦೦ ಘಂಟೆಗೆ ಎಚ್ಚರವಾಗಲಿಲ್ಲ. ನನ್ನ ಮೊಬೈಲಿನಲ್ಲಿ ಮೆಸ್ಸಜ್ ಟೋನ್ ಕೂಗಿ ೫.೨೦ಕ್ಕೆ ನನ್ನ ಎಬ್ಬಿಸಿತ್ತು, ನಾನು ಇದ್ಯಾರು ಇಷ್ಟು ಬೆಳಿಗ್ಗೆ ಬೆಳಿಗ್ಗೆ ನನಗೆ Good morning ವಿಶ್ ಮಾಡ್ತಾಇರೊವ್ರು ಅಂತ ಅರ್ಧಂಭರ್ದ ಕಣ್ಣಿನಲ್ಲೇ ಮೆಸ್ಸೇಜನ್ನ ಓದಿ ಧಡ್ ಅಂತ ಎದ್ದು ಕುಳಿತೆ.

'ವರ್ಮಾ'ನ "ಸರ್ಕಾರ್ ರಾಜ್ "ಸಾಮ್ರಾಜ್ಯದ ಅಂಧ: ಪತನ.....

ಚಂದಮಾಮ ಕಥೆಗಳಲ್ಲಿಯ ವಿಕ್ರಮ ಮತ್ತು ಬೇತಾಳ ಸೀರೀಸ್ [ಸೀರಿಯಸ್] ಅಲ್ಲ. ಕಥೆಗಳ ಪರಿಶ್ಕ್ರುತ ರೂಪ ಅಥವಾ ಮುಂದುವರೆದ

ರೂಪವೆನ್ನಬಹುದಾದ ನಮ್ಮ ಸಿನಿಮಾಗಳ ಮುಂದುವರೆದ ಭಾಗಗಳು ತಮ್ಮ ಹಿಂದಿನ ಸಿನಿಮಾಗಳಷ್ಟೇ ಯಶಸ್ವಿಯಾಗುವಲ್ಲಿ ಸದಾ

ಎಡುವುತ್ತಲೇ ಇರುವುದು ಭಾರತ ಚಿತ್ರರಂಗದ ಪ್ರಮುಖ ನಿರ್ದೇಶಕ ರಾಮಗೋಪಾಲ್ ವರ್ಮಾ ನ ಬಹು ನಿರೀಕ್ಷಿತ ಚಿತ್ರ
"ಸರ್ಕಾರ್ ರಾಜ್"

ದೆಹಲಿ ದೂದ ಹಾಗೂ ನೆನಪುಗಳು!

ಕಾಡಬೆಳದಿಂಗಳಿಗೆ ಪ್ರಶಸ್ತಿ ಬಂದ ವಿಷಯ ಹರಿ ಬರೆದಿದ್ರು. ಅದನ್ನ ಓದ್ದೆ. ಅದ್ರಲ್ಲಿ ದಟ್ಸ್ ಕನ್ನಡದಲ್ಲಿದ್ದ ವರದಿಗೂ ಕೊಂಡಿ ಹಾಕಿದ್ರು. ನಾನೂ ಹಿನ್ನಲೆ ಗಾಯನಕ್ಕೆ ಯಾರಿಗೆ ಬಂದಿದೆ ಈ ಸರ್ತಿ ಪ್ರಶಸ್ತಿ ಅಂತ ನೋಡ್ದೆ. ಪಂಜಾಬಿ ಸಿನೆಮಾದಲ್ಲಿ ಗುರುದಾಸ್ ಮಾನ್ ಗೆ ಪ್ರಶಸ್ತಿ ಬಂದಿದೆ! ಆಗ ಹಿಂದೆ ನಮಗೆಲ್ಲ ಟಿ.ವಿ. ಅಂದ್ರೆ ಬರೀ ಹಿಂದಿ ದೂರದರ್ಶನ ಆಗಿದ್ದ ಕಾಲ ನೆನಪಾಯ್ತು. ನಮ್ಮೂರಲ್ಲಿ ಟಿ.ವಿ. ಸ್ಟೇಷನ್ ಶುರುವಾದ ಹೊಸತು. ದಿನಾ ಬೆಳಗೂ ಸಂಜೆ ಬರೀ ಹಿಂದಿ ಅಷ್ಟೆ. ಭಾನುವಾರ ಮಧ್ಯಾಹ್ನ ಒಂದು ಪ್ರಾದೇಶಿಕ ಚಿತ್ರ ಅಂತ ಹಾಕೋರು. ಕನ್ನಡದ ಸರತಿ ಎರಡೋ ಮೂರೋ ತಿಂಗಳಿಗೆ ಒಮ್ಮೆ. ಆದ್ರೆ, ಅದು ಹೇಗೋ ನಮ್ಮ ಮನೆಗೆ ಟಿ.ವಿ.ತಂದ ದಿನವೇ ಕನ್ನಡ ಚಿತ್ರ ಸಂಧ್ಯಾರಾಗ ಬಂದಿತ್ತು. ಅದ್ದ್ಯಾವ್ದೋ ಶ್ರೀವಾಸ್ತವ ಅನ್ನೋ ನಿರ್ವಾಹಕಿ "ಅಬ್ ದೇಖಿಯೇ ಕನ್ನಡ್ ಚಿತ್ರ್ ಸಾಂಧ್ಯ್ ರಾಗ್" ಅಂತ ತಪ್ಪು ತಪ್ಪಾಗಿ ಉಲಿದಿದ್ದಳು. ಈ ಪ್ರಾದೇಶಿಕ ಚಿತ್ರದ ಸಾಲಿನಲ್ಲೇ ಎಷ್ಟೋ ಒಳ್ಳೆ ಮಲೆಯಾಳಮ್, ತಮಿಳು ಚಿತ್ರಗಳನ್ನೂ ನೋಡಿದ ನೆನಪಿದೆ.

ಇದಲ್ಲದೆ, ಟಿ.ವಿ.ಯಲ್ಲಿ ಕನ್ನಡ ಏನಾರೂ ಕೇಳ್ಬೇಕಂತಿದ್ರೆ, ಎರಡುವಾರಕ್ಕೊಂದು ಸಲ ರಾತ್ರಿ ೧೦:೧೦ ಕ್ಕೋ ಏನೋ ( ಅದ್ಯಾಕೆ ಈ ಸಮಯ ಇಟ್ಕೊಂಡಿದ್ರೋ ಗೊತ್ತಿಲ್ಲ, ಬೇರೆ ಭಾಷೆಯವರಿಗೆ ತಾನೇ, ತಡ ಆದ್ರೂ ಕಾಯ್ತಾರೆ ಅಂತಿರ್ಬೋದು), ಚಿತ್ರಮಾಲಾ ಅಂತ ಒಂದು ಕಾರ್ಯಕ್ರಮ. ಅದರಲ್ಲಿ ಹಿಂದಿ ಬಿಟ್ಟು ಬೇರೆಬೇರೆ ಭಾಷೆಯ ಚಿತ್ರಗೀತೆ ಹಾಕೋರು. ಒಂದು ತರಹದಲ್ಲಿ ಈ ಚಿತ್ರಗೀತೆ ಕಾರ್ಯಕ್ರಮಕ್ಕೇ ಪರವಾಗಿಲ್ಲ, ಸ್ಪೆಶಲ್ ಟ್ರೀಟ್‍ಮೆಂಟ್ ಅಂದ್ಕೋಬಹುದು. ಯಾಕಂದ್ರೆ, ತಿಂಗಳಿಗೋ ಎರಡು ತಿಂಗಳಿಗೋ ಬರ್ತಿದ್ದ ಶಾಸ್ತ್ರೀಯ ಸಂಗೀತ ಬರ್ತಾ ಇದ್ದದ್ದು ಇನ್ನೂ ತಡವಾಗಿ - ರಾತ್ರಿ ಹತ್ತೂ ಐವತ್ತಕ್ಕೋ ಏನೋ!