ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಎ ಟಿ ಎಂ ಯಂತ್ರಕ್ಕೀಗ ನಲುವತ್ತು ವರ್ಷ(ಇ-ಲೋಕ-29)(2/7/2007)

ATMಜಗತ್ತಿನ ಮೊದಲ ಎ ಟಿ ಎಂ ಯಂತ್ರ ಸ್ಥಾಪನೆಯಾದುದು ಲಂಡನ್ ಸಮೀಪದ ಬ್ಯಾಂಕ್ ಶಾಖೆಯಲ್ಲಿ. ಅದು ನಲುವತ್ತು ವರ್ಷ ಮೊದಲು. ಆಗ ಎ ಟಿ ಎಂ ಕಾರ್ಡುಗಳೆಂಬ ಪ್ಲಾಸ್ಟಿಕ್ ಕಾರ್ಡುಗಳಿರಲಿಲ್ಲ. ವಿಕಿರಣಶಾಲಿ ಇಂಗಾಲದ ರೂಪ ಇಂಗಾಲ-14 ಸವರಿದ ಚೆಕ್ ಹಾಳೆಯನ್ನು ಬಳಸಬೇಕಿತ್ತು.ಪಿನ್ ಸಂಖ್ಯೆಯನ್ನು ತಾಳೆ ಮಾಡಿದ ನಂತರ ಹಣ ಕೊಡುವ ವ್ಯವಸ್ಥೆ ಆಗಲೇ ಜಾರಿಗೆ ಬಂದಿತ್ತು. ಚೆಕ್ ಒಂದಕ್ಕೆ ಹತ್ತು ಪೌಂಡ್ ಯಂತ್ರ ನೀಡುತ್ತಿದ್ದ ಗರಿಷ್ಠ ಹಣವಾಗಿತ್ತು. ಎ ಟಿ ಎಂ ಯಂತ್ರದ ಸಂಶೋಧಕ ಶೆಪರ್ಡ್ ಬ್ಯಾರನ್ ಈಗ ಎಂಭತ್ತೆರಡು ವರ್ಷದ ಅಜ್ಜ.ಆರ್ಕಿಮಿಡೀಸ್ ಸ್ನಾನ ಮಾಡುತ್ತಿದ್ದಾಗ ಆತನ ಸಮಸ್ಯೆಗೆ ಪರಿಹಾರ ಹೊಳೆದು ಯುರೇಕಾ ಎಂದು ಕೂಗುತ್ತಾ ಸ್ನಾನದ ತೊಟ್ಟಿಯಿಂದ ಹೊರ ಬಂದ ಕತೆ ನಿಮಗೆ ಗೊತ್ತಿದೆ. ಶೆಪರ್ಡ್‍ಗೆ ಕೂಡಾ ಎ ಟಿ ಎಂ ಯಂತ್ರದ ಆಲೋಚನೆ ಹೊಳೆದುದು, ಅತನು ಸ್ನಾನ ಮಾಡುತ್ತಿದ್ದಾಗಲೇ!ಆಗ ಅಲ್ಲಲ್ಲಿ ಕೆಲಸ ಮಾದುತ್ತಿದ್ದ ಚಾಕಲೇಟ್ ಮಾರಾಟ ಮಾಡುತ್ತಿದ್ದ ಯಂತ್ರವೇ ಇದಕ್ಕೆ ಸ್ಪೂರ್ತಿ. ವಿಕಿರಣಶೀಲ ಚೆಕ್ ಬಳಕೆ ಎ ಟಿ ಎಂ ಯಂತ್ರದ ಉಪಯೋಗ ಆರೋಗ್ಯಕ್ಕೆ ಒಳಿತಲ್ಲ ಎನ್ನುವ ವದಂತಿಗೆ ಕಾರಣವಾಯಿತು.ಮೊದಲಿನ ಯಂತ್ರವನ್ನು ದರೋಡೆಕೋರರು ಸೂರೆ ಮಾಡಿದರಂತೆ. ಒಂದು ಯಂತ್ರ ತಪ್ಪಾಗಿ ಪ್ರತಿಕ್ರಿಯೆ ನೀಡಿ ತಲೆನೋವು ಉಂಟು ಮಾಡಿತ್ತು. ಪರಿಶೀಲಿಸಿದಾಗ ಆ ಯಂತ್ರ ತಪ್ಪೆಸಗಲು ಅದರ ಪಕ್ಕದಲ್ಲಿ ಸಾಗುತ್ತಿದ್ದ ಟ್ರಾಮ್ ಯಂತ್ರದ ತಂತಿಗಳು ಎನ್ನುವುದು ಗೊತ್ತಾಯಿತು. ಮೊದಲಿಗೆ ಶೆಪರ್ಡ್ ಆರು ಅಂಕಿ ಪಿನ್ ಉಪಯೋಗಿಸುವ ಆಲೋಚನೆಯಲಿದ್ದ. ನಂತರ ಹೆಂಡತಿಯ ಅಭಿಪ್ರಾಯ ಕೇಳಿದಾಗ ನಾಲ್ಕಕ್ಕಿಂತ ಹೆಚ್ಚಿನ ಅಂಕಿಗಳನ್ನು ನೆನಪಿನಲ್ಲಿಡುವುದು ತನ್ನ ಸಾಮರ್ಥ್ಯಕ್ಕೆ ಮೀರಿದ್ದು ಎನ್ನುವ ಅವಳ ನೇರ ನುಡಿ, ನಾಲ್ಕಂಕಿ ಪಿನ್ ಸಂಖ್ಯೆ ಬಳಸಲು ಕಾರಣವಾಯಿತು.ಆಶ್ಚರ್ಯವೆಂದರೆ ಈಗಲೂ ನಾಲ್ಕಂಕಿ ಪಿನ್ ಸಂಖ್ಯೆಯೇ ಉಳಿದಿದೆ. ಎ ಟಿ ಎಮ್ ಯಂತ್ರದ ಭವಿಷ್ಯದ ಬಗ್ಗೆ ಕೇಳಿದಾಗ ಶೆಪರ್ಡ್ ಅದು ಇನ್ನು ಹೆಚ್ಚು ಕಾಲ ಉಳಿಯುವ ಭರವಸೆ ಇಲ್ಲವೆನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು. ಸೆಲ್ ಪೋನಿನ ಮೂಲಕ ಹಣ ಪಾವತಿಸುವ ವ್ಯವಸ್ಥೆ ಈಗ ಲಭ್ಯವಿರುವುದರಿಂದ ಮುಂದಿನ ದಿನಗಳಲ್ಲಿ, ಎಲ್ಲಾ ಹಣಕಾಸಿನ ವ್ಯವಹಾರದ ಪಾವತಿಯೂ ಅದರ ಮೂಲಕವೇ ಆಗಬಹುದು ಎನ್ನುವುದು ಅವರ ಅಭಿಪ್ರಾಯ. ನೋಟನ್ನು ಒಂದೆಡೆಯಿಂದ ಇನ್ನೊಂದೆಡೆ ಕೊಂಡೊಯ್ಯುವುದು ಅಪಾಯಕಾರಿ. ಹೀಗಿರುವಾಗ ಅವನ್ನು ಯಾಕಾಗಿ ಅವಲಂಬಿಸಬೇಕು ಎನ್ನುವುದು ಯೋಚಿಸಬೇಕಾದ ಪ್ರಶ್ನೆಯೇ.

ಸುರಕ್ಷಿತ ವಿಮಾನಯಾನಕ್ಕೆ ಹೊಸ ವ್ಯವಸ್ಥೆ

ವಿಮಾನಯಾನಗಳು ಹೆಚ್ಚಿದಂತೆ,ಸಮಯ ಪರಿಪಾಲನೆ ಕಷ್ಟವಾಗುತ್ತಿದೆ ಎನ್ನುವುದು ಅಮೆರಿಕಾದಂತಹ ಅನುಭವ. ಇದಕ್ಕೆ ಮುಖ್ಯ ಕಾರಣ ವಿಮಾನಗಳ ನಿಯಂತ್ರಣಕ್ಕೆ ರಾಡಾರ್ ಸಾಧನಗಳ ಬಳಕೆ. ವಿಮಾನ ರಾಡಾರ್ ಕೇಂದ್ರದಿಂದ ಸಮೀಪವಿದ್ದರೆ, ವಿಮಾನಗಳ ಸ್ಥಾನದ ಬಗ್ಗೆ ರಾಡಾರ್‌ಗಳು ನಿಖರವಾಗಿ ಮಾಹಿತಿ ನೀಡುತ್ತವೆ. ಆದರೆ ವಿಮಾನಗಳು ರಾಡಾರ್ ಆಂಟೆನಾದಿಂದ ದೂರ ಸರಿದಂತೆ ಅವುಗಳ ಸ್ಥಾನದ ಬಗ್ಗೆ ನಿಯಂತ್ರಣ ಕಕ್ಷೆ ಅಥವಾ ಇತರ ವಿಮಾನಗಳವರಿಗೆ ಸಿಗುವ ಮಾಹಿತಿ ಅಸ್ಪಷ್ಟವಾಗಿರುತ್ತದೆ. ಹಾಗಾಗಿ ಒಂದೇ ಎತ್ತರದಲ್ಲಿ ಹಾರಾಡುತ್ತಿರುವ ವಿಮಾನಗಳು ರಾಡಾರ್ ಸಮೀಪ ಇರುವಾಗ ಪರಸ್ಪರ ಐದು ಕಿಲೋಮೀಟರ್ ಅಂತರ ಕಾಯ್ದುಕೊಂಡರೆ, ದೂರದಲ್ಲಿರುವಾಗ ಇಪ್ಪತ್ತು ಕಿಲೋಮೀಟರ್ ಅಂತರ ಹೊಂದಿರಬೇಕು. ವೇಗ ಹೆಚ್ಚಿದಂತೆ ರಾಡಾರ್‌ಗಳು ನೀಡುವ ಮಾಹಿತಿ ನಂಬಲರ್ಹವಲ್ಲ. ಹೀಗಾಗಿ ವಿಮಾನಗಳ ಹಾರಾಟ ನಿಧಾನವಾಗಿ,ಸಮಯ ಪರಿಪಾಲನೆ ಕಷ್ಟವಾಗುತ್ತದೆ. ಹೊಸ ವ್ಯವಸ್ಥೆ ಎಡಿಎಸ್-ಬಿಯಲ್ಲಿ ಕೃತಕ ಉಪಗ್ರಹಗಳನ್ನು ಬಳಸಲಾಗುತ್ತದೆ. ಜಿ ಪಿ ಎಸ್ ಉಪಗ್ರಹ ವ್ಯವಸ್ಥೆ ಬಳಸಿ, ಪ್ರತಿ ವಿಮಾನವೂ ತನ್ನ ಸ್ಥಾನವನ್ನು ಬಹಳ ನಿಖರವಾಗಿ ಲೆಕ್ಕ ಹಾಕಿ, ಅದನ್ನು ಬಳಸಿ,ವಿಮಾನ ಹಾರುತ್ತಿರುವ ವಾಯುಮಂಡಲದ ಚಿತ್ರವನ್ನು ರಚಿಸುತ್ತದೆ.ಇದನ್ನು ದೂರಸಂಪರ್ಕ ಉಪಗ್ರಹದ ಮೂಲಕ ಇತರ ವಿಮನಗಳಿಗೂ ತಲುಪಿಸುತ್ತವೆ. ಹೀಗಾಗಿ ವಿಮಾನಗಳ ಪೈಲಟ್‌ಗಳು ತಮ್ಮ ಅಂತರವನ್ನು ಅಗತ್ಯವಿರುವಷ್ಟೇ ಕಾಯ್ದುಕೊಂಡು,ಹಾರಾಟ ನಡೆಸಲು ಸಾಧ್ಯವಾಗುತ್ತದೆ. ಅಲಾಸ್ಕದಂತಹ ಅಧಿಕ ಅಪಘಾತ ವಲಯದಲ್ಲೂ ಹೊಸ ವ್ಯವಸ್ಥೆ ಉತ್ತಮ ಫಲಿತಾಂಶ ನೀಡಿದೆ.ಸಾಗರದಲ್ಲಿಹಾರಾಡುವ ವಿಮಾನಗಳು ರಾಡಾರ್ ಪಥದಲ್ಲಿ ಬರುವುದಿಲ್ಲವಾದರೂ ,ಎಡಿಎಸ್-ಬಿ ವ್ಯವಸ್ಥೆ ಅಲ್ಲೂ ಲಭ್ಯವಿರುತ್ತದೆ. ಇದರ ಜತೆ ಇನ್‌ಫ್ರಾರೆಡ್ ಚಿತ್ರದ ಮೂಲಕ ರಾತ್ರಿಯ ವೇಳೆ ಮತ್ತು ಮೋಡ ಮುಸುಕಿದ ಆಗಸವಿದ್ದಾಗಲೂ,ರನ್‍ವೇಯ ನೋಟವನ್ನು ಪೈಲಟ್ ಪಡೆಯಲು ಅನುವಾಗಿಸುವ ವ್ಯವಸ್ಥೆಗಳು ಈಗ ಲಭ್ಯ.

ತಾಜ್ ಮಹಲ್ ಯಾಕೆ?

ವಿಶ್ವದ ೭ ಅದ್ಭುತಗಳಲ್ಲಿ ಭಾರತದ್ದೂ ಒಂದು ಪುರಾತನ ಸ್ಮಾರಕ ಬೇಡವೆ?
ಈ ಅದ್ಭುತಗಳನ್ನು ಆರಿಸಲು ನಡೆದಿರುವ ಚುನಾವಣೆಯನ್ನು ಸ್ವಲ್ಪ ಗಮನಿಸಿ.

ಭಾರತೀಯರು ಕೇವಲ ತಾಜ್ ಮಹಲನ್ನೇ ಏಕೆ ಆ ಚುನಾವಣಾ ಕಣಕ್ಕೆ ಇಳಿಸಿದ್ದಾರೆ?

ಸ೦ಜೀವಿನಿ

ಸ೦ಜೀವಿನಿಯಾಗಿ ತುಳಸಿ

TuLasi

ನಮ್ಮ ನಾಡಿನ ಜನತೆಯ ತಲೆತಲಾ೦ತರದ ಆಚಾರ, ಸ೦ಸ್ಕೃತಿ ಮತ್ತು ಆಹಾರಗಳಲ್ಲಿ ಆರೋಗ್ಯದ ದೃಷ್ಟಿಕೋನವೂ ಪ್ರಮುಖವಾಗಿತ್ತು ಎ೦ಬುದಕ್ಕೆ ಅನೇಕ ನಿದರ್ಶನಗಳಿವೆ. ಅವರು ಗೊತ್ತಿದ್ದೋ/ಗೊತ್ತಿಲ್ಲದೆಯೋ, ಸ೦ಶೋದನೆ ಮಾಡಿಯೋ/ಸ೦ಶೋದನೆ ಮಾಡದೆಯೋ ಕೆಲವೊ೦ದು ಔಷದಿ ಗಿಡಮೂಲಿಕೆಗಳನ್ನ ಬಳಸ್ಸಿತ್ತಿದ್ದುದು ತಿಳಿಯುತ್ತದೆ. ಇವುಗಳಲ್ಲಿ ಪ್ರಮುಖವಾದವು ತುಳಸಿ, ಬೇವು, ಕರಿಬೇವು, ಬಿಲ್ವ ಇತ್ಯಾದಿ ಇತ್ಯಾದಿ. ಇವುಗಳಲ್ಲಿ ತುಳಸಿ ಒ೦ದು ರೀತಿಯ ಸ೦ಜೀವಿನಿ ಎ೦ದರೆ ತಪ್ಪಾಗಲಾರದು. ಈ ಸ೦ಜೀವಿನಿಯ ಬಗ್ಗೆ ಕೆಲವು ವೈಜ್ನಾನಿಕ ಮಾಹಿತಿಗಳನ್ನ ಸ೦ಗ್ರಹಿಸಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.

ಹಿ೦ದೂ ಸ೦ಸ್ಕೃತಿಯಲ್ಲಿ ತುಳಸಿ ಒ೦ದು ಪರಮ ಭಕ್ತಿಯ ಸ೦ಕೇತ. ಅನೇಕ ದೇವಾಲಯಗಳಲ್ಲಿ ಇ೦ದಿಗೂ ತುಳಸಿಯಿಲ್ಲದ ಪೂಜೆ ಅಪೂರ್ಣ! ಮತ್ತು ತುಳಸಿಯಿಲ್ಲದ ತಿರ್ಥ ತೀರ್ಥವೇ ಅಲ್ಲ. ಇ೦ದಿಗೂ ಅನೇಕ ಮನೆಗಳ ಅ೦ಗಳದಲ್ಲಿ ತುಳಸಿ ಕಟ್ಟೆಗೆ ಒ೦ದು ಪ್ರಮುಖಸ್ಥಾನ ಮತ್ತು ಇ೦ದಿಗೂ ಹೆ೦ಗಳೆಯರು ಪ್ರಾತ: ಪೂಜೆ ಮಾಡಿ ಸುತ್ತು ಹಾಕುವುದು ಸಾಮಾನ್ಯವಾಗಿದೆ. ತುಳಸಿ ಎ೦ದರೆ "ಅನುಪಮ, ಹೋಲಿಸ ಲಾಗದ, ಅಸಮಾನ, ಅಪ್ರತಿಮ, ಎಣೆಯಿಲ್ಲದ" ಎ೦ಬ ಅರ್ಥಗಳು ಆಗುತ್ತವೆ. ಹೆಸರೇ ಸೂಚಿಸುವ ಹಾಗೆ ಇದರ ಔಷದಿಯ ಗುಣಗಳೂ ಕೂಡ ಅಪ್ರತಿಮ, ಅನುಪಮವಾದುವು.

ತುಳಸಿಯಲ್ಲಿ ಕೃಷ್ಣ ತುಳಸಿ ಮತ್ತು ರಾಮ ತುಳಸಿ ಎ೦ದು ಪ್ರಮುಖವಾಗಿ ಎರಡು ವಿದಗಳಿವೆ. ಕೃಷ್ಣ ತುಳಸಿಯು ಬಣ್ಣದಲ್ಲಿ ಸ್ವಲ್ಪ ಕಪ್ಪಾಗಿರುತ್ತದೆ ಮತ್ತು ರಾಮ ತುಳಸಿಯು ಎಲೆ ಹಸಿರು ಬಣ್ಣದ್ದಾಗಿರುತ್ತದೆ. ರಾಮ ತುಳಸಿಯು ಸಾಮಾನ್ಯವಾಗಿ ಎಲ್ಲಡೆ ದೊರಕುತ್ತದೆ ಮತ್ತು ಈ ವಿದದ ತುಳಸಿಯೇ ಬಹು ಔಷದಿ ಗುಣಗಳನ್ನ ಹೊ೦ದಿರುವುದು. ತುಳಸಿಯ ಔಷದ ಗುಣಗಳನ್ನ ಸಾವಿರಾರು ವರ್ಷಗಳಿ೦ದಲೂ ಅನೇಕ ಋಷಿಗಳೂ ಮತ್ತು ಬಾರತೀಯ ವೈದ್ಯಪದ್ದತಿಯಲ್ಲಿ ಪ್ರಮುಖವಾದ ಅಯುರ್ವೇದ ವೈದ್ಯರು ಕ೦ಡುಕೊ೦ಡು ಅನೇಕ ಕಾಯಿಲೆಗಳ ಚಿಕಿತ್ಸೆಗೆ ಉಪಯೋಗಿಸುತ್ತಾ ಬ೦ದಿದ್ದಾರೆ. ತುಳಸಿಯ ಮಹಿಮೆಯನ್ನ ೨೦೦೦ ವರ್ಷಗಳ ಹಿ೦ದೆ ಪ್ರಮುಖ ಅಯುರ್ವೇದ ವೈದ್ಯರಾದ ಆಚಾರ್ಯ ಚರಕರರು ರಚಿಸಿರುವ ಚರಕ ಸ೦ಹಿತೆಯಲ್ಲಿ ಮತ್ತು ಋಗ್ವೇದದಲ್ಲಿಯೂ ವಿಷ್ಲೇಶಿಸಲಾಗಿದೆ.

'ಸವಿಸವಿ ನೆನಪು' ಹಾಡುಗಳು ಬಲು ಸವಿಸವಿ

ಹೊಸ ಸಿನಿಮಾ 'ಸವಿಸವಿನೆನಪು' ಸಿ.ಡಿ ಕೊಂಡೆ. ಹಾಡುಗಳ ಬಲು ಇಂಪಾಗಿವೆ. ಒಂದು ಹಾಡು ಹೀಗಿದೆ..

' ನೆನಪು ನೆನಪು

ಆವಳ ನೆನಪು ಸಾವೇ ಇರದ ಸವಿ ನೆನಪು

ಅವಳ ನಗು ಹುಣ್ಣಿಮೆಯ ಬೆಳಗು

ನನ್ನೆದೆ ಬಾನಿಗೆ

ಅವಳ ದನಿ ರಾಗಗಳ ಗಣಿ

ನನ್ನೆದೆ ಹಾಡಿಗೆ

ದಮನಿ ದಮನಿಲೂ ಪ್ರೀತಿ ದ್ಯಾನ

ಒಡಲ ಒಡನಾಡಿ ಅವಳೇ

ಉಸಿರು ಉಸಿರಲೂ ಪ್ರೀತಿ ಗಾನ

ಸಾಹಿತ್ಯ

ಸಾಹಿತ್ಯ
ಇದ್ದಳು ಇಲ್ಲೊಬ್ಬಳು
ಗಾಳಿಯಂತೆ
ಮಳೆಯಂತೆ
ಕಾಮನಬಿಲ್ಲಿನಂತೆ

ಮದುವೆಗೆ ಮೊದಲು
ಹುಡುಗರನ್ನು ಕಣ್ಣೆತ್ತಿಯೂ ನೋಡಿರದ ಹುಡುಗಿ
ಹಳ್ಳಿ ಬಿಟ್ಟು ಹೊಲವನ್ನೂ ನೋಡಿರದ ಹುಡುಗಿ

ಮದುವೆಯಾಗಿ ಮಕ್ಕಳಾಗುತ್ತಿದ್ದಂತೆಯೇ
ಗಂಡನನ್ನು ಬಿಟ್ಟು

 

ಮುಕ್ತಳಾದಳು

ಊರು ಬಿಟ್ಟಳು
ಓಡಿದಳು
ಓದಿದಳು
ಹಾಡಿಗಳು
ಕುಣಿದಳು

ಎಲ್ಲ ಗಂಡಸರ
ಗಂಡಸ್ತಿಕೆಗೆ
ಸವಾಲಾದಳು

ಇನ್ನೂ ಒಬ್ಬ ಪ್ರೇಮಿ
ನಿದ್ದೆಯಿಂದ ಏಳುವ ಮೊದಲೇ
ಇನ್ನೊಬ್ಬನನ್ನು ತೆಕ್ಕೆಗೆ
ಎಳೆದುಕೊಂಡಳು
Bloddy Bitch!
ಹಾದರಗಿತ್ತಿ!!
ಸೂಳೆ!!!

ಹಳೆಯ ಗಂಡ, ಹಳೆಯ ಪ್ರೇಮಿಗಳು
ಮಕ್ಕಳು, ಬಂಧುಗಳು, ಗೆಳೆಯರು
ಬೊಬ್ಬೆಹೊಡೆದರು
ಊಳಿಟ್ಟರು
ಅತ್ತರು

ಅವಳಿಗೆ ಇದನ್ನೆಲ್ಲ ಕೇಳಿಸಿಕೊಳ್ಳಲೂ
ಪುರುಸೊತ್ತಿರಲಿಲ್ಲ

ಹಾರಿದಳು
ಪುರುಷನಿಂದ ಪುರುಷನೆಡೆ
ಊರಿಂದ ಊರಿಗೆ
ದೇಶದಿಂದ ದೇಶಕ್ಕೆ

'Bookers'
ಹುಡುಕಿಕೊಂಡು ಬಂತು

ಅರವತ್ತರ ಹರೆಯದಲ್ಲಿ
ಹೊಸ ಪ್ರೇಮಿಯ ಜೊತೆ
ಮರಳಲ್ಲಿ ಮನೆ ಕಟ್ಟುತ್ತಿರುವಾಗ

Noble
ಧನ್ಯವಾಯಿತು

ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ?

ನೆರೆ-ಹೊರೆ ಅಂದ್ರೆ 'ಅಕ್ಕ-ಪಕ್ಕ' ಅನ್ನುವ ಅರ್ತ ಇದೆ.

 ಇಲ್ಲಿ ನೆರೆ ಅಂದ್ರೆ ಪ್ರವಾಹ(flood), ಗುಂಪಾಗುವುದು ( ಮಾದರಿ: ನೆರೆ ಬಂದಿತಣ್ಣ, ಬೀದಿಯಲ್ಲಿ ಮಂದಿ ನೆರೆದಿದ್ದರು ) 

 ಹೊರೆ ಅಂದ್ರೆ ಹೊರುವುದು, ಭಾರ, ತೂಕ ( ಮಾದರಿ: ಹೊರಲಾದರೆ ಹೊರೆ ಹೊತ್ತಕಂಡ ಬಂದೆ )

ಪರೋಪಕಾರಾರ್ಥಮಿದಂ ಶರೀರಂ...?!

ನಿನ್ನೆ ಅವರನ್ನು ನೋಡಿದೆ...

ಪೂರ್ವಾಗ್ರಹವಿಲ್ಲದೆ ನೋಡಿದರೆ ಆತ್ಮೀಯವೆನಿಸುವ ಹಿರಿಯ ವ್ಯಕ್ತಿತ್ವ. ನಾವು ನೀವು ಕಲಿಯಬೇಕಾದುದು ಅವರಲ್ಲಿ ಇನ್ನೂ ಬೇಕಾದಷ್ಟಿದೆ.
ನಾನು ನೋಡಿದಾಗ ಅವರು ಇನ್ನೊಬ್ಬ ಹಿರಿಯರ ಹತ್ತಿರ ಇತ್ತೀಚೆಗೆ ತಾವು ಅನುಭವಿಸಿದ್ದನ್ನು ಹೇಳಿಕೊಳ್ಳುತ್ತಿದ್ದರು.

ಕನ್ನಡದ ಹೆಸರಲ್ಲಿ ಇಂಗ್ಲೀಷ್ ಕಲಿಕೆ... ಮಾನ್ಯತೆ ರದ್ದು! ಈ ಪರಿಸ್ಥಿತಿಗೆ ಯಾರು ಹೊಣೆ?

ಕಳೆದ ಕೆಲವು ದಿನಗಳಿಂದ ಯಾವ ಪತ್ರಿಕೆಯನ್ನು ನೋಡಿದರೂ ಇದೇ ಸುದ್ದಿ - ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡುವುದಾಗಿ ಸರ್ಕಾರದಿಂದ ಅನುಮತಿ ಪಡೆದ ರಾಜ್ಯದ ಸಾವಿರಾರು ಶಾಲೆಗಳು ಇಂಗ್ಲೀಷ್ ಮಾಧ್ಯಮದಲ್ಲಿ ಬೋಧಿಸುವ ಮೂಲಕ ವಿವಾದದ ಮೂಲಬಿಂದುಗಳಾದದ್ದು; ಸರ್ಕಾರ ಮತ್ತು ಇಂತಹ ಶಾಲೆಗಳ ಆಡಳಿತ ಮಂಡಳಿಗಳ ನಡುವಣ ಕಾನೂನು ಸಮರ; ಭಾಷಾ ನೀತಿ ಉಲ್ಲಂಘನೆ ಮಾಡಿದ ತಪ್ಪಿಗೆ ಸರ್