ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಿತನುಡಿ

ಪ್ರಾಮಾಣಿಕವಲ್ಲದ ಸನ್ನಡತೆಗಳು ಜೀವವಿಲ್ಲದ ಸುಂದರ ಸ್ತ್ರೀಯಂತೆ. ಸಭ್ಯತೆಯಿಲ್ಲದ ನಿಷ್ಕಪಟ ಶಸ್ತ್ರವೈದ್ಯನ ಚಾಕು ಇದ್ದಂತೆ, ಪರಿಣಾಮಕಾರಿಯಾಗಿದ್ದರೂ ಅಪ್ರಿಯವಾಗುತ್ತದೆ. ನಿಷ್ಕಪಟತೆ ಸೌಜನ್ಯದೊಡನೆ ಬೆರೆತರೆ ಸಹಾಯಕವೂ, ಶ್ಲಾಘನೀಯವೂ ಆಗುತ್ತದೆ.

ಬೆಳಕು ಎರವಲು ಕೊಡ್ತೀರ?

ನನ್ನೊಳಗೆ ಸಾಯಂಕಾಲ ಸೂರ್ಯ ಮುಳುಗಿತು. ಕ್ಷಣಕ್ಷಣಕ್ಕೂ ಕಪ್ಪು ಆವರಿಸುತ್ತಿದ್ದರೂ ಆಕಾಶದಂಚು ಇನ್ನೂ ಸೋತಿಲ್ಲ ಎಂಬಂತೆ ಕೆಂಪನ್ನು ಹಿಡಿದೇ ಇದೆ. ಸ್ವಲ್ಪ ಹೊತ್ತಿನ ಮುಂಚಷ್ಟೇ ನಿಚ್ಚಳವಾಗಿ ಕಾಣುತ್ತಿದ್ದದ್ದು ಕತ್ತಲಲ್ಲಿ ಸದ್ದು ಮಾಡದೆ ಕರಗುತ್ತಿದೆ. ಲೀನವಾಗುವುದು ಎಂದರೆ ಹೀಗೇ ಇರಬೇಕು, ಅದನ್ನು ಕಲಿಯಬೇಕು ಅಂತ ಸುತ್ತಮುತ್ತ ದಿಟ್ಟಿಸುತ್ತಾ ಉಳಿದೆ.

ಬೆರಗಿನ ಬೆಲಂ ಗುಹೆಗಳು

ನಾನು ರಾಮಸುಬ್ಬ(An imaginary character). ಹೇಳಿಕೇಳಿ ರಾಯಲಸೀಮೆಯ ಬೆಂಗಾಡಿನ ಒಂದು ಕುಗ್ರಾಮ ನಮ್ಮೂರು. ಈ ಬಡಹಳ್ಳಿಯ ಸರ್ಕಾರೀ ಶಾಲೆಯಲ್ಲಿನ ಏಕೈಕ ಶಿಕ್ಷಕನಾಗಿ ನಾನು ದುಡಿಯುತ್ತಿದ್ದೇನೆ. ಶಿಕ್ಷಣ ನೀಡುವುದು ನನ್ನ ವೃತ್ತಿ ಮಾತ್ರವಲ್ಲ ಅದು ನನ್ನ ಜೀವನದ ಧರ್ಮ. ಜೀವನದಲ್ಲಿ ಓದು ತುಂಬಾ ಮುಖ್ಯ.

ಓದದ ಬಾಯದು ತಾನ್
ಮೇದಿನಿಯೊಳ್ ಬಿಲದ ಬಾಯ್

ಬುದ್ಧಿಜೀವಿ ಅಂದ್ರ ಬೈದಂಗಾಯ್ತಾ?

ಮೊನ್ನೆಯ ಘಟನೆ : ನನ್ನ ಮಿತ್ರನೊಬ್ಬನನ್ನು ಒಬ್ಬ ಸರಿಕರಿಗೆ ಪರಿಚಯಿಸುವಾಗ "ನಮ್ಮ ಗ್ರುಪ್ ನಾಗೇ ಇವ್ರು ಬುದ್ಧಿಜೀವಿ, ಸಿಕ್ಕಾಪಟ್ಟಿ ಓದ್ಯಾರ.." ಇತ್ಯಾದಿ ಹೇಳ್ಲಿಕತ್ತಿದ್ದೆ.

ಹೀಗೊಂದು ಬಿಟ್ಟಿ ಕೂಳಿನ ಪ್ರಸಂಗ

ಎರಡು ವರುಷಗಳಿಂದ, ನಾವು ಬಾಡಿಗೆಗಿರುವ ಮನೆಯ ಮಾಲಿಕನ 6 ವರುಷದ ಮಗಳು ಸತತವಾಗಿ ಮನೆಯ ಪಕ್ಕದಲ್ಲೇ ಇರುವ ಮದುವೆ ಛತ್ರಕ್ಕೆ ಸರಿಯಾಗಿ ಊಟದ ವೇಳೆಗೆ ಭೇಟಿ ನೀಡುತ್ತಿದ್ದುದು, ಅವಳು ಸುಂದರವಾಗಿ ಅಲಂಕರಿಸಿಕೊಂಡು ನಮಗೆ ತಿಳಿಯದಂತೆ ಕಳ್ಳ ಬೆಕ್ಕಿನ ಹಾಗೆ ಮೆಲ್ಲಗೆ ಹೆಜ್ಜೆ ಹಾಕುತಿದ್ದುದು ನಿಜಕ್ಕೂ ಸಖತ್ ಮಜ ನೀಡುತ್ತಿತ್ತು.

`ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್!

`ಥಟ್ ಅಂತ ಹೇಳಿ` ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಕ್ವಿಜ್ ಕಾರ್ಯಕ್ರಮ. ಇದರ ೭೫೦ ನೆಯ ಕಂತು ಇದೇ ಸೋಮವಾರ, ಜೂನ್ ೪ ರ ರಾತ್ರಿ ೯.೩೦ ನಿಮಿಷಗಳಿಗೆ ಪ್ರಸಾರವಾಗುತ್ತಿದೆ. ಮರುಪ್ರಸಾರ ಮರುದಿನ, ಅಂದರೆ ೫.೦೬.೦೭ ರ ಬೆಳಿಗ್ಗೆ ೧೧.೦೦ ಕ್ಕೆ ನಡೆಯಲಿದೆ.

ನಮ್ಮ ನಡುವೆ ಇರುವ ಸಭ್ಯ ಸಾಹಿತಿಗಳಲ್ಲಿ ನಿಸಾರರು ಅಗ್ರಗಣ್ಯರು. ೭೧ ಹರಯದ ನಿಸಾರರು ಊರು ದೇವನಹಳ್ಳಿ. ಓದಿದ್ದು ಭೂಗರ್ಭಶಾಸ್ತ್ರ. ಅಧ್ಯಾಪನದ ಎಲ್ಲ ಮಜಲುಗಳನ್ನು ಏರಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ನಿಸಾರರನ್ನು ಕನ್ನಡಕ್ಕೆ ದಕ್ಕಿಸಿಕೊಟ್ಟವರು ಕುವೆಂಪು ಅವರು. ಜಿ.ಪಿ.ರಾಜರತ್ನಂ, ವಿ.ಸೀತಾರಾಮಯ್ಯ ಮುಂತಾದವರ ಪ್ರೀತಿಯಲ್ಲಿ ತಮ್ಮ ಸಾಹಿತ್ಯ ಬದುಕನ್ನು ಅರಳಿಸಿಕೊಂಡ ನಿಸಾರ್, ತಮ್ಮ ವಿಡಂಬನಾತ್ಮಕ ಕವನ `ಕುರಿಗಳು ಸಾರ್....`ನಿಂದ ಕನ್ನಡಿಗರಿಗೆ ಹತ್ತಿರವಾದರು.

ನಿಸಾರ್ ಅವರು ನವ್ಯಕಾಲದ ಕವಿಗಳಾದರೂ, ಅವರನ್ನು ಹಾಗೆ `ಬ್ರಾಂಡ್` ಮಾಡುವುದು ಸರಿಯಾಗಲಾರದೇನೋ! `ನಿತ್ಯೋತ್ಸವ`ದಂತಹ ಅರ್ಥವತ್ತಾದ ಹಾಗೂ ಸುಶ್ರಾವ್ಯವಾದ ಗೀತೆಯ ಮೂಲಕ ಕನ್ನಡ ಸುಗಮ ಸಂಗೀತಕ್ಕೆ ಒಂದು ದಾರಿಯನ್ನು ಹಾಕಿಕೊಟ್ಟವರು. ನಿಸಾರರನ್ನು ಪಂಥಗಳಲ್ಲಿ ಕಟ್ಟಿಹಾಕುವುದನ್ನು ಬಿಟ್ಟು ಅವರನ್ನೊಬ್ಬ ಸಹೃದಯ ಕವಿ ಎಂದು ಕರೆದರೆ ಸಾಕಾಗುತ್ತದೆ.

ಹಳೆ ಮರದಲ್ಲಿ ...? ಕಸಿ ಮಾಡಿ ನೋಡುವ..!

ಹಳೆ ಮರದಲ್ಲಿ ...! ಕಸಿ ಮಾಡಿ ನೋಡುವ..!

ಇದು ನಿವೇನಾದರು ಕೃಷಿ ಕ್ಷೇತ್ರದಲ್ಲಿ ಕೆಲ್ಸ ಮಾಡ್ತಿದೀರಿ, ಅಂತ ತಿಳಿದ್ ಕೂಡ್ಲೆ ಶ್ರೀ ಶ್ಯಾಮಸುಂದರ ಭಟ್ಟರು, ತಕ್ಷಣ ಕೇಳುವ ಮೊದಲ ಪ್ರಶ್ನೆ !

ಈ ಜೂನ್ ೭, ೨೦೦೭ ರ 'ತುಷಾರ' ಸಂಚಿಕೆಯಲ್ಲಿ, ಕೃಷಿಗಾಗಿಯೇ ಮೀಸಲಾದ, ನೀವು ತಪ್ಪದೆ ಓದಲೇ ಬೇಕಾದ ಲೇಖನವಿದು :

ಭೈರಪ್ಪ v/s ಅನಂತಮೂರ್ತಿ: ಯಾರು ದೊಡ್ಡವರು?

ಅನಂತಮೂರ್ತಿಯವರ "ಋಜುವಾತು" ಐನೂರು ಪ್ರತಿ ಕೂಡಾ ಖರ್ಚಾಗಿಲ್ಲ. ಭೈರಪ್ಪನವರ "ಆವರಣ" ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ಪ್ರತಿ ಖರ್ಚಾಗಿದೆ. ಅನಂತಮೂರ್ತಿ ಭೈರಪ್ಪನವರಲ್ಲಿ ಯಾರು ದೊಡ್ದವರು ಎನ್ನುವ ದಾಟಿಯ ಚರ್ಚೆಗೆ ವಿದಾಯ ಹೇಳೋಣ. ಮೌಲಿಕ ವಿಚಾರ ವಿನಿಮಯ ನಡೆಯಬೇಕು ಎನ್ನುವ "ನೂರೆಂಟು ಮಾತು" ಅಂಕಣ ಬರಹ ಇಲ್ಲಿದೆ. ಓದಿ:

೪ ಹಂತಗಳು

೪ ಹಂತಗಳು

ಮನುಜ ೪ ಹಂತಗಳಲ್ಲಿ ಬೆಳಿತಾನಂತೆ.

೧. ನಾನು ಚನ್ನಾಗಿಲ್ಲ, ಜಗತ್ತು ಚನ್ನಾಗಿಲ್ಲ.
೨. ನಾನು ಚನ್ನಾಗಿಲ್ಲ, ಜಗತ್ತು ಚನ್ನಾಗಿದೆ
೩. ನಾನು ಚನ್ನಾಗಿದ್ದಿನಿ, ಜಗತ್ತು ಚನ್ನಾಗಿಲ್ಲ,
೪. ನಾನು ಚನ್ನಾಗಿದ್ದಿನಿ, ಜಗತ್ತು ಚನ್ನಾಗಿದೆ...

ಬೆಳದಿಂಗಳ ಬಾಲೆ ಚಿತ್ರದಲ್ಲಿ ರೇವಂತ್ ಅಭಿಲಾಷ ಗೆ ಹೇಳುವ ಮಾತಿದು, ಜೇಮ್ಸ ಅನ್ನು ಉದ್ದೇಶಿಸಿ....