ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬೆಸುಗೆಯ ಒಸಗೆ

ಹಸಿ 'ಮೈ'ಗಳ
ಹಸೆಮಣೆಗೇರಿಸಿ
ಬೆಸುಗೆಯ ಒಸಗೆಯ
ಮುಗಿಸಿದರು, ಹರಸಿದರು
'ಹಸಿರಾಗಿರಿ' ಎಂದು
ಮೊಸರಾಗಿ ಕಂಡ ಬೆಸುಗೆ
ಕೆಸರಾಯ್ತು ಕಾಣಾ ಭರತೇಶ!

 -----

ಬೆಸುಗೆ  = ಮದುವೆ ( ಗಂಡು ಹೆಣ್ಣನ್ನು ಬೆಸೆಯುವುದು ಮದುವೆ ತಾನೆ..ಆದ್ದರಿಂದ ಬೆಸುಗೆಯನ್ನು ಮದುವೆ ಎಂದು ಹೇಳಬಹುದು :) )
ಒಸಗೆ  = ಸಮಾರಂಭ

ಜೂಜುಕೋರನೊಬ್ಬನ ಅಳಲು

ಇವತ್ತು ಡಾ. ಜ್ಯೋತ್ಸ್ನಾ ಕಾಮತ್ ಅವರ ಬ್ಮಾಗ್ ನಲ್ಲಿ ಏಪ್ರಿಲ್ ೧೪ರಂದು ಬರೆದಿರುವ ಬರಹವನ್ನು ನೋಡುತ್ತಿದ್ದೆ. ಋಗ್ವೇದದ ಜೂಜಾಡುವವನ ಹಾಡಿನ ಒಂದು ಭಾಗದ ಇಂಗ್ಲಿಷ್ ಅನುವಾದ ಅಲ್ಲಿತ್ತು. 

http://www.kamat.com/jyotsna/blog/

ಹೂಗಳಂತೆ ಮರಳುವುದಿಲ್ಲ..

ಮಾಗಿ ಹೆಜ್ಜೆ ಹೆಜ್ಜೆಗೆ ಎಲೆಯುದುರಿಸುತ್ತ ಬರುತ್ತದೆ
ಜೊತೆ ಬರುವ ಗಾಳಿ ರಭಸಕ್ಕೆ
ಮೇಲ್ಪದರುಗಳೆಲ್ಲ ಸವೆದು, ಆಳದ
ನೆನಪುಗಳು ಮೇಲೇಳುತ್ತವೆ.
ಎಷ್ಟು ನೆನಪುಗಳಿಲ್ಲ, ಎಲೆಯುದುರಿ
ಸುರಿವ ಕಾಡುಗಳಲ್ಲಿ ಅಲೆದದ್ದು,
ಅಂಗಳ ತುಂಬ ಮಾಗಿ ಮಲ್ಲಿಗೆ ಸುರಿದದ್ದು,
ಮಂಜು ಮುಂಜಾನೆಯಲ್ಲಿ ದೇವಾಲಯದಲ್ಲಿ
ದೀಪವುರಿಯುತ್ತ ಗಂಟೆ ಮೊಳಗಿದ್ದು...

ಮೆಕ್ಸಿಕನ್ ಅಲೆ

ಮೆಕ್ಸಿಕನ್ ಅಲೆ ಎಂದರೇನು ಎನ್ನುವುದು ಕ್ರೀಡಾಪ್ರೇಮಿಗಳಿಗೆ ಗೊತ್ತಿರಲೇ ಬೇಕು. ಇದರ ಬಗ್ಗೆ ಹೆಚ್ಚಿನ ವಿವರ ನೀಡುವ ಶ್ರೀವತ್ಸ ಜೋಷಿಯವರ ಅಂಕಣ್ ಓದಿ. ನೀವೆಂದಾದರೂ ಅಂತಹ ಅಲೆಯಲ್ಲಿ ಪಾಲ್ಗೊಂಡಿದ್ದಿರಾ ನಮ್ಮೊಡನೆ ಹಂಚಿಕೊಳ್ಳಿ.
http://thatskannada.oneindia.in/column/vichitranna/220507mexican_wave1.html

ಕನ್ನಡಸಾಹಿತ್ಯ.ಕಾಂ-ಮೈಸೂರು ಬೆಂಬಲಿಗರ ಬಳಗದ ಉದ್ಘಾಟನೆ ಹಾಗೂ ‘ಸಲ್ಲಾಪ’ ಪ್ರಕಾಶನದ ಎರಡು ಕೃತಿಗಳ ಬಿಡುಗಡೆ

ಈಗಾಗಲೇ ಬೆಂಗಳೂರು, ಮುಂಬೈ, ತುಮಕೂರು, ಹಾಸನಗಳಲ್ಲಿ ಬೆಂಬಲಿಗರ ಬಳಗವನ್ನು ಹೊಂದಿರುವ ಕನ್ನಡಸಾಹಿತ್ಯ.ಕಾಂ ಅಂತರ್ಜಾಲ ತಾಣ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದೊಂದಿಗೆ ಇದೇ ಭಾನುವಾರ ೨೦ರಂದು ಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿನಲ್ಲಿ ಬೆಂಬಲಿಗರ ಬಳಗದ ಉದ್ಘಾಟನೆಯನ್ನು ಹಮ್ಮಿಕೊಂಡಿತ್ತು. 
 

ಪ್ರಣಯ ಯಾತ್ರೆ ! - ಶ್ರೀ. ಶತಾಯುಶಿ, ದಿವಂಗತ, ಎ. ಎನ್. ಮೂರ್ತಿರಾಯರು.

ಪ್ರಣಯ ಯಾತ್ರೆ ! - ಶ್ರೀ. ಶತಾಯುಶಿ, ದಿವಂಗತ, ಎ.ಎನ್.ಮೂರ್ತಿರಾಯರು.

('ಸಮಗ್ರ ಲಲಿತ ಪ್ರಬಂಧಗಳು' ಪುಸ್ತಕದಿಂದ ಆಯ್ದ ಭಾಗಗಳು) ಕನ್ನಡ ಸಂಘ, ಕ್ರೈಸ್ಟ್ ಕಾಲೇಜ್, ಬೆಂಗಳೂರಿನ ಪ್ರಕಟಣೆ- ೫೦ ನೆಯ ಪುಸ್ತಕ.

ಮೆಕಟ್ರಾನಿಕ್ಸ್

ನೆಟ್‍ನೋಟ ಅಂಕಣ ಬರಹದಲ್ಲಿ ಮೆಕಟ್ರಾನಿಕ್ಸ್ ಎನ್ನುವ ಮೆಕಾನಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ವಿಷಯಗಳ ಸಂಮಿಲನದಿಂದ ಉಗಮವಾದ ಹೊಸ ವಿಷಯದ ಕಲಿಕೆ ಯಾಕೆ ಎನ್ನುವ ಬಗ್ಗೆ ಚರ್ಚಿಸಲಾಗಿದೆ. ಈ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ನೀಡಬೇಕು ಎನ್ನುವ ವಾದಕ್ಕೆ ನಿಮ್ಮ ಪ್ರತಿಕ್ರಿಯೆಯೇನು?
http://netnota.blogspot.com/2007/05/blog-post_21.html#links

ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ

(ಅಚಿನ್ ವನಾಯಕ್ ಅವರ ನಿಲುವುಗಳು ಮತ್ತು ವಿಚಾರ - ನನ್ನ ಗ್ರಹಿಕೆಯಲ್ಲಿ)

ನುಡಿದರೆ ಮುತ್ತಿನಂತಿರಬೇಕು ಎನ್ನುತ್ತಾರೆ. ನೀವು ಅಚಿನ್ ವನಾಯಕ್ ಮಾತುಗಳನ್ನು ಒಮ್ಮೆ ಕೇಳಬೇಕು. "ಭಾರತದ ಕೋಮುವಾದೀ ಇತಿಹಾಸ: ಸಾರ್ವಜನಿಕ ತಿಳುವಳಿಕೆಯಲ್ಲಿ ಉಂಟಾಗಿರುವ ಬದಲಾವಣೆಗಳು" ಎಂಬ ವಿಚಾರದ ಬಗ್ಗೆ ಮಾತನಾಡಲು ಅವರು ಮಂಗಳೂರಿಗೆ ಬಂದಿದ್ದರು. ಕರೆಸಿದವರು ಕರ್ನಾಟಕ ಕೋಮುಸೌಹಾರ್ದ ವೇದಿಕೆಯವರು. ಎರಡು ದಿನಗಳ ಕಾರ್ಯಾಗಾರದಲ್ಲಿ ಪೇಪರ್ ಪ್ರೆಸೆಂಟ್ ಮಾಡಲೆಂದು ಬಂದವವರಲ್ಲಿ ಹೆಚ್ಚಿನವರು ನಿರ್ದಿಷ್ಟ ಹಂದರವಿಲ್ಲದ ಮಾತುಕತೆಯಲ್ಲೆ ಸಮಯ ಕಳೆದರು. ಆದರೆ ಅಚಿನ್ ಹಾಗೆ ಮಾಡಲಿಲ್ಲ. ಅವರೇನೂ ಪೇಪರ್ ಬರೆದು ತಂದಿರಲಿಲ್ಲ. ಅದು ಬಿಡಿ, ಪಾಯಿಂಟ್ಸ್ ಕೂಡ ಬರೆದುಕೊಂಡಿರಲಿಲ್ಲ ಅವರು. ಆದರೆ ಸುಮಾರು ಒಂದು-ಒಂದೂವರೆ ಗಂಟೆ ಕಾಲ ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿಯ ಬಗ್ಗೆ ನಿರರ್ಗಳವಾಗಿ ತಮ್ಮ ವಿಚಾರಧಾರೆಯನ್ನು ಹರಿಸಿದ ಅವರ ಮಾತುಗಳನ್ನು ನೋಡಿ:

ಭಾರತದ ಕೋಮುವಾದೀ ಇತಿಹಾಸ: ಸಾರ್ವಜನಿಕ ತಿಳುವಳಿಕೆಯಲ್ಲಿ ಉಂಟಾಗಿರುವ ಬದಲಾವಣೆಗಳ ನಕ್ಷೆ. (ಅಚಿನ್ ವನಾಯಕ್ ಅವರ ಮಾತುಗಳ ಕುರಿತ ನನ್ನ ಗ್ರಹಿಕೆ)

ಕೋಮುವಾದದ ಬಗ್ಗೆ ಮಾತನಾಡುವಾಗ ಅದಕ್ಕೆ ಸಂಬಂಧಿಸಿದಂತೆ ನಾವು ಬಳಸುವ ಕೆಲವು ಪಾರಿಭಾಷಿಕ ಶಬ್ದಗಳ ಬಗ್ಗೆ ಎಚ್ಚರ ಮತ್ತು ಸರಿಯಾದ ತಿಳುವಳಿಕೆ ಇಟ್ಟುಕೊಂಡಿರುವುದು ಅಗತ್ಯ. ನಾವು ಇಡೀ ಜಗತ್ತಿನಾದ್ಯಂತ ನಡೆದ ಧರ್ಮ ಸಂಬಂಧೀ ಚಳುವಳಿ, ಅಭಿಯಾನಗಳನ್ನು ಗಮನಿಸಬಹುದು. ಎಲ್ಲೆಲ್ಲೂ ಧರ್ಮಕ್ಕೆ ಸಂಬಂಧಿಸಿದಂತೆ ಸಾರ್ವತ್ರಿಕ ಅಭಿಯಾನಗಳು ನಡೆದಿದ್ದು ಇದೆ. ಆದರೆ ಅವುಗಳಿಗೆ ಈಗ ನಾವು ಚರ್ಚಿಸಲು ಉದ್ದೇಶಿಸಿರುವ ಧರ್ಮ ಸಂಬಂಧೀ ಅಭಿಯಾನವನ್ನು ಹೋಲಿಸಲು ಸಾಧ್ಯವಿಲ್ಲ. ಇದು ರಾಜಕೀಯ ಉದ್ದೇಶ, ಆಸಕ್ತಿ ಇರುವ ಧಾರ್ಮಿಕ ಅಭಿಯಾನ.

ಇದನ್ನು ನಾನು ಧಾರ್ಮಿಕ ಮೂಲಭೂತವಾದಿಗಳ ಅಭಿಯಾನ ಎಂದೂ ಹೇಳಲಾರೆ. ಧಾರ್ಮಿಕ ಮೂಲಭೂತವಾದಿಗಳಿಗೆ ರಾಜಕೀಯ ಉದ್ದೇಶಗಳಿರಲೇ ಬೇಕೆಂದಿಲ್ಲ. ಅಂಥ ಉದ್ದೇಶಗಳಿಲ್ಲದೆಯೂ ಮೂಲಭೂತವಾದಿಗಳು ಕೆಲಸ ನಡೆಸಬಹುದು. ಆದರೆ ಇವತ್ತು ನಾವು ಕಾಣುತ್ತಿರುವುದು ರಾಜಕೀಯ ಸ್ವರೂಪಗಳಿರುವ ಹಿಂದೂತ್ವ, ರಾಜಕೀಯ ಸ್ವರೂಪಗಳಿರುವ ಇಸ್ಲಾಂ, ರಾಜಕೀಯ ಸ್ವರೂಪಗಳಿರುವ ಕ್ರಿಶ್ಚಿಯಾನಿಟಿ. ಇವು ತಮ್ಮ ರಾಜಕೀಯ ಉದ್ದೇಶಗಳ ಈಡೇರಿಕೆಗಾಗಿ ಧರ್ಮವನ್ನು ಮುಂದೊಡ್ಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತವೆ ಅಷ್ಟೇ.

ಇಂಥ ಹೊಸ ಯುಗದ ಆಧುನಿಕವೂ, ರಾಜಕಾರಣ ಬೆರೆತದ್ದೂ ಆಗಿರುವ ಧಾರ್ಮಿಕ ಸನ್ನಿವೇಶದಲ್ಲಿ ನಮ್ಮ ಬದುಕು ಹೇಗೆ ಎಂಬುದನ್ನು ಕುರಿತು ಚಿಂತಿಸಬೇಕಿದೆ.