ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಭೂತಕ್ಕೆ ಆರು ಕಾಲು ಅರ್ಧ ಕೈ

ಮೊನ್ನೆ ನಡು ಹಗಲೇ ಮನೆಯ ಪಕ್ಕದ ಓಣಿಯಲ್ಲಿ ಒಂದು ಬೆಳ್ಳನೆಯ ಭೂತಾಕೃತಿ ಕಂಡಿತು. ಎಲೆಯಡಿಕೆ ಅಗಿಯುತ್ತಾ ಹಿಂದುಮುಂದು ನೋಡುತ್ತಾ ಹೆದರಿ, ಹೆದರಿ ಹೆಜ್ಜೆ ಹಾಕುತ್ತಿತ್ತು. ಸುಮ್ಮನೆ ಹತ್ತಿರ ಹೋಗಿ ಕಿಚಾಯಿಸುವ ಬದಲು ದೂರದಿಂದಲೇ ಏನು ಮಾಡುತ್ತದೆ ಎಂದು ನೋಡುತ್ತಾ ನಿಂತೆ.
ಭೂತದ ಕೈ ಸ್ವಲ್ಪ ಗಿಡ್ಡವಾಗಿತ್ತು. ಅದರ ಹಸ್ತಗಳು ಕೈತುದಿಯಲ್ಲಿರುವ ಬದಲು ಮೊಣಕೈಯಿಂದ ಹೊರಬಂದಿರುವುದು ಕಂಡಿತು. ಹಸ್ತ ಇರಬೇಕಾದಲ್ಲಿ ಕತ್ತರಿಸಿ ಹಾಕಿದ ಹಾಗೆ ಮೂಳೆ ಮಾಂಸ ಹಸಿಹಸಿಯಾಗಿ ನೇತಾಡುತ್ತಾ ರಕ್ತ ಒಸರುತ್ತಿತ್ತು. ಮೊಣಕೈ ಜಾಗದಿಂದ ಹೊರಚಾಚಿದ ಹಸ್ತದ ನಡುವೆ ಅಗಲವಾದ ತೂತಿದ್ದು, ಹಸ್ತದ ತುದಿಗೆ ಒಂದೇ ಗೆಣ್ಣಿರುವ ಒಂದಷ್ಟು ಬೆರಳುಗಳು ಸೆಟೆದುಕೊಂಡಿದ್ದವು. ಆದ್ದರಿಂದ ಅದಕ್ಕೆ ಮೂಗೊರೆಸಿಕೊಳ್ಳುವಂಥ ಸುಲಭದ ಕೆಲಸವೂ ಕಷ್ಟವಾಗುತ್ತಿತ್ತು. ನೆಗಡಿಯಿಂದ ಸೊರಸೊರ ಎನ್ನುತ್ತಿದ್ದ ಮೂಗನ್ನು ಒರೆಸಿಕೊಳ್ಳಲು ಹೆಣಗುತ್ತಿತ್ತು. ಅದರ ಹೆಣಗಾಟದ ನೋಡಿದಾಗಲೇ ಅದಕ್ಕೆ ಕತ್ತು ಕೊಂಕಿಸಲು ಆಗುವುದಿಲ್ಲ ಎಂಬುದೂ ಗೊತ್ತಾಯಿತು. ಕತ್ತನ್ನು ಕೋಲಿಗೆ ಸಿಕ್ಕಿಸಿದ ಮಡಕೆಯಂತೆ ಅತ್ತಿತ್ತ ತಿರುಗಿಸಲು ಮಾತ್ರ ಆಗುವಂತಿತ್ತು. ಮಡಕೆಗೆ ತೂತು ಮಾಡಿದಂತೆ ಎರಡು ಮೂಗಿನ ಹೊಳ್ಳೆಗಳು. ಮೂಗೇ ಇಲ್ಲ ಎಂಬಷ್ಟು ಅಪ್ಪಚ್ಚಿ. ಆದರೂ ನೆಗಡಿಯಾಗಿದ್ದರಿಂದ ಮೂಗಿನಿಂದ ಸಣ್ಣಗೆ ನೀರು ಸೋರುತ್ತಿತ್ತು. ಒರೆಸಿಕೊಳ್ಳಲು ಆಗದೆ ಹೆಣಗಾಡುತ್ತಿತ್ತು. ಮೂಗಿನಿಂದ ಸೋರಿದ್ದು ಮೈ ಮೇಲೆ ಬೀಳದೆ, ಅದರ ಮೂಲಕ ನೆಲಕ್ಕೆ ಬಿದ್ದು ಅರೆಕ್ಷಣ ಹೊಳೆದು ಮಾಯವಾಗುತಿತ್ತು.

ಸವಿನೆನಪುಗಳು ಬೇಕು ... ಸವಿಯಲೇ ಬದುಕು...

ಮಲೆನಾಡು ಅರಣ್ಯ ಪ್ರದೇಶ . ಗುಂಡಿನ ಸದ್ದು . ಹಕ್ಕಿಗಳು ಹಾರಿ ಹೋಗುವವು . ಒಂದು ಹೆಣ ನೋಡಿದೆ ಎಂದು ಗುಲ್ಲಾಗಿ ಪೋಲಿಸರು ಬಂದು ನೋಡುತ್ತಾರೆ . ಹೆಣ ನಾಪತ್ತೆ . ಮುಂದೆ ?

ಇನ್ನೂ ಒಂದು ರಜಾದಿನ

ನಮಗೆ ಇರುವ ರಜಾದಿನಗಳ ಪಟ್ಟಿ ಇನ್ನೂ ಉದ್ದವಾಗುವುದರಲ್ಲಿದೆ. ಮುಖ್ಯಮಂತ್ರಿಗಳು ಡಾ.ರಾಜ್ ಜನ್ಮದಿನವನ್ನೂ ರಜಾದಿನವಾಗಿ ಘೋಷಿಸುವ ಭರವಸೆ ನೀಡಿದ್ದಾರೆ.ಹೇಗನ್ನಿಸುತ್ತೆ ನಿಮಗೆ?

ವಸುಧೈವ ಕುಟುಂಬಕಂ

ಶ್ರೀವತ್ಸ ಜೋಷಿಯವರು "ವಿಚಿತ್ರಾನ್ನ"ದಲ್ಲಿ ಭೂಮಿಯೆಷ್ಟು ಕಿರಿದು ಎಂಬುದನ್ನು ಚರ್ಚಿಸಿದ್ದಾರೆ. ಷಟ್ಪದ ಸಾಮೀಪ್ಯ, ಯಾದೃಚ್ಛಿಕ ಮುಂತಾದ ಪದಗಳನ್ನು ಕೇಳದಿದ್ದರೆ, ಅದೇನೆಂದು ತಿಳಿಯಲು ಲೇಖನ ಓದಿ. ಇವುಗಳಿಗೆ ಪರ್ಯಾಯ ಪದಗಳನ್ನು ಸೂಚಿಸುತ್ತೀರಾ?

ಕನ್ನಡ ಜನಪದ - ನೃಪತುಂಗ

ಪುಸ್ತಕದಿಂದ ಬರೆದುಕೊಂಡಿದ್ದ ಒಂದು ವಿಳಾಸ ಹುಡುಕುತ್ತಿದ್ದಾಗ `ಕನ್ನಡ ಜನಪದ' ಪದ್ಯ ಸಿಕ್ಕಿತು. ಯಾವ ಪುಸ್ತಕದಿಂದ ಬರೆದುಕೊಂಡಿದ್ದೆ ತಿಳಿದಿಲ್ಲ. ಅದನ್ನು ಯಥಾವತ್ತಾಗಿ ಟೈಪಿಸಿದ್ದೇನೆ. ತಪ್ಪುಗಳಿದ್ದರೆ ತಿಳಿಸಿ.

ಚಂದ್ರು
೨೪.೦೪.೨೦೦೭

'ನಾಟ್ಯ ಮಯೂರಿ'

ನವಿಲುಗಳಲ್ಲಿ ನಡವಳಿಕೆಯನ್ನು ಗಮನಿಸಿದವರು, ನಾಟ್ಯ ಮಾಡುವುದು ಗಂಡು ನವಿಲು, ಹೆಣ್ಣು ನವಿಲು ನರ್ತಿಸುವುದಿಲ್ಲ, ಮಳೆ ಬಂದಾಗ ಅಥವಾ ಹೆಣ್ಣು ನವಿಲನ್ನು ಆಕರ್ಷಿಸಲು ಮಯೂರ ನರ್ತಿಸುತ್ತದೆ ಎನ್ನುತ್ತಾರೆ. ಹಾಗಾದಲ್ಲಿ, 'ನಾಟ್ಯ ಮಯೂರಿ' ಎಂದರೆ ತಪ್ಪಾಗುವುದಿಲ್ಲವೆ?
------ ಶ್ರೀ

ಬೃಹತ್ ಬೆಂಗಳೂರಿನ ನಾಯಿಗಳು ಮತ್ತು ಚರಂಡಿಗಳು

ಬೆಂಗಳೂರಿನ ಬೀದಿಗಳಲ್ಲಿ ನಾಯಿಗಳು ಕಚ್ಚಿ ಮಕ್ಕಳು ಸತ್ತಾಗಲೇ ಅವುಗಳೊಂದು ಸಮಸ್ಯೆಯೆಂದನಿಸಿದ್ದು; ಪ್ರತೀ ವರ್ಷವೂ ಮೊದಲ ಮಳೆ ಬಿದ್ದು, ಕಸ-ಕಡ್ಡಿಗಳಿಂದ ತುಂಬಿದ ಚರಂಡಿಗಳಲ್ಲಿ ನೀರು ಹರಿಯದೇ ಉಂಟಾಗುವ ಪ್ರವಾಹದಲ್ಲಿ ಒಂದಿಬ್ಬರು ಕೊಚ್ಚಿಹೋದಾಗಲೇ ಓ, ಇದೂ ಒಂದು ಸಮಸ್ಯೆಯೇ ಅಂತನಿಸುವುದು.

ಸುಲಭವಲ್ಲವೋ ಮಹದಾನಂದ ...

ಹಿಂದಿನ ಬರಹದಲ್ಲಿ, ಪುರಂದರ ದಾಸರ ಇಂದಿನ ಯೋಗ ಶುಭಯೋಗ ಎನ್ನುವ ಪದವನ್ನು ಹೆಸರಿಸಿದ್ದೆ. ಅದಕ್ಕೇ ಅವರದೇ ಇನ್ನೊಂದು ದೇವರನಾಮದ ಬಗ್ಗೆ ಮಾತಾಡೋಣ ಎನ್ನಿಸಿತು. ಪುರಂದರ ದಾಸರು ನಾಕು ಲಕ್ಷ ಎಪ್ಪತ್ತೈದು ಸಾವಿರ ರಚನೆಗಳನ್ನು ಬರೆದರೆಂದು ನಂಬಿಕೆ. ಈ ನಂಬಿಕೆ ಹೇಗೇ ಇರಲಿ, ನಮಗೆ ಸಿಕ್ಕಿರುವುದು ಸುಮಾರು ಎರಡು ಸಾವಿರಕ್ಕೂ ಕಡಿಮೆ ರಚನೆಗಳು. ದಾಸಸಾಹಿತ್ಯದಲ್ಲಿ ಪುರಂದರರು ಅತೀ ಮುಖ್ಯರಾಗಿ ಕಾಣಲು ಅವರ ಸರಳವಾದ, ಮನಸ್ಸಿಗೆ ಸುಲಭವಾಗಿ ನಾಟುವ ಶೈಲಿಯೇ ಕಾರಣ ಎಂದು ನನ್ನ ಭಾವನೆ.

ಸಂಸ್ಕಾರ ಮತ್ತು ವಂಶವೃಕ್ಷ

ಉದ್ಧಾಲಕ ಮತ್ತು ಶ್ವೇತಕೇತುವಿನ ಕತೆ ಹೇಳಿದ್ದಕ್ಕೆ ಕಾರಣವಿದೆ. ಸರಿ ಸುಮಾರು ೧೯೬೫ರಲ್ಲಿ ಕನ್ನಡದ ಎರಡು ಮಹತ್ವದ ಕಾದಂಬರಿಗಳು ಪ್ರಕಟವಾದವು. ಒಂದು ಯು.ಆರ್. ಅನಂತಮೂರ್ತಿಯವರ ಸಂಸ್ಕಾರ. ಇನ್ನೊಂದು ಎಸ್ ಎಲ್ ಭೈರಪ್ಪನವರ ವಂಶವೃಕ್ಷ. ಎರಡೂ ಕಾದಂಬರಿಗಳು ಸಿನಿಮಾ ಆಗಿರುವುದರಿಂದ ಮತ್ತು ಸಾಕಷ್ಟು ಚರ್ಚೆಗೂ ಒಳಗಾಗಿರುವುದರಿಂದ ಸಾಹಿತ್ಯದ ಓದುಗರಲ್ಲದವರಿಗೂ ಈ ಕಾದಂಬರಿಗಳ ಬಗ್ಗೆ ಗೊತ್ತು.

ಪ್ರಾಣೇಶಾಚಾರ್ಯರ ಧರ್ಮಸಂಕಟಗಳಿಗೆ ಸಂವಾದಿಯಾಗಿ ಶ್ರೀನಿವಾಸ ಶ್ರೋತ್ರಿಗಳ ಧರ್ಮಸಂಕಟಗಳಿವೆ. ನಾರಣಪ್ಪ ಒಡ್ಡುವ ಸವಾಲುಗಳಷ್ಟು ಗಾಢವಾಗಿಯಲ್ಲದಿದ್ದರೂ ಕಾತ್ಯಾಯಿನಿ ಮತ್ತು ರಾಜನ ಸಂಬಂಧ ಒಡ್ಡುವ ಸವಾಲುಗಳು ಈ ಇಬ್ಬರು ಸನಾತನಿಗಳ ಧರ್ಮಸಂಕಟದ ಎದುರು ನಿಲ್ಲುವುದು ಎರಡೂ ಕಾದಂಬರಿಗಳ ಮಹತ್ವದ ಘಟ್ಟ. ತಮಾಷೆಯೆಂದರೆ ಅನಂತಮೂರ್ತಿಯವರ ನಾರಣಪ್ಪ ಸತ್ತೂ ಜೀವಂತ ಸವಾಲಾಗಿ ಉಳಿದರೆ ಕಾತ್ಯಾಯಿನಿಯ ಸಾವು ಶ್ರೀನಿವಾಸ ಶ್ರೋತ್ರಿಗಳ ಧರ್ಮಸಂಕಟಕ್ಕೆ ತೆರೆಯೆಳೆಯುತ್ತದೆ. ಆ ಹೊತ್ತಿಗೆ ಅವರಿಗೆ ತಮ್ಮದೇ ಜನ್ಮರಹಸ್ಯ ಕೂಡ ತಿಳಿದಿರುತ್ತದೆ. ಕಾತ್ಯಾಯಿನಿ ಮತ್ತು ರಾಜ ಒಡ್ಡುವ ಸವಾಲು ಇವತ್ತಿನ ಸಂದರ್ಭದಲ್ಲಿ ಮಹತ್ವದ್ದಾಗಿ ಉಳಿದಿಲ್ಲ ಎಂಬುದೂ ನಿಜ. ತುಂಬ ಸುಶಿಕ್ಷಿತ ಮಾದರಿಯ ಆದರ್ಶದ ಬಣ್ಣಹೊತ್ತ ಸವಾಲದು. ಹಾಗಾಗಿಯೇ ಪ್ರಶ್ನೆಗಳು ಕಾದಂಬರಿಯ ಆಚೆ ಬೆಳೆಯದೆ ಕಾತ್ಯಾಯಿನಿಯ, ಪ್ರೊಫೆಸರ್ ಸದಾಶಿವರಾಯರ ಸಾವು ಮತ್ತು ಶ್ರೋತ್ರಿಗಳ ವಾನಪ್ರಸ್ಥದಲ್ಲಿಯೇ ಉತ್ತರ ಕಂಡುಕೊಂಡಂತೆ ಮುಗಿದು ಬಿಡುತ್ತವೆ.

ಅಳುವ ಕಡಲು

[೨೭-೪-೨೦೦೩ ರಲ್ಲಿ ಬರೆದ ಈ ಲೇಖನವನ್ನು ಮತ್ತೆ ಓದಿದಾಗ- ಇರಾಕ್, ಆಫ್ಘಾನಿಸ್ತಾನ್, ಪಾಲಸ್ಟೀನ್‌ನ ಸಂದರ್ಭದಲ್ಲಿ ಯೋಚನಾಲಹರಿ ಬಹುಮಟ್ಟಿಗೆ ಹಾಗೇ ಉಳಿದಿದೆ ಎಂಬುದು ಸ್ಪಷ್ಟವಾಯಿತು]

ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋಣಿ

ಗೋಪಾಲಕೃಷ್ಣ ಅಡಿಗರು ಈ ಸಾಲು ಬರೆದು ಸುಮಾರು ಅರವತ್ತು ವರ್ಷಗಳು ಕಳೆದಿದ್ದರೂ, ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ಕಾಳಿ೦ಗರಾಯರು ಹಾಡಿ ದಶಕಗಳೇ ಕಳೆದಿದ್ದರೂ, ಕಾವ್ಯದ ಎಲ್ಲ ಮಹತ್ತರ ಸಾಲುಗಳ೦ತೆ ಈವತ್ತಿಗೂ ಅದು ದೂರದ ಕಡಲುಗಳಿಗೂ, ವಿಭಿನ್ನ ಭಾವಲಹರಿಗೂ ಹಾಯುತ್ತ ವಿಷಾದಕಾರೀ ಘಟನೆಗಳ ನಡುವೆ ಸಾ೦ತ್ವನ ನೀಡುವ೦ತೆ ತೋರುತ್ತದೆ.
ಪದ್ಯದ ಸಾಲಿನ ಮೊದಲ ಭಾಗವಾದ - ಅಳುವ ಕಡಲು - ನಮ್ಮನ್ನು ಆವರಿಸಿರುವುದು ಸುಲಭ ಗ್ರಾಹ್ಯ. ತೀರ ವಿಷಾದಕಾರಿಯಾದ ಇತಿಹಾಸದ ಪುಟಗಳ ನಡುವೆ ಬದುಕುತ್ತಿರುವ ನಾವು ಒಮ್ಮೆ ಇ೦ದಿನ ಆಗುಹೋಗುಗಳನ್ನು ಗಮನಿಸಬೇಕಷ್ಟೆ. ಆದರೂ ಜಗತ್ತಿನ ವಿದ್ಯಮಾನಗಳನ್ನು ಅರಿಯುವ ಕೆಲಸ ಸುಲಭವಲ್ಲ. ಇಪ್ಪತ್ತೊ೦ದನೇ ಶತಮಾನದ ಜಾಗತಿಕ ಸುದ್ದಿ ಮಾಧ್ಯಮಗಳು ಆ ಕೆಲಸವನ್ನು ಸುಲಭ ಮಾಡುವ ಬದಲು ಮತ್ತಷ್ಟು ಜಟಿಲ ಮಾಡಿರುವುದು ಸೋಜಿಗವಲ್ಲವೆ? ಅವರವರ ಭಾವಕ್ಕೆ ಆನುಗುಣವಾಗಿ ಜಾಗತಿಕ ಘಟನೆಗಳು ಉತ್ತೇಜನಕಾರಿಯಾಗಿಯೋ, ವಿಷಾದಕಾರಿಯಾಗಿಯೋ ಕ೦ಡರೂ ಕೂಡ ಸಮಕಾಲೀನ ಜಾಗತಿಕ ವ್ಯವಹಾರಗಳು ಸಮಾಧಾನವ೦ತೂ ನೀಡುವ೦ತಹುದಲ್ಲ.

 

ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋಣಿ
ಜನನ ಮರಣಗಳ ಉಬ್ಬುತಗ್ಗು ಹೊರಳುರುಳುವಾಟವಲ್ಲಿ