ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

A quick brown fox... -ಕನ್ನಡದಲ್ಲಿ

ಗಣಕ ಬಳಸುವವರೆಲ್ಲ ಒಮ್ಮೆಯಾದರೂ ಗಮನಿಸಿರಬಹುದಾದ ಒಂದು ವಾಕ್ಯವಿದೆ. ಅದು A quick brown fox jumps over the lazy dog. ಇದರಲ್ಲಿ ಇಂಗ್ಲಿಷ್ ಭಾಷೆಯ ಎಲ್ಲ ಅಕ್ಷರಗಳಿವೆ. ಅಂತಹುದೇ ವಾಕ್ಯ ಕನ್ನಡಕ್ಕೆ ಬೇಡವೇ? ಇಗೋ ಈಗ ಅದೂ ಸಿದ್ಧವಾಗಿದೆ. ಹೆಚ್ಚಿನೆ ಮಾಹಿತಿಗೆ [http://vishvakannada.com/node/359|ಇಲ್ಲಿ ಕ್ಲಿಕ್ಕಿಸಿ].

ಸಿಗೋಣ,
ಪವನಜ

ಸಂಪದದಲ್ಲಿ ಬದಲಾವಣೆ

ಸಂಪದದ ಯುಗಾದಿ ಬದಲಾವಣೆ ನಂತರ ಪುಟ ಹೆಚ್ಚು ಬಳಕೆದಾರಸ್ನೇಹಿಯಾಗ ಬಹುದೆಂದು ನಿರೀಕ್ಷಿಸಿದವರಿಗೆ ನಿರಾಶೆಯಾಗಿರಬಹುದು. ಚಿತ್ರಗಳನ್ನು ಸೇರಿಸಲು,ಕೊಂಡಿಗಳನ್ನು ನೀಡಲು ಹಿಂದೆ ಲಭ್ಯವಿದ್ದ ಸಾಧನಗಳು ಈಗ ಮಾಯವಾಗಿವೆ. ಈಗೇನಿದ್ದರೂ ಟ್ಯಾಗ್‍ಗಳ ಬಳಕೆ ಮಾಡಬೇಕು. ನೀವಿದನ್ನು ಗಮನಿಸಿದ್ದೀರಾ?ನಿಮ್ಮ ಪ್ರತಿಕ್ರಿಯೆಯಿದೆಯೇ?

ಕನ್ನಡ-ಇಂಗ್ಲಿಸ್ ಹೋಲಿಕೆ ಮತ್ತು ಬೇರೆತನಗಳು

ಇಂಗ್ಲಿಸಿನಲ್ಲಿ ಐದು ಸ್ವರಗಳಿವೆ ಅಲ್ಲವೇ,

a,e,i,o,u

ಇವು ಕನ್ನಡದ ಅ,ಎ,ಇ,ಒ, ಮತ್ತು ಉ ಗಳಿಗೆ ಸಮನಾದವು. ಆದರೆ ಕನ್ನಡದಲ್ಲಿ ಎಳೆದು ಆಡಲು ಇನ್ನೊಂದು ಬಗೆಯ ಸ್ವರಗಳು ಬರುತ್ತವೆ. ಹ್ರುಸ್ವ ಮತ್ತು ದೀರ್ಘ ಅಂತಾರಲ್ಲ, ಅದು.

ಅ-ಆ,ಇ-ಈ,ಉ-ಊ,ಎ-ಏ,ಒ ಮತ್ತು ಓ. ಒಟ್ಟು ಹತ್ತಾಯ್ತು. ಉಳಿದ ಐ,ಔ,ಅಂ ಮತ್ತು ಅಃ ಗಳನ್ನು ವೆಂಜನಗಳನ್ನು ಬಳಸಿಯೇ ಬರೆಯಬಹುದು. ಅಯ್, ಅವ್, ಅಮ್, ಮತ್ತು ಅಹ.

ಉಡುಗೊರೆಯೊಂದಾ ತಂದ ಎನ್ನಯ ಮನದಾನಂದ ... (ರಾಗ ಮೋಹನ - ಭಾಗ ೩)

ಕಳೆದ ಕಂತಿನಲ್ಲಿ ಮೋಹನ ರಾಗದ ಬಗ್ಗೆ ಸ್ವಲ್ಪ ಹೇಳಿದ್ದೆ. ಈ ಕಂತಿನಲ್ಲಿ ಇನ್ನು ಕೆಲವು ಮಧುರ ಗೀತೆಗಳೊಂದಿಗೆ ಮೋಹನದ ಮೋಹದಲ್ಲಿ ಬೀಳೋಣ. ಕಳೆದ ಬಾರಿ ಬರೀ ರಾಗದ ಆರೋಹಣ ಅವರೋಹಣವನ್ನು ಮಾತ್ರ ಕೊಟ್ಟಿದ್ದೆ. ವೈಭವ ಅವರು ಅಷ್ಟೇ ಸಾಕೇ ರಾಗವನ್ನು ಗುರುತಿಸಲು ಎಂದು ಕೇಳಿದ್ದರು. ನಿಜವಾಗಿ ಹೇಳಿದರೆ. ಅಷ್ಟೇ ಸಾಲದು. ಹಾಗಾಗಿ, ಈ ಬಾರಿ ಆ ವಿಷಯವನ್ನು ಸ್ವಲ್ಪ ಹೇಳುವೆ.

ತಲೆಯೊಳಗೊಂದು ನಿಮ್ಮದೇ ಅರ್ಥಕೋಶ

ಭಾರತೀಯ ರಂಗಭೂಮಿಯಲ್ಲಿ ಹೆಗ್ಗುರುತು ಮೂಡಿಸಿ ಹೋದ ಬಿ.ವಿ.ಕಾರಂತರು ಪದದ ಅರ್ಥದ ಬಗ್ಗೆ ಮಾತನಾಡುತ್ತಾ "ಅರ್ಥಕೋಶದಲ್ಲಿನ ಅರ್ಥಗಳು ನಾಟಕಮಾಡುವವರಿಗೆ ಏನೇನೂ ಸಾಲದು" ಎಂದು ಹೇಳುತ್ತಿದ್ದರು. ನಾಟಕದಲ್ಲಿ ಪದಗಳನ್ನು ಹೇಳುವಾಗ ಅದರ ತದ್ವಿರುದ್ಧವಾದ ಅರ್ಥ ಬರುವ ಹಾಗೆ ಹೇಳಬಹುದು. ಅಷ್ಟೇ ಅಲ್ಲ, ನೇರಾರ್ಥ, ತದ್ವಿರುದ್ಧಾರ್ಥದ ನಡುವೆ ಹತ್ತು ಹಲವಾರು ವಿವಿಧಾರ್ಥಗಳನ್ನೂ ಪದಗಳಿಗೆ ತುಂಬಬಹುದು. ಮತ್ತು ಮೂಲಾರ್ಥದಲ್ಲಿ ಇಲ್ಲದ ಅರ್ಥವನ್ನು ನುಡಿಯ ರೀತಿಯಲ್ಲಿ ಮತ್ತು ನುಡಿಯ ಸಂದರ್ಭದಲ್ಲಿ ಆರೋಪಿಸಬಹುದು. ಹಾಗಾಗಿ ನಟರಿಗೆ ಪದದ ಅರ್ಥ ಎನ್ನುವುದು ಪ್ರತಿನಿತ್ಯ ಎದುರಿಸಬೇಕಾದ ಒಂದು ಚಲನಶೀಲ ಅಂಶ.
ಕುರ್ತುಕೋಟಿಯವರು ತಮ್ಮ ಪ್ರಬಂಧ ಒಂದರಲ್ಲಿ ಸ್ವಾತಂತ್ಯ್ರ ಎಂಬ ಪದಕ್ಕೆ ಹೇಗೆ ಅರ್ಥ ಬದಲಾವಣೆಯಾಗುತ್ತಿದೆ ಎಂದು ನಿರೂಪಿಸುತ್ತಾರೆ. ಸ್ವಾತಂತ್ಯ್ರಪೂರ್ವದಲ್ಲಿ ಆ ಪದಕ್ಕಿದ್ದ ಅರ್ಥಕ್ಕೂ, ನಂತರ ಪ್ರತಿದಶಕದಲ್ಲೂ ಅದರ ಅರ್ಥ ಬದಲಾಗತ್ತಿರುವುದನ್ನು ನಮ್ಮ ಅವಗಾಹನೆಗೆ ತರುತ್ತಾರೆ. ಮತ್ತೊಂದು ಕಡೆ, "ಬಂಗಾರ" ಒಂದು ವಸ್ತುವಿಗಿಂತ ಅದರ ಮೂಲಸತ್ವಕ್ಕಿರುವ ಪದ ಎಂದು ಹೇಳುತ್ತಾರೆ. ಪದದ ಅರ್ಥಪಲ್ಲಟವಾಗುವುದು ಒಂದು ಭಾಷಾ ಸಮುದಾಯದ ಬೆಳವಣಿಗೆಯಲ್ಲಿ ಅನಿವಾರ್ಯವೇನೋ. ಹಾಗೆಯೇ ಆ ಪಲ್ಲಟಗಳನ್ನು ಗಮನಿಸುವುದು ಕೂಡ ಆ ಸಮುದಾಯದ ಬಗ್ಗೆ ನಮಗೆ ಹೊಳಹುಗಳನ್ನು ಕೊಡುತ್ತದೆ.
ಸುಮಾರು ಎರಡು-ಮೂರು ವರ್ಷದ ಕೆಳಗೆ ಆಸ್ಟ್ರೇಲಿಯಾದ ಸರ್ಕಾರಿ ರೇಡಿಯೋ 'ಎಬಿಸಿ'ಯಲ್ಲಿ ಕಾಲ್‌ಬ್ಯಾಕ್ ಕಾರ್ಯಕ್ರಮವನ್ನು ಕೇಳುತ್ತಿದೆ. ಅಂದು "ಜೇಡರಬಲೆ" ಎಂಬ ಪದದ ಬಗ್ಗೆ ಮಾತುಕತೆ ನಡೆದಿತ್ತು. "ಕಾಬ್‌ವೆಬ್‌" ಮತ್ತು "ಸ್ಪೈಡರ್‌ ವೆಬ್‌" ಎರಡೂ ಒಂದೇ ವಸ್ತುವಿಗೆ ಸಂಬಂಧಪಟ್ಟಿದ್ದರೂ ಯಾವ ಯಾವ ಸಂದರ್ಭದಲ್ಲಿ ಅವುಗಳನ್ನು ಉಪಯೋಗಿಸುತ್ತೀರ ಎಂಬುದು ಚರ್ಚಾ ವಿಷಯವಾಗಿತ್ತು. ಹಲವಾರು ಜನರು ಕರೆಮಾಡಿ ತಮ್ಮ ವಿಚಾರಗಳನ್ನು ಹೇಳುತ್ತಿದ್ದರು. ಮನೆಯ ಹೊರಗಿದ್ದರೆ ಸ್ಪೈಡರ್‌ವೆಬ್‌, ಒಳಗಿದ್ದರೆ ಕಾಬ್‌ವೆಬ್‌ ಎಂದು ಕೆಲವರು ಹೇಳಿದರೆ, ಅದಕ್ಕೆ ತದ್ವಿರುದ್ಧವಾದ ಅರ್ಥದಲ್ಲಿ ಬಳಸುತ್ತೇವೆ ಎಂದು ಇನ್ನು ಕೆಲವರು ಹೇಳುತ್ತಿದ್ದರು. ಕಾಬ್‌ ಎಂಬುದು ಚಕ್ರದ ಪದವಾದ್ದರಿಂದ ಸ್ಪೈಡರ್‌ವೆಬ್‌ ಅದು ಚಕ್ರದ ರೂಪದಲ್ಲಿಲ್ಲದಾಗ ಎಂದು ಕೆಲವರು ಹೇಳಿದರು. ಧೂಳು ಹಿಡಿದಿದ್ದರೆ ಕಾಬ್‌ವೆಬ್‌ ಇಲ್ಲದಿದ್ದರೆ ಸ್ಪೈಡರ್‌ವೆಬ್‌. ಜೇಡ ಇನ್ನೂ ಅಲ್ಲಿದ್ದರೆ ಸ್ಪೈಡರ್‌ ವೆಬ್‌ ಇಲ್ಲದಿದ್ದರೆ ಕಾಬ್‌ವೆಬ್‌ ಎಂದು ಉಪಯೋಗಿಸುತ್ತೇವೆ ಎಂದು ಕೆಲವರು ವಿವರಿಸಿದರು. ಮರಗಿಡಗಳಂಥ ಪ್ರಾಕೃತಿಕ ಪರಿಸರದಲ್ಲಿದ್ದರೆ ಸ್ಪೈಡರ್‌ವೆಬ್‌, ಕುರ್ಚಿ, ಮೇಜು, ಕಿಟಕಿಯಂಥ ಮಾನವ ನಿರ್ಮಿತ ವಸ್ತುಗಳಿಗೆ ಕಟ್ಟಿದರೆ ಕಾಬ್‌ವೆಬ್‌ ಎಂದು ಇನ್ನು ಕೆಲವರು ಅರ್ಥೈಸಿದರು.
ಒಟ್ಟಾರೆ, ಇದು ಯಾವ ಪದಕ್ಕೆ ಯಾವ ಅರ್ಥ ಸರಿ ಯಾವುದು ತಪ್ಪು ಎಂಬ ಚರ್ಚೆ ಆಗಿರಲಿಲ್ಲ. ಒಂದು ರೀತಿಯಲ್ಲಿ ನೋಡಿದರೆ ಅದರ ಬಗ್ಗೆ ಚರ್ಚೆಯೇ ಬೇಕಾಗಿರುವುದಿಲ್ಲ. ಅರ್ಥಕೋಶ ತೆಗೆದು ನೋಡಿಬಿಟ್ಟರೆ ಸಾಕು. ಆದರೆ ಯಾರಿಗೆ ಯಾವಾಗ ಯಾವ ಪದಕ್ಕೆ ಯಾವ ಅರ್ಥ ಸರಿಯೆನಿಸುತ್ತದೆ ಎಂಬುದನ್ನು ಹೇಳುತ್ತಾ ಜತೆಜತೆಗೆ ಕಾರ್ಯಕ್ರಮ ನಡೆಸಿಕೊಡುವವ ಯಾಕೆ ಅವರಿಗೆ ಹಾಗೆನಿಸುತ್ತದೆ ಎಂದು ಮಾತನಾಡಿಸುತ್ತಾ ಅವರ ಜೀವನದ ಮತ್ತು ಭಾವನೆಗಳ ವಿವರವನ್ನು ಹೇಳುವಂತೆ ಪ್ರೇರೇಪಿಸುತ್ತಿದ್ದ. ಹಾಗಾಗಿ ಆ ಕಾರ್ಯಕ್ರಮ ಪದಗಳ ಬಗ್ಗೆಯಾದರೂ ನಿಜವಾಗಿಯೂ ಬದುಕುಗಳ ಬಗ್ಗೆಯೇ ಆಗಿತ್ತು!

ನನ್ನ ಮೆಚ್ಚಿನ ಪುಸ್ತಕ

ನಾನು ಓದಿದ ಹಲವಾರು ಪುಸ್ತಕಗಳ ಪೈಕಿ ನನ್ನ ಮೇಲೆ ಸತ್ಪರಿಣಾಮ ಬೀರಿದ್ದು ಶ್ರೀ ಪರಮಹಂಸ ಯೋಗಾನಂದರ "ಯೋಗಿಯ ಆತ್ಮಕತೆ". Autobiography of a Yogi ಎಂಬ ಹೆಸರಿನಲ್ಲಿ ಮೊದಲ ಬಾರಿಗೆ ಪ್ರಕಟಗೊಂಡ ಈ ಪುಸ್ತಕ 60 ವರ್ಷಗಳ ನಂತರವೂ ವಿಶ್ವದಾದ್ಯಂತ ಪ್ರಸಿದ್ದವಾಗಿದೆ. ಬಹುತೇಕ ಎಲ್ಲಾ ಭಾರತೀಯ ಹಾಗು ವಿಷ್ವದ ಪ್ರಮುಖ ಭಾಷೆಗಳಿಗೆ ಅನುವಾದಗೊಂಡಿದೆ.

ಯಾರು ನನ್ನವರು

ಬೆವರ ಸುರಿಸಿ ಉತ್ತು ಬಿತ್ತು
ದವಸ ದಾನ್ಯ ಬೆಳೆದುಇತ್ತವರೇ
ತಮಗಿಲ್ಲದಿದ್ದರೂ ನಮಗೆ ನೀಡಿದವರೇ

ಸೊಗಸಾಗಿ ಮಾಡಿ ತಿಂದು ಉಂಡು
ಕಾಲ ಕಳೆವ ಮಡದಿ ಮಕ್ಕಳೇ(ಜನಗಳೆ)

ಕಲ್ಲು ಹೊತ್ತು ಕುಳಿ ಕಿತ್ತು
ಮನೆ ಕಟ್ಟಿ ಬಣ್ಣ ಹೊಡೆದು ನಮಗೆ ನೆಲೆ ಮಾಡಿದವರೆ
ಕೂಲಿ ಪಡೆದು ನಮ್ಮ ಮರೆತು ಹೋದವರೆ

ಮನೆ ಬಹಳ ದೊಡ್ಡದೆಂದು ಬಂಧು ಬಳಗ ಬಂದು ನೆಲೆಸಿ

೭೫ ವರ್ಷ ತುಂಬಿದ ಸೇತುವೆ

ಹೋದ ಭಾನುವಾರ (ಮಾರ್ಚ್ ೧೮) ಸಿಡ್ನಿ ಹಾರ್ಬರ್‍ ಬ್ರಿಡ್ಜ್‌ಗೆ ೭೫ ವರ್ಷ ತುಂಬಿದೆ. ಅದರ ನಿಮಿತ್ತ ಎಲ್ಲರಿಗೂ ಆ ದಿನ ಸೇತುವೆ ಹಾಯಲು ಅವಕಾಶವಿತ್ತು. ಮೊದಲೇ ನೋಂದಾಯಿಸಿಕೊಂಡು ೧೧ ಗಂಟೆಗೆ ನಾವೂ ಹಾಯ್ದೆವು.

ಆಸ್ಟ್ರೇಲಿಯಾದಲ್ಲಿ ಒಂದು ಪರಂಪರೆಯಿದೆ. ಯಾವುದೇ ಹೊಸ ಸೇತುವೆಯೋ, ಕಟ್ಟಡವೋ ಕಟ್ಟಿದರೆ ಅದರ ಉದ್ಘಾಟನೆಯ ದಿನ 'ಜನ ಸಾಮಾನ್ಯ'ರಿಗೆ ಅದನ್ನು ಹೊಗುವ, ಸುತ್ತುವ, ಹಾಯುವ ಅವಕಾಶ ಕಾರ್ಯಕ್ರಮದ ಅವಿಭಾಜ್ಯ ಅಂಗವಾಗಿರುತ್ತದೆ. ನನಗೆ ಗೊತ್ತಿರುವ ಹಾಗೆ, ಸಿಡ್ನಿಯ ಆನ್‌ಝಾಕ್‌ ಸೇತುವೆ, ಹಾರ್ಬರಿನಡಿಯ ಸುರಂಗದಾರಿ, ಒಲಂಪಿಕ್‌ ಸ್ಟೇಡಿಯಂ ಉದ್ಘಾಟಿಸಿದಾಗ ಇದನ್ನು ಮಾಡಿದ್ದರು. ನಾನೂ ಒಲಂಪಿಕ್‌ ಸ್ಟೇಡಿಯಂ ಜನರಿಗೆ ತೆರೆದಾಗ ಹೋಗಿ ಸುತ್ತಿ ಬಂದಿದ್ದೆ.
೧೯೩೦ರ ಅತೀವ ಡಿಪ್ರೆಷನ್ ಸಮಯದಲ್ಲಿ ಕಟ್ಟಲಾದ ಈ ಸೇತುವೆಗೆ ಆಗ ತೀವ್ರ ವಿರೋಧವಿತ್ತಂತೆ. ಆದರೆ ನ್ಯೂ ಸೌತ್‌ ವೇಲ್ಸ್ ಸರ್ಕಾರ ಹಟ ಬಿಡದೆ ಸಾಲ ಮಾಡಿ ಕಟ್ಟುವುದನ್ನು ಪೂರೈಸಿತಂತೆ. ಅದರ ಮೇಲಿನ ಸಾಲ ೧೯೮೬ರಲ್ಲಿ ಪೂರ್ಣವಾಗಿ ತೀರಿಸಿತಂತೆ!
ಸೇತುವೆ ಕಟ್ಟುವಾಗ ಪ್ರಾಣತೆತ್ತ ೧೬ಮಂದಿಯ ಸ್ಮರಣಾರ್ಥ ಒಂದು ಫಲಕವನ್ನು ಈ ಸಲ ಅನಾವರಣಗೊಳಿಸಲಾಯಿತು. ಇಷ್ಟು ವರ್ಷ ಅದು ಆಗದೇ ಇದ್ದದ್ದು ನಿಜವಾಗಲೂ ಆಶ್ಚರ್ಯವೇ! ಸೇತುವೆ ಕಟ್ಟುವಾಗ ಪ್ರಾಣ ತೆತ್ತವರ, ಕೆಲಸ ಮಾಡಿದವರ ಮೊಮಕ್ಕಳು ಹೆಮ್ಮೆಯಿಂದ ತಮ್ಮ ಮಕ್ಕಳೊಂದಿಗೆ ಸೇತುವೆ ಹಾಯ್ದರು.
ಸಿಡ್ನಿಯ ಉತ್ತರಭಾಗ ಮತ್ತು ದಕ್ಷಿಣ ಭಾಗವನ್ನು ಕೂಡಿಸುವ ಕನಸು ಹೊತ್ತು ನಿರ್ಮಿತವಾದ ಈ ಸೇತುವೆ, ಶ್ರೀಮಂತ ಉತ್ತರವನ್ನು, ಅಷ್ಟು ಶ್ರೀಮಂತವಲ್ಲದ ದಕ್ಷಿಣವನ್ನು ಒಂದುಗೂಡಿಸಿತೆ ಎನ್ನುವುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಸುಮಾರು ೨೦೦ ಸಾವಿರ ಜನ ಸೇತುವೆ ದಾಟಿದ ಈ ದಿನ, ವರ್ಷ ೨೦೦೦ದ ಸಾರಿ ಡೇ (ಕ್ಷಮೆ ಕೋರುವ ದಿನ) ನೆನಪಿಗೆ ತಂದಿತು. ಆಸ್ಟ್ರೇಲಿಯಾ ತನ್ನ ಮೂಲನಿವಾಸಿಗಳನ್ನು ನಡೆಸಿಕೊಂಡ ರೀತಿಗೆ ಕ್ಷಮೆಯಾಚಿಸುವುದಕ್ಕಾಗಿ ಮಕ್ಕಳು ಮರಿಗಳ ಸಮೇತ, ವಯೋವೃದ್ಧರೂ ಸೇರಿ 'ಸಾಮಾನ್ಯ' ಜನರು ಅಸಮಾನ್ಯ ಕಾಳಜಿ ತೋರಿಸಿದ ದಿನವದು. ಅಂದು ಇದೇ ಸೇತುವೆಯನ್ನು ಸುಮಾರು ೨೫೦ ಸಾವಿರ ಜನರು ದಾಟಿದ್ದರೆ, ಆಸ್ಟ್ರೇಲಿಯಾದ ಉದ್ದಗಲಕ್ಕೂ ೫೦೦ ಸಾವಿರ ಜನ ತಮ್ಮ ಊರು ನಗರದ ಸೇತುವೆಗಳನ್ನು ದಾಟುವುದರ ಮೂಲಕ ತಮ್ಮ ಪರವಾಗಿ ಸರ್ಕಾರ ಕ್ಷಮೆಯಾಚಿಸಬೇಕೆಂದು ಕೋರಿತು. ನೋವಿನ ಸಂಗತಿಯೆಂದರೆ, ಇದೇ ಸರ್ಕಾರ ಆ ಕಾರ್ಯಕ್ರಮವನ್ನು "ಸಾಂಕೇತಿಕ ಸೋಗಲಾಡಿತನ" ಎಂಬಂಥ ನಿಲುವು ತಾಳಿ ತಿರಸ್ಕರಿಸಿತು!

ಭಾಷಾ ತಜ್ಞ ಕೆ ವಿ ನಾರಾಯಣರ 'ಪದಗತಿ' ಈಗ 'ಸಂಪದ'ದಲ್ಲಿ ಲಭ್ಯ

ಭಾಷಾ ತಜ್ಞರಾದ ಕೆ ವಿ ನಾರಾಯಣರ ಬ್ಲಾಗು [:http://wordworth.sampada.net/|ಈಗ 'ಸಂಪದ' ಓದುಗರಿಗೆ ಲಭ್ಯ]. ಈ ಹೊಸ ಬ್ಲಾಗಿನಲ್ಲಿ ತಮ್ಮ ಸಂಪದ user id ಮತ್ತು ಪಾಸ್ವರ್ಡನ್ನೇ ಬಳಸಿ ಸದಸ್ಯರು ಕಾಮೆಂಟುಗಳನ್ನು ಸೇರಿಸಬಹುದು. ನಾರಾಯಣರೊಂದಿಗೆ ಚರ್ಚಿಸಬಹುದು.