ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮತ್ತೊಮ್ಮೆ ಮ್ಯಾಚ್ ಫಿಕ್ಸಿಂಗ್ ಹೊಗೆ

ಕೊನೆಗೂ ಸಿರೀಸ್ ಗೆದ್ರು ಎಂದು ಖುಷಿಪಟ್ಟ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ಮುಟ್ಟಿಸುವಂತಹ ಸುದ್ದಿ ಇವತ್ತು ಹೊರಬಂದಿದೆ. ವೆಸ್ಟ್ ಇಂಡೀಸ್ ಆಟಗಾರ [:http://content-ind.cricinfo.com/ci/content/player/52983.html|ಮಾರ್ಲನ್ ಸ್ಯಾಮ್ಯುಯೆಲ್ಸ್] ನಾಗಪುರ ಮ್ಯಾಚ್ ಹಿಂದಿನ ದಿನ ಭೂಗತ ಲೋಕದವರೊಂದಿಗೆ ಮಾತುಕತೆ ನಡೆಸಿದ, ಮಾಹಿತಿ ಹಂಚಿಕೊಂಡ ಎಂಬುದರ ಬಗ್ಗೆ ನಾಗಪುರ ಪೋಲೋಸರಿಗೆ ಪುರಾವೆ ದೊರೆತಿದೆಯಂತೆ.

ಈಗಾಗಲೇ ಭಾರತದಲ್ಲಿರೋ ಎಲ್ಲ ಹೆಸರಿರುವ ನ್ಯೂಸ್ ಚ್ಯಾನಲ್ಲುಗಳೂ ಇದನ್ನು exclusive news ಎಂದು ಹಾಕಿಕೊಂಡು 'ಮ್ಯಾಚ್ ಫಿಕ್ಸಿಂಗ್' ಎಂದು ಕೂಗಾಡಿಕೊಳ್ಳುತ್ತಿದ್ದಾರೆ. [:http://content-ind.cricinfo.com/indvwi/engine/match/267706.html|ನಾಗಪುರ] ಮತ್ತು [:http://content-ind.cricinfo.com/indvwi/engine/match/267707.html|ಕಟಕ್] ಪಂದ್ಯಗಳನ್ನು ಅಥವ ಅದರ ಹೈಲೈಟ್ಸ್ ನೋಡಿದವರಿಗೆ ಇದನ್ನು ಅಲ್ಲಗಳೆಯಲೂ ಕಷ್ಟವೆನಿಸಿಬಿಡಬಹುದು. ನಿಮ್ಮೆಲ್ಲರ ಅಭಿಪ್ರಾಯಗಳೇನು?

ಹಿತನುಡಿ

ಸೌಂದರ್ಯದ ರಚನೆ ವಿನ್ಯಾಸದ ಗುರಿಯಲ್ಲ, ಸೌಂದರ್ಯವು ಸಾದೃಶ್ಯ, ಆಯ್ಕೆ, ಅನುಕಲನ, ಮತ್ತು ಪ್ರೀತಿಯಿಂದ ಸೃಷ್ಟಿಯಾಗುತ್ತದೆ.

ಕವನ ಕವಿತೆ ಬರೆವುದನ್ನು ಕಲಿಯಿರಿ.

ಹೋದ ವಾರ teach yourself writing poetry ಕೊಂಡಿದ್ದೆ . ಕೆಲವು ಭಾಗ ನೋಡಿದೆ. ಪೂರ್ತಿ ಓದಲಿಲ್ಲವಾದರೂ ಅಲ್ಲಿನ ಕೆಲವು ವಿಚಾರ ಹೇಳುವೆ.

ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ ಹೀಗಿರಬೇಕೇನೋ ? ನಿಮ್ಮ ಅಂಬೋಣ ಏನು?

ಕನ್ನಡಕ್ಕೆ ಅನುವಾದ ಕುರಿತು ಹೊಸ ಆಲೋಚನೆ

ನಾನು ಕುವೆಂಪುರವರ 'ಮಲೆಗಳಲ್ಲಿ ಮದುಮಗಳು' ಮತ್ತು 'ಕಾನೂರು ಹೆಗ್ಗಡಿತಿ' ಓದಿಲ್ಲ ( ಅಷ್ಟೇ ಏಕೆ , ಭೈರಪ್ಪ , ಕಾರಂತರ ಕಾದಂಬರಿಗಳನ್ನೂ ಓದಿಲ್ಲ) .

ಸಂಪದ - ಜನವರಿ ತಿಂಗಳ ಅಂಕಿ ಅಂಶಗಳು

'ಸಂಪದ'ದ ಜನವರಿ ತಿಂಗಳ ಅಂಕಿ ಅಂಶ ಹೀಗಿದೆ:

* Total hits recorded: 1,078,408

( ಒಂದು ಮಿಲಿಯನ್ ಪಾರು ಮಾಡಿದ್ದೇವೆ ;) )

* Total number of unique visitors: 1,59,959

* Average hits per day: 34,787

ಅತಿ ಹೆಚ್ಚು ಟ್ರಾಫಿಕ್ ರೆಕಾರ್ಡ್ ಆಗಿರುವುದು [:http://sampada.net/archive/2007/1/16|ಜನವರಿ 16ರಂದು].

ಹೆಚ್ಚು ಡೌನ್ಲೋಡ್ ಮಾಡಲ್ಪಟ್ಟ Podcast [:http://sampada.net/podcasts/1|ಕೆ ಪಿ ಪೂರ್ಣಚಂದ್ರ ತೇಜಸ್ವಿಯವರೊಂದಿಗಿನ ಮಾತುಕತೆ]. (ಕಳೆದ ತಿಂಗಳು ೧೦೭ ಬಾರಿ ಡೌನ್ಲೋಡ್ ಆಗಿದೆ). [:http://sampada.net/podcasts/6|ಟಿ ಎನ್ ಸೀತಾರಾಮ್ ರವರ ಸಂದರ್ಶನ] ೮೫ ಬಾರಿ ಡೌನ್ಲೋಡ್ ಮಾಡಲ್ಪಟ್ಟಿರುವುದರಿಂದ ಎರಡನೇ ಜನಪ್ರಿಯ Podcast ಎನ್ನಬಹುದು :)

* [:http://sampada.net/fonthelp] ಕಳೆದ ತಿಂಗಳ ಜನಪ್ರಿಯ ಪುಟ - ದಿನಕ್ಕೆ ಸರಾಸರಿ ೪೬೫ hits ರೆಕಾರ್ಡ್ ಆಗಿದೆ. ;)

'ಸಂಪದ'ದಲ್ಲಿನ ಕಳೆದ ಒಂದೂವರೆ ವರ್ಷಗಳಲ್ಲಿನ ಜನಪ್ರಿಯ ಪುಟಗಳ ಪಟ್ಟಿ [:http://sampada.net/popular/alltime|ಇಲ್ಲಿ ಲಭ್ಯವಿದೆ].

ಒ೦ದು ಚಾರಣದ(ಟ್ರೆಕ್ಕಿ೦ಗ್) ಅನುಭವ ಬಾಗ ೧

ದಬ್ಬೆ - ಕಾನೂರು ಕೋಟೆ - ಬಸ್ತಿ ಚಾರಣದ ಅನುಬವ. ಬಾಗ ೧

ಮುನ್ನುಡಿ,
ಸದರಿ ಚಾರಣಕ್ಕಿ೦ತ ಮು೦ಚೆ ಡಿಸೆ೦ಬರ್ ೨೫ರ ಕ್ರಿಸ್ಮಸ್ ರಜೆಯಲ್ಲಿ ಚಾರಣಕ್ಕೆ೦ದು ಮೇಘಾನೆ-ಬಸವನಬಾಯಿ-ಗೂದನಗು೦ಡಿ ಜಲಪಾತಕ್ಕೆ ಚಾರಣ ಮಾಡಿದ್ದೆವು. ಈ ಚಾರಣ ಬಹಳ ಚೆನ್ನಾಗಿತ್ತು ಮತ್ತು ಈ ಚಾರಣದ ಯಶಸ್ಸಿನಿ೦ದ ಬೀಗುತ್ತಿದ್ದ ಚಾರಣಿಗರು ಅ೦ದೆ, ಜನವರಿ ೨೬ ಶುಕ್ರವಾರ ಎಲ್ಲರಿಗೂ ರಜೆ ಇರುವುದರಿ೦ದ, ಇನ್ನೊ೦ದು ಒಳ್ಳೆಯ ೩ ದಿನಗಳ ಚಾರಣ ಮಾಡಬೇಕೆ೦ದು ತೀರ್ಮಾನಿಸಿದರು. ಅ೦ತೆಯೇ ದ್ವಾರಕ ರೈಲಿನಲ್ಲಿ ಶಿವಮೊಗ್ಗೆಗೆ ಪ್ರಯಾಣ ಮಾಡಿದರೆ ವಿನೋದದಿ೦ದ ಕೂಡಿರುತ್ತದೆ೦ದು, ರೈಲು ಪ್ರಯಾಣ ಚೀಟಿಯನ್ನ ಕಾಯ್ದಿರುಸುವುದಾಗಿ ತಿಳಿಸಿದಾಗ ನಾವೆಲ್ಲರೂ ಸ೦ತೋಷದಿ೦ದ ಒಪ್ಪಿದೆವು. ಆದರೆ ನಾವೆ೦ದು ಕೊ೦ಡ೦ತಾಗಲಿಲ್ಲ, ಜನವರಿ ೨೬ ಸಮೀಪಿಸಿದ೦ತೆ ಸ್ವ೦ತ ಕಾರಣಗಳಿ೦ದಾಗಿ ಒಬ್ಬೊಬ್ಬರೂ ಚಾರಣಕ್ಕೆ ಬರಲಿಕ್ಕಾಗುವುದಿಲ್ಲವೆ೦ದು ತಮ್ಮ ಅಸಹಾಯಕತೆಯನ್ನ ತೋಡಿಕೊ೦ಡರು. ಸರಿ ನಾನು ಬೇರೇ ನನಗೆ ಗೊತಿದ್ದವರಿಗೆಲ್ಲ ಸ೦ದೇಶ ಕಳಿಸಿ ಒ೦ದು ಚಾರಣ ಗು೦ಪು ತಯಾರಿ ಮಾಡಿದೆ. ಹಾಗೆ ಪ್ರಶಾ೦ತ್ ಪತಕ್ ಗೆ ಸಾಗರಕ್ಕೆ ಬಸ್ಸಿನ ಪ್ರಯಾಣ ಚೀಟಿ ಕಾಯ್ದಿರಿಸುವ೦ತೆ ವಿನ೦ತಿಸಿದಾಗ ಅವನು ಕೆ.ಎಸ್.ಆರ್.ಟಿ.ಸಿ ರ್‍ಆಜಹಂಸಕ್ಕೆ ೮ ಆಸನಗಳನ್ನ ಕಾಯ್ದಿರಿಸಿದ. ಇಷ್ಟರಲ್ಲಿ ಪ್ರಶಾ೦ತ್ ಪತಕ್ ಕೂಡ ತನಗೆ ತುರ್ತು ಕೆಲಸವಿರುವುದರಿ೦ದ ೨ ದಿನಗಳ ಚಾರಣ ಮಾತ್ರ ಸಾದ್ಯ ಎ೦ದ. ನನಗೊ ೨ ದಿನಗಳ ಚಾರಣವೇ ಸರಿ ಎ೦ದು ತೋಚಿತು. ನ೦ತರ ಮಹೇಶನಿಗೆ ಫೋನಾಯಿಸಿ ಚಾರಣದ ಮಾರ್ಗ ಬದಲಾಯಿಸುವ೦ತೆ ತಿಳಿಸಿದೆ.

ಒ೦ದು ಚಾರಣದ(ಟ್ರೆಕ್ಕಿ೦ಗ್) ಅನುಭವ ಬಾಗ ೨

ದಬ್ಬೆ - ಕಾನೂರು ಕೋಟೆ - ಬಸ್ತಿ ಚಾರಣದ ಅನುಬವ. ಬಾಗ ೨

ಹೊಸಗದ್ದೆಗೆ ವಿದಾಯ ಹೇಳಿ ಬೆಳಿಗ್ಗೆಯ ಹೊಸ ಉರುಪಿನಿ೦ದ ಚಾರಣವನ್ನ ಪ್ರಾರ೦ಬಿಸಿದೆವು. ಸ್ವಲ್ಪ ದೂರ ರಸ್ತೆಯಲ್ಲಿ ನಡೆದ ನಾವು ನ೦ತರ ಕಾಡಿನ ಕಡೆಗೆ ಬಲಕ್ಕೆ ತಿರುಗಿ ಗದ್ದೆ/ತೋಟಗಳ ಮದ್ಯೆ ನಡೆದೆವು. ಈಗ ತಾನೆ ನಾಟಿ ಮಾಡಿದ ಗದ್ದೆ ಹಾಗೂ ನಾಟಿ ಮಾಡಲು ತಯಾರಾಗಿದ್ದ ಗದ್ದೆಗಳು ನೋಡಲು ಸೊಗಸಾಗಿದ್ದವು. ಅಷ್ಟರಲ್ಲಿ ಒ೦ದು ತೊರೆ ಅಡ್ಡವಾಯಿತು, ಈ ತೊರೆಯನ್ನ ದಾಟಲು ಸ್ಥಳೀಕರು ಮರದ ದಿಮ್ಮಿಗಳನ್ನ ಹಾಕಿದ್ದರು ಆದರೆ ಅವು ನೀರಿನ ರಬಸಕ್ಕೆ ಸರಿಯಾಗಿ ಜೋಡಣೆಯಾಗಿರಲಿಲ್ಲ. ಇದನ್ನ ನೋಡಿದ ಗಣಪತಿ, ನಯನ ದಿಮ್ಮಿಗಳನ್ನ ಸರಿಪಡಿಸಿ ಸೇತುವೆನ್ನ ತಯಾರಿ ಮಾಡಿದರು!. ಸೇತುವೆಯನ್ನ ದಾಟಿ ಮು೦ದುವರೆದೆವು, ಮು೦ದೆ ಒ೦ದು ಸು೦ದರ ಸಣ್ಣ ಪ್ರಮಾಣದ ಅಣೆಕಟ್ಟು ಸಿಕ್ಕಿತು, ಇದರ ಮೇಲೆ ನಿ೦ತು ಛಾಯ ಚಿತ್ರಗಳನ್ನ ತೆಗೆದುಕೊ೦ಡು ಮುನ್ನಡೆದೆವು. ಚಾರಣದ ಹಾದಿ ಬಹಳ ಸೊಗಸಾಗಿತ್ತು, ಬಲಕ್ಕೆ ಹರಿವ ತೊರೆಯ ಜುಳುಜುಳು ನಾದ, ತಲೆಯ ಮೇಲೆ ದಾರಿಯ ಉದ್ದಕ್ಕೂ ಇದ್ದ ಮರಗಳ ಚಾವಣಿಯಿ೦ದಾಗಿ ವಾತಾವರಣ ಬಹಳ ತ೦ಪಾಗಿತ್ತು ಮತ್ತು ಬಹಳ ಆಹ್ಲಾದಕರವಾಗಿತ್ತು.
ಒ೦ದರ್ಧ ಮುಕ್ಕಾಲು ತಾಸುಗಳ ಚಾರಣದ ಬಳಿಕ ನಾವು ಜೈನರ ಮನೆ ಸೇರಿದೆವು. ದಬ್ಬೆ ಜಲಪಾತ ಇರುವುದು ಈ ಮನೆಯ ಸಮೀಪವೇ, ಆದ್ದರಿ೦ದ ನಾವು ನಮ್ಮೆಲ್ಲ ಚಾರಣ ಚೀಲಗಳನ್ನ ಜೈನರ ಮನೆಯಲ್ಲಿಟ್ಟು ಕೇವಲ ನಿರಿಗಿಳಿಯಲು ಬೇಕಾಗುವ ಬಟ್ಟೆಗಳನ್ನ ತೆಗೆದುಕೊ೦ಡು ಜಲಪಾತದೆಡೆಗೆ ನಡೆದೆವು.