ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವರಸಿದ್ಧಿವಿನಾಯಕ ವ್ರತ.

ವರಸಿದ್ಧಿವಿನಾಯಕ ವ್ರತ :

ಭಾದ್ರಪದ ಶುಕ್ಲ ಚತುರ್ಥೀ ಮದ್ಯಾನ್ಹ ವ್ಯಾಪಿನಿ ಮತ್ತು ಯಾಮದ್ವಯವ್ಯಾಪಿನಿಯಿರುವದಿನ, [೧೫, ಶುಕ್ರವಾ
ರ, ಸೆಪ್ಟೆಂಬರ್, ೨೦೦೭ ] ಆಚರಿಸತಕ್ಕ ವ್ರತ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯನ್ನು ಪ್ರಾಣಪ್ರತಿಷ್ಠಾಪನಾ ಪುರುಸ್ಸರ ಪೂಜಿಸಿ, ಮೋದಕಗಳನ್ನೂ, ನೈವೇದ್ಯಮಾಡಿ, ಸ್ಯಮಂತಕೋಪಾಖ್ಯಾನ ಕಥೆಯನ್ನು ಶ್ರವಣಮಾಡಬೇಕು. ಸಕಲ ಕಾರ್ಯಗಳೂ, ನಿರ್ವಿಘ್ನವಾಗಿ ನೆರವೇರಲೂ, ವಿದ್ಯಾಪ್ರಾಪ್ತಿಗಾಗಿಯೂ ಇಷ್ಟಾರ್‍ಥ ಸಿದ್ಧಿಗೂ ಈ ವ್ರತ ಪ್ರಸಿದ್ಧವಾಗಿದೆ. ಸಾಮಾನ್ಯವಾಗಿ, ಪ್ರತಿಮನೆಯಲ್ಲೂ ಗಣಪತಿಮೂರ್ತಿಯನ್ನು ತಂದು, ಆರಾಧಿಸುವ ಪದ್ಧತಿ ಕರ್ನಾಟಕದಲ್ಲಿದೆ.

ಮುಂಬೈ ನಲ್ಲಿ ಗಣೇಶೋತ್ಸವಗಳು :

ದೇಶದ ಎಲ್ಲೆಡೆ ಗಣಪತಿ ಪೂಜೆ ನಡೆಯುತ್ತಿದ್ದರೂ ಮಹಾರಾಷ್ಟ್ರದ ಗಣಪತಿಯದೇ ಒಂದು ವಿಶಿಷ್ಠ ಸ್ಥಾನ. ಸಹಸ್ರಾರು ಗಣಪತಿಗಳ ಪೆಂಡಾಲುಗಳನ್ನು ಈಗಾಗಲೇ ರಚಿಸಿದ್ದು, ಈ ವರ್ಷವೂ ವಿಜೃಂಭಣೆಯಿಂದ ಪೂಜೆಯನ್ನು ಮಾಡಲಾಗುತ್ತದೆ. ಮಹಾರಾಷ್ಟ್ರದ ಜನತೆಗೆ ಈ ವರ್ಷ, ಬಹಳ ಸಂಭ್ರಮ. ಕಾರಣ, ಮೊದಲನೆಯದಾಗಿ ಮಹಾರಾಷ್ಟ್ರದ ಮಣ್ಣಿನಮಗಳಾದ ಶ್ರೀಮತಿ ಪ್ರತಿಭಾಪಾಟೀಲ್ ರಾಷ್ಟ್ರಾಧ್ಯಕ್ಷೆಯಾಗಿರುವುದು. ಇನ್ನೊಂದು ಮರಾಠೀಜನರ ಆಶೋತ್ತರಗಳನ್ನು ಬಿಂಬಿಸಲು ಹೋರಾಡುತ್ತಿರುವ ಶಿವಸೇನಾ, ಮುಂಬೈ ನಗರಪಾಲಿಕೆಯ ಆಡಳಿತವನ್ನು ಸತತವಾಗಿ ಮುಂದಿನ ೫ ವರ್ಷಗಳವರೆಗೆ ನಿರ್ವಹಿಸುವಲ್ಲಿ ಮುಂದಾಳಾಗಿರುವುದು. ಶರದ್ ಪವಾರ್ ಮುಂತಾದ ರಾಜಕೀಯ ನೇತಾಗಣ, ಕೇಂದ್ರದಲ್ಲಿ ಪ್ರಮುಖ ಪಾತ್ರವಹಿಸಿರುವುದು.
ಒಟ್ಟಿನಲ್ಲಿ ರಾಜಕೀಯ, ಕೃಷಿ, ಉದ್ಯಮ, ಸಿನಿಮಾರಂಗಗಳಲ್ಲಿ ದೇಶದಲ್ಲೇ ಮಂಚೂಣಿಯಲ್ಲಿರು ರಾಜ್ಯ- ಮಹಾರಾಷ್ಟ್ರ. ಇದು ಸಹಜವಾಗಿಯೇ ಮರಾಠೀ ಜನರಿಗೆ, ಮುಂಬೈಕರರಿಗೆ ಹೆಮ್ಮೆತರುವಂತಹವಿಷಯ. ಸಾರ್ವಜನಿಕ ಗಣಪತಿ ಉತ್ಸವ, ಲೋಕಮಾನ್ಯ ತಿಳಕರಕಾಲದಿಂದ ಅತ್ಯಂತ ಪ್ರಮುಖ ಸಾರ್ವಜನಿಕ ಉತ್ಸವದ ರೂಪದಲ್ಲಿ ರೂಪಗೊಂಡ ಬಗೆ, ಸರ್ವವಿದಿತವಾಗಿದೆ. ಅಂತಹ ಪ್ರಥಮ ಗಣಪತಿಉತ್ಸವವನ್ನು, ಮುಂಬೈನ ಕೇಶವ್ಜೀ ನಾಯಕ್ ಚಾಲ್ ನಲ್ಲಿ ೧೮೯೩ ರಲ್ಲಿ ಪ್ರಾರಂಭಮಾಡಿದವರು ಸ್ವತಃ ತಿಳಕರೇ.

ಯಾವ ಆಡಾಂಬರವೂ ಇಲ್ಲದ ಸರಳ ಶೈಲಿಯ ಈ ೨.೫ ಮೀಟರ್ ಎತ್ತರದ್ದು. ಪೂಜೆಯನ್ನೂ ವಿಧಿವತ್ತಾಗಿ ನೆರವೇರಿಸುವುದು, ಇಲ್ಲಿಯ ವೈಶಿಷ್ಟ್ಯ. ವಿನೋದ್ ಸತ್ಪುತೆ ಮತ್ತು ಅವರ ವೃಂದದವರು, ಇದೇ ಅಳತೆಯ ಮೂರ್ತಿಯನ್ನೇ ದಶಕಗಳಿಂದ ಆರಾಧಿಸುತ್ತಾಬಂದಿದ್ದಾರೆ. ಲಿಕರ್ ವ್ಯಾಪಾರಿಗಳ ದೇಣಿಗೆಯನ್ನು ಅವರು ಮುಟ್ಟುವುದೂ ಇಲ್ಲ. ಚಲನಚಿತ್ರ ಪ್ರಪಂಚದವರನ್ನೂ ಅವರು ಸ್ವಲ್ಪ ದೂರದಲ್ಲಿಟ್ಟಿದ್ದಾರೆ. ೧೯೩೨ ರಲ್ಲಿ ರೂಪಿಸಿಕೊಂಡ ಕಾನೂನಿನಂತೆ, ಆ ಗಲ್ಲಿ ಯ ಚಾಲುಗಳಲ್ಲಿ ವಾಸಿಸುವ ಹಿತ-ಮಿತವಾದ ಸದಸ್ಯರ ಒಡನಾಟದೊಂದಿಗೆ ಸದ್ದುಗದ್ದಲವಿಲ್ಲದೆ ಗಣಪನ ಆರಾಧನೆ ನಡೆಯುತ್ತದೆ. ಮ್ಯೂಸಿಕ್ ಡೈರೆಕ್ಟರ್ ಆನಂದ್ಜೀ, ಹೇಗೋ ಈ ಸದಸ್ಯರಜೊತೆಗೆ ಸೇರಿಕೊಂಡಿದ್ದಾರೆ. ಅವರೂ ಸಂಘದ ನಿಯಮಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸುತ್ತಿದ್ದಾರೆ.

ಕಾಗುಣಿತದಲ್ಲಿ ಅನುಮಾನ

ನ೦ಗೇ ಮೊನ್ನೆ ಗೂಗಲ್ನವರ ಸೈಟ್ ನಲ್ಲಿ ರುವ ಕೀಬೋರ್ಡ್ ನಲ್ಲಿ ಈ ಅಕ್ಷರಗಳು ಕ೦ಡು ಬ೦ದವು.
"ಞ ಞಾ ಞಿ ಞೀ ಞು ಞೂ ಞೃ ಞೆ ಞೇ ಞೈ ಞೊ ಞೋ ಞೌ ಞಂ ಞ"
ಇವು ವಿಕಿಪೀಡಿಯಾದಲ್ಲಿ ಕೂಡ ಇದೆಯ೦ತಾ ಗೊತಾಯ್ತು.
ಈ ಗುಣಿತಾಕ್ಷರಗಳು ಕನ್ನಡ ವ್ಯಾಕರಣದಲ್ಲು೦ಟೋ ಎ೦ಬುದೇ ನನ್ನ ಅನುಮಾನ..

ಧರೆಯೆ ಹತ್ತಿ ಉರಿಯುವಾಗ ಎಲ್ಲಿ ಓಡಿ ಹೋಗುವೆ?

ಭೂತಾಯಿಯ ತಾಪಮಾನ ಏರುತ್ತಿರುವ ವಿಷಯ ಇವತ್ತು ಕೇವಲ ಭವಿಷ್ಯದ ಪೀಳಿಗೆಯ ಬಗ್ಗೆ ಕಾಳಜಿ ಇರುವವರ ಅಥವ ತಾವು ತೆರಳುವಾಗ ತಾವು ಬಂದಾಗ ಹೇಗಿತ್ತೊ ಅದಕ್ಕಿಂತ ಉತ್ತಮವಾದ ಸ್ಥಿತಿಯಲ್ಲಿ ಈ ನಿಸರ್ಗವನ್ನು ಬಿಟ್ಟು ಹೋಗಬೇಕು ಎಂದು ಹಂಬಲಿಸುವ ಸಜ್ಜನರ ಕಾಳಜಿ ಮಾತ್ರವಾಗಿ ಉಳಿದಿಲ್ಲ. ಜಾತಿ, ಮತ, ವರ್ಣ ಶ್ರೇಷ್ಠತೆ ಎಂದೆಲ್ಲ ಸಂಕುಚಿತವಾಗಿ ಕನವರಿಸುವ ಧರ್ಮಲಂಡರೆಲ್ಲ ಈಗ ಪರಿಸರ ಪರಿಸರ ಎಂದು ಕನವರಿಸುವಷ್ಟು ಭೂಮಿ ಬಿಸಿಯಾಗುತ್ತಿದೆ. ಕನ್ನಡದ ದಿನಪತ್ರಿಕೆಯೊಂದರಲ್ಲಿ ಪರಿಸರದ ಬಗ್ಗೆ ಮತಾಂಧರೊಬ್ಬರು ಬರೆದಿರುವ ಸಾಲುಗಳು ಇವು: "ಇಂದು ಪರಿಸರ ಸಂರಕ್ಷಣೆಯ ಬಗ್ಗೆ ಅನೇಕ ಯೋಜನೆಗಳನ್ನು ಹಾಕಲಾಗುತ್ತಿದೆ. ಇದು ಬರಿಯ ಜನಮೆಚ್ಚುಗೆ ಗಳಿಸುವ ನಾಟಕವಾಗಿದೆಯೇ ಹೊರತು ಕಾರ್ಯ ರೂಪದಲ್ಲಿ ಏನೂ ಆಗುತ್ತಿಲ್ಲ. ಅನೇಕ ಸಾಂಕ್ರಾಮಿಕ ರೋಗಗಳಿಂದ ಜನರು ನರಳುತ್ತಿದ್ದಾರೆ. ಪ್ರಪಂಚದ ತಾಪಮಾನವು ಸತತವಾಗಿ ದಿನೇ ದಿನೇ ಹೆಚ್ಚುತ್ತಿದೆ. ಗಾಳಿ ಮತ್ತು ನೀರು ಕಲುಷಿತವಾಗಿದೆ. ಆದರೂ ಯಾರಿಗೂ ಅದರ ಪರಿವೆಯೇ ಇಲ್ಲವಾಗಿದೆ. ಶಿವಾಜಿಯು ಪರಿಸರದ ಬಗ್ಗೆ ಎಂದೂ ಭಾಷಣವನ್ನಾಗಲೀ ಉಪದೇಶವನ್ನಾಗಲೀ ಮಾಡುವ ಗೋಜಿಗೆ ಹೋಗಲಿಲ್ಲ. ಆದರೆ ಅವನ ಪ್ರತಿಯೊಂದು ನಡೆ ನುಡಿಯೂ ಪರಿಸರದ ರಕ್ಷಣೆಯಲ್ಲಿಯೇ ಮಗ್ನವಾಗಿರುತ್ತಿದ್ದಿತು. ಹೇರಳವಾಗಿ ಮರಗಳನ್ನು ಕಡಿದು ಹಡಗು ನಿರ್ಮಾಣ ಮಾಡಬಹುದಾಗಿದ್ದಿತು. ಆದರೆ ಎಂದೂ ಒಂದು ಮರವನ್ನು ಕಡಿಯುವ ಯೋಚನೆಯನ್ನು ಮಾಡಲಿಲ್ಲ."

ಹೇಗೆ ಬಾರಿಸಲಿ ನಾನು...?

ಹೇಗೆ ಹಾಡಲಿ ನಾನು
ದೇಶವೇ ಹೊತ್ತಿ ಉರಿಯುವಾಗ
ಅಗೋ ಕೇಳಿಲ್ಲವೇ ಅಂದು-
ನಿರೋ ದೊರೆ ಪಿಟೀಲು ಬಾರಿಸಿದನೆಂದು,
ಇನ್ನು ಹೇಗೆ ಬಾರಿಸಲಿ ನಾನಿಂದು
ನನ್ನೀ ದಳ್ಳುರಿಯ ಡೋಲು?
 
ಇಲ್ಲಿ ನಾವೆಲ್ಲ ಒಂದೇ
ಎಂದು ನುಡಿದು ನಡೆದು ಬಂದ ಮಾತೇ
ನಮಗೆ ಬೊಟ್ಟು ಮಾಡಿ ಅಣಕಿಸುವಂತಾದುದೇಕೆ?
ಅಯ್ಯೋ ! ಅದ್ಯಾವ ಕತ್ತಲೆಯ ಲೋಕದ ಕರೆ

ರಾಮಾಯಣ ಕಟ್ಟು ಕಥೆಯೇ??

ಶ್ರೀರಾಮ, ರಾಮಾಯಣ, ವಾನರರು ಲಂಕೆಗೆ ಕಟ್ಟಿದ ಶ್ರೀರಾಮ ಸೇತುವೆ ಎಲ್ಲವೂ ಒಂದು ಕಾಲ್ಪನಿಕ ಕಟ್ಟು ಕಥೆ ಮಾತ್ರ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‍ ಗೆ ಪ್ರಮಾಣ ಪತ್ರ ಸಲ್ಲಿಸಿದೆ.

ಮುಯ್ಯಿಗೆ ಮುಯ್ಯಿ

ಮಗು ಬಿತ್ತು. ಅಳತೊಡಗಿತು. ಅಮ್ಮ ಓಡಿ ಬಂದಳು, ಮಗುವನ್ನು ಎತ್ತಿಕೊಂಡು ಮುದ್ದಿಸತೊಡಗಿದಳು.

"ಅಮ್ಮಾ... ಆಯೀ" ಎಂದು ಅಳುತ್ತಿತ್ತು ಮಗು.

"ಆಯಿ ಆಯ್ತಾ ನನ್ನ ಬಾಬುಗೇ... ಎಲ್ಲಿ ಆಯ್ತು ನೋಡುವ ತೋರಿಸು" ಎಂದಳು ಅಮ್ಮ

ಮಗು ತಲೆ ಮುಟ್ಟಿ ತೋರಿಸಿತು. ಅಮ್ಮ ಮಗುವಿನ ತಲೆಗೆ ಮುತ್ತಿಟ್ಟಳು, "ಆಯಿ ಹೋಯ್ತು" ಅಂದಳು

ಶೃಂಗೇರಿಯ ಶಾರದಾದೇವಿ ದೇವಸ್ಥಾನ, ಮತ್ತು ವಿದ್ಯಾಶಂಕರ ದೇವಾಲಯ.

ಶಾರದಾದೇವಿ ದೇವಸ್ಥಾನ ಮತ್ತು ವಿದ್ಯಾಶಂಕರ ದೇವಾಲಯ.

ಶೃಂಗೇರಿ ದೇವಸ್ಥಾನದ ಪ್ರಾಂಗಣಕ್ಕೆ ಕಾಲಿಟ್ಟರೆ ಸಾಕು ಕಣ್ಣಿಗೆ ಗೋಚರಿಸುವುದು, ಶಾರದಾದೇವಿ ದೇವಸ್ಥಾನ. ಅದರ ಬದಿಯಲ್ಲೇ " ವಿದ್ಯಾಶಂಕರ ದೇವಾಲಯ," ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ. ಅದರ ಪ್ರಾಚೀನ ವಾಸ್ತುಶಿಲ್ಪಶೈಲಿ ವಿಭಿನ್ನವಾಗಿದ್ದು ಕೆಲವು ವಿಶೇಷತೆಗಳನ್ನು ಹೊಂದಿದೆ !

ರಾಮಸೇತು ರಕ್ಷಿಸುವುದೋ ಶ್ರೀರಾಮನನ್ನೇ ರಕ್ಷಿಸಿಕೊಳ್ಳವುದೋ..

ಇಂದಿನ ಸುದ್ದಿ ನೋಡಿ, ನಗಬೇಕೋ ಅಳಬೇಕೋ ರಾಮ ರಾಮಾ!. . ರಾಮಸೇತುವನ್ನು ರಕ್ಷಿಸಿ;ದೇಶ ಉಳಿಸಲು ಹೋಗಿ  ಇದೀಗ ನಾವು ಶ್ರೀರಾಮನನ್ನೇ ಉಳಿಸಿಕೊಳ್ಳಲು ಹೆಣಗಬೇಕಿದೆಯಲ್ಲ! ರಾಮನೇ ಇಲ್ಲಾಂದ್ಮೇಲೆ ಶ್ರೀಕೃಷ್ಣ ಇನ್ನೆಲ್ಲಿ?

ನಮ್ಮ ರತ್ನ Excellenಟು!

ಜೀವನ, ಭಾವನೆಗಳ ಒಂದು ಕೊನೆಯಿಲ್ಲದ ಸರಪಳಿ. ಮೊದಮೊದಲು ನಮ್ಮೆಲ್ಲರ ಭಾವನೆಗಳ ಮೂಲ ಯಾವುದು ಎಂಬುದರ ಪ್ರಶ್ನೆಯೊಂದನ್ನು ಮುಂದಿಟ್ಟುಕೊಂಡು "ಸ್ಪೂರ್ತಿ" ಎಂಬ ಲೇಖನವನ್ನು ಬರೆದಿದ್ದೆ [ಓದಲು ಇಲ್ಲಿ Click ಮಾಡಿ]. ಪ್ರತಿಯೊಂದು ಕ್ಷಣವೂ ನಾವು ಒಂದಿಲ್ಲ ಒಂದು ವಿಷಯದಲ್ಲಿ ನಮ್ಮನ್ನು ನಾವು ಮಗ್ನರನ್ನಾಗಿಸಿಕೊಳ್ಳುತ್ತೇವೆ, ಇಲ್ಲವಾದರೆ ನಮ್ಮ ಮನಸ್ಸು ಯಾವುದೋ ವಿಷಯವನ್ನು ಮೆಲುಕು ಹಾಕುತ್ತ ದೇಶದೇಶಾಂತರ ಸುತ್ತಾಡುತ್ತಿರುತ್ತದೆ. ಕಥೆ ಕಾದಂಬರಿಗಳನ್ನು ಅಥವ ಇನ್ಯಾವುದೇ ಪುಸ್ತಕಗಳನ್ನು ಓದುತ್ತ ಓದುತ್ತ ಹೋದಂತೆ ಹೊಸ ಹೊಸ ಕಲ್ಪನೆಗಳು ನಮ್ಮನ್ನಾವರಿಸಿ ಬಿಡುತ್ತವೆ. ಕೆಲವೊಂದು ಭಾಗಗಳು ನಮ್ಮನ್ನು ಆನಂದದ ಅತ್ಯುನ್ನತ ಸ್ಥಿತಿಗೊಯ್ದರೆ ಕೆಲವೊಂದು ಭಾಗಗಳು ತುಂಬಾ ದುಃಖಕ್ಕೆ ಗುರಿಮಾಡಬಹುದು. ಓದುತ್ತ ಓದುತ್ತ ಹೋದಂತೆ, ಯಾವುದೋ ಒಂದು ಶಕ್ತಿ ಥಟ್ಟನೆ ಬಂದು, ಒಂದೊಂದು ಬಗೆಯ ಭಾವನೆಗಳನ್ನು ಮೂಡಿಸಿ, ಆಶ್ಚರ್ಯಚಕಿತರನ್ನಾಗಿ ಮಾಡಿ, ಮರುಕ್ಷಣವೇ ಮಾಯವಾಗಬಹುದು. ಯಾವುದೋ ಒಂದು ಮಾನಸಿಕ ಸ್ಥಿತಿಯಲ್ಲಿದ್ದಾಗ, ಯಾವುದೋ ಒಂದು ವಿಷಯ ಥಟ್ಟನೆ ಹೊಳೆದು ನಮ್ಮನ್ನು ಅತೀವ ಸಂತೋಷಕ್ಕೆ ಗುರಿಮಾಡುತ್ತದೆ. ಆ ಅನುಭವವನ್ನು ನೆನೆದರೆ ಮತ್ತೆ ಅದೇ ಥರದ ರೋಮಾಂಚನ ಸಿಗುವುದಿಲ್ಲ. ಆ ಅನುಭವವನ್ನು ಬೇರೊಬ್ಬದ ಜೊತೆ ಹಂಚಿಕೊಂಡು, ಅವರೂ ಆ ರೋಮಾಂಚನವನ್ನ ಅನಭವವಿಸುವಂತೆ ಮಾಡುವುದು ಹೇಗೆ?