ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂಕ್ಷಿಪ್ತ ಗುರುಚರಿತ್ರೆ...

ಸಂಕ್ಷಿಪ್ತ ಗುರುಚರಿತ್ರೆ. ಇದು ಚಿತ್ರದುರ್ಗ ಮತ್ತು ಸುತ್ತಮುತ್ತ ಪ್ರಚಲಿತದಲ್ಲಿರುವ ಪ್ರಾರ್ಥನಾ ಪ್ರಾಕಾರ. ನೀವು ಭಕ್ತಿಯಿಂದ ಭಜಿಸಿದರೆ ನಿಮಗೆ ಸನ್ಮಂಗಳಗಳು ಉಂಟಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಹರಿ ಓಂ. ಪ್ರತಿದಿನವೂ ಪ್ರಾತಃಕಾಲ ಮತ್ತು ಸಾಯಂಕಾಲ ಇದನ್ನುಭಕ್ತಿಯಿಂದ ಪಠಿಸುವುದರಿಂದ ಎಲ್ಲಾ ಇಷ್ಠಾರ್ಥಗಳೂ ನೆರವೇರುತ್ತವೆ.

 

ಆರು ವರ್ಣಿಪರಯ್ಯ ಗುರು ನಿನ್ನ ಮಹಿಮೆಯಾ ಪಾರವಿಲ್ಲದ ನಿನ್ನ ಗುಣ ಚರಿತವನ್ನಾ

ವರ ವೇದಗಳು ತಾವು ನಿರುತ ವರ್ಣಿಸಿ ದಣಿದು ಕರ ಮುಗಿದು ನಿಂತವೈ ನೀರಜಾಕ್ಷ

ಸರಸಿ ಜಾಸನನಾಗಿ ವಿರಚಿಸಿದೆ ಜಗವನ್ನು ಹರಿಯ ರೂಪದಿ ಬಂದು ನಿರುತದೀ ಪೊರೆದೇ

ಹರನ ರೂಪವ ತಾಳ್ದು ಹರಣ ಕಾರ್ಯವ ಗೈದೆ ಮೂರು ರೂಪದಿ ಬಂದು ಗುರುದತ್ತನಾದೆ

ಕುವೆಂಪು ಹುಟ್ಟಿದ ಊರಿಗೆ, ಮೂವತ್ತು ವರ್ಷಗಳಾದ ಮೇಲೆ ಮತ್ತೆ ಹೋದಾಗ

ಕುವೆಂಪು - ಚಿತ್ರ ಕೃಪೆ: ಕುವೆಂಪು ಡಾಟ್ ಕಾಂ ಕುವೆಂಪು ಹುಟ್ಟಿದ ಊರಿಗೆ ಮೂವತ್ತು ವರ್ಷವಾದ ಮೇಲೆ ಹೋಗಿದ್ದು. ಕುವೆಂಪು ತೀರಿಕೊಂಡರು ಅನ್ನುವ ಸುದ್ದಿ ತಿಳಿದ ದಿನ ಮತ್ತೆ ಆಮೇಲೆ ಹಲವು ದಿನ ನಿಷ್ಕಾರಣವಾಗಿಯೋ ಅನ್ನುವ ಹಾಗೆ ಮನಸ್ಸು ಮಂಕಾಗಿತ್ತು. ನನಗೇನು ಕುವೆಂಪು ಗೊತ್ತಿರಲಿಲ್ಲ. ಅವರ ಜೊತೆ ಮಾತಾಡಿದವನೂ ಅಲ್ಲ. ಆದರೂ ಅವರ ಕಾದಂಬರಿ ಓದಿ ನನ್ನದೇ ಆ ಲೋಕ ಅನ್ನುವ ಹಾಗೆ ಆ ಜನರನ್ನೂ, ಕಾಡನ್ನೂ, ಒಂಟಿ ಮನೆಗಳನ್ನೂ, ಕತ್ತಲು, ಸೂರ್ಯೋದಯ, ಸಂಜೆ, ಎಲ್ಲವನ್ನೂ ಒಳಗೇ ನಿರ್ಮಿಸಿಕೊಂಡಿದ್ದೆ. ಬೇರೆ ಯಾವ ಲೇಖಕರೂ ಹೀಗೆ ಒಂದು ಜಗತ್ತನ್ನೇ ನನಗೆ ಉಡುಗೊರೆಯಾಗಿ ಕೊಟ್ಟಿರಲಿಲ್ಲ. ಅಂಥ ಒಂದು ಜೀವ ಇಲ್ಲವಾಯಿತೇ ಎಂದು ಆಗ ಮಂಕಾಗಿದ್ದೆ ಅನ್ನಿಸುತ್ತದೆ.
ಇರಲಿ. ಇಪ್ಪತ್ತೈದು ವರ್ಷಗಳ ಹಿಂದೆ ಶಿವಮೊಗ್ಗದ ಸುತ್ತಮುತ್ತಲ ಕಾಡುಗಳಲ್ಲಿ ಅಲೆದಾಡಿದ್ದೆಲ್ಲ ಈಗ ಮತ್ತೆ ನೆನಪಿಗೆ ಬಂದಿತ್ತು. ಕುಪ್ಪಳಿಯಲ್ಲಿ ಐದು ದಿನ ಕಳೆಯುತ್ತೇನೆ, ನನ್ನೊಡನೆ ಎಳೆಯ ಮನಸ್ಸುಗಳೂ ಇರುತ್ತವೆ. ಕುವೆಂಪು ಓಡಾಡಿದ ಜಾಗಗಳಲ್ಲಿ ಇವತ್ತಿನ ಕಿರಿಯರೊಡನೆ ಓಡಾಡುತ್ತೇನೆ ಅನ್ನುವ ಹುಮ್ಮಸ್ಸಿನಲ್ಲಿಯೇ ಕುಪ್ಪಳಿಗೆ ಹೋದೆ.
ಹಿಂದೆ ಇದ್ದದ್ದು ಈಗ ಇಲ್ಲ ಎಂದು ಹಲುಬುವುದರಲ್ಲಿ ಅರ್ಥವಿಲ್ಲ. ಇವತ್ತಿನ ಜನಕ್ಕೆ ಇವತ್ತು ಸಿಕ್ಕದ್ದೇ ನಿಜ ಅಂತಲೂ ಗೊತ್ತಿದೆ. ತೀರ್ಥಹಳ್ಳಿಯಲ್ಲಿ ನದಿಯ ದಂಡೆಯ ಮೇಲೇ ಇರುವ ಪ್ರವಾಸಿ ಬಂಗಲೆಗೆ ಹೋದಾಗ ಬೆಳಕು ಹರಿಯುತ್ತಿತ್ತು. ಎಳೆ ಬಿಸಿಲಲ್ಲಿ ತುಂಗೆ ಹರಿಯುವುದು ಕಾಣುತ್ತಿತ್ತು. ಕೇಳುತ್ತಿರಲಿಲ್ಲ. ನದಿಗೆ ಅಡ್ಡಲಾಗಿ ಕಟ್ಟಿದ್ದ ದೊಡ್ಡ ಸೇತುವೆ ಬಿಳಿಯ ಬಣ್ಣ ಬಳಿದುಕೊಂಡು ನದಿಗಿಂತ ತಾನೇ ಗಮನಸೆಳೆಯುವಂತೆ ನಿಂತಿತ್ತು. ಬಿಳಿಯ ಕಮಾನು ಸೇತುವೆ ಕಾಮನಬಿಲ್ಲು ಅಲ್ಲ. ಕಾನೂರು ಹೆಗ್ಗಡತಿಯಲ್ಲಿ ಓದಿದ್ದ ಕಲ್ಲು ಸಾರ ನೆನಪಿಗೆ ಬಂತು. ಹಾಗೆಯೇ ತುಂಗೆಯ ಒಡಲಲ್ಲಿ ನದಿಗೆ ಬಿದ್ದ ಕನಸಿನಂತೆ ಇದ್ದ ಕಲ್ಲುಬಂಡೆಗಳು, ಶತಮಾನಗಳ ಕಾಲ ನೀರಿನ ವಾಹಕ್ಕೆ ಸಿಕ್ಕು ಕಲ್ಪಿಸಿಕೊಳ್ಳಲೂ ಆಗದ, ಆದರೆ ನೋಡಿದ ಕೂಡಲೆ ಇವು ಇರಬೇಕಾದ್ದೇ ಹೀಗೆ ಎಂಬಂಥ ಆಕಾರ ಪಡೆದುಕೊಂಡಿದ್ದ ಕಲ್ಲುಗಳ ಸಂತೆಯನ್ನೂ ನೋಡಲಿಲ್ಲ. ನೆನಪಿನಂದಲೇ ಪುಳಕಿತನಾಗಿ ಕುಪ್ಪಳಿಗೆ ಕಾರಿನಲ್ಲಿ ಆರಾಮವಾಗಿ ಹೋದೆ.
ತೀರ್ಥಹಳ್ಳಿಯಿಂದ ಕೊಪ್ಪಕ್ಕೆ ಹೋಗುವ ದಾರಿಯ ಎರಡು ಬದಿಯೂ ಹಸಿರೇನೋ ಧಾರಾಳವಾಗಿ ಕಾಣುತ್ತದೆ. ಪರವಾಗಿಲ್ಲ. ಕಾಡು ಇನ್ನೂ ಇದೆ ಮೂವತ್ತು ವರ್ಷವಾದರೂ ಅಂತ ಅಂದುಕೊಂಡೆ. ಸಿಕ್ಕಿತು. ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳಿಗೆ ದಾರಿ ಅನ್ನುವ ಬೋರ್ಡು. ಅದೇ ಮಲೆನಾಡಿನ ಮನೆಯಂಥ ಹೊಸ ಕಟ್ಟಡ. ಮೂವತ್ತು ವರ್ಷದ ಹಿಂದಿನ ನೆನಪು ಕೈ ಕೊಟ್ಟಿತ್ತು. ಅದೇ ಕುವೆಂಪು ಮನೆ ಅಂದುಕೊಂಡೆ. ಅಲ್ಲ, ಅದು ಬೇರೆ ಇದೆ, ಇದು ಪ್ರತಿಷ್ಠಾನದ ಕಟ್ಟಡ. ಅಲ್ಲಿ ನಾನು ಮತ್ತು ಗೆಳೆಯ ಕಲಾವಿದ ಚಂದ್ರಶೇಖರ್ ಸಿಗರೇಟು ಸೇದಲು ಕಾಂಪೌಂಡಿನ ಆಚೆಗೆ ಬಂದೆವು. ಕುವೆಂಪು ಮನೆಯ ಆವರಣದಲ್ಲಿ ಸಿಗರೇಟು ಸೇದಲು ಮನಸ್ಸಾಗಲಿಲ್ಲ. ವಾಚ್ ಮನ್ ಒಬ್ಬಾತ ಇದ್ದ. ಒಮ್ಮೆಗೇ ಒಂದು ನೂರೈವತ್ತು ಹುಡುಗಿಯರು, ಮೂವತ್ತು ನಲವತ್ತು ಗಂಡಸರನ್ನು ಆ ಜಾಗದಲ್ಲಿ ಕಂಡು ಆಶ್ಚರ್ಯವಾಗಿತ್ತೊ? ತೀರ್ಥಹಳ್ಳಿಯ ಬಸ್‌ಸ್ಟ್ಯಾಂಡಿನಲ್ಲೂ ಎಲ್ಲ ಆಟೋದವರೂ ಕುಪ್ಪಳಿಗಾ ಅಂತ ಅವತ್ತು ಬಸ್ಸಿಳಿದವರನ್ನು ವಿಚಾರಿಸುತ್ತಿದ್ದರಲ್ಲ! ಯಾವ ಊರು ಅಂತ ವಿಚಾರಿಸಿಕೊಂಡ. ಮೈಸೂರು ಅಂದೆ. ಚಂದ್ರಶೇಖರ ನನ್ನದು ಬೆಂಗಳೂರು ಅಂದರು. ನೀಟಾಗಿ ಶೇವ್ ಮಾಡಿದ್ದ ಮುಖ. ಮೂವತ್ತರ ಸಮೀಪದ ವಯಸ್ಸು. ಅಚ್ಚುಕಟ್ಟಾಗಿ ಕ್ರಾಪ್ ಮಾಡಿಕೊಂಡಿದ್ದ ತಲೆ. ಪಕ್ಕಾ ಮಲೆನಾಡಿನ ಕೊಂಚ ವಿದ್ಯಾವಂತ ಅನ್ನಿಸುವಂಥ ಮುಖ. ದೊಡ್ಡ ಮನುಷ್ಯರು ಸಾರ್ ಕುವೆಂಪು. ಅವರಿದ್ದ ಜಾಗ ಎಲ್ಲ ಹೋಗಿ ಬನ್ನಿ ಅಂದ. ಆಮೇಲೆ ಇದ್ದಕ್ಕಿದ್ದ ಹಾಗೇ ಕುವೆಂಪು ಪದ್ಯಗಳನ್ನು ಒಂದಾದಮೇಲೆ ಒಂದರಂತೆ ಅದೇ ಆಗ ಓದಿಕೊಂಡವನಂತೆ ಹೇಳ ತೊಡಗಿದ. ಎಪ್ಪತ್ತು ವರ್ಷಗಳ ಹಿಂದಿನ ಪದ್ಯಗಳು ಈ ವಾಚ್‌ಮನ್‌ ಮಾನಪ್ಪನ ಬಾಯಲ್ಲಿ ಕೇಳುತ್ತ ಕಾಡಿಗೆಲ್ಲ ಜೀವ ಬಂದಂತೆ ಅನಿಸಿತು.

ಕನ್ನಡಮ್ಮನ ಭೂಲೋಕ ಭೇಟಿ - ಭಾಗ ಒಂದು

ಗೆಳೆಯರೇ,
ಪೂರ್ಣ ನಾಟಕವನ್ನು ಒಟ್ಟಿಗೇ ಪ್ರಕಟಿಸಿದಲ್ಲಿ ಬಹಳ ಲಂಬಿತವಾಗಬಹುದು ಎನ್ನುವ ಕಾರಣದಿಂದ ಮೂರು ಭಾಗಗಳಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.ಯಾರನ್ನೂ ಆಡಿಕೊಳ್ಳುವುದು ಇದರ ಉದ್ದೇಶವಲ್ಲ.ಕನ್ನಡನಾಡಿನಲ್ಲೇ ಕನ್ನಡಕ್ಕೆ ಒದಗಿರುವ ಸ್ಥಿತಿಯ ನೈಜ ಚಿತ್ರಣ ಮಾತ್ರ ಇದರ ಉದ್ದೇಶ.

ವಿಶ್ವೇಶ್ವರ ಭಟ್ ಅವರ ಪುಸ್ತಕಗಳ ಬಿಡುಗಡೆ ಸಮಾರಂಭ

ವಿಶ್ವೇಶ್ವರ ಭಟ್ ಅವರ

ನೂರೆಂಟು ಮಾತು

ಸುದ್ದಿಮನೆ ಕತೆ

ನಿಮಗೆ ಗೊತ್ತಿಲ್ಲದ ರಾಮನಾಥ ಗೋಯಂಕಾ

ಮತ್ತಷ್ಟು ವಕ್ರತುಂಡೋಕ್ತಿ

ಪುಸ್ತಕಗಳ ಬಿಡುಗಡೆ ಸಮಾರಂಭ

ಮುಖ್ಯ ಅತಿಥಿಗಳು

[kn:ರವಿ ಬೆಳಗೆರೆ|ಶ್ರೀ ರವಿ ಬೆಳಗೆರೆ]

[kn:ಟಿ ಎನ್ ಸೀತಾರಾಂ|ಶ್ರೀ ಟಿ ಎನ್ ಸೀತಾರಾಂ]

[kn:ಮಾಳವಿಕ|ಶ್ರೀಮತಿ ಮಾಳವಿಕಾ]

ಶ್ರೀಮತಿ ಗಿರಿಜಾ ಭಟ್

೨೪ - ೧೨ - ೨೦೦೬ ಭಾನುವಾರ ಬೆಳಿಗ್ಗೆ ೧೦:೩೦ಕ್ಕೆ

ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್

ನಂ.೬ , ಬಿ ಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು - ೫೬೦೦೦೪

(ಅಂಕಿತ ಪುಸ್ತಕ)

 

Sex - ಕಾಮ; ಅದರ ಮಹತ್ವ !

ಕರ್ನಾಟಕ ನಾಟಕ ಅಕಡಮಿ ಅಯೋಜಿಸಿದ್ದ "ಜ್ನಾನಪೀಠ ಪುರಸ್ಕ್ರುತರ ನಾಟಕ ಉತ್ಸವ" ನೆನ್ನೆ ಮುಗೀತು. ಜ್ನಾನಪೀಠ ಪ್ರಶಸ್ತಿ ಪಡೆದ ಕನ್ನಡ ಲೇಖಕರ ಕಾದಂಬರಿಗಳನ್ನ ನಾಟಕ ರೂಪ ಮಾಡಿ ಹಲವಾರು ನಾಟಕ ತಂಡದವ್ರು ಪ್ರದರ್ಶನ ಮಾಡುದ್ರು. ನಾನು ಎರಡು ನಾಟಕ ಮಾತ್ರ ನೋಡ್ದೆ. ಒಂದು ಕುವೆಂಪು ಅವರ "ಶ್ರಿ ರಾಮಾಯಣದರ್ಶನಂ" ಮೇಲೆ ತೆಗ್ದಿದ್ದ ನಾಟಕ "ರಾವಣನ ಕಣಸು". ಕನಸು ಅಲ್ಲ, ಕಣಸು. ಕಣಸು ಅಂದ್ರೆ Vision, ನನ್ಗೂ ಅಲ್ಗೆ ಒದ್ಮೇಲೇ ಗೊತ್ತಾಗಿದ್ದು. ಹಸ್ರು ಸಖತ್ತಾಗಿ ಇಟ್ಬಿಟ್ಟು, ನಾಟಕ ಮಾತ್ರ ತೀರ ಕಳಪೆ. ಕುವೆಂಪು ಅವ್ರ ಹೆಸರನ್ನ ಹಾಳ್ಮಾಡ್ಬಿಟ್ರು . ನಾನಂತೂ ತಲೆ ಚೆಚ್ಚಿಕೊಂಡು ಅರ್ದಕ್ಕೇ ಎದ್ದ್ ಬಂದೆ.

ರಾಷ್ಟ್ರಪತಿಗಳಾಗಿ ಕಲಾಂ ಮುಂದುವರಿಯಲಿ

ಯಶಸ್ವಿ ರಾಷ್ಟ್ರಪತಿಗಳಾಗಿ ಗೌರವಾನ್ಚಿತ ಅಬ್ದುಲ್ ಕಲಾಂ ಅವರ ಕೆಲಸದ ಅವಧಿ ಜುಲೈ 2007ರಲ್ಲಿ ಕೊನೆಗೊಳ್ಳಲಿದೆ.

ವಿಸ್ಮಯನಗರಿ, ಕುವೆಂಪು.ಕಾಂ ಕನ್ನಡ ವೆಬ್ಸೈಟುಗಳು

ಕನ್ನಡ ವೆಬ್ ತಾಣಗಳ ಯಾದಿಗೆ ಮತ್ತಷ್ಟು ಸೇರ್ಪಡೆಗಳಾಗಿವೆ,

http://www.vismayanagari.com
http://www.kuvempu.com
http://www.udayaravi.com
http://www.arivu.co.in

ನೋಡಲು ಮರೆಯದಿರಿ..
ಅಂತರ್ಜಾಲದಲ್ಲಿ ಕನ್ನಡದ ಫಸಲು ಇನ್ನಷ್ಟು ಹುಲುಸಾಗಿ ಬರಲಿ..

Busy-ness: (Profit)Private ಮತ್ತು (Staff)Limited ಕಂಪನಿ !

ಬೊಗಳೂರು, ಡಿ.22- ಅತ್ಯಾಧುನಿಕ ಯುಗದ ಅತ್ಯಾಧುನಿಕ ತಂತ್ರಜ್ಞಾನದ ಪರಿಣಾಮಗಳು ಮತ್ತು ಕೆಲಸದೊತ್ತಡಗಳು ಎಂಥೆಂತಹ ಕೆಲಸ ಮಾಡಿಸುತ್ತವೆ ಎಂಬುದಕ್ಕೆ ಹೊಸದೊಂದು ಉದಾಹರಣೆ ಇಲ್ಲಿ ಲಭ್ಯವಾಗಿದೆ. (bogaleragale.blogspot.com)