ಸುಗ್ರೀವಾಜ್ಞೆ
ನಮಸ್ಕಾರ,
ಸುಗ್ರೀವಾಜ್ಞೆ ಎಂದರೇನು? ಏಕೆ ಸುಗ್ರೀವ ನೆಂಬ ಹೆಸರು ಬಂತು?
ದನ್ಯವಾದಗಳ
- Read more about ಸುಗ್ರೀವಾಜ್ಞೆ
- Log in or register to post comments
ನಮಸ್ಕಾರ,
ಸುಗ್ರೀವಾಜ್ಞೆ ಎಂದರೇನು? ಏಕೆ ಸುಗ್ರೀವ ನೆಂಬ ಹೆಸರು ಬಂತು?
ದನ್ಯವಾದಗಳ
`ದಿ ಬರ್ಡ್ಸ್'
ಇವತ್ತಿನ ಹಾಲಿವುಡ್ ಹಾರರ್ ಸಿನಿಮಾಗಳನ್ನು ನೋಡಿದರೆ ಇರುವ ಅಲ್ಪಸ್ವಲ್ಪ `ಹಾರರ್' ಕಲ್ಪನೆಯೂ ಹಾರಿಹೋಗುತ್ತದೆ ಎಂಬ ಮಾತಿದೆ. ಚಿತ್ರವಿಚಿತ್ರ ಅಕರಾಳ ವಿಕರಾಳ ಮುಖಗಳ ಲಿವಿಂಗ್ ಡೆಡ್, ಜೀಪರ್ಸ್ ಕ್ರೀಪರ್ಸ್ನಂಥ ಕಲ್ಪನೆಗಳು ಒಂದು ಕಾಲದಲ್ಲಿ ಹಾಲಿವುಡ್ ಹಾರರ್ ಸಿನಿಮಾಗಳೆಂದರೆ ತುದಿಗಾಲಲ್ಲಿ ನಿಲ್ಲಿಸುವಂತಿದ್ದವು. ಆದರೆ ಇಂದಿನ ತಾಂತ್ರಿಕ ಯುಗದಲ್ಲಿ ತಂತ್ರಜ್ಞಾನಗಳ ಮೇಲಾಟವೇ ಹಾರರ್ ಆಗಿಬಿಟ್ಟಿದೆ. ರಿಲೀಫ್ಗೆ ಇರಲಿ ಅಂತಲೋ ಏನೋ, ಅದಕ್ಕೊಂದಿಷ್ಟು ಶೃಂಗಾರ ಭರಿತ ಒರಟು ಲೈಂಗಿಕತೆಯ ಲೇಪನವೂ ಆಗಿ ಹಾರರ್ ಅದೋ ಇದೋ ಎಂಬ ಗೊಂದಲಕ್ಕೂ ಪ್ರೇಕ್ಷಕ ಬೀಳಬೇಕಾಗುತ್ತದೆ. ಇಲ್ಲಿ ಬಳಕೆಯಾಗಿರುವ ತಾಂತ್ರಿಕತೆಯನ್ನು ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬಹುದೇ ಹೊರತು ಬೆಚ್ಚಿ ಬೀಳುವ ಅಥವಾ ಭಯಪಡುವ ಅಗತ್ಯವಿರುವುದಿಲ್ಲ!
ಗೆಳೆಯರೆ,
"ಮಾಹಿತಿ ತಂತ್ರಜ್ಞಾನದ ಸಂದರ್ಭದಲ್ಲಿ ದೇಸಗತಿ ಭಾಷೆಗಳು ಮತ್ತು ಸಂಸ್ಕೃತಿ" - ಈ ವಿಷಯದ ಮೇಲೆ ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣವೊಂದನ್ನು, ನಡೆಸುವ ಪ್ರಸ್ತಾವನೆಯೊಂದಿಗೆ, ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದವರು ಕಳೆದ ಸೆಪ್ಟೆಂಬರ್ 16 ರಂದು ಬೆಂಗಳೂರಿನಲ್ಲಿ ಸಭೆಯೊಂದನ್ನು ನಡೆಸಿ, ಅಲ್ಲಿ, ಈ ಪ್ರಸ್ತಾವನೆಯನ್ನು ಚರ್ಚೆಗೆತ್ತಿಕೊಂಡು, ಸಭೆಯು ಸರ್ವಾನುಮತದಿಂದ ವಿಚಾರಸಂಕಿರಣವನ್ನು ನಡೆಸಲು ತೀರ್ಮಾನಿಸಿತು. ಇದರ ತಾರ್ಕಿಕ ಬೆಳವಣಿಗೆಯಾಗಿ, ವಿವಿಧ ಸಮಿತಿಗಳನ್ನು ರಚಿಸಲಾಯಿತು. ಈ ಸಮಿತಿಗಳ ನಿರ್ವಹಣೆಯ ಹೊಣೆಗಾರಿಕೆಯನ್ನು ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಹಲವಾರು ಸ್ವಯಂಪ್ರೇರಿತ ಸದಸ್ಯರು ವಹಿಸಿಕೊಂಡಿದ್ದು, ವಿಚಾರಸಂಕಿರಣದ ಸಿದ್ಧತೆಗಳಲ್ಲಿ ತೊಡಗಿದ್ದಾರೆ.
ಬೊಗಳೂರು, ಡಿ.19- "ಮಾನವೀಯ" ಚೇಷ್ಟೆಗಳಿಂದ ಪ್ರೇರಿತವಾಗಿರುವ ಪಶು ಸಮುದಾಯದಲ್ಲಿ ಕೂಡ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಇದರ ಹಿಂದಿನ ತಥ್ಯ ಶೋಧನೆಗೆ ಹೊರಟಾಗ ಅಮೂಲ್ಯ ಮಾಹಿತಿಗಳು ಬೆಳಕಿಗೆ ಬಂದವು. (bogaleragale.blogspot.com)
ಬೊಗಳೂರು, ಡಿ.18- ದೇಶವು ಜಾಗತೀಕರಣಗೊಳ್ಳುತ್ತಿರುವ ಪರಿಣಾಮ ಇದರ ಬಿಸಿ ಯುವ ಜನಾಂಗವನ್ನೂ ತಟ್ಟಿದ್ದು, ಕುಡಿತದ ಚಟ ಹತ್ತುವ ವಯಸ್ಸು 20ಕ್ಕೆ ಇಳಿದಿರುವುದು ಸ್ವಾಗತಾರ್ಹ ಎಂದು ಮದ್ಯ ಕುಡಿಸುವವರ ಸಂಘ ಶ್ಲಾಘಿಸಿದೆ. (bogaleragale.blogspot.com)
ವಾಹನ ಶೆಡ್ನಿಂದ ವಿದ್ಯುಚ್ಛಕ್ತಿ
ಕ್ಯಾಲಿಫೋರ್ನಿಯಾದ ಗೂಗಲ್ ಕಚೇರಿಯಲ್ಲಿ,ವಾಹನ ನಿಲುಗಡೆಗೆ ನಿರ್ಮಿಸಿರುವ ಶೆಡ್ಡಿನಿಂದ ಸಾವಿರ ಮನೆಗಳಿಗೆ ಬೇಕಾದಷ್ಟು ವಿದ್ಯುಚ್ಛಕ್ತಿ ಉತ್ಪಾದನೆಯಾಗುತ್ತದೆ. ಸೌರಫಲಕಗಳನ್ನೇ ಬಳಸಿ, ಶೆಡ್ ನಿರ್ಮಿಸಿ ಸೌರ ವಿದ್ಯುಚ್ಛಕ್ತಿ ಉತ್ಪಾದಿಸಲಾಗುತ್ತಿದೆ.ಒಂಭತ್ತು ಸಾವಿರ ಫಲಕಗಳನ್ನು ನೇರವಾಗಿ ಬಳಸಿದ್ದರೆ. ಇನ್ನಷ್ಟನ್ನು ಮಾಡಿನ ಮೇಲೆ ಅಳವಡಿಸಿ ವಿದ್ಯುತ್ ಉತ್ಪಾದಿಸಲಾಗಿದೆ.ಎನರ್ಜಿ ಇನೋವೇಶನ್ಸ್ ಎನ್ನುವ ಕಂಪೆನಿಗೆ ಈ ಯೋಜನೆಯನ್ನು
ಮುನ್ನುಡಿ: ಒಮ್ಮೆ ಅನಂತಮೂರ್ತಿಯವರು "ಇಸ್ಮಾಯಿಲ್ ನಂತೆ ಸಂದರ್ಶನ ಬೇರೊಬ್ಬರು ಮಾಡಿದ್ದಿಲ್ಲ" ಎಂದಿದ್ದರು. ನಾವುಗಳು ನಸುನಕ್ಕು ಸುಮ್ಮನಾಗಿದ್ದೆವು. ಈಗ ಸಂಪದದ ೭ನೇ podcast ಹೊರತರುತ್ತಿರುವ ಸಮಯದಲ್ಲಿ ಪ್ರತಿ ಬಾರಿಯೂ "ಬಹಳ ಒಳ್ಳೆಯ ಪ್ರಶ್ನೆ" ಎಂದು ಶಹಬ್ಬಾಸ್ ಎನಿಸಿಕೊಳ್ಳುವ ಇಸ್ಮಾಯಿಲ್ ಬಗ್ಗೆ ಅನಂತಮೂರ್ತಿಯವರ ಆ ಮಾತು ಉತ್ಪ್ರೇಕ್ಷೆಯೆಂದನಿಸದು. ೭ನೇ ಕಂತು ಸಂಪದವನ್ನು ಸಂಪದವಾಗಿಸಿದ ಇಸ್ಮಾಯಿಲ್, ಓ ಎಲ್ ಎನ್, ಹಾಗೂ ಉಳಿದೆಲ್ಲ ಸ್ನೇಹಿತರಿಗೆ ಮುಡುಪು.
ಗಮನಿಸಿ: ಈ ಸಂಚಿಕೆಯಿಂದ ಪ್ರಾರಂಭಿಸಿ ಸಂದರ್ಶನದ ಆಡಿಯೋ ogg vorbis ಫಾರ್ಮ್ಯಾಟಿನಲ್ಲಿ ಕೂಡ ಲಭ್ಯ. ಈ ಸಂದರ್ಶನದ ಲಿಖಿತ ರೂಪ ಕೂಡ ಲಭ್ಯವಿದೆ. ಬರೆಹ ರೂಪಕ್ಕೆ ಇಳಿಸಿದ್ದು. ಸುರೇಶ್ ಕೆ - ಹರಿ ಪ್ರಸಾದ್ ನಾಡಿಗ್
ಹರಿಪ್ರಸಾದ್ ಮತ್ತೊಂದು ಪಾಡ್ ಕ್ಯಾಸ್ಟಿಂಗ್ ಕೂಡಾ ನನ್ನಿಂದಲೇ ಮಾಡಿಸಿಬಿಟ್ಟರು! ಈ ಬಾರಿ ಅವರು ನನ್ನನ್ನು ಸ್ವಾವಲಂಬಿಯಾಗಲು ಪ್ರೇರಪಿಸಿದರು. ಈ ಬಾರಿ ಸಂದರ್ಶಕನೂ ನಾನೇ, ಧ್ವನಿಮುದ್ರಣ ತಂತ್ರಜ್ಞನೂ ನಾನೇ. ದೇವರು ದೊಡ್ಡವನನು (ಅವನಿದ್ದರೆ!). ಜತೆಗೆ ನನ್ನ ಗೆಳೆಯ ಹಾಗೂ ಉದಯವಾಣಿಯಲ್ಲಿ ನನ್ನ ಸಹೋದ್ಯೋಗಿ ಸುರೇಶ್ ಕೆ. ಇದ್ದರು. ನಮ್ಮ ಛಾಯಾಗ್ರಾಹಕ ಡಿ.ಸಿ.ನಾಗೇಶ್ ಇದ್ದರು. ಇಷ್ಟು ಸಾಲದು ಎಂಬಂತೆ ಈ ಟಿವಿ ಕನ್ನಡದಲ್ಲಿ ದುಡಿಯುತ್ತಿರುವ ನಮ್ಮ ಗೆಳೆಯರ ಬಳಗದ ಸದಸ್ಯೆ ಜ್ಯೋತಿ ಇರ್ವತ್ತೂರು ಕೂಡಾ ಜತೆಗೂಡಿದ್ದರು. ಈ ಪಾಡ್ ಕ್ಯಾಸ್ಟಿಂಗ್ ನ ಬಗ್ಗೆ ನಾವ್ಯಾರೂ ಯೋಚಿಸಿರಲಿಲ್ಲ. ಶನಿವಾರ ಬೆಳಿಗ್ಗೆ (16-12-2006) 73ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಡಾ.ಕೆ.ಎಸ್. ನಿಸಾರ್ ಅಹಮದ್ ಅವರನ್ನು "ಉದಯವಾಣಿ"ಗಾಗಿ ಸಂದರ್ಶಿಸುವ ಉದ್ದೇಶದಿಂದ ನಾನು ಮತ್ತು ಸುರೇಶ್ ಅವರ ಮನೆಗೆ ಹೊರಟೆವು. ಪದ್ಮನಾಭ ನಗರದಲ್ಲಿರುವ ನಿಸಾರ್ ಅವರ ಮನೆಗೆ ಹೋಗುವ ಮುನ್ನ ದಾರಿ ಕೇಳಲು ಛಾಯಾಗ್ರಾಹಕ ಡಿ.ಸಿ ನಾಗೇಶ್ ಅವರಿಗೆ ಫೋನಾಯಿಸಿದರೆ ಅವರು ಇಲ್ಲೇ ಹತ್ತಿರ ಮೊದಲು ನಮ್ಮ ಮನೆಗೆ ಬನ್ನಿ ಎಂದರು. ನ್ಯಾಷನಲ್ ಕಾಲೇಜು ಫ್ಲೈ ಓವರ್ ಕೆಳಗಿರುವ ಅವನ ಮನೆಯಲ್ಲಿ ಒಳ್ಳೆಯ ಕಾಫೀ ಸಮಾರಾಧನೆಯ ಬಳಿಕೆ ಹೊಸ ಹೊಸ ಐಡಿಯಾಗಳು ಹೊಳೆಯತೊಡಗಿದವು. ಮೊದಲನೆಯದ್ದು ನಿಸಾರ್ ಅವರ ಹೊಸ ಭಂಗಿಯ ಫೋಟೋಗಳನ್ನು ತೆಗೆಸುವುದು. ಈ ಕುರಿತು ಚರ್ಚಿಸುತ್ತಿರುವಾಗಲೇ ಸಂಪದಕ್ಕೊಂದು ಪಾಡ್ ಕ್ಯಾಸ್ಟಿಂಗ್ ಯಾಕಾಗಬಾರದು ಎನಿಸಿತು. ತಕ್ಷಣ ಹರಿಪ್ರಸಾದ್ ಅವರಿಗೆ ಫೋನಾಯಿಸಿದರೆ ಅವರು ಪ್ರಸ್ತಾಪವನ್ನು ಒಪ್ಪಿದರು. ಆದರೆ "ನಾನು ನಿಮಗೆ ಲ್ಯಾಪ್ ಟಾಪ್ ಮತ್ತು ಮೈಕ್ ಕೊಡುತ್ತೇನೆ. ನನಗೆ ಸಂದರ್ಶನಕ್ಕೆ ಬರಲು ಸಾಧ್ಯವಿಲ್ಲ" ಎಂದರು.
ನಾವೀಗ 2006 ನೆಯ ಸಾಲಿನ ಕೊನೆಯನ್ನು ತಲುಪಿದ್ದೇನೆ. ಈ ವೇಳೆಯಲ್ಲಿ ಕೆಲವು ಗುಂಪುಗಳಲ್ಲಿ ವರ್ಷದ ವ್ಯಕ್ತಿಯನ್ನು ಆಯ್ಕೆ ಮಾಡಲು ಜನಮತವನ್ನು ನನ್ನ ಬ್ಲಾಗಿನಲ್ಲಿ ಆರಂಭಿಸಲಾಗಿದೆ.
ಬಂಧುಗಳೇ,
ನನ್ನ ವಿಚಾರದಲ್ಲಿ ತಾಂತ್ರಿಕ ವಿಷಯಗಳ ಪದಗಳ ಅನುವಾದ ಮಾಡುವಾಗ ಪೂರ್ವಪ್ರತ್ಯಯಗಳ ವಿಷಯ ಅನುವಾದಕನ ಪೀಡಕ.