ಕಾಶ್ಮೀರಕ್ಕೆ ಬೆಂಕಿ ಹತ್ತಿದ್ದು ನೆಹರೂರವರ ಹೆಣ್ಣೊಬ್ಬಳ ಹುಚ್ಚಿನಿಂದಾಗಿಯೇ?
ಸಂದೀಪ್ ಅವರ ಬರಹ ಚೆನ್ನಾಗಿದೆ, ಓದಿ:
http://www.sandeepweb.com/
(Nehru's Love For Edwina is India's Continuing Nightmare)
ಸಂದೀಪ್ ಅವರ ಬರಹ ಚೆನ್ನಾಗಿದೆ, ಓದಿ:
http://www.sandeepweb.com/
(Nehru's Love For Edwina is India's Continuing Nightmare)
ಕನ್ನಡದಲ್ಲಿ ಬಳಕೆಯಲ್ಲಿ ಇಲ್ಲವೇ ಇಲ್ಲ ಎನ್ನಬಹುದು. ಸಕ್ಕದದಲ್ಲಿ ಇರಬಹುದೇ?
ಮಾದರಿ: ಖ್ಖ, ಘ್ಘ, ಛ್ಛ, ಝ್ಝ, ಠ್ಠ, ಢ್ಢ, ಥ್ಥ, ಧ್ಧ, ಫ್ಫ, ಭ್ಭ,
ಅಬ್ಬಾ, ಸಿಕ್ಕಾಪಟ್ಟೆ ಉಲಿಯಲು ತುಂಬಾ ಎಡರು-ತೊಡರು :(
"ಸೀ ಯಾ, ನೋ ಡಾ... ಕಮಿಂಗ್ ಡಾ.... " ಇದೇ ನಾವಾಡುವ ನುಡಿ! ಇದೇ ಸ್ವಾಮಿ ನಮ್ಮ ಗಂಧದ ಗುಡಿಯ ಪಾಡು!
ಬೀರ್ ಹೀರಿ "ಎಂಡ್ಕುಡ್ಕ ರತ್ನ ನಂಜಿನ ಹೊಗಳೊ" ಹಂಗೆ ನನ್ನ ಗೆಳೆಯ 'ವಿಶ್ವ' ನನ್ನ ಬ್ಲಾಗ್ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸುತ್ತಿದ್ದ. ಬಡಪಾಯಿ ನಾನು, ನಿಜ ಇರಬಹುದೇನೊ ಅನ್ಕೊಂಡು, ಸ್ವರ್ಗಕ್ಕೆ ಮೂರೇ ಗೇಣು ಅಂತ ಎಣಿಸ್ತಿದ್ದೆ. "ಕುಡುದ್ ಬಿಟ್ ಮಾತಾಡ್ತವ್ನೆ ನನ್ ಮಗ" ಅಂತ ಕೊಂಚ ಬೇಜಾರೇನೊ ಆಯಿತು. ಅವನು ಅಂದಿದ್ರಲ್ಲಿ ಸ್ವಲ್ಪನಾದ್ರು ನಿಜ ಇರಬೇಕಲ್ಲ ಅಂತ ಸಮಧಾನ ಪಟ್ಟುಕೊಂಡೆ. ಅವನು ಯಾವುದೇ ಸಂಧರ್ಭದಲ್ಲಿ ಹಿಂಗಿಂಗೇ ಪ್ರತಿಕ್ರಿಯೆ ಕೊಡ್ತಾನೆ ಅಂತ ಹೇಳೊಕ್ಕಾಗಲ್ಲ. ಅವಾಗಾವಾಗ ಮಖದ ಮೇಲೆ ವಾನರನ ಗುಣಗಳು ಪ್ರತಿಬಿಂಬಿಸುತ್ತಿರುತ್ತವೆ! ಅದೂ ಒಂದ್ ರೀತೀಲಿ ವಿನೋದ ಪ್ರವೃತ್ತಿ (sense of humour) ಅನ್ಕೊಬಹುದು. ಮನಸ್ಸು ಮಾತ್ರ ಒಳ್ಳೇದು. ಅವನ ಒಂದು ಪ್ರಶ್ನೆ ಮಾತ್ರ ನನ್ನನ್ನು ಗೊಂದಲಕ್ಕೆ ಸಿಲುಕಿಸಿ ಬಿಡುತ್ತೆ. "ಮತ್ತೇನ್ ವಿಷೇಶ?" ಅಂತ. ನನ್ನ ಉತ್ತರ ಮಾತ್ರ: "ಏನಿಲ್ಲಪ್ಪ ಅದೇ ಹಳೇ ಲೈಫು" ಅಂತ. ನಿನ್ನಂಥೊರು ಇನ್ನು ಉಸಿರಾಡ್ತಿರೋದೇ ತಪ್ಪು ಅನ್ನೊ ಹಾಗಿತ್ತು ಅವನ ಪ್ರತಿಕ್ರಿಯೆ!
ಅವನು ಹೇಳೊ ಮಾತಿನನಲ್ಲಿ ಸ್ವಲ್ಪ ಅರ್ಥ ಇತ್ತು ಅಂತ ಕಾಣುತ್ತೆ. ಬೆಳಿಗ್ಗೆ 9 ಗಂಟೆಗೆ ಆಫೀಸಿಗೆ ಬಂದು, ಕಾಫಿ ಕುಡಿದು, ಅವರಿವರ ಹತ್ರ ಸ್ವಲ್ಪ ಹರಟೆ ಹೊಡ್ದು, ಮೇಲ್ ಚೆಕ್ ಮಾಡಿ, ಇದ್ದ ಕೆಲಸ ಮಾಡಿ, lunch time ಅಲ್ಲಿ ಎಲ್ಲರ ಜೊತೆ ಹರಟೆ ಹೊಡಿಯುತ್ತ, ಅತ್ತಿತ್ತ ಕಣ್ಣು ಹಾಯಿಸಿ ಯಾರಾದ್ರು ಕಣ್ಣು ತಂಪು ಮಾಡೋರ್ ಸಿಗ್ತಾರ ಅಂತ ನೋಡಿ, ರೇಡಿಯೊ ಮಿರ್ಚಿಯಲ್ಲಿ ಹೇಳೋ ಹಾಗೆ "ಸಕ್ಕತ್ hot ಮಗಾ!" ಅಂದು, ಊಟ ಮುಗಿಸಿ, ಉಳಿದ ಕೆಲಸ ಮಾಡಿ ಮತ್ತೊಂದ್ ಸಲ ಟೀ ಕುಡ್ದು, "ಹತ್ತಿರದ ಗೆಳೆಯರು" ಅನಿಸಿಕೊಂಡವರ ಜೊತೆ chat ಮಾಡಿ, ಉಫ್ssssss... ಅನ್ನೊ ಹೊತ್ತಿಗೆ 6 ಗಂಟೆ! ಮನೆಗೆ ಹೋಗಿ ಟೀವಿ ನೋಡಿ, ಊಟ ಮಾಡಿ, ಕಥೆ ಕಾದಂಬರಿ ಅಂತ ಕಾಲ ಕಳೆದು ಮಲಗಿಕೊಂಡು ಬೆಳಿಗ್ಗೆ ಎದ್ರೆ, ಮತ್ತೆ ಅದೇ ಹಳೇ ಲೈಫು! ಇನ್ನು weekendಅಲ್ಲಿ ಸಿನಿಮಾನೋ, ಪ್ರವಾಸನೋ, ಗೆಳೆಯರ ಜೊತೆ ಹರಟೆ, ಅಥವ, Forum, Inox, ಗರುಡ mall ಅನ್ನೋದ್ರಲ್ಲೇ ಕಾಲ ಹೋಗಿ ಬಿಡುತ್ತೆ. ಅಷ್ಟಾದ್ರೆ ಮತ್ತೆ "monday morning" ರಾಗ ಶುರು! ತಿಂಗಳಿಗೊಮ್ಮೆ ಊರಿಗೆ ಹೋಗಿ ಅಮ್ಮನ ಕೈಯಿಂದ ಮಾಡಿದ ಮೃಷ್ಟಾನ್ನ ಸವಿದು, 10ಕೇಜಿ ತೂಕ ಜಾಸ್ತಿ ಮಾಡ್ಕೊಂಡು ವಾಪಸ್ ಬಂದುಬಿಟ್ರೆ "ಸಾಫ್ಟ್ ವೇರ್ ಕೂಲಿ" (ನನ್ನ ಗುರುಗಳೊಬ್ಬರು ನನ್ನನ್ನ ಹಾಗೆಯೇ ಕರೆಯೋದು)ಯ ಬದುಕು ಮತ್ತೆ ಮುಂದುವರಿಯುತ್ತದೆ.
ಬರ್ಗ್ಮನ್ ತೀರಿಕೊಂಡ ಸುದ್ದಿ ಕೇಳಿ ಅವನ ವಿಂಟರ್ಲೈಟ್ ಮತ್ತೆ ನೋಡಿದೆ. ೮೧ ನಿಮಿಷದ ಅವಧಿಯ ಚಿತ್ರ. ವಾಸ್ತವ ಜಗತ್ತಿನ ಮೂರು ಗಂಟೆಗಳಲ್ಲಿ ತೆರೆದುಕೊಳ್ಳುವ ಪಾತ್ರಗಳು, ಮಾನಸಿಕ ಹೊಯ್ದಾಟ, ಧಾರ್ಮಿಕವಲ್ಲದ ಧರ್ಮದ ಬಗೆಗಿನ ಚಿಂತನೆ, ನೋವು ಮತ್ತು ನರಳಾಟದ ಬಗೆಗಿನ ಒಳನೋಟ ನಮ್ಮನ್ನು ಹಿಡಿದಿಡುತ್ತದೆ.
ನಾಕು ವರ್ಷದ ಹಿಂದೆ ಹೆಂಡತಿ ಕಳೆದುಕೊಂಡ ಸಣ್ಣ ಊರೊಂದರ ಪಾದ್ರಿ. ತನ್ನನ್ನು ಮದುವೆಯಾಗೆಂದು ಪೀಡಿಸುವ ಶಾಲಾ ಶಿಕ್ಷಕಿಯಾದ ಅವನ ಗೆಳತಿ. ಜಗತ್ತಿನ ಕರಾಳ ವಿದ್ಯಮಾನಗಳ ಬಗ್ಗೆ ಕಂಗೆಟ್ಟಿರುವ ಸೈನಿಕ ಮತ್ತು ಅವನ ಬಸುರಿ ಹೆಂಡತಿ. ಬೆನ್ನು ನೋವಿಂದ ನರಳುವ, ನಿದ್ದೆ ಬಾರದೆ, ಸದಾ ಮದ್ದಿನ ಮೇಲೆ ಬದುಕಿರುವ ಗೂನು ಬೆನ್ನಿನ ಚರ್ಚಿನ ಸಹಾಯಕ. ಹಗುರ ಮನೋಭಾವದ ಚರ್ಚಿನ ಪಿಯಾನೋ ವಾದಕ. ಇಷ್ಟೇ ವಿಂಟರ್ಲೈಟ್ ಚಿತ್ರದ ಜಗತ್ತಿನ ಪಾತ್ರಗಳು.
ಹಿಮ ಮುಚ್ಚಿದ ಚಳಿಗಾಲದ ಒಂದು ಮಧ್ಯಾಹ್ನ-ಸಂಜೆ ನಡುವಿನ ಹೊತ್ತು. ತನ್ನ ಚರ್ಚಿನ ಸೇವೆ ಮುಗಿಸುವಲ್ಲಿಂದ ಮೂರು ಗಂಟೆಯ ನಂತರವಿರುವ ಇನ್ನೊಂದು ಚರ್ಚಿನ ಸೇವೆಯ ನಡುವೆ ನಡೆಯುವ ಘಟನೆಗಳು ಈ ಚಿತ್ರದ ಬಿತ್ತರ.
ಸಣ್ಣ ಅನಾರೋಗ್ಯದಿಂದ ಬಳಲುತ್ತಿರುವ ಪಾದ್ರಿಗೆ ಗೆಳತಿಯ ಪತ್ರ ಓದಲು ಬಿಡುವಿಲ್ಲ. ಆಗ ಮಾತನ್ನೇ ಆಡದ ಸೈನಿಕ ಮತ್ತು ಅವನ ಆಂತರಿಕ ಹಿಂಸೆಯನ್ನು ಹೋಗಲಾಡಿಸಲು ಹವಣಿಸುತ್ತಿರುವ ಅವನ ಹೆಂಡತಿ ಪಾದ್ರಿಯನ್ನು ಭೇಟಿಮಾಡುತ್ತಾರೆ. ತನ್ನ ಗಂಡನೊಡನೆ ಮಾತಾಡಿ ಅವನ ವೇದನೆಯನ್ನು ಕಡಿಮೆ ಮಾಡಬೇಕೆಂದು ಸೈನಿಕನ ಬಸುರಿ ಹೆಂಡತಿ ಕೇಳಿಕೊಳ್ಳುತ್ತಾಳೆ. ಪಾದ್ರಿ ಅರ್ಧ ಗಂಟೆ ಬಿಟ್ಟು ಬರುವಂತೆ ಹೇಳುತ್ತಾನೆ.
ನನ್ನ ಪ್ರಿಯ ಮಿತ್ರನೊಬ್ಬ ಕಳೆದ ವಾರಾಂತ್ಯದಲ್ಲಿ ಊರಿಗೆ ಹೊರಡುತ್ತಿದ್ದ. ಯುಕೆಯಿಂದ ಭಾರತಕ್ಕೆ ಪ್ರಯಾಣಿಸಬೇಕಾದರೆ, ವಿಮಾನದಲ್ಲಿ ೨೫ ಕೆಜಿಗಿಂತ ಹೆಚ್ಚು ಲಗೇಜ್ ಇರುವಂತಿಲ್ಲ. ಅವನಲ್ಲಿ ಅದಾಗಲೇ ಲಗೇಜ್ ೩೦ ಕೆಜಿಗಿಂತ ಹೆಚ್ಚಿತ್ತು!, ನನ್ನ ಪ್ರಾಜೆಕ್ಟ್ ಮ್ಯಾನೇಜರ್ ಅವರ ಸಂಬಂಧಿ ಮಕ್ಕಳಿಗಾಗಿ ರಿಮೋಟ್ ಕಂಟ್ರೋಲ್ಲರ್ ಚಾಲಿತ ಅಗ್ನಿಶಾಮಕ (ಆಟದ) ಟ್ರಕ್ ಒಂದನ್ನು ಅವನ ಮೂಲಕ ತರಿಸುತ್ತಿದ್ದರು. ಅವನಲ್ಲಿ ಅದನ್ನು ಹಿಡಿಸುವಂತ ಸೂಟ್ ಕೇಸ್ ಇಲ್ಲವಾಗಿ, ನಾನು ನನ್ನ ದೊಡ್ಡ ಸೂಟ್ ಕೇಸಿನಿಂದ ನನ್ನೆಲ್ಲ ಗಜಿಬಿಜಿಗಳನ್ನು ಖಾಲಿ ಮಾಡಿ ಕೊಡಬೇಕಾಯ್ತು. ಅವನ ಪರಿಸ್ಥಿತಿ ಇಂತಿದ್ದರೂ, ಅವನು ಒಂದು ಹಳೆಯ ಪರ್ಲ್ ಪೆಟ್ ಬಾಟಲಿ ಮತ್ತು ಹಲ್ದೀರಾಮ್ಸ್ ಸ್ವೀಟಿನ ಒಂದು (ಬಳಸಿ ಬಿಸಾಡಬೇಕಾದ) ಡಬ್ಬವನ್ನು ಜತನದಿಂದ ತುಂಬಿಸಿಕೊಡ. ಪರ್ಲ್ ಪೆಟ್ ಜಾರ್ ದೊಡ್ಡ ಬಾಯಿಯದು. ಅದರೊಳಗೆ ಕೈ ಹಾಕಿ ಸ್ಕ್ರಬ್ಬರ್ ಉಪಯೋಗಿಸಿ ಕ್ಲೀನ್ ಮಾಡಿರಬೇಕು; ತನ್ನ ಪಾರದರ್ಶಕತೆಯನ್ನು ಕಳೆದುಕೊಂಡು ಹಳೆಯ ಜಮಾನಾದ ಬಾಟಲಿಯಂತೆ ಕಾಣುತ್ತಿತ್ತು. ಅದ್ಯಾಕಯ್ಯ ನಿನಗೆ, ಬಿಸಾಡಬಾರದೇ ಎಂದು ನಾನಂದರೆ, ಅವು ಅವನು ಕಳೆದ ಬಾರಿ ಬಂದಾಗ ತಂದವೆಂದೂ, ಅವನ್ನು ಏಕೆ ಬಿಟ್ಟು ಬಂದಿದ್ದೀಯ ಎಂದು ಅವನ ಅಮ್ಮ ದಬಾಯಿಸಿದ್ದಾರೆಂದೂ, ಈ ಬಾರಿ ಹುಡುಕಿ ತರಲು ಅಪ್ಪಣೆಯಾಗಿದೆಯೆಂದು ಹೇಳಿದ. ಅದನ್ನು ಕೇಳಿ ಪ್ರಪಂಚದಲ್ಲಿ ಅಮ್ಮಂದಿರೆಲ್ಲರೂ ಒಂದೇ ಅಚ್ಚಿನಲ್ಲಿ ತಯಾರಿಸಲ್ಪಟ್ಟಿದ್ದಾರೆಂಬ ಬಗ್ಗೆ ನನ್ನ ಕೊನೆಯ ಸಂಶಯವೂ ಅಲ್ಲಿಗೆ ಪರಿಹಾರವಾಯಿತು.
ಭೈರಪ್ಪನವರ ದಾಟು ಓದಿ ಮುಗಿಸಿದೆ. ತು೦ಬಾ ಚೆನ್ನಾಗಿ ಜಾತಿ ವ್ಯವಸ್ಥೆಯ ಒಳಿತು, ಕೆಡುಕುಗಳನ್ನು ವಿವರಿಸಿದ್ದಾರೆ.
ಈ ಕಾದ೦ಬರಿಯನ್ನು ಓದಿದ ಮೇಲೆ ಜಾತಿ ಪದ್ದತಿಯ ಬಗ್ಗೆ ಕೆಲವು ಪ್ರಶ್ನೆಗಳೆದ್ದವು.
ನಾನೊಬ್ಬ ಡಾಕ್ಟರ್, ಐಟಿ ಅಲ್ಲ. ನನ್ನ ಗೆಳೆಯನೊಬ್ಬ ಕೇಳುತ್ತಿದ್ದ ಈ ಮೇಲಿನ ಪ್ರಶ್ನೆಗೆ ನಾನು ಬ್ಲಾಗಿಸಿದರೆ ಬೇರೆಯವರಿಗೂ ಉಪಯೋಗವಾದೀತು ಎಂದು ಬ್ಲಾಗಿಸುತ್ತಿದ್ದೇನೆ. ನನಗೆ ಗೊತ್ತು, ಬ್ಲಾಗಿಸುವವರಲ್ಲಿ ತುಂಬಾ ಜನ ಐಟಿಯವರೇ. ಅವರಿಗೇನೂ ಈ ವಿಷಯ ಹೊಸದಲ್ಲ.
ನನಗೆ ಮೊದಲಿಂದ ಕಲಿಯಬೇಕು. ಅಂತ ತಾಣಗಳ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಲು ಮರೆಬೇಡಿ
ಅರಾಸೇ ಅವರು ಬರೆದ ಹಾಸ್ಯ ಲೇಖನವೊಂದು ಅದೇಕೋ ನೆನಪಾಯಿತು .
ಕೇಳಿ ಎಂಜಾಯ್ ಮಾಡಿ!
ನವ್ಯ ಸಾಹಿತ್ಯದಲ್ಲಿ ಇಷ್ಟೇಕೆ ಕಾಮ ? ಎಂಬ ಕುರಿತು ಮಾಮೂಲಿನಂತೆ ಪ್ರಶ್ನಾವಳಿಗಳನ್ನು ಅನೇಕರಿಗೆ ಕಳಿಸಿದಾಗ
ಒಬ್ಬನ ಪ್ರತಿಕ್ರಿಯೆ
- ನವ್ಯ ಸಾಹಿತ್ಯದಲ್ಲಿ ಇಷ್ಟೇ ಏಕೆ ಕಾಮ?
:)
ಇನ್ನೊಬ್ಬನ ಪ್ರತಿಕ್ರಿಯೆ
- ನೀವು ಹಳಗನ್ನಡ ಕಾವ್ಯ ಸರಿಯಾಗಿ ಓದಿಕೊಂಡಿಲ್ಲ ಅಂತ ಕಾಣ್ತದೆ !
:) :)