ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಎಲ್ಲೆಲ್ಲೂ ಇ-ಮೇಲು, ಆ ಮೇಲು…!

ಪ್ರತ್ಯೇಕತೆಯ ಪರಮಾವಧಿ: ಕಂಪ್ಯೂಟರ್ ಎದುರು ಅಕ್ಕಪಕ್ಕದಲ್ಲೇ ಕೂತಿದ್ದರೂ ಪರಸ್ಪರ ಸಂಪರ್ಕಕ್ಕೆ ಇ-ಮೇಲ್ ಬಳಸುವುದು.

ಹೇಡಿತನದ ಪರಾಕಾಷ್ಠೆ: ಇಬ್ಬರು ಇ-ಮೇಲ್ ಮೂಲಕವೇ ಜಗಳ ಮಾಡುವುದು.

ಅಸಹಾಯಕತೆಯ ಪರಮಾವಧಿ: ಒಂದು ವಾರವಾದರೂ ಒಂದೇ ಒಂದು ಇ-ಮೇಲ್ ಬಾರದಿರುವುದು.

ಹತಾಶೆಯ ಪರಮಾವಧಿ: ಇ-ಮೇಲ್ ಸರ್ವರ್ ಡೌನ್ (ಸ್ಲೋ) ಆದಾಗ.

ನಿರ್ಲಕ್ಷ್ಯದ ಪರಮಾವಧಿ: ಪ್ರೇಮ ಸಂದೇಶದ ಇ-ಮೇಲ್ ಬರೆದು 'ಸೆಂಡ್ ಆಲ್' ಕ್ಲಿಕ್ ಮಾಡುವುದು.

ಸಾಧನೆಯ ಪರಮಾವಧಿ: ಫ್ರೆಂಡ್‌ಶಿಪ್‌ಗಾಗಿ ಹುಡುಗಿಯೊಬ್ಬಳಿಗೆ ಕಳುಹಿಸಿದ ಇ-ಮೇಲ್‌ಗೆ ರಿಪ್ಲೈ ಬರುವುದು.

ಟೈಂ ಪಾಸ್‌ನ ಪರಮಾವಧಿ: ತನ್ನದೇ ಅಡ್ರಸ್‌ಗೆ ಇ-ಮೇಲ್ ಕಳುಹಿಸುವುದು.

ನಿರೀಕ್ಷೆಯ ಪರಮಾವಧಿ: ಬಡವರಿಗೆ ಒಳಿತಾಗುವಂತಹ ಯೋಜನೆಗಳನ್ನು ಜಾರಿಗೊಳಿಸುವಂತೆ ಸರಕಾರಕ್ಕೆ ಇ-ಮೇಲ್ ಮಾಡುವುದು.

ಪುನರಾವರ್ತನೆಯ ಪರಮಾವಧಿ: ನೀವು ಫಾರ್ವರ್ಡ್ ಮಾಡಿದ ಇ-ಮೇಲ್ ಮತ್ತೊಬ್ಬರ ಮೂಲಕ ನಿಮ್ಮದೇ ಇನ್‌ಬಾಕ್ಸಿಗೆ ಬಂದು ಬೀಳುವುದು.

ಇಂಟರ್ನೆಟ್ ಗೀಳಿನ ಪರಮಾವಧಿ: ನೀವು ಈಜುಕೊಳದಲ್ಲಿ ಈಜುತ್ತಿರುವಾಗ ನೀರಿನಲ್ಲಿ ಮುಳುಗುತ್ತೀರಿ. ಆಗ "HELP" ಎಂದು ಕೂಗುವ ಬದಲು "F1 F1 F1" ಎಂದು ಬೊಬ್ಬಿಡುವುದು.

ಮತದಾನ .

ಮೊನ್ನೆ ಮೊದಲ ಬಾರಿಗೆ ನನ್ನ ಮತದಾನದ ಗುರುತಿನ ಚೀಟಿ ಮನೆಗೆ ಬಂದಿತ್ತು ! ನನಗೀಗ ಮತದಾನದ ಹಕ್ಕು ಲಭಿಸಿದೆ ಎಂದಾಕ್ಷಣ ಏನೋ ಖುಷಿ , ಅದರ ಜೊತೆಗೆ ಕುತೂಹಲ !

ಅರ್ಥಹೀನ ವಾಯು ಮಾಲಿನ್ಯ ಪರೀಕ್ಷಣ ಪ್ರಮಾಣ ಪತ್ರ !!

ಬೆಂಗಳೂರಿನಲ್ಲಿ ಮೊಟಾರು ಗಾಡಿ ಓಡಿಸಬೇಕಾದರೆ "ವಾಯು ಮಾಲಿನ್ಯ ಪರೀಕ್ಷಣ ಪ್ರಮಾಣ ಪತ್ರ" ಇರಬೇಕು. ಮೇಲ್ನೋಟಕ್ಕೆ ಇದು ಒಳ್ಳೆಯ ನಿಯಮದಂತೆಯೇ ಕಾಣುತ್ತದೆ. ಆದರೆ ಇದು ಬರಿ ಲಂಚ ಗಿಟ್ಟಿಸಿಕೊಳ್ಳುವುದಕ್ಕೆ ಮಾತ್ರ ಉಪಯೋಗಕ್ಕೆ ಬರುತ್ತೆ ಅಂತ ನನ್ನ ವಾದ. ಕಾರಣಗಳು ಇಂತಿವೆ:

೧. ಒಮ್ಮೆ ಪ್ರಮಾಣ ಪತ್ರ ಮಾಡಿಸಿದರೆ, ಆರು ತಿಂಗಳವರೆಗೆ ಅದು ಸಿಂಧು. ಇನ್ನು ಎರಡೆ ದಿನಗಳನಂತರ ಪೋಲೀಸರು ಕೇಳಿದರೂ ನೂರುರುಪಾಯಿ ದಂಡ. ಇದರಲ್ಲಿ ಅರ್ಥ ಇದೆಯೆ? ಎರಡೇ ದಿನದಲ್ಲಿ, ಗಾಡಿ ಅಷ್ಟು ಹದಗೆಡಲು ಸಾಧ್ಯವೆ? ಇದು ಸಾರ್ವಜನಿಕರ ಮರೆವನ್ನೇ ನೆಪವಾಗಿಟ್ಟುಕೊಂಡು ಅವರಿಗೆ ಮಾಡುವ ಮೋಸ ಅಲ್ಲವೆ?

ಅಭಯಂಕರ

ಅಭಯಂಕರ.

ಭಯವೇಕೆ ಭಯವೇಕೆ ಏನಾಗಬಹುದು
ಸಾವಿಗಿಂತಾ ಮೇಲೆ ಏನಾಗಬಹುದು.
ಹುಲಿಸಿಂಹ ಕಾಡಾನೆ
ಕರಿನಾಗ ಕಾಳಿಂಗ
ಒಟ್ಟಾರೆ ಎರಗಿದರೂ
ಏನಾಗಬಹುದು.
ಸಾವಿಗಿಂತಾ ಮೇಲೆ ಏನಾಗಬಹುದು.
ಕಾರ್ಮೋಡ ಕೋಲ್ಮಿಂಚು
ಬರಸಿಡಿಲು ಭೂಕಂಪ
ಒಟ್ಟಾರೆ ಎರಗಿದರೂ
ಏನಾಗಬಹುದು.
ಸಾವಿಗಿಂತಾ ಮೇಲೆ ಏನಾಗಬಹುದು.
ಕಟುಕಜನ ಕಳ್ಳರು
ದೊಂಬಿ ದರೋಡೆಗಳು
ಒಟ್ಟಾರೆ ಎರಗಿದರೂ
ಏನಾಗಬಹುದು.
ಸಾವಿಗಿಂತಾ ಮೇಲೆ ಏನಾಗಬಹುದು.
ದುಶ್ಯ್ಶತೃ ವಂಚಕರು
ಗೋಮುಖ ವ್ಯಾಘ್ರರು
ಒಟ್ಟಾರೆ ಎರಗಿದರೂ
ಏನಾಗಬಹುದು.
ಸಾವಿಗಿಂತಾ ಮೇಲೆ ಏನಾಗಬಹುದು.
ಭಯವೆಲ್ಲಿ ಭಯವೆಲ್ಲಿ
ಅಭಯಂಕರನಿರುವಲ್ಲಿ
ನಿರ್ಭಯದ ಸುಖವಿದು
ಹರಿನಾಮ ಫಲವಿದು.

'ವಿಶ್ವಕಪ್ ಫುಟ್ ಬಾಲಿ' ನ ಮೊದಲಸುತ್ತಿನ ರೊಚಕ ಕ್ಷಣಗಳ ಅಂತ್ಯ ! ಇಂದಿನಿಂದ ೨ ನೆ ಸುತ್ತು !

ವಿಶ್ವಕಪ್ ಸಾಕರ್ : ಶುಕ್ರವಾರ, ೨೩, ಜೂನ್, ೨೦೦೬ ರಂದು ಆಡಿದ ಆಟಗಳು:

'ಎಚ್' ಗುಂಪು : ಉಕ್ರೆನ್ x ಟ್ಯುನಿಷಿಯ (೧-೦)

ಧರ್ಮ ಮತ್ತು ಸಮರ - ಒಂದು ಅಲೋಚನೆ.

ಅಮೆರಿಕಾ ಹಾಗು ಭಯೋತ್ಪಾದಕ ಸಂಘಟನೆ ತಾಲಿಬಾನ್ ನಡುವಣ ಕದನ ಅಂತಿಮ ಹಂತದಲ್ಲಿದ್ದು , ವಿಶ್ವ ಸಂಸ್ಥೆ ಹಾಗು ಇತರ ರಾಷ್ಟ್ರಗಳ ಸಭೆಯ ಪರಿಣಾಮವಗಿ ತಾಲಿಬಾನ್ ತದನಂತರದ ಸರ್ಕಾರದ ನಿರ್ವಹಣೆಗಾಗಿ ಪಶ್ತೂನ್ ಸಂಘಟನೆಯ ನಾಯಕ ಹಮೀದ್ ಕರ್ಜೈ ಅವರನ್ನು ನೇಮಿಸಲಾಗಿದೆ . ಈ ಮೇಲಿನ ಸಂಗತಿಗೆ ಅಮೆರಿಕಾದಲ್ಲಿ ನಡೆದ ಭಯೋತ್ಪಾದಕ ದಾಳಿಯೇ ಕಾರಣ . ಸೆಪ್ಟೆಂಬರ್ ೧೧ ನೇ ತಾರೀಖಿನ ಭಯೋತ್ಪಾದಕ ಕೃತ್ಯ , ಸುಮಾರು ೧೨ ವರ್ಷಗಳಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರ - ಇವೆಲ್ಲವೂ ಒಬ್ಬರಿಂದಲೇ ಮಾಡಲು ಅಸಾಧ್ಯ . ಹಾಗದರೆ ಯಾರು ಮಾಡುತ್ತಿದ್ದಾರೆ ? ಏಕೆ ಮಾಡುತ್ತಿದ್ದಾರೆ ? ಮುಗ್ಧ ಜನ ಏಕೆ ಬಲಿಯಾಗುತ್ತಿದ್ದಾರೆ ? ಜನರನ್ನು ಹೇಗೆ ಕೆರಳಿಸಲಾಗುತ್ತಿದೆ ?

ಜನಸಂಖ್ಯಾ ಹೆಚ್ಚಳ ರೋಗದ ಮೂಲ ಪತ್ತೆ

(ಬೊಗಳೂರು ಕಲಿಗಾಲ ಬ್ಯುರೋದಿಂದ)
bogaleragale.blogspot.com
ಬೊಗಳೂರು, ಜೂ.23- ಇದು ಕಲಿಗಾಲ. ಆದುದರಿಂದಾಗಿಯೇ ಗುಜರಾತಿನ ಭರೂಚ್ ಎಂಬಲ್ಲಿ ಇತ್ತೀಚಿನ ಕೆಲವು ದಿನಗಳಿಂದ ಜನಸಂಖ್ಯೆ ದಿಢೀರನೇ ಏರುತ್ತಿದೆ. ಈ ಹಿನ್ನೆಲೆಯಲ್ಲಿ ಬೊಗಳೂರಿನ ಮುಂಬಯಿ ರ'ಗೆಳೆಯ' ನಾಮ್ ಕೇ ವಾಸ್ತೇ ಬ್ಯುರೋ ಸಹಾಯ ಪಡೆದು ಗುಜರಾತಿಗೆ ಭೇಟಿ ನೀಡಿ ಅನ್ವೇಷಣೆ ನಡೆಸಿದಾಗ ಹೊಸ ಹೊಸ ವಿಷಯಗಳು ದಬದಬನೆ ಹೊರ ಬೀಳಲಾರಂಭಿಸಿದವು.

ಭಾರತ-ಪಾಕಿಸ್ತಾನಗಳು ಒಂದೇ ದೇಶವಾಗಬಾರದೇ?

ಭಾರತ ಮತ್ತು ಪಾಕಿಸ್ತಾನಗಳ ಸಂಬಂಧದ ಬಗ್ಗೆ ಮಾತನಾಡುವಾಗ ನಾವು ಎರಡು ಅಮೂರ್ತ ರಾಷ್ಟ್ರ-ಪ್ರಭುತ್ವಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಚರ್ಚಿಸುವುದೇ ಹೆಚ್ಚು. ಇದರ ಆಚೆಗೆ ಹೋಗಿ ಪಾಕಿಸ್ತಾನದಲ್ಲಿ ಇರುವವರು ನಮ್ಮಂಥ ಮನುಷ್ಯರೇ ಎಂದು ಚಿಂತಿಸಿದರೆ ನಮಗೆ ಸಿಗುವ ಚಿತ್ರಣವೇ ಬೇರೆ.