ನಲ್ಮೆಯ ನಮನ
ಸುಂದರ ಪಾರ್ಕು, ಸುತ್ತೆಲ್ಲ ಮರಗಳು
ಚೈತ್ರದ ಹೂಗಳು ವೈಶಾಖದ ಬಿಸಿಲಲ್ಲೂ ನಗುತ್ತಿದ್ದರೆ ಅದು ಬೆಂಗಳೂರಿನ ಮರಗಳ ವೈಭವ ಅಂತ ನೀವೆ ಅವತ್ಯಾವತ್ತೋ ಹೇಳಿದ್ರಿ. ಆ ಸುಮವೈಭವ ನೋಡುತ್ತ, ಉದ್ಯಾನದ ಕಲ್ಲು ಮೆಟ್ಟಿಲೇರಿದೆ.
- Read more about ನಲ್ಮೆಯ ನಮನ
- Log in or register to post comments
ಸುಂದರ ಪಾರ್ಕು, ಸುತ್ತೆಲ್ಲ ಮರಗಳು
ಚೈತ್ರದ ಹೂಗಳು ವೈಶಾಖದ ಬಿಸಿಲಲ್ಲೂ ನಗುತ್ತಿದ್ದರೆ ಅದು ಬೆಂಗಳೂರಿನ ಮರಗಳ ವೈಭವ ಅಂತ ನೀವೆ ಅವತ್ಯಾವತ್ತೋ ಹೇಳಿದ್ರಿ. ಆ ಸುಮವೈಭವ ನೋಡುತ್ತ, ಉದ್ಯಾನದ ಕಲ್ಲು ಮೆಟ್ಟಿಲೇರಿದೆ.
ನಾನು ಸಣ್ಣೋನಿರೋವಾಗ ದೆವ್ವಗಳನ್ನ ನೋಡಿದ್ದು ನೆನಪಿದೆ! ನಿಜವಾಗ್ಲೂ. ದೆವ್ವಗಳಿರಬಹುದೆನ್ನುವ ನಂಬಿಕೆಯನ್ನು ಬಲಗೊಳಿಸುವ ಹಲವಾರು ಘಟನೆಗಳಿಗೂ ನಾನು ಸಾಕ್ಷೀ"ಭೂತ"ನಾಗಿದ್ದೇನೆ. ನಿಮ್ಮ ಜೀವನದಲ್ಲೇನಾದ್ರೂ ಈ ತರಹದ ಘಟನೆಗಳು ನಡೆದಿದ್ರೆ ಹೇಳಿ ನೋಡೋಣ! ಆಮೇಲೆ ನಾನೂ ನನ್ನ ಅನುಭವಗಳೊಂದೆರಡನ್ನು ಇಲ್ಲಿ ವಿವರಿಸುವೆ. ದೆವ್ವಗಳಿಲ್ಲವೆನ್ನುವವರೂ "ಅರೆರೆ!
ನಾನು ಕೆಲಸ ಮಾಡುವುದು ಭಾರತೀಯ ವಾಯು ಸೇನೆಯಲ್ಲಿ. ಹೆಚ್ಚಾಗಿ ಉತ್ತರ ಭಾರತದಲ್ಲಿ ತಿರುಗಿಕೊಂಡಿರುವವನು. ೯೨ರಿಂದ ೯೬ರವರೆಗೆ ದೆಹಲಿಯಲ್ಲಿ ಇದ್ದೆ. ಉತ್ತರ ಭಾರತ ಶೈಲಿಯ ಊಟ ತಿಂಡಿಗಳಿಂದ ಬೇಸರ ಬಂದಾಗ ನೇರ ತಲಪುವ ಸ್ಥಳ ಮೋತಿ ಬಾಗಿನ ’ದೆಹಲಿ ಕನ್ನಡ ಸಂಘ’.
ಲಗ್ಗೆ ಇಟ್ಟು ಆಗಾಗ್ಗೆ ಕಾಡಬೇಡ
ಕದ್ದು ಕದ್ದೆನ್ನ ನೀ ನೋಡಬೇಡ
ಈ ಹೃದಯ ಓಕೆ ನಾ ? ಈ ಗೆಳೆಯ ಇಷ್ಟಾನಾ ?
ಹೇಳೆ ನೀ ಕೇಳೆ ನೀ ಹೇಳೆ ಕೇಳೆ ಗೆಳತಿ "ಪ"
ಮರೆಯದಿರು ಜೋಪಾನ ಮನ
ಮಂದಿರದಿ ನಿನಗೆ ಸನ್ಮಾನ
ಈ ಹೃದಯ ಓಕೆ ನಾ ? ಈ ಗೆಳೆಯ ಇಷ್ಟಾನಾ ?
ಹೇಳೆ ನೀ ಕೇಳೆ ನೀ ಹೇಳೆ ಕೇಳೆ ಗೆಳತಿ " ಲಗ್ಗೆ "
ಬಾ ಗೆಳತಿ ಇದುವೆ ನಿನಗೆ ಆಹ್ವಾನ
ಇತ್ತೀಚೆಗೆ ಈ ಕಾದಂಬರಿ ಓದಿ ಮುಗಿಸಿದೆ. "ಬೇರೆಯವರು ಸತ್ಯವನ್ನು ನಿಮ್ಮಿಂದ ಮುಚ್ಚಿಟ್ಟಿದ್ದಾರೆ; ಬನ್ನಿ ನಾನು ಅದನ್ನು ತೆರೆದು ತೋರಿಸುತ್ತೇನೆ" ಎಂಬ ಅಹಂಕಾರದಿಂದ ನಡುಹಗಲಲ್ಲಿ ಕೈಯಲ್ಲೊಂದು ಆರುತ್ತಿರುವ ದೀಪ ಹಿಡಿದು ದಾಪುಗಾಲಿಟ್ಟು ನಡೆದಿರುವ ಕಾದಂಬರಿಕಾರ. ಯಾವುದೂ ಪೂರ್ಣಸತ್ಯವಲ್ಲದ ಕಾರಣ ಇಲ್ಲಿರುವ ಸಂದೇಶಗಳನ್ನು ಅರ್ಧಸತ್ಯ ಎಂದು ಕರೆದು ಒಳ್ಳೆಯತನ ತೋರಬಹುದಷ್ಟೆ. ಇನ್ನು ಇದರಲ್ಲಿನ ಸಂದೇಶಗಳು ಎಷ್ಟು ಬಾಲಿಶ ಮತ್ತು ಕುಟಿಲತೆಯಿಂದ ಕೂಡಿದೆಯೆಂದರೆ ಅದರ ಬಗ್ಗೆ ಯೋಚಿಸುವುದು, ಚರ್ಚಿಸುವುದು ಪಾಪದಂತೆ ಕಾಣುತ್ತದೆ.
ಪೂರ್ವನಿರ್ಧಾರಿತ ಸಂಘರ್ಷಗಳಲ್ಲಿ ತೊಡಗಿಕೊಂಡು ಎಡವುತ್ತಾ ಹಿಂದು ಹಿಂದಕ್ಕೆ ಸರಿಯುವ ಏಕಮುಖ ಪಾತ್ರಗಳು ಎಲ್ಲೂ ಸೋಜಿಗವನ್ನು ಉಂಟುಮಾಡದೇ ತೆವಳುತ್ತವೆ. ಯಾಕೋ ಇಲ್ಲಿಯ ಜೀವಹೀನ ಪಾತ್ರಗಳ ಬಗ್ಗೆ ಚಿಂತಿಸುವ ಬದಲು stereotype ಮತ್ತು archetype ಪಾತ್ರಗಳ ನಡುವಿನ ವ್ಯತ್ಯಾಸವೇನು ಎಂದು ಚಿಂತಿಸುವುದು ಒಳ್ಳೆಯದೆನಿಸಿತು. ಮೊದಲ ರೀತಿಯ ಪಾತ್ರಗಳು ಮಾನವೀಯ ವಿವರಗಳ ಸಾಂದ್ರತೆಯಿಲ್ಲದೆ ಕಟ್ಟಿದ, ಒಂದು ಗುಂಪನ್ನು ಸುಲಭಮಾದರಿಯಾಗಿ ಪ್ರತಿನಿಧಿಸುವ, ನಾವಂದುಕೊಂಡಂತೆ ನಡೆದುಕೊಳ್ಳುವ ಸಾಮಾನ್ಯಗಳಾದರೆ, ಎರಡನೇ ರೀತಿಯ ಪಾತ್ರಗಳು ಮಾನವೀಯ ವಿವರಗಳ ಸಾಂದ್ರತೆಯ ಬುನಾದಿಯ ಮೇಲೆ ನಿಂತಿದ್ದು, ತನ್ನ ಗುಂಪಿನ ಎಲ್ಲ ತವಕ, ತಲ್ಲಣ, ಓರೆಕೋರೆಗಳೊಡನೆ ಪ್ರಾತಿನಿಧಿಕವಾಗಿಯೂ ಅಪ್ಪಟ ಮನುಷ್ಯನಾಗಿ ಉಳಿದು ಸೋಜಿಗ ಹುಟ್ಟಿಸುವ ರೀತಿಯವು. ಕಾದಂಬರಿ ಓದಿದ ಮೇಲೆ ಯಾಕೋ ಮೇಲಿನ ಅಂತರ ನಿಚ್ಚಳವಾಗಿ ಕಣ್ಣಿಗೆ ಹೊಡೆದಂತೆ ಕಾಣತೊಡಗಿತು. ಚೋಮನದುಡಿಯ ಚೋಮ ಮತ್ತು ಶಿಕಾರಿಯ ನಾಗಪ್ಪ ಹೆಚ್ಚು ಪ್ರಖರವಾದರು, ಮುಖ್ಯವಾದರು.
ಪುಟಗಟ್ಟಲೆ ಪಾತ್ರಗಳ ಮೂಲಕ ಭಾಷಣ ಬಿಗಿಯುವ ಕಾದಂಬರಿಕಾರ ಓದುಗರನ್ನು ದಡ್ಡ ಮಂದೆಯಂತೆ ನಡೆಸಿಕೊಳ್ಳುವ ರೀತಿಗೆ ನಗಬೇಕೋ ಅಳಬೇಕೋ ತಿಳಿಯಲಿಲ್ಲ. ಓದುಗನ ಜಾಣತನವನ್ನು ಹೆಜ್ಜೆಹೆಜ್ಜೆಗೂ ಅನುಮಾನಿಸುವ ಈ ಕಾದಂಬರಿ ಯಾಕೆ ಸಮಯೋಚಿತ ಎಂದು ಚಿಂತಿಸುತ್ತಾ ಕಾದಂಬರಿಯ ಹೆಸರು ಕೂಡ ಹೇಳಬಾರದು ಎಂದು ನಿರ್ಧರಿಸಿದೆ.
೧.
ಹಳೆಯ ರ, ಳ- ಯಾವಾಗಲೋ ಎಷ್ಟೋ ನೂರು ವರ್ಷ ಹಿಂದೆ ಬಿಟ್ಟ ಅಕ್ಷರಗಳು ,
ಶಾಲೆಗಳಲ್ಲಿ ಕಲಿಸುತ್ತಿಲ್ಲ .
ಕನ್ನಡದಲ್ಲಿನ ಸಂಸ್ಕೃತ ಶಬ್ದ ಉಚ್ಚರಿಸಲು ಕಷ್ಟ - ತೆಗೆದು ಹಾಕಿ , ಸುಲಭಗೊಳಿಸಿ ಎಂದೆಲ್ಲ ಅನ್ನುವ ಜನರು
ಏಕೆ ಈ ಹಳೆಯ ರ, ಳ ಬಳಸುತ್ತಿದ್ದೀರೋ ? ತಿಳಿಯದು.
ಶಂಕರ ಭಟ್ಟರೂ ಇದನ್ನು ಒಪ್ಪಲಿಕ್ಕಿಲ್ಲ.
ಈ ಪುಸ್ತಕವನ್ನು ನಿನ್ನೆ ಡಿಜಿತಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಿದೆ.
ಪುಸ್ತಕ ಸಣ್ಣದು .
ಸಣ್ಣ ಸಣ್ಣ ಪ್ರಬಂಧಗಳಿವೆ.
ಅಲ್ಲಿ ಅಕ್ಕಮಹಾದೇವಿಯ ವಚನಗಳು ,
ಪಂಪನ ಒಂದು ಪದ್ಯ (ವ್ಯಾಸರ ಮಹಾಭಾರತಕ್ಕೆ ಹೋಲಿಸಿ) ,
ವ್ಯಾಸ , ಕುಮಾರವ್ಯಾಸ ಮತ್ತು ಪಂಪರನ್ನು ತೂಕಕ್ಕೆ ಹಾಕಿದ (??- ಅಂದರೆ ತುಲನಾತ್ಮಕ !! ) ಲೇಖನ,
ಕುವೆಂಪು ನಾಟಕದ ಕುರಿತು ಒಂದಿಷ್ಟು
ಲೇಖನಗಳಿವೆ.
ಅಚ್ಚ ಕನ್ನಡ ಪದಗಳು
ಈ ಬಗ್ಗೆ ನನ್ನ ಕೆಲವು ವಿಚಾರಗಳಿವೆ .
೧. ಅಚ್ಚ ಕನ್ನಡ ಪದಕೋಶ ಎಂಬ ಪುಸ್ತಕ ಇದೆಯಂತೆ. ಅದನ್ನು, ಅಂಥ ಪುಸ್ತಕಗಳನ್ನು ಹುಡುಕಿ, ನೋಡೋಣ . ಅಂದರೆ ಮತ್ತೆ ಮತ್ತೆ ’ಅದನ್ನೇ ಕಂಡುಹಿಡಿವ’ ಕೆಲಸ ತಪ್ಪುವದು .
ಮಳೆ ಬಂತು ಮುಂಗಾರು ಮಳೆ ಬಂತು
ಇಳೆ ನೆನೆದು ಚೈತ್ರ ನಲಿಯಿತು
ಬಾನಿಂದ ಮಳೆ ಬಂತು ಭರಣಿ ಮಳೆ ಬಂತು
ಧರಣಿಯೊಡಲು ತಣಿಯಿತು "ಪ"
ಸರ್ವಜಿತುವಿನ ಮೊದಲ ಮಳೆ ಉತ್ಸವಕ್ಕೆ
ಗಂಟೆ ಗಟ್ಟಲೆ ಹಚ್ಚಿದ ಗುಡುಗು ಸಿಡಿಲಿನ ಮದ್ದುಗುಂಡು
ಮಿಂಚಿನ ಮತಾಪು ಕಡ್ಡಿಯ ಸುಸ್ವಾಗತ ಮಳೆಗೆ "ಮಳೆ"
ವರ್ಷದಾದಿಯ ಮೊದಲ ದೀಪಾವಳಿಯಾಯ್ತು