ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ?

ನೀನಲ್ಲದನ್ಯದೈವವುಂಟೆಂಬವನ ಬಾಯ
ಕೆನ್ನೆವಾರೆ ಸೀಳಿದಲ್ಲದೆ ಎನ್ನ ಮುನಿಸು ಹೋಗದಯ್ಯಾ
ಎನ್ನ ಕೋಪವಡಗದಯ್ಯಾ

ಪವಾಡ (ಭಾಗ ೨)

ಕಳಿಂಗದ ಮೇಲಿನ ವಿಜಯದ ಸುದ್ದಿಯನ್ನು ಅಶೋಕನಿಗೆ ತಿಳಿಸಲು ಓಲೆಗಾರರು ಕುದುರೆಗಳಲ್ಲಿ ಹೊರಟರು. ಈ ಸುದ್ದಿಯನ್ನು ಮೊದಲು ತಿಳಿಸಿ ಬಹುಮಾನ ಪಡೆಯಬೇಕೆಂಬ ಹವಣಿಕೆಯಲ್ಲಿ ಸ್ಪರ್ಧೆಯೇ ಏರ್ಪಟ್ಟು ಅಶೋಕನಿಗೆ ಬೇಗ ವಿಜಯದ ಸುದ್ದಿ ತಲುಪಿತು. ಅದನ್ನು ಕೇಳಿದೊಡನೆ ಆಕಾಶದೆಡೆಗೆ ತಲೆಯೆತ್ತಿ ದೇವರನ್ನು ನೆನೆಯಲಿಲ್ಲ, ಬದಲಿಗೆ ಅದೇ ಶಾಂತ ಭಾವವು ಮುಂದುವರೆದು ಮುಖದಲ್ಲಿ ಸಣ್ಣ ನಗೆ ಹೊಮ್ಮಿತು. ಅಷ್ಟು ದೊಡ್ಡ ವಿಜಯ ಸಾಧಿಸಿದ ಸಂತೋಷವು, ಒಂದು ಸಣ್ಣ ನಗೆಯಲ್ಲಿ ವ್ಯಕ್ತವಾಗಿ, ಕ್ಷಣದಲ್ಲಿ ಮಾಯವಾದುದನ್ನು ಕಂಡ ಅಲ್ಲಿದ್ದವರು ಆಶ್ಚರ್ಯ ಪಡುತ್ತಿದ್ದರು. ಸಂಜೆ ಸೈನಿಕರನ್ನು ಸ್ವತಃ ಭೇಟಿ ಮಾಡುವುದಾಗಿ ತಿಳಿಸಿ, ಓಲೆಗಾರರಿಗೆ ಬಹುಮಾನ ಕೊಡುವಂತೆ ಆದೇಶಿಸಿ ಶಿಬಿರದೊಳಕ್ಕೆ ನಡೆದನು.

ಪವಾಡ ( ಭಾಗ ೧ )

ನೆತ್ತಿಯ ಮೇಲೆ ಕೈಯಿಟ್ಟು ದೂರ ದಿಗಂತದೆಡೆಗೆ ಕಣ್ಣು ಹಾಯಿಸಿದಾಗ , ನದಿಯ ಅಲೆಯೊಂದು ಮಂದಗತಿಯಲ್ಲಿ ಸಾಗಿಬರುತ್ತಿರುವಂತೆ ಕಾಣುತ್ತಿತ್ತು. ಸ್ವಲ್ಪ ಎತ್ತರಕ್ಕೆ ಏರಿ ಸೂಕ್ಷ್ಮವಾಗಿ ಗಮನಿಸಿದರೆ, ಆನೆಗಳು, ಕುದುರೆಗಳು ಮತ್ತು ಮನುಷ್ಯರು ಸಾಗರೋಪಾದಿಯಾಗಿ ಜೊತೆಗೂಡಿ ಬರುತ್ತಿರುವುದು ಕಾಣುತ್ತಿತ್ತು. ನಿಸ್ಸಂಶಯವಾಗಿ ಅದು ಮೌರ್ಯ ಸಾಮ್ರಾಜ್ಯದ ಸೈನ್ಯವಾಗಿತ್ತು.

ಅಹ್ವಾನ

ಸಂಪದ ಬಳಗದ ಸಿನೆಮಾಪ್ರಿಯರಿಗೆ ನಮಸ್ಕಾರಗಳು.

ನನ್ನ ಈ ಬ್ಲಾಗಿನ ಉದ್ದೇಶ ನಿಮ್ಮೆಲ್ಲರನ್ನು ಎರಡು ವಿಶೇಷ ಕಾರ್ಯಕ್ರಮಗಳಿಗೆ ಆಹ್ವಾನಿಸುವುದು. ಮೊದಲನೆಯದು ಚಲನಚಿತ್ರ ನಿರ್ಮಾಣದ ಕಾರ್ಯಾಗಾರ. ಎರಡನೆಯದು ಪುಸ್ತಕ ಬಿಡುಗಡೆ ಸಮಾರಂಭ. ವಿವರಗಳು ಹೀಗಿದೆ:

ಕನ್ನಡ ಸಾಹಿತ್ಯ ಡಾಟ್ ಕಾಂ ಎಂಬ ವೆಬ್ ತಾಣವೂ......

ಈಗ್ಗೆ 5 ವರ್ಷಗಳಿಂದ ನಾನು ಗಮನಿಸುತ್ತಾ ಬಂದಿರುವ ಕನ್ನಡ ತಾಣಗಳಲ್ಲಿ ಈ ಮೇಲಿನ ತಾಣವೂ ಒಂದು. ಆಗಾಗ ಕುಂಟುತ್ತ ದೇಕುತ್ತಾ ಬರುತ್ತಿರುವ ಈ ವೆಬ್ ತಾಣದ ಕಥೆ ಅದರ ಸಂಪಾದಕರು, ಬೆಂಬಲಿಗರ ಬಳಗದ ಸದಸ್ಯರೊಂದಿಗೆ ಸಂಪರ್ಕಕ್ಕೆ ಬಂದಾಗ ತಿಳಿಯಲು ಸಾಧ್ಯವಾಯಿತು. ಕನ್ನಡವನ್ನು ಅಂತರ್ಜಾಲದಲ್ಲಿ ಮೂಡಿಸಲು ಆಸಕ್ತಿಯಿರುವವರಿಗಾಗಿ ಒಂದು ಮಾದರಿಯಂತೆ ರೂಪುಗೊಂಡಿರುವುದನ್ನು ನಾನು ಗಮನಿಸಿದ್ದೇನೆ. ಸಾಹಿತ್ಯದ ಗಾಂಭೀರ್ಯತೆಗೆ ತಕ್ಕ ಹಾಗೆ, ಹಾಗೂ ತಂತ್ರಜ್ಞಾನವನ್ನು ಕನ್ನಡಕ್ಕೆ ತರಬೇಕಾದಾಗ ಇರಲೇಬೇಕಾದ ಪರಿಶ್ರಮ ಎಲ್ಲವೂ ಇದರ ಹಿಂದಿದೆ.

ದ. ಕನ್ನಡದ ಪೋಲೀಸ್ ಬ್ಲಾಗ್ ಮಾಡುತ್ತಿದ್ದಾರೆ, ಗೊತ್ತೆ?

ದಕ್ಷಿಣ ಕನ್ನಡದ ಪೋಲೀಸರು [:http://spdk.blogspot.com/|ಬ್ಲಾಗ್ ಬರೆಯುತ್ತಿದ್ದಾರೆ]. ಜಿಲ್ಲಾ ಪಂಚಾಯತ್ ಚುನಾವಣೆಗಳಿಂದ ಹಿಡಿದು ದಿನನಿತ್ಯದ ಸುದ್ದಿಯನ್ನು ಅವರು ಈ ಬ್ಲಾಗಿನಲ್ಲಿ ಸೇರಿಸುತ್ತಿದ್ದಾರಲ್ಲದೆ, [:http://spdk.blogspot.com/2005/12/zptp-elections-elaborate-police.html|ಕನ್ನಡದಲ್ಲೂ ಬರೆಯುತ್ತಿದ್ದಾರಂತೆ]!

ಮಕ್ಕಳ ರಾತ್ರಿ ಶಿಬಿರ

ಒಂದನೇಯ ಇಯತ್ತೆಯಿಂದ ನಾಲ್ಕನೆಯ ಇಯತ್ತೆಯವರೆವಿಗೆ ಪ್ರಾಥಮಿಕ ಶಾಲೆ ಎಂದು ಹೆಸರಿಸುವರು. ಮಕ್ಕಳು ಮೊದಲು ಪ್ರಾಥಮಿಕ ಶಾಲೆಯ ಮೆಟ್ಟಿಲನ್ನು ಹತ್ತುವರು. ಆಗ ಅವರು ಎಲ್ಲಕ್ಕೂ ಹಿರಿಯರನ್ನು ಅವಲಂಬಿಸುವರು. ನಂತರ ಹೋಗುವುದೇ ಮಾಧ್ಯಮಿಕ ಶಾಲೆಗೆ. ಪ್ರಾಥಮಿಕದಿಂದ ಮಾಧ್ಯಮಿಕಕ್ಕೆ ಹೋಗುವ ಸನ್ನಿವೇಶವೊಂದು ಆಯಾಮ, ಎಂದು ತಿಳಿಯಬಹುದು. ಆಗ ಮಕ್ಕಳಲ್ಲಿ ಸ್ವಲ್ಪ ಮಟ್ಟಿನ ಸ್ವಾವಲಂಬನೆ ಬರುವುದು. ಇಂತಹ ಸನ್ನಿವೇಶದಲ್ಲಿ ಮಕ್ಕಳ ಅಭಿವೃದ್ಧಿಗೆ ಅನುಕೂಲವಾಗುವಂತೆ ಮುಂಬೈನ ಗೋಕುಲಧಾಮ ಶಾಲೆಯವರು ಪ್ರತಿವರ್ಷವೂ ನಾಲ್ಕನೆಯ ತರಗತಿಗೆ ಮಕ್ಕಳಿಗೆ ಒಂದು ರಾತ್ರಿಯ ಶಿಬಿರವನ್ನು ( ನೈಟ್ ಕ್ಯಾಂಪ್ ) ಏರ್ಪಡಿಸುತ್ತಾರೆ.

ಗೂಗಲ್ ನ ಜಿಮೇಯ್ಲ್ ಈಗ ಮೊಬೈಲ್ ಫೋನುಗಳಿಗೆ ಲಭ್ಯ

ಮೊಬೈಲ್ ಫೋನಿನಲ್ಲಿ ಜಿ ಪಿ ಆರ್ ಎಸ್ ಹಾಕಿಸಿಕೊಂಡಿರುವವರು ಈಗ ಮೊಬೈಲ್ ಫೋನಿನಿಂದ ಡೈರೆಕ್ಟ್ ಆಗಿ ಜಿಮೇಯ್ಲ್ ಚೆಕ್ ಮಾಡಬಹುದು.

ಭಾರತದ ಬಡವರ ಮೇಲೆ ಹೊಸ ಔಷಧಗಳ ಪ್ರಯೋಗ

[:http://wired.com/|ಅಮೇರಿಕದ ವೈರ್ಡ್ ಮ್ಯಾಗಜೀನ್] ಭಾರತದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ನಡೆಸುವ ಔಷದ ಪ್ರಯೋಗಗಳ ಬಗ್ಗೆ ಒಂದು ಲೇಖನವನ್ನು ಪ್ರಕಟಿಸಿದೆ. ಹೊರ ದೇಶಗಳಲ್ಲಿ ಹೊಸ ಔಷಧ ಪ್ರಯೋಗಗಳನ್ನು ನಡೆಸುವುದಕ್ಕಿಂತ ಭಾರತದಲ್ಲಿ ಖರ್ಚು ಕಡಿಮೆಯಾಗುವುದರಿಂದ ಈಗ "clinical trials" ಭಾರತಕ್ಕೆ ಔಟ್ ಸೌರ್ಸ್ ಆಗುತ್ತಿದೆಯಂತೆ. ಭಾರತದಲ್ಲಿ ಅವರಿಗೆ ಕಡಿಮೆ ಖರ್ಚಿಗೆ ಔಷಧವನ್ನು ಬಳಸುವ "ರೋಗಿಗಳು" ಸಿಗುತ್ತಾರಲ್ಲದೆ, ಇಲ್ಲಿನ ಸರಕಾರ ಅಮೇರಿಕ ಅಥವಾ ಯೂರೋಪ್ ದೇಶಗಳಂತೆ ಪ್ರಯೋಗಗಳ ನಿರ್ದಿಷ್ಟಮಾನ ಗೊತ್ತುಪಡಿಸಿ ಶಿಸ್ತು ರೂಪಿಸಿಲ್ಲದಿರುವುದರಿಂದ ಬಹುರಾಷ್ಟ್ರೀಯ ಕಂಪೆನಿಗಳಿಗೆ ಇಲ್ಲಿ ಸುಗ್ಗಿಯಂತೆ!