ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪುಸ್ತಕ ಸಂತೆ

ಇದು ನನ್ನ ಪ್ರಥಮ ಪ್ರಯತ್ನ.

ಕನ್ನಡ ಸಾಹಿತ್ಯ ಪರಿಷತ್ತು ಪ್ರತಿ ಶನಿವಾರ ತನ್ನ ಆವರಣದಲ್ಲಿ ಪುಸ್ತಕ ಸಂತೆ ಏರ್ಪಡಿಸುತ್ತದೆ. ಅಲ್ಲಿ ಪರಿಷತ್ತಿನ ಪ್ರಕಟಣೆಗಳ ಜೊತೆಗೆ ಖ್ಯಾತ ಪ್ರದರ್ಶಕರ ಮಳಿಗೆಗಳು ಇರುತ್ತವೆ ಅಂತ ಕೇಳ್ಪಟ್ಟಿದ್ದೆ. ಆದರೆ ಹೋದ ಶನಿವಾರ ಅಲ್ಲಿ ಹೋದಾಗ ನಿರಾಶೆ ಕಾದಿತ್ತು. ಆಲ್ಲಿ ಕೆಲವೆ ಕೆಲವು ಮಳಿಗೆಗಳಿದ್ದವು. ಪುಸ್ತಕಗಳೂ ಸಹ ತುಂಬ ಇರಲಿಲ್ಲ. ಹೆಚ್ಚಾಗಿ ಅಡುಗೆ ಪುಸ್ತಕಗಳು, ದೇವರ ನಾಮದ ಪುಸ್ತಕಗಳೆ ಇದ್ದವು.

೩ನೆಯ ಸಂಚಿಕೆ: ಜ್ಞಾನಪೀಠ ಪುರಸ್ಕೃತ ಸಾಹಿತಿ, ಯು ಆರ್ ಅನಂತಮೂರ್ತಿಯವರೊಂದಿಗೆ...

ಬೆಳಗಾವಿ ಮತ್ತು ಗಡಿಯಲ್ಲಿರುವ ಕೆಲವು ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ನಿರ್ಣಯವೊಂದನ್ನು ಬೆಳಗಾವಿ ಮಹಾನಗರ ಪಾಲಿಕೆ ಅಂಗೀಕರಿಸಿತ್ತು. ಇದಕ್ಕೆ ಕರ್ನಾಟಕಾದ್ಯಂತ ಪ್ರತಿಭಟನೆ ವ್ಯಕ್ತವಾಗಿದೆ.(ಈಗ ಕರ್ನಾಟಕ ಸರಕಾರ ಬೆಳಗಾವಿ ಮಹಾನಗರ ಪಾಲಿಕೆಯನ್ನು ರದ್ದು ಮಾಡಿ ಆಡಳಿತಾಧಿಕಾರಿಯನ್ನು ನೇಮಿಸಿದೆ.) ಇತ್ತೀಚೆಗೆ ಬೆಳಗಾವಿ ನಗರ ಪಾಲಿಕೆಯ ಮೇಯರ್ ವಿಜಯ್ ಪಾಂಡುರಂಗ ಮೋರೆ ಬೆಂಗಳೂರಿಗೆ ಬಂದು ಶಾಸಕರ ಭವನದಲ್ಲಿ ಇಳಿದುಕೊಂಡಿದ್ದಾಗ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು 'ಮಿಂಚಿನ ದಾಳಿ' ನಡೆಸಿ ವಿಜಯ್ ಮೋರೆಯವರ ಮುಖಕ್ಕೆ ಮಸಿ ಬಳಿದು ಹಲ್ಲೆ ನಡೆಸಿ ತಮ್ಮ ಕನ್ನಡಾಭಿಮಾನವನ್ನು ತೋರಿಸಿದರು. ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರ ಹಿಂಸಾತ್ಮಕ ಪ್ರತಿಭಟನೆ ಈಗ ಬಿಸಿಯೇರಿದ ಚರ್ಚೆಗಳಿಗೆ ಕಾರಣವಾಗಿದೆ.

ಮೊನ್ನೆ ಏನಾಯ್ತೂ ಅಂತಂದ್ರೆ...

ನನಗೆ ಇಂಗ್ಲೀಷಿನಲ್ಲಿ ರೋಫ್ ಹಾಕಕ್ಕೇ ಬರಲ್ಲ ಗುರು. ಯಾವಾನಾದ್ರೂ ಸ್ವಲ್ಪ ಕಿರಿಕ್ ಮಾಡಿದ್ರೆ ಕನ್ನಡದಲ್ಲಾದ್ರೆ ಸಮಯ ಸಂದರ್ಭಕ್ಕೆ ತಕ್ಕ ಹಾಗೆ ಭಾಷೆಯ ಹರಿತವನ್ನು ಹೊಂದಿಸಿಕೊಂಡು ನನ್ನ ಮನಸ್ಸಿನಲ್ಲಿರುವುದನ್ನು ಇತರರಿಗೆ ಮನವರಿಕೆಯಾಗುವಂತೆ ಮಾತಾಡಬಲ್ಲೆ. ಆದರೆ ಇಂಗ್ಲೀಷಿನಲ್ಲಿ ಹಾಗಲ್ಲ.. ಒಂದೋ ಅಫೀಷಿಯಲ್ ಟೋನಿನಲ್ಲಿ ನಿಧಾನಕ್ಕೆ ಮಾತಾಡಬಲ್ಲೆ ಇಲ್ಲ ತಾರಾಮಾರ ಬೈಯ್ಯಬಲ್ಲೆ ಆಷ್ಟೇ ವಿನಹ ಮಧ್ಯದಲ್ಲಿ ಮಾತೇ ಬರುವುದಿಲ್ಲ.