ಮಹಾತ್ಮ ಗಾಂಧಿ
ಜಗತ್ತಿಗೆ ಹೊಸದಾಗಿ ಬೋಧಿಸಲು ನನ್ನಲ್ಲಿ ಏನೂ ಇಲ್ಲ. ಸತ್ಯ ಮತು ಅಹಿಂಸೆ ಎನ್ನುವ ಈ ತತ್ವಗಳು ಪರ್ವತಗಳಷ್ಟೆ ಪುರಾತನವಾದವು. ನಾನು ಆ ತತ್ವಗಳನ್ನು ನನಗೆ ಸಾಧ್ಯವಾದಷ್ಟೂ ದೊಡ್ಡ ಮಟ್ಟದಲ್ಲಿ ಪ್ರಯೋಗಿಸಿದೆ ಅಷ್ಟೆ.
ಜಗತ್ತಿಗೆ ಹೊಸದಾಗಿ ಬೋಧಿಸಲು ನನ್ನಲ್ಲಿ ಏನೂ ಇಲ್ಲ. ಸತ್ಯ ಮತು ಅಹಿಂಸೆ ಎನ್ನುವ ಈ ತತ್ವಗಳು ಪರ್ವತಗಳಷ್ಟೆ ಪುರಾತನವಾದವು. ನಾನು ಆ ತತ್ವಗಳನ್ನು ನನಗೆ ಸಾಧ್ಯವಾದಷ್ಟೂ ದೊಡ್ಡ ಮಟ್ಟದಲ್ಲಿ ಪ್ರಯೋಗಿಸಿದೆ ಅಷ್ಟೆ.
ಜಗತ್ತಿನಲ್ಲಿ ಏನು ಬದಲಾವಣೆ ಕಾಣಬೇಕೆಂದು ಬಯಸುತ್ತೀರೋ ಆ ಬದಲಾವಣೆಯನ್ನು ಮೊದಲು ನಿಮ್ಮಲ್ಲಿ ತನ್ನಿ!
ಸಣ್ಣವನಿದ್ದಾಗಿನಿಂದ ನಮ್ಮ ಮನೇಲಿ ನಾನು "ಮಲ್ಲಿಗೆ ಬುಟ್ಟಿ". ಚಿತ್ರದುರ್ಗದಲ್ಲಿದ್ದ ಸ್ಕೂಲಿನ ಪಕ್ಕ ಅದ್ಯಾವುದೋ ಧೂಳು ಸಿಡಿಸುವ ಕ್ವಾರಿ (ಕಲ್ಲು ಕೆತ್ತುವ ಫ್ಯಾಕ್ಟರಿ) ಇದ್ದದ್ದು ಜೀವನದುದ್ದಕ್ಕೂ ಬೆನ್ನತ್ತಿದ ಬೇತಾಳವಾಗಿ ಹೋಯ್ತು. (ಚಿತ್ರದುರ್ಗವೇ ಧೂಳುಮಯ, ಇನ್ನು ಕ್ವಾರಿ ಪಕ್ಕದಲ್ಲಿರುವ ಶಾಲೆಯ ವಿದ್ಯಾರ್ಥಿಗಳ ಪೇಚಾಟ ಹೇಳಿತೀರದ್ದು. ಶಿವಮೊಗ್ಗ ರೋಡಿನಲ್ಲಿದ್ದ ಶಾಲೆಯ ಸುತ್ತಲೂ ಬರೀ ಧೂಳೋ ಧೂಳು. ರೋಡಿನ ಆಚೆಗೆ ಇದ್ದ ಹೆಚ್ಚು ಧೂಳಿಲ್ಲದ ಆಟದ ಮೈದಾನಕ್ಕೆ ಕೂಡ ಹೋಗುವಂತಿರಲಿಲ್ಲ - ಅತ್ತಿತ್ತ ನೋಡದೆ ರಸ್ತೆ ದಾಟುತ್ತೇವೆಂದು "ಕೋಟೆ ಕಡೆಯಿಂದ ಚಿರತೆ ಬರುತ್ತದೆ" ಎಂದು ಹೆದರಿಸಿಬಿಟ್ಟಿದ್ದರು. ಸುತ್ತಲೂ ಕಲ್ಲು ಬಂಡೆಗಳ ಗುಡ್ಡಗಳೂ ಹಾಗೆಯೇ ಹೆದರಿಕೆ ತರಿಸುವಂತಿತ್ತು ಕೂಡ).
ಬ್ರಾಂಕೈಟಿಸ್ ಇತ್ತೀಚೆಗೆ ಸಾಮಾನ್ಯವಾದ್ರೂ ಆಗ ಹೆಚ್ಚು ಹುಡುಗರಿಗಿರುತ್ತಿರಲಿಲ್ಲ. ಈಗಿನಂತೆ ಏರೆಸಾಲ್ ಸ್ಪ್ರೇ ಕೂಡ ಇರುತ್ತಿರಲಿಲ್ಲ. ಒಂದಷ್ಟು ಧೂಳು ನುಸುಳಿದರೂ ೧೮ "ಆssಕ್ಷೀ" ಸುರಿಸುತ್ತಿದ್ದೆ. ಹೀಗಾಗಿ ಬೇರೆ ಊರಿನ ಹೊಸ ಶಾಲೆಗೆ ಸೇರುವ ಸಮಯದೊತ್ತಿಗೆ ನಾನು ಬಹಳ 'sensitive' ಆಗಿಬಿಟ್ಟಿದ್ದೆ.
ಆ sensitivity ಇನ್ನೂ ಹೋಗಿಲ್ಲ. ಈಗಲೂ ರೂಮಿನಲ್ಲಿ ಸ್ವಲ್ಪ ಧೂಳಿದ್ದರೂ ಒಂದೆರಡು "ಆssಕ್ಷೀ" ಗ್ಯಾರಂಟಿ. ಮೆಜೆಸ್ಟಿಕ್ ಒಂದ್ಸಾರಿ ಸುತ್ತು ಹೊಡೆದು ಬಂದ್ರೂ ಸಾಕು ಬೆಳಗಾಗೆದ್ದು ೨೦ "ಆssಕ್ಷೀ" ಬರದೇ ತೀರದು! ನೆಶ್ಯ ಕೂಡ ಬೇಡವಾದಷ್ಟು ಶೀನು. ವ್ಯಾಕ್ಯೂಮ್ ಕ್ಲೀನರ್ ಹಿಡಿದು ರೂಮು ಸ್ವಚ್ಛ ಮಾಡುತ್ತಿದ್ದರೆ ನಮ್ಮ ಮನೆಯಲ್ಲಿರುವವರಿಗೆಲ್ಲ *ತಡೆಯಲಾಗದಷ್ಟು* ನಗು. "ಹೋಗಿ ಅಮೇರಿಕದಲ್ಲಿ ಇದ್ದುಬಿಡು" ಎಂಬ ಹಾಸ್ಯ ಅಪ್ಪನದ್ದು. "ಅಮೇರಿಕದಲ್ಲಿ ಹೇಗಿದ್ದೀತು? ಅಲ್ಲಿ ಧೂಳಿರಲಿಕ್ಕಿಲ್ಲವೆ? ಹಾಳಾದ್ದವರು ನನಗೆ ವೀಸ ಕೊಟ್ಟಿದ್ದಿದ್ದರೆ ನಾನೇ ಇಷ್ಟೊತ್ತಿಗೆ ನೋಡಿಬಂದಿರುತ್ತಿದ್ದೆ" ಎಂಬೆಲ್ಲ ಆಲೋಚನೆಯಿಂದ ಪ್ರಾರಂಭವಾಗಿ ಮನಸ್ಸು ಎತ್ತೆತ್ತಲೋ ತಿರುಗಾಡಿ ವಾಪಸ್ ವ್ಯಾಕ್ಯೂಮ್ ಬೇಗ ಮುಗಿಸಿ ಮುನ್ನಡೆಯುವಷ್ಟಕ್ಕೆ ಬಂದರಾಯಿತು -- ಅಂದಿನ ಆ ಸೀನು (sceneಉ ಮತ್ತು ಶೀನಿನ sceneಉ) ಮುಗಿದಂತೆ.
ಹೊಸ ವರ್ಷದ ಸಂಭ್ರಮದಲ್ಲಿ ತೇ(ಓ)ಲಾಡುತ್ತಿರುವವರಿಗೆಲ್ಲರಿಗೆ ತನ್ನ "ಗುಡ್ ಬೈ" ತಿಳಿಸಲು 2006ನೇ ಇಸವಿಯು ಬೊಗಳೆ ರಗಳೆ ಬ್ಯುರೋವನ್ನು ಕೋರಿದೆ. (bogaleragale.blogspot.com)
ನಿನ್ನವರೆಲ್ಲರ ಆರೈಕೆಯಲ್ಲಿ, ಬೇಕು-ಬೇಡಗಳಲ್ಲಿ,
ಎಲ್ಲರ ಭವಿಷ್ಯದ ಹೊಂಗನಸ ತುಂಬಿ ನಿನ್ನ ಕಣ್ಣಲ್ಲಿ,
ವಿಶ್ರಾಂತಿಯ ಹಂಗೂ ಇಲ್ಲದೆ ನೀ ಸತತ ಶ್ರಮಿಸುತ್ತಿರಲು
ಕರೆದು ಸುಮ್ಮನಾಗಲೇ ಬರಿಯ "ಹೆಂಡತಿ"ಯೆಂದು ನಿನ್ನ?
ಇಲ್ಲ, ನಿನಗೊಪ್ಪುವ ಹೆಸರು "ಗೃಹಲಕ್ಷ್ಮಿ" ಚಿನ್ನ!
ಸಂಪದ ಬಳಗದ ಸಮಸ್ತ ಗೆಳೆಯರಿಗೆ ಹೊಸ ವರುಷ ಹೊಸ ಹರುಷ ತರಲಿ
...ಹೊಸ ಗೆಳ(ತಿ)ಯರು ಸಿಗಲಿ...ಎಲ್ಲವೂ ಒಳ್ಳೆಯದಾಗಲೆಂದು ಆಶಿಸುತ್ತಾ ಹೊಸ ವರುಷದ ಶುಭಾಶಯಗಳು...!
--
ವಂದನೆಗಳೊಂದಿಗೆ....
ಅರೇಹಳ್ಳಿ ರವಿ, ಕನ್ನಡಸಾಹಿತ್ಯಡಾಟ್ಕಾಂ
ಕಾಗೆ ಕಪ್ಪು. ಕೋಗಿಲೆ ಕೂಡಾ ಕಪ್ಪು.
ಹಾಗಾದರೆ ಕಾಗೆ-ಕೋಗಿಲೆಗಳ ನಡುವಣ ವ್ಯತ್ಯಾಸ ತಿಳಿಯುವುದು ಹೇಗೆ?
ಬಹಳ ಸುಲಭ; ವಸಂತಮಾಸ ಬಂದೊಡನೆ ಕಾಗೆ ಕಾಗೆಯೇ, ಕೋಗಿಲೆ ಕೋಗಿಲೆಯೇ!
(ವಸಂತಮಾಸದಲ್ಲಿ ಮಾವು ಚಿಗುರುವುದರಿಂದ ಕೋಗಿಲೆ ಇಂಪಾದ ದನಿಯಲ್ಲಿ ಹಾಡುತ್ತದೆ.
ಕಾಗೆಗದು ಅಸಾಧ್ಯ ಎಂಬರ್ಥದಲ್ಲಿ)
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ! - ಗೋಪಾಲಕೃಷ್ಣ ಅಡಿಗ
ಹೇಗೆ ಹಾಲು, ಮೊಸರುಗಳಿಗಿಂತ ತಡವಾಗಿ ಹುಟ್ಟಿದರೂ ತುಪ್ಪವು ಹಾಲು, ಮೊಸರುಗಳಿಗಿಂತ ಶ್ರೇಷ್ಠ
ಎನಿಸಿಕೊಳ್ಳುವುದೋ, ಹಾಗೆಯೇ ಹಿರಿತನವೆನ್ನುವುದು ಉತ್ತಮ ಗುಣಗಳಿಂದಾಗಿ ಲಭ್ಯವಾಗುವುದೇ ಹೊರತು ಕೇವಲ ವಯಸ್ಸಿನಿಂದಲ್ಲ.
ಹೊರಗೆ ಲೋಕಾಸಕ್ತಿಯೊಳಗೆ ಸಕಲ ವಿರಕ್ತಿ,
ಹೊರಗೆ ಕಾರ್ಯಧ್ಯಾನವೊಳಗುದಾಸೀನ;
ಹೊರಗೆ ಸಂಸೃತಿಭಾರವೊಳಗದರ ತಾತ್ಸಾರ,