ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇ-ಲೋಕ-೮ (೨/೨/೨೦೦೭)

ಬಲ್ಬ್‌ ಬಳಕೆಗೆ ನಿಷೇಧ!
 ಥಾಮಸೆ ಆಲ್ವಾ ಎಡಿಸನ್ ಸಂಶೋಧಿಸಿದ ಬುರುಡೆ ಬಲ್ಬ್‌ನ ಒಂದು ತೊಂದರೆ ಅಂದರೆ,ಇದರಲ್ಲಿ ಟಂಗ್‌ಸ್ಟನ್ ತಂತಿ ಸುರುಳಿಯಲ್ಲಿ ಹರಿಯುವ ವಿದ್ಯುತ್‌ ಉಂಟು ಮಾಡುವ ಶಾಖದಿಂದ ಸುರುಳಿ ಕಾದು,ಅದು ಬೀರುವ ಪ್ರಕಾಶದ ಮೂಲಕ ಬೆಳಕು ದೊರೆಯುತ್ತದೆ. ಹೆಚ್ಚಿನ ವಿದ್ಯುತ್ ಶಕ್ತಿ ಶಾಖದ ರೂಪದಲ್ಲಿ ನಷ್ಟವಾಗುತ್ತದೆ.ಹಿಂದೆ ಅವನ್ನು ಬಳಸುವುದು ಅನಿವಾರ್ಯವಾಗಿತ್ತು.ಈಗಲಾದರೋ ಅಂತಹ ಬಲ್ಬ್‌ಗಳು ಬಳಸುವ ವಿದ್ಯುಚ್ಛಕ್ತಿಯ ಮೂರನೇ ಮೂರನೇ ಒಂದಕ್ಕಿಂತಲೂ ಕಡಿಮೆ ವಿದ್ಯುಚ್ಛಕ್ತಿ ಬಳಸುವ ಕಾಂಪಾಕ್ಟ್ ಫ್ಲೊರೆಸೆಂಟ್ ಲ್ಯಾಂಪ್‌(ಸಿ.ಎಫ್.ಎಲ್‌)ಗಳು ಲಭ್ಯ.ಇವುಗಳು ಬುರುಡೆ ಬಲ್ಬ್‌ಗಳಿಗೆ ಹೋಲಿಸಿದರೆ ಅಧಿಕ ದುಬಾರಿ ಎನ್ನುವುದೇನೋ ನಿಜ. ಆದರೆ ಇವುಗಳ ಬಾಳಿಕೆ ಹೆಚ್ಚು. ಹಾಗಾಗಿ ಅವುಗಳು ಕೆಟ್ಟು ಹೋಗುವ ಮೊದಲು ಅವುಗಳಿಗಾಗಿ ಖರ್ಚು ಮಾಡಿದ ಹಣಕ್ಕಿಂತ ಹೆಚ್ಚು ವಿದ್ಯುತ್ ಉಳಿತಾಯವಾಗಿರುತ್ತದೆ. ಕ್ಯಾಲಿಫೋರ್ನಿಯಾದಲ್ಲಿ ಮುಂದಿನ ನಾಲ್ಕು ವರ್ಷಗಳಲ್ಲಿ ಬುರುಡೆ ಬಲ್ಬ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಕಾನೂನು ಜಾರಿಗೆ ಬರುವುದರಲ್ಲಿದೆ. ಬಳಕೆದಾರರಿಗೆ ಈ ಬಗ್ಗೆ ಶಿಕ್ಷಣ ನೀಡುವುದೇ ಅಲ್ಲದೆ, ಉಚಿತ ಸಿ.ಎಫ್.ಎಲ್‌. ದೀಪಗಳನ್ನು ಮೊದಲಿಗೆ ನೀಡಿ, ಮತ್ತೆ ಖರೀದಿ ಮೇಲೆ ರಿಯಾಯಿತಿ ಕೊಡುವ ಯೋಜನೆ ಅಲ್ಲಿನ ಆಡಳಿತದ್ದು.

*kannadave satya kannadave nitya*kuvempu

PÀ£ÀßqÀªÉà ¸ÀvÀå! PÀ£ÀßqÀªÉà ¤vÀå! J¯ÁèzÀgÀÄ EgÀÄ JAvÁzÀgÀÄ EgÀÄJAzÉA¢UÀÄ ¤Ã PÀ£ÀßqÀªÁVgÀÄPÀ£ÀßqÀ UÉÆÃ«£À N ªÀÄĢݣÀ PÀgÀÄPÀ£ÀßqÀvÀ£ÀªÉÇA¢zÀÝgÉ ¤Ã£ÀªÀÄäUÉ PÀ®àvÀgÀÄ! ¤Ã ªÉÄlÄÖªÀ £É® - CzÉ PÀ£ÁðlPÀ!¤Ã£ÉÃgÀĪÀ ªÀÄ¯É - ¸ÀºÁ墿¤Ã ªÀÄÄlÄÖªÀ ªÀÄgÀ - ²æÃUÀAzsÀzÀ ªÀÄgÀ¤Ã PÀÄrAiÀÄĪÀ ¤Ãgï - PÁªÉÃj!

ಸಂಪದದಲ್ಲಿ ಕೆಲವು ಬದಲಾವಣೆಗಳು

ಬರುವ ನಾಲ್ಕೈದು ದಿನಗಳ ಕಾಲ ಸಂಪದದಲ್ಲಿ ಕೆಲವು ನಿರ್ವಹಣೆಯ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ ಸಂಪದ ಎಲ್ಲರಿಗೂ ಎಂದಿನಂತೆ ಲಭ್ಯವಿರುತ್ತದೆ,

ಹೀಗೊಂದು ಅಪರೂಪದ ಪುಸ್ತಕ

ಚಿಕ್ಕಂದಿನಿಂದಲೂ ನನಗೆ ಪುಸ್ತಕಗಳೆಂದರೆ ಬಹಳ ಪ್ರೀತಿ. ಚಿಕ್ಕವನಾಗಿದ್ದಾಗ ಮನೆಯವರೆಲ್ಲ ಸಿನೆಮಾಗೆ ಹೋದರೆ, ನಾನು ಹೋಗದೆ, ಟಿಕೇಟಿನ ದುಡ್ಡು ವಸೂಲ್ ಮಾಡಿ ಅದರಿಂದ ಒಂದು ಅಮರ ಚಿತ್ರ ಕಥೆಯನ್ನೋ, ಇನ್ಯಾವುದೋ ಪುಸ್ತಕವನ್ನೋ ಕೊಳ್ಳುತ್ತಿದ್ದೆ. ನಮ್ಮ ತಂದೆಯವರ ಪುಸ್ತಕ ಸಂಗ್ರಹದ ಹವ್ಯಾಸದಿಂದ ನಾನು ಬಹಳ ಪ್ರಭಾವಿತನಾದೆ. ನನ್ನ ಬಳಿ ಹಣವಿರುತ್ತಿದ್ದುದು ಬಹಳ ಕಮ್ಮಿಯಾದ್ದರಿಂದ ಸುಲಭ ಬೆಲೆಗೆ ಸಿಗುತ್ತಿದ್ದ ರಷ್ಯನ್ ಕನ್ನಡ ಪುಸ್ತಕಗಳನ್ನು ಕೊಳ್ಳುತ್ತಿದ್ದೆ. ಈಗಲೂ ಮನರಂಜನೆಗಾಗಿ ಬೌತಶಾಸ್ತ್ರ ಪುಸ್ತಕವನ್ನು ತಿರುವಿಹಾಕುತ್ತಾ ನಿರಂತರ ಚಲನೆಯ ಯಂತ್ರಗಳ ಬಗೆಗಿನ ಲೇಖನಗಳನ್ನು ಸವಿಯುತ್ತಿರುತ್ತೇನೆ. ಹಳೆಯ ಪೇಪರ್ ಅಂಗಡಿಯವನನ್ನು ಗುರುತು ಮಾಡಿಕೊಂಡು, ಅವನಿಂದ ಕಸ್ತೂರಿಗಳನ್ನು ಸುಲಭ ಬೆಲೆಗೆ ಕೊಂಡು ಓದುತ್ತೆದ್ದೆ.

ಸುಮಾರು ೧೫ ವರ್ಷಗಳ ಹಿಂದಿನ ಮಾತು. ಎಂಜಿನಿಯರಿಂಗ್ ಓದುತ್ತಿದ್ದ ಸಮಯ. ನಮ್ಮ ಪುಸ್ತಕಗಳಿಗಾಗಿ ಆಗಾಗ ಬೆಂಗಳೂರಿನ ಅವೆನ್ಯೂ ರೋಡ್ ನ ಹಳೆಯ ಪುಸ್ತಕದಂಗಡಿಗಳಿಗೆ ಬೇಟಿಕೊಡುತ್ತಿದ್ದೆ. ಕೆಂಪೇಗೌಡ ರೋಡಿನಲ್ಲಿ, ಮೈಸೂರ್ ಬ್ಯಾಂಕ್ ವೃತ್ತದ ಬಳಿ ಬಸ್ ನಂಬರ್ ೧೨ ರಲ್ಲಿ ಬಂದಳಿಯುತ್ತಿದ್ದೆ. ಹಾಗೆಯೇ ಪಕ್ಕದ ಕಟ್ಟೆಯ ಮೇಲೆ ಜೋಡಿಸಿಟ್ಟು ಮಾರುತ್ತಿದ್ದ ಪುಸ್ತಕಗಳಿಗೂ ಒಂದು ಕಣ್ಣು ಹಾಯಿಸುತ್ತಿದ್ದೆ.
ಒಮ್ಮೆ ಹೀಗೆಯೇ ನೋಡುತ್ತಿದ್ದಾಗ ಕಂದು ಬಣ್ಣದ ಬಟ್ಟೆ ಹೊದಿಕೆಯಿರುವ ಸ್ವಲ್ಪ ಜೀರ್ಣವಾದ ತೆಳುವಾದ ಪುಸ್ತಕವೊಂದು ಕಾಣಿಸಿತು. ತೆಗೆದು ಕೊಂಡು ನೋಡಿದರೆ An Elementary Grammer of the Kannada, or Canarese Language ಎಂದಿತ್ತು. ಮುದ್ರಣದ ವರ್ಷ ನೋಡಿದರೆ ೧೮೫೯ !. ಕನ್ನಡದಲ್ಲಿ ಮೊದಲುಮುದ್ರಣಕಂಡ ಪುಸ್ತಕಗಳ ಸಾಲಿಗೆ ಇದು ಸೇರುತ್ತದೆಂದು ಅನಿಸಿತು. ತಕ್ಷಣವೇ ಕೊಳ್ಳಬೇಕೆಂದು ನಿರ್ಧರಿಸಿದೆ. ಅಂಗಡಿಯವನ ಬಳಿ ವ್ಯಾಪಾರ ಮಾಡಿ ೯ ರೂಪಾಯಿಗಳಿಗೆ ಕೊಂಡು ಕೊಂಡೆ.

ಹೀಗೆದೆ ಆ ಪುಸ್ತಕದ ವಿವರ. ಲೇಖಕರು - ಥಾಮಸ್ ಹಡ್ಸನ್, ವೆಸ್ಲಿಯನ್ ಮಿಶಿನೆರಿ. ಮುದ್ರಕರು - ವೆಸ್ಲಿಯನ್ ಮಿಶಿನ್ ಪ್ರೆಸ್. ಬೆಂಗಳೂರು. ಮುಖಪುಟದಲ್ಲಿ ಹೇಳಿಕೊಳ್ಳುವಂತೆ ಈ ಪುಸ್ತಕದ ವಿಶೇಷವೇನೆಂದರೆ ಬಳಸಿದ ಎಲ್ಲಾಪದಗಳನ್ನೂ ಎಥಾವತ್ ಇಂಗ್ಲೀಷಿಗೆ ಭಾಷಾಂತರಿಸಿದ್ದಾರೆ, ಹಾಗೆಯೇ ಕನ್ನಡ ಪದಗಳ ಉಚ್ಚಾರಣೆಯನ್ನೂ ಇಂಗ್ಲೀಷಿನಲ್ಲಿ ಕೊಟ್ಟಿದ್ದಾರೆ.

ಮುಂಬೈಗೀತೆ, 'ಬಾಂಬೆ ಮೆರಿ ಜಾನ್' ಕೊಟ್ಟ, 'ಒ. ಪಿ. ನಯ್ಯರ್', ಇನ್ನೆಲ್ಲಿ ?

ಮುಂಬೈಗೀತೆ, 'ಬಾಂಬೆ ಮೆರಿ ಜಾನ್' ಕೊಟ್ಟ, 'ಒ.ಪಿ.ನಯ್ಯರ್', ಇನ್ನೆಲ್ಲಿ ?

(೧೯೨೬-೨೦೦೭)

ಸೂಟು ಬೂಟಿನ ಫೆಲ್ಟ್, ಹ್ಯಾಟ್, ಜೊತೆ, ಮುಗುಳುನಗೆಯನ್ನೂ ಧರಿಸಿ, ಕೈಯಲ್ಲಿ ಸದಾ 'ವಾಕಿಂಗ್ ಸ್ಟಿಕ್,' ಹಿಡಿದಿರುತ್ತಿದ್ದ, ಈ 'ಅಂಕಲ್' ಯಾರು ಎಂದು ಪ್ರಶ್ನಾರ್ಥಕವಾಗಿ ನೋಡಿ ತಮ್ಮಲ್ಲೇ ಪಿಸುಗುಟ್ಟುತ್ತಿದ್ದ ಪವಾರ್ ನಗರ, ಥಾನದ ಪಡ್ಡೆಹುಡುಗರಿಗೆ, ವಿಸ್ಮಯಾಗಿರಬೇಕು ! ಅಲ್ಲಿ, ಕ್ರಿಕೆಟ್ ಆಟ್ ವಾಡುತ್ತಿದ್ದಾಗ ಅವರ ಮಧ್ಯೆ, 'ನಯ್ಯರ್' ನಡೆದುಕೊಂಡು ಹೋಗುತ್ತಿದ್ದರಂತೆ. ಆ ವಯೊವೃದ್ಧರು ಬೇರೆ ಯಾರೂ ಆಗಿರದೆ, ಖ್ಯಾತ ಸಂಗೀತಜ್ಞ ಒ. ಪಿ. ನಯ್ಯರ್ ! 'ರಾಣೀ ನಖ್ವಾ,' ಅವರ ಮನೆಯಲ್ಲಿ ಶನಿವಾರ ರಾರತ್ರಿ ೩-೩೦ ಕ್ಕೆ ಒ. ಪಿ. ನಯಾರ್, ಮೃತರಾಗಿದ್ದರು. ಭಾನುವಾರ, ಜನವರಿ ೨೮ ರಂದು, ಅವರ ಅಂತಿಮ ದರ್ಶನಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ಮನೆಯ ಮುಂದೆ ಜನರು ನೆರೆದಿದ್ದರು.

ಅಣೆಕಟ್ಟುಗಳು ಪರಿಸರಕ್ಕೆ ಮಾರಕವೆ?

ಇತ್ತೀಚಿನ ನನ್ನ ಪ್ರವಾಸಗಳಿಂದ ಈ ಪ್ರಶ್ನೆ ನನ್ನನ್ನು ಕಾಡುತ್ತಿದೆ. ನಮಗೆ ಅಣೆಕಟ್ಟುಗಳಿಂದಾಗುವ ಪ್ರಯೋಜನಗಳ ಬಗ್ಗೆ ಗೊತ್ತಿದೆ. ಆದರೆ ಅದರಿಂದ ಪರಿಸರ ಹಾಗು ಅಣೆಕಟ್ಟಿನ ಆಯಕಟ್ಟು ಪ್ರದೇಶದ ಜನರ ಜೀವನದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಬಹುಶಃ ನಮಗೆ ಅಷ್ಟು ಅರಿವಿಲ್ಲವೇನು ಅಂತನ್ನಿಸುತ್ತದೆ. ಈ ಜಲಾಶಯಗಳ ಹಿಂಭಾಗದಲ್ಲಿ ಕಾಡಿದ್ದರೆ ಅಲ್ಲಿರುವ ಹಸಿರು ನೀರಿನಿಂದ ಆವೃತವಾಗಿ ಬದುಕಲು ಆಗದೆ, ಸಾಯಲು ಆಗದೆ ನರಳುತ್ತಿದೆಯೇನೊ ಅಂತನ್ನಿಸುತ್ತದೆ(ನೀವು ಈ ಚಿತ್ರ ನೋಡಿದರೆ ಗೊತ್ತಾಗುತ್ತದೆ). ಕಾಡು ಪ್ರಾಣಿಗಳ ಜೀವನಕ್ಕೆ ಇದರಿಂದ ವ್ಯತಿರಿಕ್ತ ಪರಿಣಾಮಗಳಾಗುತ್ತದೆ. ಒಟ್ಟಿನಲ್ಲಿ ಪರಿಸರದಲ್ಲಿ ಅಸಮತೋಲನವುಂಟಾಗುತ್ತದೆ.

ಇದರಿಂದಾಗುವ ದೀರ್ಘಾವಧಿ ಪರಿಣಾಮಗಳ ಸ್ವರೂಪ ಏನೆಂದು ನನಗೆ ಗೊತ್ತಿಲ್ಲದಿದ್ದರೂ ಅದು ಒಟ್ಟಿನಲ್ಲಿ ಒಳ್ಳೆಯದಲ್ಲ ಎಂದು ಮಾತ್ರ ಹೇಳಬಲ್ಲೆ. ಇನ್ನು ಅಲ್ಲಿನ ಕೆಲವು ಹಳ್ಳಿಗಳು ಮುಳುಗುತ್ತವೆ. ಇನ್ನು ಕೆಲವು ಅತಂತ್ರ ಸ್ಥಿತಿ ತಲುಪಿ, ಹೊರ ಜಗತ್ತಿನ ಎಲ್ಲ ಸಂಪರ್ಕಗಳನ್ನು ಕಡಿದು ಕೊಳ್ಳಬೇಕಾಗುತ್ತದೆ. ಯಾರು ಆ ಹಳ್ಳಿಗಳ ನಾಗರಿಕ ಸೌಲಭ್ಯಗಳನ್ನು ಒದಗಿಸುವ ಗೋಜಿಗೆ ಹೋಗುವುದಿಲ್ಲ. ( ಉದಾ: ದೇವಕಾರ(ಕದ್ರಾ ಹಿನ್ನೀರಿನಲ್ಲಿರುವ ಹಳ್ಳಿ), ಲಿಂಗನಮಕ್ಕಿ ಜಲಾಶಯದ ಹತ್ತಿರ ಇರುವ ಹಳ್ಳಿಗಳು...ಇಲ್ಲಿನ ಜನರು ಪಕ್ಕದಲ್ಲೆ ಉತ್ಪಾದನೆಯಾದರೂ ಇನ್ನು ವಿದ್ಯುತ್ ಮುಖ ನೋಡಿಲ್ಲ)

ನಮ್ಮ ಪರಿಸರವನ್ನು ನಾವು ಮುಂದಿನ ಪೀಳಿಗೆಗೆ ಒಳ್ಳೆ ಸ್ಥಿತಿಯಲ್ಲಿ ನೀಡುವುದು ನಮ್ಮ ಜವಾಬ್ದಾರಿಯಲ್ಲವೆ ? ಪ್ರಗತಿಗೆ ವಿದ್ಯುತ್ ಬೇಕು ..ಆದರೆ ಪ್ರಗತಿಯ ಹೆಸರಿನಲ್ಲಿ ಪರಿಸರಕ್ಕೆ ಧಕ್ಕೆ ಬೇಡ ಅಲ್ಲವೆ? ನಾವು ಪರಿಸರಕ್ಕೆ ಹಾನಿ ಮಾಡದೆ ವಿದ್ಯ್ಯುತ್ ಉತ್ಪಾದಿಸಲು ಹಲವು ತಂತ್ರಙ್ನಾನಗಳಿವೆ (ಸೌರ,ಗಾಳಿ) ಆದರೂ ಅದನ್ನು ನಾವು ಕಾರ್ಯಗತ ಮಾಡುವುದರಲ್ಲಿ ಹಿಂದೆ ಇದ್ದೇವೆ..ಅಲ್ಲವೆ?