ಮಹಾತ್ಮ ಗಾಂಧಿ
(ಹೊಸತೊಂದನ್ನು ಮಾಡಲು ಹೊರಟಾಗ) ಜನರು ಮೊದಲು ನಿಮ್ಮನ್ನು ಕಡೆಗಣಿಸುತ್ತಾರೆ. ನಂತರ ಅವಹೇಳನ ಮಾಡಿ ನಗುತ್ತಾರೆ. ತದನಂತರ ನಿಮ್ಮೊಡನೆ ಜಗಳಕ್ಕೂ ಸಿದ್ಧರಾಗುತ್ತಾರೆ. ಆದರೆ ಕೊನೆಯಲ್ಲಿ ನೀವು ಗೆಲ್ಲುತ್ತೀರಿ.
(ಹೊಸತೊಂದನ್ನು ಮಾಡಲು ಹೊರಟಾಗ) ಜನರು ಮೊದಲು ನಿಮ್ಮನ್ನು ಕಡೆಗಣಿಸುತ್ತಾರೆ. ನಂತರ ಅವಹೇಳನ ಮಾಡಿ ನಗುತ್ತಾರೆ. ತದನಂತರ ನಿಮ್ಮೊಡನೆ ಜಗಳಕ್ಕೂ ಸಿದ್ಧರಾಗುತ್ತಾರೆ. ಆದರೆ ಕೊನೆಯಲ್ಲಿ ನೀವು ಗೆಲ್ಲುತ್ತೀರಿ.
ಶ್ರದ್ಧೆ ಎನ್ನುವುದನ್ನು ವಿಚಾರದಿಂದ ಬಲಪಡಿಸಬೇಕು. ಇಲ್ಲವಾದಲ್ಲಿ ಅದು ಅಂಧಶ್ರದ್ಧೆಯಾಗುತ್ತದೆ. ಅಂಧಶ್ರದ್ಧೆ ಹೆಚ್ಚು ಕಾಲ ಬದುಕಲಾರದು.
ಪಾಪವನ್ನು ದ್ವೇಷಿಸು; ಆದರೆ ಪಾಪಿಯನ್ನು ಪ್ರೀತಿಸು! - ಮಹಾತ್ಮ ಗಾಂಧಿ
ತಪ್ಪುಗಳನ್ನು ಮಾಡುವ ಸ್ವಾತಂತ್ರ್ಯವಿಲ್ಲದಿದ್ದಲ್ಲಿ, ಅದು ನಿಜವಾದ ಸ್ವಾತಂತ್ರ್ಯ ಅಲ್ಲವೇ ಅಲ್ಲ.
ರಕ್ತವಿಲ್ಲದೆ ದೇಹವು ಹೇಗೆ ಬದುಕಲು ಸಾಧ್ಯವಿಲ್ಲವೋ, ಹಾಗೆಯೇ ಶ್ರದ್ಧೆ ಮತ್ತು ಪ್ರಾರ್ಥನೆಗಳಿಲ್ಲದೆ ಆತ್ಮವೂ ಕೂಡ ಬದುಕಲು ಸಾಧ್ಯವಿಲ್ಲ.
ನಾವು ಇಲ್ಲ್ಲಿ ಬರೆಯುವಾಗ ಎಷ್ಟೊ ತಪ್ಪುಗಳು ( ಅಲ್ಪ ಪ್ರಾಣ, ಮಹಾ ಪ್ರಾಣ) ಮತ್ತು ಇನ್ನಿತರ ವ್ಯಾಕರಣಕ್ಕೆ ಸಂಬಂಧಿಸಿದ ತಪ್ಪುಗಳು ಅವ್ಯಾಹತವಾಗಿ ಆಗಿಹೋಗುತ್ತವೆ. ಓದುವವರಿಗೆ ಆಭಾಸವಾಗುತ್ತದೆ.
"ಪರ್ಯಾಯ ಶಕ್ತಿ ಮೂಲ"ಗಳ (ಗಾಳಿಯಿಂದ ಅಥವಾ ಸೂರ್ಯನ ಬೆಳಕಿನಿಂದ ವಿದ್ಯುತ್ ಉತ್ಪಾದಿಸುವ ಕ್ರಮ) ಬಗ್ಗೆ ಇತ್ತೀಚಿಗೆ ಹಲವಾರು ಕಡೆ ಕೇಳಿರುತ್ತೀವಿ, ಓದಿರುತ್ತೀವಿ. ವಿದ್ಯುತ್ ಅಭಾವದ ಈ ದಿನಗಳಲ್ಲಿ, ಪರ್ಯಾಯ ಶಕ್ತಿ ಮೂಲಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತ. ಈ ನಿಟ್ಟಿನಲ್ಲಿ ಬರಿದೆ ಮಾತನಾಡದೇ, "ಮಾಡಿ ತೋರಿಸುವ" ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ಖಾಸಗಿ ಸಂಸ್ಥೆಯೊಂದರ ಬಗ್ಗೆ ನಿಮಗೆ ಗೊತ್ತಾ? "ಗೂಗಲ್" ಸಂಸ್ಥೆ ಈ ವಿಷಯದಲ್ಲಿ ಹೊಸ ಹೆಜ್ಜೆಯಿಟ್ಟು, ತನ್ನ "ಹಲವು ಪ್ರಥಮ"ಗಳ ಕಿರೀಟಕ್ಕೆ ಇನ್ನೊಂದು ಗರಿ ಸಿಕ್ಕಿಸಿಕೊಂಡಿದೆ.
ಕ್ಯಾಲಿಫೋರ್ನಿಯಾದ "ಮೌಂಟನ್ ವ್ಯೂ" ಕಚೇರಿ ಆವರಣದಲ್ಲಿ (ಆಫೀಸ್ ಕ್ಯಾಂಪಸ್) ಸುಮಾರು 1.6 MW(ಮೆಗಾ ವ್ಯಾಟ್) ವಿದ್ಯುತ್ತನ್ನು ಸೂರ್ಯನ ಬೆಳಕನ್ನು ಬಳಸಿ ಉತ್ಪಾದಿಸುವುದರ ಮೂಲಕ ಗೂಗಲ್, ಈ ರೀತಿಯ ಸಾಧನೆಗೈಯುತ್ತಿರುವ ಜಗತ್ತಿನ ಪ್ರಥಮ ಖಾಸಗಿ ಸಂಸ್ಥೆಯೆನಿಸಿದೆ. ಇದಕ್ಕಾಗಿ ಗೂಗಲ್ ಅನುಸರಿಸಿದ ವಿಧಾನ ಬಹಳ ಸರಳ. "ಮೌಂಟನ್ ವ್ಯೂ" ಆವರಣದಲ್ಲಿರುವ ನಾಲ್ಕು ಕಚೇರಿಗಳ ಮಾಳಿಗೆಗಳ ಮೇಲೆ ಮತ್ತು ವಾಹನ ನಿಲುಗಡೆಗೆಂದು ಇರುವ ಜಾಗಗಳಲ್ಲಿ, ಸುಮಾರು 9000 "ಸೌರಶಕ್ತಿ ಫಲಕ"ಗಳನ್ನು (ಸೋಲಾರ್ ಪ್ಯಾನಲ್) ಅಳವಡಿಸಿ, ಆ ಮೂಲಕ ಮಾಲಿನ್ಯ ರಹಿತ ರೀತಿಯಲ್ಲಿ ವಿದ್ಯುತ್ತನ್ನು ಉತ್ಪಾದಿಸುತ್ತಿದ್ದಾರೆ. ಇದರಿಂದ ಉತ್ಪತ್ತಿಯಾಗುವ ವಿದ್ಯುತ್, ಅಂದಾಜು 1000-1100 "ಸಾಮಾನ್ಯ" ಕ್ಯಾಲಿಫೋರ್ನಿಯಾ ಮನೆಗಳ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಸಾಕಂತೆ! "ಗೂಗಲ್ಪ್ಲೆಕ್ಸ್"ನ (ಗೂಗಲ್ ಸಂಸ್ಥೆಯ ಆವರಣಕ್ಕೆ ಅವರಿಟ್ಟಿರುವ ಹೆಸರು) ದಿನನಿತ್ಯದ ವಿದ್ಯುತ್ ಬೇಡಿಕೆಯಲ್ಲಿ ಸುಮಾರು 30%ರಷ್ಟನ್ನು ಹೀಗೆ ಉತ್ಪತ್ತಿಯಾಗುವ ವಿದ್ಯುತ್ತಿನಿಂದಲೇ ಪೂರೈಸಬಹುದು ಎಂದು ಸಂಸ್ಥೆಯ ಅಂಬೋಣ.
30% ಉಳಿತಾಯವಾದರೂ ಆಗಲಿ, ಅಥವಾ ಸ್ವಲ್ಪ ಕಡಿಮೆಯೇ ಆಗಲಿ, ಕಿಂಚಿತ್ತಾದರೂ ವಿದ್ಯುತ್ ಉಳಿಸುವ ಮೂಲಕ, "ಪರಿಸರ ಸಂರಕ್ಷಣೆ"ಗೆ ತನ್ನ ಕೈಲಾದಷ್ಟು "ಅಳಿಲು ಸೇವೆ" ಮಾಡುತ್ತಿದೆಯಲ್ಲ, ಆ ವಿಷಯವೇ ನಿಜಕ್ಕೂ ಅಭಿನಂದನೀಯ ಅಂತ ನನ್ನ ಅನಿಸಿಕೆ. ನೀವೇನು ಹೇಳುತ್ತೀರಾ?
ಕರ್ನಾಟಕ Vs ಕನ್ನಡ : ಕೆಲವು ಅನುಮಾನಗಳು
ರೋಲಂಡ್ ಬ್ಯಾರಿಂಗ್ಟನ್: ತನ್ನ ೧೯ನೇ ವಯಸ್ಸಿನಲ್ಲಿ ೧೯೯೯-೨೦೦೦ ಋತುವಿನಲ್ಲಿ ಕರ್ನಾಟಕ ರಣಜಿ ತಂಡಕ್ಕೆ ಆಯ್ಕೆಯಾದ ಬ್ಯಾರಿಂಗ್ಟನ್, ತನ್ನ ಪ್ರಥಮ ಪಂದ್ಯದಲ್ಲೇ ಕೇರಳ ವಿರುದ್ಧ ಶತಕದ ಬಾರಿಯನ್ನು ಆಡಿದರು. ಗಳಿಸಿದ್ದು ೧೦೬ ಓಟಗಳನ್ನು. ಆರಂಭಿಕ ಆಟಗಾರನಾಗಿ ಕಿರಿಯರ ಪಂದ್ಯಾಟಗಳಲ್ಲಿ ಓಟಗಳನ್ನು ಸೂರೆಗೈದ ಬ್ಯಾರಿಂಗ್ಟನ್, ರಣಜಿ ಪಂದ್ಯಗಳಲ್ಲೂ ತನ್ನ ಉತ್ತಮ ಆಟವನ್ನು ಮುಂದುವರಿಸಿದರು. ಪ್ರಥಮ ಋತುವಿನ ೬ ಪಂದ್ಯಗಳಲ್ಲಿ ೪೬.೨೫ ಸರಾಸರಿಯಲ್ಲಿ ೩೭೦ ಓಟಗಳನ್ನು ಗಳಿಸಿದರು. ೧೯ರ ಹುಡುಗನಿಗೆ ಭರವಸೆಯ ಆರಂಭ ಎನ್ನಬಹುದು. ಬ್ಯಾರಿಂಗ್ಟನ್ ನ ತಂದೆಯವರು, ೧೯೬೦ರ ದಶಕದಲ್ಲಿ ಇಂಗ್ಲಂಡ್ ತಂಡದ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ಕೆನೆತ್ ಫ್ರಾಂಕ್ ಬ್ಯಾರಿಂಗ್ಟನ್ ಇವರ ದೊಡ್ಡ ಅಭಿಮಾನಿಯಾಗಿದ್ದರಿಂದ ತಮ್ಮ ಮಗನಿಗೂ ಅದೇ ಹೆಸರನ್ನಿಟ್ಟರು.
'ಬ್ಯಾರಿ' ಎಂದು ಸಹ ಆಟಗಾರರಿಂದ ಕರೆಯಲ್ಪಡುವ ಬ್ಯಾರಿಂಗ್ಟನ್, ಮೊದಲೆರಡು ಋತುಗಳಲ್ಲಿ ೩ನೇ ಕ್ರಮಾಂಕದಲ್ಲಿ ಆಡಿದರು. ೨೦೦೨-೦೩ ಋತುವಿನಿಂದ ಪ್ರಸಕ್ತ ಋತುವಿನವರೆಗೆ ಆರಂಭಕಾರನಾಗಿ ಆಡಿರುವ ಬ್ಯಾರಿ, ರಾಹುಲ್ ದ್ರಾವಿಡ್ ನ ಮಹಾಭಕ್ತ. ಎಡೆಬಿಡದೆ ದ್ರಾವಿಡ್ ರನ್ನು ಕಾಡಿ, ಬೇಡಿ ಬ್ಯಾಟಿಂಗ್ ಸಲಹೆಗಳನ್ನು ಪಡೆದುಕೊಂಡು ತನ್ನ ಬ್ಯಾಟಿಂಗ್ ಸುಧಾರಿಸಿಕೊಂಡರು. ದ್ರಾವಿಡ್ ಭಾರತದಿಂದ ಹೊರಗೆ ಆಡುವಾಗಲೂ ಅವರನ್ನು ಬೆನ್ನು ಬಿಡದೆ ವಿ-ಅಂಚೆ ಮೂಲಕ ಸಂಪರ್ಕಿಸಿ ತನ್ನ ಆಟವನ್ನು ಬಹಳ ಸುಧಾರಿಸಿ ಭರವಸೆ ಮೂಡಿಸಿದವರು ಬ್ಯಾರಿ.