ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೊಸ ಸದಸ್ಯರ ಪರಿಚಯ...

ನವ ಸದಸ್ಯರು ತಮ್ಮ [:http://sampada.net/…|ಪರಿಚಯವನ್ನು ಈ ಸಂಪರ್ಕದಲ್ಲಿ ನೀಡಬಹುದು]. ನಿಮ್ಮ ಹೆಸರು, ಉದ್ಯೋಗ, ಕನ್ನಡದೊಂದಿಗಿನ ನಂಟು, ಹಾಗೂ ವಾಸವಾಗಿರುವ ಸ್ಥಳ - ಈ ವಿಷಯಗಳನ್ನು ತಿಳಿಸಿ ನಿಮ್ಮ ಪರಿಚಯವನ್ನು ಸೇರಿಸಬಹುದು. ಹೊಸ ಫಾರಮ್ ವಿಷಯವೊಂದರಲ್ಲಿಿ ನಿಮ್ಮ ಪರಿಚಯವನ್ನು ನೀಡಿ.

Sampada News section

ಈ ಪುಟವನ್ನು ಪ್ರಯೋಗಾರ್ಥ [:http://slashdot.org|ಸ್ಲ್ಯಾಶ್ ಡಾಟ್ ರೀತಿಯ] ಸುದ್ದಿ ಸೇರ್ಪಡೆಗೆಂದು ಪ್ರಾರಂಭಿಸಲಾಗಿದೆ. ಈ ಸುದ್ದಿ ಸಮೂಹ ಪುಟಕ್ಕೆ ಎಲ್ಲ ಸದಸ್ಯರೂ ಕನ್ನಡದಲ್ಲಿ ಸುದ್ದಿಯನ್ನು ಸೇರಿಸಬಹುದು. ಸುದ್ದಿ ಸೇರಿಸುವಾಗ ಚುಟುಕಾದ ಮಾಹಿತಿಯ ಜೊತೆಗೆ ಸುದ್ದಿ ಮೂಲಕ್ಕೆ ಒಂದು ಸಂಪರ್ಕ (ಲಿಂಕ್) ಕೊಟ್ಟರಾಯಿತು.

ಸಲಹೆ

ವೃತ್ತ ಪತ್ರಿಕೆಯಲ್ಲಿ ಬಂದಿರುವ ಒಂದು ವಿಷಯ ಸೇರಿಸಲು ಪ್ರಯತ್ನಿಸಿದೆ - ಆಗ ೪೦೩ error ತೋರಿಸಿದೆ. ಮುಂದೆ ತಾಣದಲ್ಲಿ ಹೆಚ್ಚಿನ ವಿಷಯಗಳನ್ನು ಸೇರಿಸುವಾಗ ಇದರ ಬಗ್ಗೆ ಯೋಚಿಸಬಹುದು. ಮುಖಪುಟದಲ್ಲಿ ಅಂದು ಯಾರ ಹುಟ್ಟಿದ ಹಬ್ಬ ಇದೆ ಎಂಬುದರ ಬಗ್ಗೆ ತಿಳಿಸಬಹುದು. ಹಾಗೇ ಅವರುಗಳಿಗೆ ಶುಭಾಶಯ ಕೋರಲು ಒಂದು ಪ್ರತ್ಯೇಕ ವೇದಿಕೆ ಅಥವಾ ಸೂತ್ರ ನಿರ್ಮಿಸಬಹುದು. ಹಾಗೇ ಹೊಸ ಸದಸ್ಯರುಗಳು ತಮ್ಮ ಪರಿಚಯ ಮಾಡಿಕೊಡಲು ಒಂದು ಸೂತ್ರವನ್ನೂ ಇರಿಸಬಹುದು.

ಹಿತನುಡಿ

ನಮ್ಮಲ್ಲಿಲ್ಲದ ಗುಣ ಬೇರೆಯವರಲ್ಲಿದ್ದರೆ ಅದನ್ನು ನಮ್ಮಲ್ಲಿ ತರುವ ಪ್ರಯತ್ನ ಮಾಡಬಾರದು. ಹಾಗೆ ಮಾಡಲು ಹೊರಟರೆ ನಾವು ಪರಮಾತ್ಮನ ಬಳಿ ಹೋಗುವ ಬದಲು ಆ ಮನುಷ್ಯನ ಬಳಿ ಸೇರುತ್ತೇವೆ.

ಝೆನ್ ೧೦ : ಇನ್ನೂ ಮೂರು ದಿನ

ಹಕು-ಇನ್ನ ಶಿಷ್ಯ ಸುಯಿಒ ಒಳ್ಳೆಯ ಗುರುವೆಂದು ಖ್ಯಾತನಾಗಿದ್ದ. ಬೇಸಗೆಯಲ್ಲಿ ಗುರು ಶಿಷ್ಯರೆಲ್ಲ ಏಕಾಂತ ಧ್ಯಾನವನ್ನು ಮಾಡುವ ಕಾಲದಲ್ಲಿ ಜಪಾನಿನ ದಕ್ಷಿಣ ದ್ವೀಪಗಳಿಂದ ಒಬ್ಬ ಶಿಷ್ಯ ಅವನನ್ನು ಹುಡುಕಿಕೊಂಡು ಬಂದ. "ಒಂದೇ ಕೈಯಿಂದ ಹುಟ್ಟುವ ಸದ್ದನ್ನು ಕೇಳಿಸಿಕೊ" ಎಂಬ ಮುಂಡಿಗೆಯನ್ನು ಗುರು ಅವನಿಗೆ ನೀಡಿದ. ಧ್ಯಾನದ ಮೂಲಕ ಉತ್ತರವನ್ನು ಕಂಡುಕೋ ಎಂದ. ಶಿಷ್ಯ ಮೂರು ವರ್ಷಗಳನ್ನು ಗುರುವಿನೊಡನೆ ಕಳೆದ. ಆದರೂ ಅವನಿಗೆ ಉತ್ತರ ದೊರೆಯಲಿಲ್ಲ, ಗುರು ನೀಡಿದ್ದ ಪರೀಕ್ಷೆಯನ್ನು ದಾಟಲಿಲ್ಲ.

ಬರಹ ಕ್ರಾಂತಿ!

ನಾನು ಕೆಲಸ ಮಾಡುವ ನನ್ನ ಬ್ಯಾಂಕಿನ ವಿಭಾಗದಲ್ಲಿ ಸಿಸ್ಟಂ ಅಡ್ಮಿನಿಸ್ಟ್ರೇಟರ್ ತುಂಬಾ ಶಿಸ್ತಿನ ಮನುಷ್ಯ. ನಮ್ಮಲ್ಲಿರುವುದು ಲ್ಯಾನ್ ಸಿಸ್ಟಂ. ಸುಮಾರು ೬೫ ಪಿಸಿ ಗಳಿದ್ದು ಎಲ್ಲವೂ ಸ್ತ್ಯಾಂಡ್ ಅಲೋನ್ ಮತ್ತು ನೋಡ್ ಗಳಾಗಿಯೂ ಕೆಲಸ ಮಾಡುವವು. ನಮ್ಮ ಮೇಲಧಿಕಾರಿಗಳು ಅವನಿಗೆ ತಿಳಿಸಿದಂತೆ ಯಾವ ಪಿಸಿ ಗಳಲ್ಲೂ ಆಟಗಳಿರುವಂತಿಲ್ಲ. ಕೆಲಸದ ವಿಷಯ ಬಿಟ್ಟು ಬೇರೆ ಏನನ್ನೂ ಮಾಡದಂತೆ ಮಾಡಿಹರು. ಇಂಗ್ಲೀಷ್ ಮತ್ತು ಹಿಂದಿಯ ತಂತ್ರಾಂಶಗಳನ್ನು ಮಾತ್ರವೇ ಏರಿಸಿರುವುದು. ನಾನು ಬಹಳ ದಿನಗಳಿಂದ ಬರಹ ವನ್ನು ಏರಿಸಲು ಕೇಳಿಕೊಳ್ಳುತ್ತಿದ್ದೆ. ಆದರೇಕೋ ಅವರುಗಳು ನನ್ನ ಕರೆಗೆ ಮಾನ್ಯತೆಯನ್ನೇ ಕೊಟ್ಟಿರಲಿಲ್ಲ. ನಮ್ಮಲ್ಲಿರುವ ಸರ್ವರ್ ನಲ್ಲಿನ ಓಎಸ್ ಲಿನಕ್ಸ್ ಮತ್ತು ಪಿಸಿ ಗಳಲ್ಲಿ ವಿಂಡೋಸ್ ಎಕ್ಸ್ ಪಿ. ಸರ್ವರ್ ನಲ್ಲಿ ಹಿಂದಿಗಾಗಿ ಆಕೃತಿ ಎಂಬ ತಂತ್ರಾಂಶವನ್ನು ಏರಿಸಿದ್ದಾರೆ.

ಉಭಯಸಂಕಟ

ದೂರ ಸಾಗಿದ ಪುಟ್ಟಪಕ್ಶಿ ಕೂಗಿಟ್ಟಿದೆ ಹಸಿವಿನಿಂದ ಕುಳಿತಲ್ಲಿಯೇ ರೆಕ್ಕೆಗಳ ಬಡಿಯುತ್ತ ಕಾಣದಾ ಗೂಡಿಗಿದು ದಾರಿಯಾ ಹುಡುಕುತಿದೆ ಎದೆಯೊಳಿಣುಕಿದ ಆಸೆ ಗರಿಬಿಚ್ಹಿ ಓಡುತಿದೆ ಕೈಗೆಟುಕದಂತೆ ತನ್ನುಸಿರ ಎಳೆಯ ಬಳಸಿ ಪ್ರಶ್ನಿಸುತ್ತಿದೆ,ಏನೆನ್ನಲಿ? ಆಧ್ರ್ರ್೯ತೆಯ ನೋಟಮರೆಸಿ ಏನಾದರೂ ಹೇಳು ಅರ್ಥವಾದರೂ ಮರಳಿ ಮುಸುಕೊದ್ದಿ ಮಲಗಿರಲು ಕಣ್ಣರಳಿಸಿ ಹೇಳುತ್ತೇನೆ ನನ್ನದೇನಿಲ್ಲಾ

ಬೂಟಾಟಿಕೆ

ಸಮಾಜದಿ ಇನ್ನೊಂದು ಪಿಡುಗಿನ ಬಗ್ಗೆ ನನ್ನ ಚಿಂತನೆ. ಇದರಿಂದ ಯಾರದೂ ಮನ ನೋಯುವುದಿಲ್ಲ ಎಂದು ನನ್ನ ಅನಿಸಿಕೆ. ಮನನೋಯುವಂತಿದ್ದರೆ ದಯವಿಟ್ಟು ತಿಳಿಸಿ - ಇದನ್ನು ತೆಗೆದಿಬಿಡುವೆ. ಜನಸಾಗರದಿ ಹಾದಿ ತೋರುವ ಅಧಿಪತಿ ದೇವರ ಅಪರಾವತಾರವೆನ್ನುವ ಮಠಾಧಿಪತಿ ದಿನಂಪ್ರತಿ ಜನಸಾಮಾನ್ಯರಿಗೆ ದಿವ್ಯದರ್ಶನ ಮ್ಯಾನೇಜರರು ಇವರಿಗೆ ತೋರಿಸುವರು ಲೋಕದರ್ಶನ ಜರಿಶಾಲು ಪಾದುಕೆಗಳ ತೊಟ್ಟವರ ದರ್ಬಾರು

'ಶಿವನುಟ್ಟ ಸೀರೆ'

ಸಾಮಾನ್ಯ ಶಕೆಯ ೧೪೧೦ನೆಯ ವರ್ಷದಲ್ಲಿ ಹುಟ್ಟಿದ ಹಂಪೆಯ ಶಾಸನವೊಂದರಲ್ಲಿ [S. I. I. IV, ಸಂ. ೨೭೬, ಪುಟ ೬೦-೬೬, ಸಾಲು ೯೫-೯೫] ಈ ಕೆಳಕೊಂಡ ಪದ್ಯವಿದೆ. ಅವನಿಯನಾಕ್ರಮಿಪುದು ದಾ ನವಿಚಿತ್ರಂ ಲೋಕವಱಿಯೆ ಶುಚಿಯೆನಿಸಿರ್ದ್ದುಂ ಶಿವನುಟ್ಟ ಸೀರೆಯಂ ಪಿಡಿ ದವಗಡಿಪಳ್ಕೀರ್ತ್ತಿಲಕ್ಷ್ಮಿ ಲಕ್ಷ್ಮೀಧರನಾ ಮೊದಲನೆಯ ದೇವರಾಯನ ಮಂತ್ರಿಯಾದ ಲಕ್ಷ್ಮೀಧರನು ಗಣಪತಿ ದೇವಾಲಯವನ್ನು ಮಾಡಿಸಿ ಈ ಶಾಸನವನ್ನು ಹಾಕಿಸಿದನು. ಶಾಸನದಲ್ಲಿ ಬರುವ ಲಕ್ಷ್ಮೀಧರಾಮಾತ್ಯನ ವಿಸ್ತಾರವಾದ ಪ್ರಶಸ್ತಿಯಲ್ಲಿ ಈ ಪದ್ಯವೂ ಸೇರಿದೆ. ಇದರಲ್ಲಿಯ "ಲೋಕವಱಿಯೆ ಶುಚಿಯೆನಿಸಿರ್ದ್ದುಂ ಶಿವನುಟ್ಟ ಸೀರೆಯಂ ಪಿಡಿದವಗಡಿಪಳ್" ವಾಕ್ಯಖಂಡದ ಅರ್ಥವನ್ನು ಬಿಡಿಸಲು ಕೊಂಚ ಅವಕಾಶವಿದೆ.

ಕಳಚಿ ಕೊಂಡಿದ್ದ ಕೊಂಡಿ

ಕಾಲವು ಬದಲಾಗುತ್ತಿರುತ್ತಿದ್ದಂತೆ ನಾವು ಹೊಸ ಹೊಸ ಜನಗಳ ಪರಿಚಯ ಮಾಡಿಕೊಳ್ಳುತ್ತಿರುತ್ತೇವೆ ಹಾಗೆ ಹೊಸ ಸಂಬಂಧಗಳನ್ನೂ ಜೋಡಿಸಿಕೊಳ್ಳುತ್ತಿರುತ್ತೇವೆ. ಕೇವಲ ಹತ್ತಿರದ ಸಂಬಂಧಿಗಳ ಸಂಬಂಧಗಳು ಮಾತ್ರ ಚಿರಂತನವಾಗಿ ನಮ್ಮೊಡನೆ ಇರುತ್ತದೆ. ಮೊದಲ ಸಲ ಶಾಲೆಗೆ ಹೋದಾಗ ಸ್ನೇಹಿತರಾದವರು ನಮ್ಮ ಸಂಬಂಧಿಗಳಂತೆಯೇ ಅಂದುಕೊಳ್ಳುತ್ತೇವೆ. ನಮ್ಮ ಮನೆಯಲ್ಲಿ ನಡೆಯುವುದನ್ನೆಲ್ಲಾ ಹಂಚಿಕೊಳ್ಳುತ್ತೇವೆ. ಯಾವುದನ್ನೂ ಮುಚ್ಚಟೆ ಮಾಡುವುದಿಲ್ಲ. ಅದೇ ಸ್ವಲ್ಪ ವರುಷಗಳ ತರುವಾಯ ಶಾಲೆ ಬದಲಾಗುವ ಸಾಧ್ಯತೆ ಇರುವಂತೆ ಸ್ನೇಹಿತರುಗಳು ಬದಲಾಗುತ್ತಾರೆ. ಸ್ವಲ್ಪ ಸ್ವಲ್ಪವಾಗಿ ನಾವು ಮನೆಯ ವಿಷಯಗಳನ್ನು ಮುಚ್ಚಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತೇವೆ. ಮುಂದೆ ಕಾಲೇಜುಗಳಲ್ಲಿ ಬರುವ ಸ್ನೇಹಿತರುಗಳೊಂದಿಗೆ ಚಿಕ್ಕ ವಯಸ್ಸಿನಲ್ಲಿ ಮನೆಯ ವಿಷಯಗಳನ್ನು ಹಂಚಿಕೊಂಡಷ್ಟು, ಎಲ್ಲ ವಿಷಯಗಳನ್ನೂ ಅಷ್ಟಾಗಿ ಹಂಚಿಕೊಳ್ಳುವುದಿಲ್ಲ. ಹೀಗೆ ಕಾಲಕ್ರಮೇಣ ನಮ್ಮ ಬಾಳಿನಲ್ಲಿ ಎಷ್ಟೋ ಸ್ನೇಹಿತರು ಬರುವರು ಹೋಗುವರು.