ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಚನ ಚಿಂತನ ೪ : ಮನಸ್ಸು ಹೀಗೆ..

ಕರಿ ಘನ ಅಂಕುಶ ಕಿರಿದೆನ್ನಬಹುದೆ ಬಾರದಯ್ಯಾ ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ ಬಾರದಯ್ಯಾ ಮರಹು ಘನ ನಿಮ್ಮ ನೆನೆವ ಮನವ ಕಿರಿದೆನ್ನಬಹುದೆ ಬಾರದಯ್ಯಾ ಕೂಡಲಸಂಗಮದೇವಾ ನಮ್ಮ ತಿಳಿವಳಿಕೆ ಸ್ಥೂಲವಾದ್ದನ್ನು ಗಮನಿಸುವಷ್ಟು ಸುಲಭವಾಗಿ ಸೂಕ್ಷ್ಮವನ್ನು ಗಮನಿಸಲಾರದು. ದೊಡ್ಡ ಆನೆ ಕಣ್ಣಿಗೆ ಕಾಣುತ್ತದೆ, ಅದನ್ನು ನಿಯಂತ್ರಿಸುವ ಅಂಕುಶ ಕಾಣುವುದಿಲ್ಲ. ದಟ್ಟವಾದ ಕತ್ತಲು ಮಾತ್ರವೇ ಮುಖ್ಯವಾಗುತ್ತ ಸ್ವಲ್ಪವಾದರೂ ಬೆಳಕು ನೀಡುವ ಹಣತೆ ಗಮನಕ್ಕೇ ಬರುವುದಿಲ್ಲ. ಆಯಾ ಕ್ಷಣದ ಬದುಕಿನ ಜಂಜಡವೇ ಘನವಾಗಿ ಕಾಣುತ್ತ, ಅಂಥ ಜಂಜಡದ ನಡುವೆಯೂ ಉದಾತ್ತವಾದದ್ದನ್ನು ನೆನೆಯ ಬಲ್ಲ ಮನಸ್ಸು ಗಮನಕ್ಕೇ ಬರುವುದಿಲ್ಲ.

ಪುಟ್ಟಿಯ ದಿನಚರಿ

ಅಮ್ಮ ಅಮ್ಮ ಎನುತಾಳೆ
ಕೂಗಿ ಕೂಗಿ ಅಳುತಾಳೆ
ಹತ್ತಿರ ಹೋಗಲು ನಗುತಾಳೆ
ಹಾಡಿ ಹಾಡಿ ಕುಣಿತಾಳೆ

ಹಾಲು ಬೇಕು ಅಂತಾಳೆ
ಕೊಟ್ಟರೆ ಹಾಲು ಚಲ್ತಾಳೆ
ಅಮ್ಮ ಪೆಟ್ಟು ಕೊಡುತಾಳೆ
ಪೆಟ್ಟಿಗೆ ಹೆದರಿ ಓಡ್ತಾಳೆ

ಮತ್ತೆ ಬಂದು ಕರಿತಾಳೆ
ಆಟ ಆಡು ಅಂತಾಳೆ
ಆಡಲು ಹೋದರೆ ಬೀಳ್ತಾಳೆ
ಬಿದ್ದು ಬಿದ್ದು ಏಳ್ತಾಳೆ

ಅಮ್ಮ ಅಡಿಗೆ ಮಾಡ್ತಾಳೆ
ಇವಳೂ ಹೋಗಿ ನೋಡ್ತಾಳೆ

ಕನ್ನಡಮ್ಮ

ಐದು ಕೋಟಿ ಮಕ್ಕಳ ತಾಯಿ ಕನ್ನಡಮ್ಮ ಇವಳ ಸ್ಥಿತಿಯ ನಾನೇನೆಂದು ಹೇಳಲಮ್ಮ ೫೦ ವಸಂತಗಳ ಕಳೆಯುತಿಹ ತಾಯಿ ಇವಳ ಬಹು ಮಕ್ಕಳದು ಬರಿಯ ಬಡಾಯಿ ಬೆರಳೆಣಿಕೆಯ ಮಕ್ಕಳಿಗಷ್ಟೇ ಗೊತ್ತು ಇವಳ ಪಾಡು ಬಹು ಮಕ್ಕಳು ಸೇರಿಹರು ಬೆಚ್ಚನೆ ಗೂಡು ಇವಳ ಸೆರಗಂಚೆಲ್ಲಾ ಹರಿದು ಹಂಚಿದೆ ನೋಡಿದಲ್ಲೆಲ್ಲಾ ತೇಪೆ ಹಚ್ಚಿದೆ ಪರರ ಮಕ್ಕಳು ಊಳಿದಿಹ ಸೀರೆ ಹರಿಯುತಿಹರು ಬಹು ಮಕ್ಕಳೆಲ್ಲಾ ಸುಮ್ಮನೆ ನೋಡುತಿಹರು

ಮುಂಬೈನ ಲೋಕಲ್ ಟ್ರೈನ್

ಮುಂಬಯಿನ ಲೋಕಲ್ ಟ್ರೈನ್ ಗಳಲ್ಲಿ ಪ್ರಯಾಣ ಮಾಡಿ ಪಡೆಯುವ ಅನುಭವ ಎಲ್ಲರೂ ಕಲಿಯಲೇಬೇಕಾದಂತಹ ಇನ್ನೊಂದು ಪಾಠವನ್ನು ಕಲಿಸುವಂತದ್ದು. ಇದರ ಅನುಭವ ಕವನ ರೂಪದಲ್ಲಿ ನನ್ನಿಂದ ನಿರೂಪಿಸಲ್ಪಟ್ಟಿತ್ತು. ಅದನ್ನು ಈ ಕೆಳಗೆ ಇರಿಸಿರುವೆ. ಇನ್ನೂ ಹೆಚ್ಚಿನ ಸ್ವಾರಸ್ಯಕರ ಮಾಹಿತಿಯನ್ನು ಕೆಳಗೆ ತಿಳಿಸಲು ಪ್ರಯತ್ನಿಸಿದ್ದೇನೆ. ಕವನವನ್ನೂ ಕೆಳಗೆ ಸೇರಿಸಿರುವೆ, ಓದಿ. ಈ ಹಿಂದೆಯೇ ಹೇಳಿರುವಂತೆ ಮುಂಬಯಿ ಒಂದು ದ್ವೀಪ. ಎಲ್ಲ ಕಡೆಯೂ ನೀರು ಸುತ್ತುವರಿದು ಭೂಮಿಯ ಭಾಗ ಬಹಳ ಕಡಿಮೆ. ಹಾಗಾಗಿ ವಸತಿಗಾಗಿ ಸಿಗುವ ಜಾಗ ಬಹಳ ಕಡಿಮೆ. ಅಲ್ಲದೇ ಇದು ದೇಶದ ವಾಣಿಜ್ಯ ರಾಜಧಾನಿಯಾಗಿ ಇಲ್ಲಿ ವ್ಯಾಪಾರ ಮತ್ತು ವ್ಯವಹಾರಕ್ಕಾಗಿ ಬರುವ ಜನರು ಬಹಳ. ದಿನಂಪ್ರತಿ ಒಂದು ಕೋಟಿಗೂ ಮಿಕ್ಕ ಜನರ ಸಂದಣಿ ಇದ್ದೇ ಇರುತ್ತದೆ. ಒಂದೆಡೆಯಿಂದ ಇನ್ನೊಂದೆಡೆಗೆ ಹೋಗಿಬರಲು ಲೋಕಲ್ ಟ್ರೈನ್ ಗಳನ್ನೇ ನಂಬುವುದು ಬಹಳವಾಗಿ ಇದು ಬಹಳ ಅತ್ಯವಶ್ಯಕವಾದ ಸಾರಿಗೆಯಾಗಿದೆ. ಒಂದು ಸಾವಿರ ಜನರನ್ನು ಹೊತ್ತೊಯ್ಯಲು ಅವಕಾಶವಿರುವ ಒಂದು ಗಾಡಿಗೆ ೫೦೦೦ ದಿಂದ ೬೦೦೦ ಜನರವರೆಗೂ ಹೊತ್ತೊಯ್ಯಬೇಕಾಗುತ್ತದೆ. ಅದರಲ್ಲಿ ಅಷ್ಟು ಸಾಮರ್ಥ್ಯವಂತೂ ಇದ್ದಂತಿದೆ. ಅದೂ ಕೂಡ, ಬೆಳಗ್ಗೆ ೩.೪೫ ಕ್ಕೆ ಪ್ರಾರಂಭವಾಗುವ ಸೇವೆ, ರಾತ್ರಿ ೨ ಘಂಟೆಗಳವರೆಗೂ ನಿರಂತರ ಸಾಗುತ್ತಲೇ ಇರುವಂತದ್ದುು. ಜನದಟ್ಟಣೆಯ ಸಮಯವಾದ ಬೆಳಗ್ಗೆ ೬ರಿಂದ ರಾತ್ರಿ ೧೧ ರವರೆಗೆ ಮೂರು ನಿಮಿಷಗಳ ಅಂತರದಲ್ಲಿ ಒಂದೊಂದು ಗಾಡಿಗಳು ಒಂದರ ಹಿಂದೊಂದರಂತೆ ಬಿಡುವಿಲ್ಲದೇ ಅಡ್ಡಾಡುತ್ತಲೇ ಇರುತ್ತವೆ.

ಕನ್ನಡ ವಿಕಿಪೀಡಿಯದಲ್ಲಿ 'ಅಕಿರಾ ಕುರೋಸಾವಾ'

[kn:ಅಕಿರಾ ಕುರೋಸಾವಾ] ಜಪಾನಿನ ಹೆಸರಾಂತ [kn:Category:ಚಿತ್ರರಂಗ|ಸಿನೆಮಾ ನಿರ್ದೇಶಕರು].

ಇವರ ಬಗ್ಗೆ ಮಾಹಿತಿ, ಇವರ ಸಿನೆಮಾಗಳ ಬಗ್ಗೆ ಚುಟುಕಾದ ಮಾಹಿತಿ ಇರುವುದು... ಸಾಧ್ಯವಾದಲ್ಲಿ ಓದಿ:

[kn:ಅಕಿರಾ ಕುರೋಸಾವಾ] - ಮುಖ್ಯ ಲೇಖನ
[kn:Category:ಕುರೋಸಾವಾ ಚಿತ್ರಗಳು|ಚಿತ್ರಗಳು] - ಕುರೋಸಾವಾರವರ ಚಲನಚಿತ್ರಗಳ ಬಗ್ಗೆ ಇರುವ ಲೇಖನಗಳ ಪಟ್ಟಿ.

ವಚನ ಚಿಂತನ: ಬಸವಣ್ಣ: ಬಿದಿರು ಆಗಬೇಕು

ಬಿದಿರಲಂದಣವಕ್ಕು ಬಿದಿರಲಿ ಸತ್ತಿಗೆಯಕ್ಕು ಬಿದಿರಲ್ಲಿ ಗುಡಿಯು ಗುಡಾರವಕ್ಕು ಬಿದಿರಲ್ಲಿ ಸಕಲ ಸಂಪದವೆಲ್ಲವು ಬಿದಿರದವರ ಮೆಚ್ಚ ನಮ್ಮ ಕೂಡಲಸಂಗಮದೇವ ಈ ವಚನವು ಬಿದಿರನ್ನು ಒಂದು ರೂಪಕವಾಗಿ ಬಳಸಿಕೊಂಡು ನಮ್ಮ ಬದುಕು ಹೇಗೆ ಇರಬೇಕು ಎಂಬ ಆಶಯವನ್ನು ಹೇಳುತ್ತಿದೆ. ಬಿದಿರು ಏನೇನೆಲ್ಲ ಆಗಬಹುದು- ದೊಡ್ಡವರನ್ನೋ ದೇವರನ್ನೋ ಮೆರೆಸುವ ಪಲ್ಲಕ್ಕಿಯಾಗುತ್ತದೆ, ಬಿಸಿಲು ಮಳೆಯಿಂದ ಕಾಪಾಡುವ ಛತ್ರಿಯಾಗುತ್ತದೆ, ಬಡವರ ಮನೆಯ ಚಾವಣಿಯೂಗುತ್ತದೆ, ಬಾವುಟದ ಕೋಲು ಕೂಡ ಆಗುತ್ತದೆ.

ಬದುಕು - ಈರುಳ್ಳಿ / balance sheet

ಈ ಕವನವನ್ನು ಕನ್ನಡಧ್ವನಿಯಲ್ಲಿ ಈಗಾಗಲೇ ಪ್ರಕಟಿಸಿರುವೆ. ಇಲ್ಲೂ ನಿಮ್ಮ ಮುಂದೆ ಇರಿಸುತ್ತಿರುವೆ. ತಿದ್ದುವಂತಿದ್ದರೆ ತಿದ್ದೋಣ ಬದುಕು ಈರುಳ್ಳಿಯಂತೆ (ನೀರುಳ್ಳಿ ಅಥವಾ ಉಳ್ಳಾಗಡ್ಡಿ) ಬಲು ಘಾಟು, ಕತ್ತರಿಸಲು ಕಣ್ಣಿನಲ್ಲಿ ನೀರು ಸುಲಿದಷ್ಟೂ ಪದರಗಳು ಗಟ್ಟಿಯಾದ ಸಾರವಿಲ್ಲವೇ ಇಲ್ಲ ತಿರುಳೇ ಇಲ್ಲದ ಸುರುಳಿ ಸವಿಯಲು ಬಲು ಆನಂದ ಜೊತೆಗೆ ಬಾಯಿ ವಾಸನೆ (ತಮಿಳಿನಲ್ಲಿ ಕೆಲವರ ತತ್ವಗಳನ್ನು ವೇಂಗಾಯ್ ಎಂದು ಆಡಿಕೊಳ್ಳುವುದಿದೆ)

ಗೋಪಿ ಸೈಕಲ್

ಗೋಪಿ ಸೈಕಲ್ ಗೋಪಿ ಅನ್ನೋ ಹುಡುಗನ್ನ್ ಸೈಕಲ್ ಪಾಪಿ ಕಳ್ಳ ಕದಿದ್ದ. ಗೋಪಿ ಎಲ್ಲಾ ಜಾಗದಲ್ ಹುಡುಕಿ ಬೆಪ್ಪನಾಗಿ ಬ೦ದಿದ್ದ. ಗೋಪಿ ಅತ್ಕೊ೦ಡ್ ಪೋಲಿಸ್ ಠಾಣೆಗೆ ತಾನೇ ಬೇಗ ಓಡಿದ್ದ. ಟೋಪಿ ಹಾಕಿದ್ ಪೋಲಿಸ್ ಮಾಮ ಅಲ್ಲೇ ಒಬ್ಬ ನಿ೦ತಿದ್ದ. ಡೊಳ್ಳು ಹೊಟ್ಟೆ ಬೆಳೆಸಿ ದಪ್ಪ ಮೀಸೆ ತಿರುಗಿಸಿ ನಿ೦ತಿದ್ದ. ಟೋಪಿ ಹಾಕಿದ್ ಪೋಲಿಸ್ ಮಾಮ೦ಗೆ ಎಲ್ಲಾ ಕಥೆಯ ಹೇಳಿದ್ದಾ. ಅದನ್ನ್ ಕೇಳ್ಳಿದ್ ಪೋಲಿಸ್ ಮಾಮ ಎಲ್ಲಾ ಕಡೆ ಹುಡಿಕಿದ್ದಾ.

ವಚನ ಚಿಂತನೆ: ಅಲ್ಲಮ: ಕೊಟ್ಟ ಕುದುರೆ

ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವರು ವೀರರೂ ಅಲ್ಲ ಧೀರರೂ ಅಲ್ಲ ಇದು ಕಾರಣ ನೆರೆ ಮೂರು ಲೋಕವೂ ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರೋ ಬಹುಶಃ ಮನುಷ್ಯ ಮಾತ್ರವೇ ತಾನು ಏನೋ ಅಗಬೇಕೆಂದು ಬಯಸುತ್ತ, ಆಗಲಿಲ್ಲವೆಂದು ಕೊರಗುತ್ತ ಇರುವ ಪ್ರಾಣಿ. ನನಗೆ ಸಿಕ್ಕ ಕುದುರೆಗಿಂತ ಇನ್ನು ಬೇರೆ ಕುದುರೆ ಸಿಕ್ಕಿದ್ದರೆ ಎಂದು ಬಯಸುತ್ತ, ಅಂಥ ಬಯಕೆಯ ಕುದುರೆ ಸಿಕ್ಕರೆ ಎಂದು ಆಶಿಸಿ ಹಲ್ಲಣವನ್ನು ಬೆನ್ನಮೇಲೆ ಹೊತ್ತು ತಿರುಗುತ್ತ ಇರುತ್ತೇವೆ. ಇದು ವೀರರ ಲಕ್ಷಣವೂ ಅಲ್ಲ, ಧೀರರ ಲಕ್ಷಣವೂ ಅಲ್ಲ.