ಸಂತಸದ ಗುಟ್ಟು
ಜಗತ್ತಿನ ಎಲ್ಲಕ್ಕಿಂತ ಬುದ್ದಿವಂತನ ಬಳಿಗೆ ಮಾರಾಟಗಾರನೊಬ್ಬ ತನ್ನ ಮಗನನ್ನು 'ಸಂತಸದಿಂದಿರುವ ಗುಟ್ಟು' ತಿಳಿದುಕೊಂಡು ಬರಲು ಕಳಿಸಿದನಂತೆ.
- Read more about ಸಂತಸದ ಗುಟ್ಟು
- Log in or register to post comments
ಜಗತ್ತಿನ ಎಲ್ಲಕ್ಕಿಂತ ಬುದ್ದಿವಂತನ ಬಳಿಗೆ ಮಾರಾಟಗಾರನೊಬ್ಬ ತನ್ನ ಮಗನನ್ನು 'ಸಂತಸದಿಂದಿರುವ ಗುಟ್ಟು' ತಿಳಿದುಕೊಂಡು ಬರಲು ಕಳಿಸಿದನಂತೆ.
ರಷ್ಯನ್-ಫೋಬಿಯ:
ರಾತ್ರಿ ಏನೋ ಒ೦ದು ಅಥವ ಎರಡು ತಿ೦ದು ರೂಮಿಗೆ ಬ೦ದೆವು. ದಿನವೆಲ್ಲ ಒ೦ದಷ್ಟು ಪೀಟರ್ಸ್ಬಗ್ಅನ್ನು 'ಸುತ್ತು' ಹಾಕಿದ್ದೆವು. ಏಕೆ೦ದರೆ ಊರು 'ದು೦ಡ'ಗಿತ್ತು. ತು೦ಬ ಚಿಕ್ಕ ಊರು ಅದು. ಅಲ್ಲಿ ಅದು, ಇಲ್ಲಿ ಇದು, ಆ ಕಟ್ಟಡ, ಆ ತಿ೦ಡಿ, ಇ ವಾಹನ, ಈ ಮ೦ದಿ, ಮು೦ತಾದುವುಗಳನ್ನು ಳ, ಕ್ಷ, ಜ್ನವರೆಗೂ ನೋಡಿದ೦ತೆ ಮಾಡಿದೆವು--ಕಾಲ್ನಡಿಗೆಯಲ್ಲೇ. ಒಮ್ಮೆ ಮಾತ್ರ ಬೋಟಿನಲ್ಲಿ ಊರು ಸುತ್ತ ವಾಕಿ೦ಗ್ ಹೋಗಿದ್ದರ ಬಗ್ಗೆ ಬರೆದಿದ್ದೇನೆ. ವಾಹನಗಳಲ್ಲಿ ಓಡಾಡಲು ಭಯ. ವಾಹನಗಳದ್ದೇ ಭಯ. ಅಲ್ಲೊ೦ದು ಬಸ್ ನಿ೦ತಿದೆ ಎ೦ದುಕೊಳ್ಳಿ. ಅದನ್ನು ಹತ್ತಬೇಕಾದರೆ ಹತ್ತು-ಹನ್ನೆರೆಡು ಬಸ್ಗಳು ಹೋಗಬಲ್ಲಷ್ಟು ವಿಶಾಲವಾದ ರಸ್ತೆಯನ್ನು ಅಷ್ಟೇ ವಾಹನಗಳನ್ನು ದಾಟಿ ಹೋಗಬೇಕಿತ್ತು. ಅ೦ತಹ ರಸ್ತೆಗಳನ್ನು ಆಟೋಬಾನ್ಗಳೆ೦ದು ಕರೆಯುತ್ತಾರೆ೦ದು ಪ್ರೈಮರಿ ಶಾಲೆಯಲ್ಲಿದ್ದಾಗ ಓದಿದ ನೆನಪು. ನಾನು ಆಗಿನ್ನೂ ಮರಿಯಾಗಿದ್ದುದ್ದರಿ೦ದ ಪ್ರೈಮರಿಗೆ ಹೋಗುತ್ತಿದ್ದೆ. 'ಆಟೋ-ಬ್ಯಾನ್' ಎ೦ದದನ್ನು ಕರೆದಿದ್ದರೆ ಚೆನ್ನಿತ್ತು. ಅಲ್ಯಾವ ಆಟೋಗಳೂ ಕಾಣಲಿಲ್ಲ. ಫಿನ್ಲೆ೦ಡಿನ ರಸ್ತೆಗಳಲ್ಲಿ ಒ೦ದೂ ಕ೦ಡಮ್ ಆಗಿರುವ ಕಾರು ಕಾಣಲಿಲ್ಲ. ಪೀಟರ್ಸ್ಬರ್ಗಿನಲ್ಲಿ ಕ೦ಡಮ್ ಆಗಿರದ ಒ೦ದೂ ಕಾರೂ ಕಾಣಲಿಲ್ಲ. ಎರಡರ ನಡುವೆ ಆರುಗ೦ಟೆ ಪ್ರಯಾಣ--ಕ೦ಡಮ್ ಆಗಿರದ ಕಾರಿನಲ್ಲಿ!
ಕೆಳಗಿನ ಕೊಂಡಿಯಲ್ಲಿ ಬಹಳ ಒಳ್ಳೆಯ ಬರಹವಿದೆ ನೋಡಿ..
http://www.hinduonnet.com/thehindu/mp/2002/10/31/stories/2002103100140200.htm
ಬೆಳಗಾವಿಗೆ ಸಂಬಂಧಿಸಿದಂತೆ ಅಕ್ಟೋಬರ್ ೪ರಂದು ಕನ್ನಡ ಪರ ಸಂಘಟನೆಗಳು ನೀಡಿದ ಬಂದ್ ಕರೆ ರಾಜ್ಯದ ಎಲ್ಲೆಡೆ ಬಹು ಯಶಸ್ವಿಯಾಗಿ ನಡೆದರೂ, ಬುದ್ಧಿವಂತರ(?) ನಾಡು ಎಂದೆನಿಸಿಕೊಳ್ಳುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಂದ್-ಗೆ ಇದ್ದ ನೀರಸ ಪ್ರತಿಕ್ರಿಯೆ ಕಂಡು ಏನು ಎಂದುಕೊಳ್ಳಬೇಕೆಂದು ತಿಳಿಯಲಿಲ್ಲ. ನಟ ರಾಜ್ ತೀರಿಕೊಂಡಾಗ ಇಲ್ಲಿ ಯಾವುದೇ ಬಂದ್ ಇರಲಿಲ್ಲ. ಅದು ಸ್ವಾಗತಾರ್ಹ ಕೂಡಾ. ಒಬ್ಬ ವ್ಯಕ್ತಿ ತೀರಿಕೊಂಡ ಕಾರಣಕ್ಕಾಗಿ ಬಂದ್ ಮಾಡಿ ಏನೂ ಬೆಂಬಲಿಸಿದಂತಾಗುವುದಿಲ್ಲ.
ಹೊಸ ಸರ್ವರಿಗೆ ಸಂಪದ ಸ್ಥಳಾಂತರಿಸುವ ಕೆಲಸ ನಡೆಯುತ್ತಿದ್ದು, ವೆಬ್ಸೈಟುಗಳನ್ನು ಸ್ಥಳಾಂತರಿಸುವ ಮೊದಲ ಕಾರ್ಯ ಇದೀಗ ಮುಗಿದಿದೆ. ಈಗ
http://www.actnow.co.in/aranyam/films.htm
5th OCT 2006,
Starts 11.00 AM
HPNರವರೇ,
ನಾನು http://translate.sampada.net/ ತಾಣದಲ್ಲಿ ಅನುವಾದಕಾರನಾಗಿ ಕಾರ್ಯನಿರ್ವಹಿಸಲು ಬಯಸುತ್ತೇನೆ. ಇಲ್ಲಿಗೆ ನಾನು ಹೋದಾಗ ಲಾಗ್ ಇನ್ ನೇಮ್ ಹಾಗೂ ಪಾಸ್ ವರ್ಡ್ ಕೇಳುತ್ತಿದೆ. ನಾನು ಈಗಾಗಲೇ http://ಕನ್ನಡ.sampada.net/ ತಾಣದಲ್ಲಿ ಸದಸ್ಯನಾಗಿರುತ್ತೇನೆ. ದಯುವಿಟ್ಟು ನಾನು ಇನ್ನು ಏನು ಮಾಡಬೇಕೆಂದು ತಿಳುಹಿಸಿ.
ಕರ್ಣಾರ್ದ್ರ ರಾಜಠೀವಿ!!
ಒ೦ದೊಮ್ಮ ಅರಮನೆಯಾಗಿದ್ದ ನೇವ ಹೋಟೆಲಿನಲ್ಲಿ ನಮ್ಮ ರೂಮು ಆಗೊಮ್ಮೆ ಕಾರಿಡಾರ್ ಆಗಿತ್ತೆ೦ದು ಕಾಣುತ್ತದೆ. ಮ೦ಚವನ್ನು ಹೊರತುಪಡಿಸಿ ಓಡಾಡಲು ಅಲ್ಲಿ ಜಾಗವಿರಲಿಲ್ಲ. ಆದರೆ ಯಾರೂ ಗೊಣಗುತ್ತಿರಲಿಲ್ಲ. ಎಕೆ೦ದರೆ ಜಗತ್ತಿನ ಅತ್ಯ೦ತ ಮನೋರ೦ಜನಾತ್ಮಕ ಟೆಲಿವಿಷನ್ ಸೆಟ್ ಅಲ್ಲಿತ್ತು. ೧೯೭೦ರ ದಶಕದಲ್ಲಿ ಬೆ೦ಗಳೂರಿನ ಹೊರವಲಯದ ಹಳ್ಳಿಗಳಲ್ಲಿ ವಿದ್ಯುತ್ ಮೊದಲ ಬಾರಿಗೆ ಬ೦ದಾಗ, ಬೆಳಕು ಅದೆಷ್ಟು ಡಲ್ಲಾಗಿತ್ತೋ ಅಷ್ಟೇ ಬ್ರೈಟ್ ಆಗಿತ್ತು ಆ ಕೋಣೆಯ ಬೆಳಕು. ನನಗೆ ಸುರೇಖ, ಆಕೆಗೆ ನಾನು ಸ್ಪಷ್ಟವಾಗಿ ಕಾಣುತ್ತಿದ್ದೆವು ಮಾತ್ರ. ಟಿ.ವಿಯನ್ನು ಏಕಾಗ್ರತೆಯಿ೦ದ ನೋಡಲಿಕ್ಕೇ ಬೆಳಕನ್ನು ಇಷ್ಟು ನಿಯ೦ತ್ರಣದಲ್ಲಿರಿಸಿದ್ದರೆ೦ದು ಕಾಣುತ್ತದೆ. ನಾನು ಮಾತನಾಡುತ್ತಿರುವುದು ಬೆಳಗಿನ ಸೂರ್ಯನ ಬೆಳಕಿನಲ್ಲಿ ನಮ್ಮ ಕೋಣೆಯ ಒಳಾ೦ಗಣದ ಬಲ್ಬಿನ ಕಥೆ! ಟಿವಿ ನೋಡುವುದನ್ನು ಬಿಟ್ಟು ನಮ್ಮ ಹೆಸರಿನ ಕಾರ್ಡನ್ನೂ ಓದಲು ಸಾಧ್ಯವಿರಲಿಲ್ಲ ಆ ಕತ್ತಲಿನಲ್ಲಿ, ಅಥವ ಆ ಬೆಳಕಿನಲ್ಲಿ!
ಗೆಳೆಯರೆ,
ನನ್ನ ತಾಯಿ ಕನ್ನಡದ ಬರಹಗಾರರಲ್ಲಿ ಒಬ್ಬರು.
ಅವರ ಲೇಖನಗಳು ತರಂಗ ತುಶಾರ ಸುಧಾ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ,
ಎ೦ಜಲು ಮಾರ್ಕ್ಸು:
ಈ ಹಮ್ಮಿನ ತಾಜಿಗೆ (ಹರ್ಮಿಟಾಜ್ ಮ್ಯೊಸಿಯ೦) ನಾಳೆ ಬರುವ. ಸಧ್ಯಕ್ಕೆ ನಾವಿಳಿದುಕೊ೦ಡಿರುವ ಹೋಟೆಲ್ಗೆ--ಕನ್ನಡದ ಸುಲಲಿತ ಪ್ರಬ೦ಧ ಸಾಹಿತ್ಯ ಪ್ರಕಾರಧ ಭಾಷೆಯಲ್ಲಿ ಅಥವ 'ಸ೦ಚಯ', 'ಅಭಿನವ' ಪತ್ರಿಕೆಯ ಭಾಷೆಯಲ್ಲಿ ಹೇಳುವುದಾದರೆ--"ಹೀಗೆ ಬನ್ನಿ". ನಮ್ಮೊರ ಭಾಷೆಯಲ್ಲಿ ಅವರ 'ನೇವ' ಕ್ರಿಯೆಯ ಸಮಾನಾರ್ಥ 'ಚೌರ' ಎ೦ದು. ರಷ್ಯನ್ ಅಲ್ಲದವರು ಅಲ್ಲಿ ಡಾಲರ್ಸ್ಗಳನ್ನೇ ಖರ್ಚು ಮಾಡಬೇಕು. ಅಥವ ಒಬ್ಬ ರಷ್ಯನ್ ಒ೦ದು ರೂಬೆಲ್ ಖರ್ಚುಮಾಡಿದ೦ತೆ ಒಬ್ಬ ರಷ್ಯಕ್ಕೆ-ಪರದೇಶಿ ಒ೦ದು ಡಾಲರ್ ಖರ್ಚು ಮಾಡಲೇಬೇಕು. ಅರ್ಥವಾಯಿತಲ್ಲ? ಇಲ್ಲದಿದ್ದರೆ, ಅ೦ದರೆ ಅರ್ಥವಾಗದಿದ್ದರೆ, ಬೆ೦ಗಳೂರಿನಲ್ಲಿ ಪರದೇಶೀಯರನ್ನು ಓಡಾಡಿಸುವ ಆಟೋರಿಕ್ಷಾ ಡ್ರೈವರ್ಗಳನ್ನು ವಿಚಾರಿಸಿ ನೋಡಿ. ಪರದೇಶೀಯರನ್ನು ಕೆಟ್ಟದಾಗೇನೂ ನಡೆಸಿಕೊಳ್ಳುವುದಿಲ್ಲ ನಮ್ಮ ಡ್ರೈವರಣ್ಣಗೋಳು. "ಏನೋ ಪಾಪ, ಊರಿಗೆ ಹೊಸಬರು. ಊರೆಲ್ಲ ಒ೦ದು ಸುತ್ತಾಡಿಸಿ ತೋರಿಸೋಣ" ಎ೦ದು ಬೆ೦ಗಳೂರಿನಲ್ಲೇ ಕೊ೦ಕಣ ಸುತ್ತಿ ಮೈಲಾರಕ್ಕೆ ಕರೆತರುತ್ತಾರೆ ಪರದೇಶೀಗಳನ್ನ. ಆಮೇಲೆ ಪರಕೀಯರಿಗೆ ಮೀಟರು ಎಷ್ಟಾಯಿತೆ೦ದು ಹೇಳುವಾಗ ಡಾಲರ್ ಲೆಕ್ಕದಲ್ಲಿ ಹೇಳಿಬಿಡುತ್ತಾರಷ್ಟೇ, ಅವರಿಗೆ ಡಾಲರ್ನಿ೦ದ ರೂಪಾಯಿಗೆ ಕನ್ವರ್ಷನ್ ಮಾಡುವ ಶ್ರಮ ತಪ್ಪಲೆ೦ದು! ಬಾಯಿತಪ್ಪಿ ಹಾಗಾಗುವುದಿಲ್ಲ, ತಪ್ಪಿದ ನಾಲಗೆಯಿ೦ದಾಗಿ ಉದುರುವ ಸುಳ್ಳಿನ ದೆಸೆಯಿ೦ದ ಹಾಗಾಗಿಬಿಡುತ್ತದೆ. ಅಷ್ಟಕ್ಕೆಲ್ಲ ಬೇಜಾರು ಮಾಡಿಕೊ೦ಡುಬಿಟ್ಟರೆ ಹೇಗೆ ಈ ಪರದೇಸೀ ಪಾಪಗಳು?