ವಚನ ಚಿಂತನ: ೫: ಮನಸ್ಸು ಘನ
ಸಮುದ್ರ ಘನವೆಂಬೆನೆ ಧರೆಯ ಮೇಲಡಗಿತ್ತು ಧರೆ ಘನವೆಂಬೆನೆ ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು ನಾಗೇಂದ್ರನ ಘನವೆಂಬೆನೆ ಪಾರ್ವತಿಯ ಕಿರುಗುಣಿಕೆಯ ಮುದ್ರಿಕೆಯಾಯಿತ್ತು ಅಂತಹ ಪಾರ್ವತಿಯ ಘನವೆಂಬನೆ ಪರಮೇಶ್ವರನ ಅರ್ಧಾಂಗಿಯಾದಳು ಅಂತಹ ಪರಮೇಶ್ವರನ ಘನವೆಂಬೆನೆ ನಮ್ಮ ಕೂಡಲಸಂಗನ ಶರಣರ ಮನದ ಕೊನೆಯ ಮೊನೆಯ ಮೇಲಡಗಿದನು.
ಮನುಷ್ಯನ ಮನಸ್ಸನ್ನು ಕುರಿತು ವಚನಕಾರರು ಬಹಳಷ್ಟು ಹೇಳಿದ್ದಾರೆ. ಸಮುದ್ರ ದೊಡ್ಡದು. ಆದರೆ ಅದು ಭೂಮಿಯಲ್ಲಿ ಅಡಗಿದೆ. ಭೂಮಿ ದೊಡ್ಡದು. ಆದರೆ ಅದು, ಪುರಾಣಗಳು ಹೇಳುವಂತೆ, ಆದಿಶೇಷನ ತಲೆಯ ಮೇಲೆ ಅಡಗಿದೆ. ಭೂಮಿಯನ್ನು ಹೊತ್ತ ಆದಿಶೇಷ ದೊಡ್ಡವನು. ಆದರೆ ಅವನು ಪಾರ್ವತಿಯ ಕಿರು ಬೆರಳ ಉಂಗುರದಲ್ಲಿರುವ ಡಿಸೈನು ಅಷ್ಟೆ. ಪಾರ್ವತಿ ದೊಡ್ಡವಳು. ಆದರೆ ಅವಳು ಪರಮೇಶ್ವರನ ಅರ್ಧಾಂಗಿ, ಅರ್ಧ ಶರೀರ ಅಷ್ಟೆ. ಪರಮೇಶ್ವರ ಎಲ್ಲರಿಗಿಂತ, ಎಲ್ಲಕ್ಕಿಂತ ದೊಡ್ಡವನು. ಆದರೆ ಅವನು ಶರಣರ ಮನಸ್ಸಿನ ಮೊನೆಯ ತುದಿಯಲ್ಲಿ ಅಡಗಿದ್ದಾನೆ.
- Read more about ವಚನ ಚಿಂತನ: ೫: ಮನಸ್ಸು ಘನ
- 1 comment
- Log in or register to post comments