ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಲಸಿನಕಾಯಿ ಕೊಟ್ಟೆಯೂ, "ಏಕೀಕರಣ" ಪುರಾಣವೂ

     ಸಂಪದ ಓದುತ್ತಾ ಕುಳಿತಿದ್ದವನನ್ನು ನೋಡಿದ ನನ್ನಾಕಿ "ಎಲಾ ಇವರ! ಎಷ್ಟು ಹೊತ್ತಿಂದ ಲ್ಯಾಪ್‌ಟಾಪ್ ಮುಂದೆ ಕೂತು ನನ್ನನ್ನೂ ಮರೆತಿದ್ದಾರಲ್ಲ" ಅಂತ ಯೋಚಿಸಿ, ಸುಮ್ಮನಿರಲಾರದೆ, "ಇವತ್ತು ಏನು ಅಡುಗೆ ಮಾಡಲಿ?" ಅಂತ ಕೇಳಬೇಕೆ?! ಇತ್ತೀಚಿಗೆ ಸಂಪದದಲ್ಲಿ ನಡೆಯುತ್ತಿರುವ "ಕನ್ನಡದ ಏತ್ವಗಳು, ಕಾಗುಣಿತ ಕಲಿತದ್ದು" ಇತ್ಯಾದಿ ಚರ್ಚೆಗಳ ಬಗ್ಗೆಯೇ ಏನೋ ಯೋಚಿಸಿ ಟೈಪಿಸುತ್ತಾ ಕುಳಿತವನು, ಅದೆಲ್ಲಿಂದ ಹೊಳೆಯಿತೋ ನನಗೇ ಗೊತ್ತಿಲ್ಲ, "ಕೊಟ್ಟೆ ಮಾಡು" ಅಂದೆ. ಒಂದು ಕ್ಷಣ ತಬ್ಬಿಬ್ಬಾದ ನನ್ನಾಕಿ "ಅಯ್ಯೋ ರಾಮ; ಅದೇನದು ಕೊಟ್ಟೆ? ನಾನು ಕೇಳಿದ್ದು ಅಡುಗೆಯ ಬಗ್ಗೆ. ಹೋಗೀ ಹೋಗೀ ನಿಮ್ಮನ್ನು ಕೇಳಿದ್ನಲ್ಲಾ..." ಅಂತಂದಳು.

ಅಜ್ಜ ಎಂದೊಡನೆ....

ಅಜ್ಜ ಎಂದೊಡನೆ - ನರೆಗೂದಲು, ಕುರುಚಲು ಗಡ್ಡ,
ಎಳೆಯ ಕೆನ್ನೆಗುಜ್ಜಿ ತುರಿಸುತ್ತಿದ್ದ ನೆನಪು.
ಒಳಮನೆಯಲ್ಲಿ ಅವರ ಅಗ್ನಿಹೋತ್ರದ ಜ್ವಾಲೆ
ನಡುಮನೆಯಲ್ಲಿ ನನ್ನ ಮುಖದ ಮೇಲೆಲ್ಲ ಕುಣಿದ ನೆನಪು.

ಕರ್ನಾಟಕ ಕ್ರಿಕೆಟ್ - ೧

ನಿನ್ನೆ ಕರ್ನಾಟಕ - ತಮಿಳುನಾಡು ತಂಡಗಳ ನಡುವಿನ ಪಂದ್ಯದ ಬಗ್ಗೆ ಸಂಪದದಲ್ಲಿ ಪ್ರತಿಕ್ರಿಯೆ ಇತ್ತು. ಸಂಪದದಲ್ಲಿ 'ಕರ್ನಾಟಕ ಕ್ರಿಕೆಟ್' ಬಗ್ಗೆ ಓದಿ ಬಹಳ ಆನಂದವಾಯಿತು. ಸಣ್ಣಂದಿನಿಂದಲೂ ರಣಜಿ ಪಂದ್ಯಗಳನ್ನು ಬಹಳ ಆಸಕ್ತಿಯಿಂದ ಗಮನಿಸುತ್ತ ಬಂದಿದ್ದೇನೆ. ರಣಜಿ ಟ್ರೋಫಿ, ಕರ್ನಾಟಕ ಕ್ರಿಕೆಟ್ ಮತ್ತು ಕೆಲವು ಆಟಗಾರರ ಬಗ್ಗೆ ಸಂಪದದಲ್ಲಿ ನನಗೆ ತಿಳಿದಷ್ಟು ಓದುಗರೊಂದಿಗೆ ಹಂಚಿಕೊಳ್ಳುತ್ತೇನೆ.

ವೀಕ್ಷಕ ವಿವರಣೆ - ಆಗ ಬೆಂಗಳೂರು ಮತ್ತು ಧಾರವಾಡ ಆಕಾಶವಾಣಿ ಕೇಂದ್ರಗಳಲ್ಲಿ ಕರ್ನಾಟಕದಲ್ಲಿ ನಡೆಯುತ್ತಿದ್ದ ಎಲ್ಲಾ ರಣಜಿ ಪಂದ್ಯಗಳ ವೀಕ್ಷಕ ವಿವರಣೆ ಕನ್ನಡದಲ್ಲಿ ಇರುತ್ತಿತ್ತು. ನನಗೆ ಸಮೀಪವಿದ್ದ ಮಂಗಳೂರು ಆಕಾಶವಾಣಿ ಕೆಲವೊಂದು ಆಯ್ದ ಪಂದ್ಯಗಳ ವೀಕ್ಷಕ ವಿವರಣೆಯನ್ನು ಮಾತ್ರ ಪ್ರಸಾರ ಮಾಡುತ್ತಿತ್ತು. ಕಷ್ಟದಿಂದ ಬೆಂಗಳೂರು ಅಥವಾ ಧಾರವಾಡ ಕೇಂದ್ರಗಳ ಸಿಗ್ನಲ್ ಸಿಗುತ್ತಿತ್ತು. ಆದರೂ ಬಿಡದೆ ವೀಕ್ಷಕ ವಿವರಣೆ ಕೇಳುವ ಗೀಳು ಹತ್ತಿತ್ತು. "ಮತ್ತೊಮ್ಮೆ ರಘುರಾಮ್ ಭಟ್, ಈ ಬಾರಿ ಕ್ರೀಸ್ ಹಿಂದಿನಿಂದ ಎಸೆದ ಎಸೆತ, ಆಫ್ ಸ್ಟ್ಂಪಿನ ಹೊರಗೆ ಪುಟಿದು ಮತ್ತಷ್ಟು ಹೊರಕ್ಕೆ ತೆರಳುತ್ತಿದ್ದ ಚೆಂಡನ್ನು ಹರಿಹರನ್ ಆಡದೆ ಹಾಗೆ ಬಿಟ್ಟಿದ್ದಾರೆ. ಚೆಂಡು ನೇರವಾಗಿ ಸದಾನಂದ್ ವಿಶ್ವನಾಥ್ ಕೈಗೆ..." ಹೀಗಿರುತ್ತಿತ್ತು ಕನ್ನಡ ವೀಕ್ಷಕ ವಿವರಣೆ. ಇನ್ನೆಲ್ಲಿ ಅದನ್ನು ಕೇಳುವ ಭಾಗ್ಯ?

ನುಡಿಮುತ್ತುಗಳು - ಪ್ರಸ್ತುತ ಅಪ್ರಸ್ತುತಗಳ ನಡುವೆ

[:http://sampada.net/user/shyam_kishore|ಶ್ಯಾಮ್ ಕಿಶೋರ್ ರವರು] ಕೆಲವು ದಿನಗಳಿಂದ ಸಂಪದದಲ್ಲಿ ಬಹಳ ಚೆನ್ನಾಗಿರುವ [:http://sampada.net/quotes/1261|ಕೆಲವು ನುಡಿಮುತ್ತುಗಳನ್ನ ಹಾಕ್ತಾ ಇದ್ದಾರೆ]. ಅದರಲ್ಲಿ ಆಲ್ಬರ್ಟ್ ಐನ್‍ಸ್ಟೈನ್ ರ ಕೆಲವು ನುಡಿಗಳು ನನಗೆ ಬಹಳ ಇಷ್ಟವಾದವು. ಅವನ್ನೋದುವಾಗ ಓ ಎಲ್ ಎನ್ ಸ್ವಾಮಿಯವರು ಈ ಹಿಂದೆ ಬರೆದಿದ್ದ [:http://sampada.net/kannada/archive/52|ಝೆನ್ ಕಥೆಗಳು ನೆನಪಿಗೆ ಬರುತ್ತೆ].

ಆಲ್ಬರ್ಟ್ ಐನ್‍ಸ್ಟೈನ್ ರವರ ಈ ಮಾತು ಚಿಂತನೆಯಲ್ಲಿ ಮುಳುಗಿಸಿಬಿಡುತ್ತದೆ:

ಕಲ್ಪನೆ ಮತ್ತು ಕನಸುಗಳು ಬರಿಯ ತಿಳುವಳಿಕೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ.

- ಆಲ್ಬರ್ಟ್ ಐನ್‍ಸ್ಟೈನ್

ಹೀಗೊಂದು ನುಡಿಮುತ್ತು ಕೇಳಿ ನಿಮಗೂ ಪ್ರಸ್ತುತ, ಅಪ್ರಸ್ತುತಗಳ ನಡುವೆ ಅವಲೋಕನ ಮಾಡಿ ಚಿಂತನೆ ಮಾಡುವಂತಾಗಿದೆಯೋ? ಹಾಗೊಂದು ಇದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ ನೋಡೋಣ!

ಸಂಪದದಲ್ಲಿ ತಾಂತ್ರಿಕ ಅನುವಾದ (ಸರತಿಯ ಸಾಲು ಭರತಿ!)

ಅನೇಕ ದಿನಗಳಿಂದ ಸಂಪದದಲ್ಲಿ ತಾಂತ್ರಿಕ ಅನುವಾದ ಮಾಡುತ್ತಿದ್ದೇನೆ.
ಅಲ್ಲಿ
ನಾನು ಬಳಸಿರುವ ಶಬ್ದಗಳು

ಚಲ್ತಾ ಹೈ....ಬಿಡಿ ಸಾರ್ !

ಈಗೇನು ಇಂದಿನ ದಿನಗಳಲ್ಲಿ 'ಚಲ್ತಾ ಹೈ....ಬಿಡಿ ಸಾರ್ '! ಎನ್ನುವ ಮಾತು ಕೇಳಕ್ಕೇ ಬೇಜಾರು !
ಮೊನ್ನೆ, ಪೆನ್ಷನ್ ತೊಗೊಳಕ್ಕೆ ಎಸ್.ಬಿ.ಐ ಗೆ ಹೋಗಿದ್ದೆ. ಮಧ್ಯದಲ್ಲೇ ಕಂಪ್ಯೂಟರ್ ಕೈಕೊಡ್ತು. ಪಿ.ಪಿ.ಎಫ್ ಗೆ ಹಣ ಕಟ್ಟಬೇಕಿತ್ತು. 'ಬೇಗ ಏನಾದ್ರು ಮಾಡಿ', ಅಂದರೆ ಅಲ್ಲಿನ ಅಧಿಕಾರಿ ಹೇಳ್ತಾರೆ. ಚಲ್ತಾ ಹೈ....ಬಿಡಿ ಸಾರ್ !