ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಚನ ಚಿಂತನೆ: ಅಲ್ಲಮ: ನಾಲ್ಕು ದ್ವೀಪಗಳು

ವಚನಗಳು ಕೇವಲ ಧರ್ಮದ ಕಂತೆಗಳಲ್ಲ. ಚೆಲುವಾದ ಕವಿತೆಗಳೂ ಅಲ್ಲ. ನಮ್ಮ ಡೈಲಿ ಲೈಫಿಗೆ ಅಗತ್ಯವಾದ ಚಿಂತನೆಯ ಆಹಾರಗಳು. ವಚನಗಳನ್ನು ನಾನು ಅರ್ಥಮಾಡಿಕೊಂಡ ರೀತಿಯಲ್ಲಿ ನಿಮ್ಮೊಡನೆ ದಿನವೂ ಒಂದಿಷ್ಟು ಹಂಚಿಕೊಳ್ಳುವುದು ಈ ಮಾಲೆಯ ಉದ್ದೇಶ. ಇಂದು ಅಲ್ಲಮನ ವಚನ ಕುರಿತು ಬರೆದಿದ್ದೇನೆ. ಅಲ್ಲಮ ಹನ್ನೆರಡನೆಯ ಶತಮಾನದಲ್ಲಿ ಬದುಕಿದ್ದ ಅನುಭಾವಿ, ಚಿಂತಕ. ತನು ಒಂದು ದ್ವೀಪ ಮನ ಒಂದು ದ್ವೀಪ

ಶುದ್ಧ ಕನ್ನಡ?

ನ್ನಡದ ಆಡು ಮಾತು ಬೇರೆ ಭಾಷೆಯ ಅನೇಕ ಪದಗಳನ್ನು ಸಹಜವಾಗಿ ಒಳಗೊಳ್ಳುತ್ತದೆ. ಮಾತನಾಡುವಾಗ, ಕೇಳಿಸಿಕೊಳ್ಳುವಾಗ ಇದು ವಿಚಿತ್ರ ಅನ್ನಿಸುವುದಿಲ್ಲ. ಆದರೆ ಬರೆಯುವ ಕನ್ನಡ ಮಾತ್ರ ಅತ್ಯಂತ ಪ್ಯೂರ್ ಆಗಿರಬೇಕು ಅನ್ನುವ ಭ್ರಮೆ ನಮಗಿದೆ. ಹೌದೆ?

ಹೊಸ ಸದಸ್ಯರಿಗೆ ಸ್ವಾಗತ

ಹೊಸ ಸದಸ್ಯರಿಗೆ ಸ್ವಾಗತ!

ಈ ತಾಣವನ್ನು ಉಪಯೋಗಿಸುವ ಮುನ್ನ FAQ ಓದಿ. ಉಪಯೋಗಿಸುವಾಗ ಏನಾದರೂ ತೊಂದರೆ ಕಂಡು ಬಂದರೆ ಅಥವಾ ಉಪಯೋಗಿಸುವಲ್ಲಿ ಏನಾದರೂ ಕ್ಲಿಷ್ಟಕರವೆನಿಸಿದರೆ ತಪ್ಪದೇ ಗಮನಕ್ಕೆ ತನ್ನಿ. ನೀವಿಲ್ಲಿಗೆ ಬಂದಿರುವಿರಾದ್ದರಿಂದ ನಿಮಗಾಗಲೇ 'ಸಂಪದ'ದ ಬಗ್ಗೆ ತಿಳಿದಿರುವುದೆಂದು ಭಾವಿಸುತ್ತೇನೆ.

ಕರಾಳದಿನ

ಓದುಗರೇ, ನೋಡಿ ಒಂದು ಮಳೆ ಹೇಗೆ ಇಡೀ ನಗರವನ್ನು ಮತ್ತು ಅಲ್ಲಿರುವ ೧ ಕೋಟಿಗೂ ಮಿಕ್ಕ ಜನರನ್ನು ನಿರ್ವಿಣ್ಣರನ್ನಾಗಿ ಮಾಡಿ 'ಹುಲುಮಾನವ' ಎಂಬ ಮಾತನ್ನು ಹೇಗೆ ಸ್ಪಷ್ಟೀಕರಿಸಿತು ಅಂತ. ಒಂದೇ ಏಟಿಗೆ ನರಕದರ್ಶನ. ನಿಸರ್ಗ ತನ್ನ ವಿಶ್ವರೂಪವನ್ನು ತೋರಿಸಿದೆ. ನಾನು ನಿಮ್ಮ ಮುಂದೆ ಇಡುತ್ತಿರುವ ಸತ್ಯ - ನಾನು ಕಂಡದ್ದು, ಅನುಭವಿಸಿದ್ದು.

ಈ ಸಮಯಕ್ಕೆ ತಕ್ಕನಾದ ಒಂದು ಹಿಂದಿ ಹಾಡು - 'ರೋಜ್ ಶಾಮ್ ಆತೀ ಥಿ ಮಗರ್ ಓ ವೈಸಾ ನ ಥಿ'.

ಕರಾಳದಿನ

ಓದುಗರೇ, ನೋಡಿ ಒಂದು ಮಳೆ ಹೇಗೆ ಇಡೀ ನಗರವನ್ನು ಮತ್ತು ಅಲ್ಲಿರುವ ೧ ಕೋಟಿಗೂ ಮಿಕ್ಕ ಜನಗಳನ್ನು ನಿರ್ವಿಣ್ಣರನ್ನಾಗಿ ಮಾಡಿ ಹುಲುಮಾನವ ಎಂಬ ಮಾತನ್ನು ಹೇಗೆ ಸ್ಪಷ್ಟೀಕರಿಸಿತು ಅಂತ. ಒಂದೇ ಏಟಿಗೆ ನರಕದರ್ಶನ. ನಿಸರ್ಗ ತನ್ನ ವಿಶ್ವರೂಪವನ್ನು ತೋರಿಸಿದೆ. ನಾನು ನಿಮ್ಮ ಮುಂದೆ ಇಡುತ್ತಿರುವ ಸತ್ಯ - ನಾನು ಕಂಡದ್ದು, ಅನುಭವಿಸಿದ್ದು. ಈ ಸಮಯಕ್ಕೆ ತಕ್ಕನಾದ ಒಂದು ಹಿಂದಿ ಹಾಡು - ರೋಜ್ ಶಾಮ್ ಆತೀ ಥಿ ಮಗರ್ ಓ ವೈಸಾ ನ ಥಿ.

ಹಿಗಿಟ್ಟಾ

#ಮಲೆಯಾಳಂ ಮೂಲ : ಎನ್. ಎಸ್. ಮಾಧವನ್

ಕನ್ನಡ ಅನುವಾದ : ಎನ್. ಎ. ಎಂ. ಇಸ್ಮಾಯಿಲ್

e-mail: namismail @ rediffmail.com

***

ಮೂಲ ಕರ್ತೃ ಪರಿಚಯ

ಎನ್.ಎಸ್. ಮಾಧವನ್ ಮಲೆಯಾಳಂನ ಅತಿ ವಿಶಿಷ್ಟ ಕತೆಗಾರ. ಆಧುನಿಕ ಮಿಥಕಗಳನ್ನು ಸೃಷ್ಟಿಸುವ ಅವರ ಕಥನ ಶೈಲಿಗೆ ಮಾರು ಹೋಗದವರೇ ಇಲ್ಲ. ಪ್ರಸ್ತುತ ಕತೆ ಮಲಯಾಳ ಮನೋರಮಾ ಆರಿಸಿದ ಶತಮಾನದ ಹತ್ತು ಅತ್ಯುತ್ತಮ ಮಲೆಯಾಳಂ ಕತೆಗಳಲ್ಲಿ ಒಂದು. 1948ರಲ್ಲಿ ಹುಟ್ಟಿದ ಮಾಧವನ್ ವಿದ್ಯಾರ್ಥಿಯಾಗಿದ್ದಾಗಲೇ ಕತೆಗಳ ಮೂಲಕ ಹೆಸರು ಮಾಡಿದ್ದರು. 1970ರಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಮಾತೃಭೂಮಿ' ಪತ್ರಿಕೆ ನಡೆಸಿದ ಸ್ಪರ್ಧೆಯಲ್ಲಿ ಮಾಧವನ್ ಅವರ ಕತೆ 'ಶಿಶು' ಮೊದಲ ಬಹುಮಾನ ಪಡೆದಿತ್ತು.. 1981ರಲ್ಲಿ ಮೊದಲ ಕಥಾಸಂಕಲನ 'ಚೂಳೈಮೇಡಿಲೆ ಶವಂಙಳ್' ಪ್ರಕಟವಾಯಿತು . 1991ರಲ್ಲಿ 'ಹಿಗಿಟ್ಟಾ', 1996ರಲ್ಲಿ 'ತಿರುತ್ತ್', 2000ದಲ್ಲಿ 'ಪರ್ಯಾಯ ಕಥಗಳ್' ಬೆಳಕು ಕಂಡವು. ಎರಡು ವರ್ಷದ ಹಿಂದಷ್ಟೇ ಇವರ ಕಾದಂಬರಿ ಲಂತನ್ ಬತ್ತೇರಿಯಿಲೆ ಲೂತಿಯಾನಿಗಳ್ ' ಪ್ರಕಟವಾಗಿದೆ. 1975ರಲ್ಲಿ ಐಎಎಸ ಪಾಸ್ ಮಾಡಿದ ಮಾಧವನ್ ಈಗ ಬಿಹಾರ್ ಕೇಡರ್ ನ ಹಿರಿಯ ಐಎಎಸ್ ಅಧಿಕಾರಿ.

***

ಹೀಗೊಂದು ಮಾರವಾಡಿ ಸಂಸಾರ

ಇತ್ತೀಚೆಗೆ ನಾನು ಬೆಂಗಳೂರಿನಿಂದ ಮುಂಬಯಿಗೆ ಟ್ರೈನಿನಲ್ಲಿ ಪ್ರಯಾಣ ಮಾಡುತ್ತಿದ್ದೆ. ಉದ್ಯಾನ್ ಎಕ್ಸ್~ಪ್ರೆಸ್~ನಲ್ಲಿ ತುಂಬಾ ಜನ ಗುಜರಾತಿನ ಪ್ರಾಂತ್ಯಕ್ಕೆ ಹೋಗುವವರು ಇರುತ್ತಾರೆ. ಬೆಂಗಳೂರಿನಿಂದ ಮುಂಬಯಿಗೆ ಬಂದು ನಂತರ ಗುಜರಾತಿನ ಕಡೆಗೆ ಹೋಗುತ್ತಾರೆ - ಏಕೆಂದರೆ ಬೆಂಗಳೂರಿನಿಂದ ವಾರಕ್ಕೆ ಎರಡು ದಿನಗಳು ಮಾತ್ರ ನೇರ ಗಾಡಿ ಇರೋದು ಮತ್ತು ಅದರಲ್ಲಿ ಟಿಕೇಟು ಸಿಗೋದು ತುಂಬಾ ಕಷ್ಟ ಅಂತೆ.

ಮಂಕುತಿಮ್ಮನ ಕಗ್ಗ

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ । ಚಿನ್ನದಾತುರಕಿಂತ ಹೆಣ್ಣುಗಂಡೊಲವು ।। ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ । ತಿನ್ನುವುದದಾತ್ಮವನೆ -- ಮಂಕುತಿಮ್ಮ ।।

ಮುಂಬೈ ಮಳೆ

ಜೂನ್ ಮಾಹೆಯ ಎರಡನೆಯ ವಾರ ಮುಂಬಯಿಯಲ್ಲಿ ಖುಷಿ ಆಲ್ಫೊನ್ಸೋ ಮಾವು ಒಂದೆಡೆ ಸವಿಯಲು ಪರಮಾಯಿಷಿ ಇನ್ನೊಂದೆಡೆ ಧಾರಾಕಾರ ವರ್ಷಾಧಾರೆಯ ಸಂತಸ ಮತ್ತೊಂದೆಡೆ ಅಸ್ತವ್ಯಸ್ತದ ಜನಜೀವನ ನೀರಸ ಮಧ್ಯಾಹ್ನ ೧೨ಕ್ಕೂ ಕತ್ತಲೆ ತುಂಬುವ ಮಳೆಗಾಲ ತೊಗಲಿನ ಚಪ್ಪಲಿ ಬೂಟುಗಳಿಗೆ ವಿಶ್ರಾಂತಿಕಾಲ ಪ್ಲಾಸ್ಟಿಕ್ ಪಾದುಕೆ ಛತ್ರಿಗಳದೇ ಜಾಲ ಇದಿಲ್ಲದಿರುವವರಿಗೆ ಇಲ್ಲಿಲ್ಲ ಉಳಿಗಾಲ ಗಂಡು ಹೆಣ್ಣು ಭೇದವಿಲ್ಲದೆ ಏರಿಸಿಹರು ಪ್ಲಾಸ್ಟಿಕ್ಕಿನ ದಿರಿಸು