ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅರಣ್ಯ ನಾಶ ಮಾಡಿದ ಮಗು ಮೇಲೆ ಕೇಸು

ಬೊಗಳೂರು, ಡಿ.21- ಯಾರಾದರೂ "ಹೋದ ಜನ್ಮದ ಪಾಪದ ಫಲ" ಇದು ಅಂತೆಲ್ಲಾ ಬೊಗಳೆ ಬಿಡುವುದರ ಹಿಂದಿನ ಕಳಕಳಿಗೆ ಪುಷ್ಟಿ ದೊರೆತಿದ್ದು, ಆದರೆ ಇಷ್ಟು ಬೇಗನೆ ಶಿಕ್ಷೆಯಾಗುತ್ತದೆ ಎಂಬುದು ಯೋಚನೆಗೆ ನಿಲುಕದ ಸಂಗತಿಯಾಗಿತ್ತು. (bogaleragale.blogspot.com)

ಕನ್ನಡ ವಿಶ್ವಕೋಶಕ್ಕೆ ನಿಮ್ಮ ಕಾಣಿಕೆ

ಮಾನ್ಯರೆ,

ಕನ್ನದ ವಿಶ್ವಕೋಶ (http://kn.wikipedia.org/wiki)ಈಗ ೪೨೦೦ಕ್ಕೂ ಅಧಿಕ ಲೇಖನಗಳನ್ನು ಹೊಂದಿದೆ. ಈ ವಾರ, ಕರ್ನಾಟಕದ ಜೀವನದಿ ಕಾವೇರಿಯ ಮೇಲಿನ ಲೇಖನವನ್ನು ಸಂಸ್ಕರಿಸಲಾಗುತ್ತಿದೆ. ಬನ್ನಿ ನೀವು ಬಾಗವಹಿಸಿ ಕನ್ನದ ವಿಶ್ವಕೋಶ ಬೆಳೆಯಲು ನೀವೂ ಸಹಕರಿಸಿ.

ಮೈಸೂರಿನ ಬಹುರೂಪಿ: Culture - Agriculture

ಬಹುರೂಪಿ: ಸಂಸ್ಕೃತಿ - ಕೃಷಿ ಸಂಸ್ಕೃತಿ ಸಮ್ಮೇಳನದಲ್ಲಿ ಡಾಕ್ಟರ್ ಸುಭಾಷ್ ಪಾಳೇಕರ್ ಅಧ್ಯಕ್ಷತೆಯಲ್ಲಿ ನಡೆದ ವಿಚಾರಸಂಕಿರಣ ನನ್ನ ಕುತೂಹಲವನ್ನು ಕೆರಳಿಸಿತ್ತು. ಡಾಕ್ಟರ್ ಪಾಳೇಕರ್ ಮತ್ತು ರಾಜಾಸ್ಥಾನದ ರಾಜೇಂದರ್ ಸಿಂಗ್ ಕೂಡ ಉಪಸ್ಥಿತರಿದ್ದದ್ದು ವಿಚಾರಸಂಕಿರಣಕ್ಕೆ ವಿಶೇಷ ಮೆರಗು ತಂದಿತ್ತು. ಸಮ್ಮೇಳನದಲ್ಲಿ ಬಹಳಷ್ಟು ರಸವತ್ತಾದ ಸಂಗತಿಗಳು ಕಂಡುಬಂತು.ಆದರೆ ಹಲವು ಕಾರಣಗಳಿಂದಾಗಿ ಕೆಲವು ಸೂಕ್ಷ್ಮವಿಚಾರಗಳು ಚರ್ಚೆಗೆ ಬರಲಿಲ್ಲ. ಅದೀನೇ ಇರಲಿ, ಇದು ಸಮ್ಮೇಳನದ ನಂತರ ಮನಸ್ಸಿಗೆ ಒಂದು ಯೋಚನೆ.

ವಿ.ಸೂ: ಇಲ್ಲಿ ರೈತ ಅಂದರೆ ಅಷ್ಟೋ ಇಷ್ಟೋ ಓದಿರುವ, ತಕ್ಕ ಮಟ್ಟಿಗೆ ಅನುಕೂಲತೆಗಳನ್ನು ಪಡೆದುಕೊಂಡು, ರೈತ ಶಿಬಿರ, ರೈತ ಸಂಘಟನೆ ಮುಂತಾದವುಗಳಲ್ಲಿ ಪಾಲ್ಗೊಳ್ಳುವಂತಹಾ ರೈತ. ಕಡಿಮೆ ಭೂಮಿಯಿದ್ದು (ಕೆಲವೊಮ್ಮೆ ಭೂಮಿಯೂ ಇಲ್ಲದೇ), ಓದು ಬರಹ ತಿಳಿಯದೇ, ಗ್ರಾಮ ಕುಗ್ರಾಮಗಳಲ್ಲಿ ಕಳೆದುಹೋಗಿರುವ, ವಿನಾಕಾರಣ ಸಂಕಷ್ಟವನ್ನನುಭವಿಸುತ್ತಿರುವವರು ಈ ಮೇಲಿನ ಪಂಗಡವರಿಗಿಂತ ಸಂಖ್ಯೆಯಲ್ಲಿ ಹೆಚ್ಚೇ. ಅವರಿಗೆ ಸ್ವಂತದ ಧ್ವನಿ ಹೋಗಲಿ, ಸಹಾಯ ಯಾಚಿಸಲೂ ಧ್ವನಿಯಿಲ್ಲ. ದುರಾದೃಷ್ಟವಶಾತ್ ಈ ಲೇಖನ ಅವರ ಬಗ್ಗೆಯಲ್ಲ. ಆದರೆ ಅವರ ಜೀವನವನ್ನು ನೇರವಾಗಿ ಬದಲಾಯಿಸುವ ಶಕ್ತಿಯುಳ್ಳ ಮೊದಲಿನ ಅಲ್ಪಸಂಖ್ಯಾತ ರೈತರ ಬಗ್ಗೆ.

ಕಾಡುತ್ತಿರುವ ಹಾಡು

೧) ರತ್ನಮಾಲ ಪ್ರಕಾಶ್ ಹಾಡಿರುವ ನಾನಳಿದ ಮೇಲೆನ್ನ - ಬರೆದವರು ಕುವೆಂಪು.
ರತ್ನಮಾಲಾ ಪ್ರಕಾಶ್ ಮನಸ್ಸು ಕರಗುವಂತೆ ಹಾಡಿದ್ದಾರೆ. ಒಳ್ಳೆಯ ಹಾಡು.

ಸಾಹಿತ್ಯ ಸಮ್ಮೇಳನದ ಹೊಸ್ತಿಲಿಗೊಂದು ಆಶಯ ಕವನ.

ನಾಳಿನಿಂದ ಕನ್ನಡ ಸಾಹಿತ್ಯ ಸಮ್ಮೇಳನ, ಶಿವಮೊಗ್ಗೆಯಲ್ಲಿ. ಆ ಸಂದರ್ಭದಲ್ಲೊಂದು ಆಶಯ ಕವನ, ಕನ್ನಡಕ್ಕಾಗಿ.

ಜಾರಕಾರಣಿಗಳ ಆಘ್ರಾಣ ಸಾಮರ್ಥ್ಯದ ಗುಟ್ಟು

ಬೊಗಳೂರು, ಡಿ.20- "ಕುಸುಮ ಗಂಧದ ಒಳಗೊ ಗಂಧದೊಳು ಕುಸುಮವೋ, ಕುಸುಮ ಗಂಧಗಳೆರಡೂ ಆಘ್ರಾಣದೊಳಗೊ" ಎಂಬ ದಾಸರ ಶಂಕೆಗೆ ಪರಿಹಾರ ದೊರೆಯುವ ದಿನಗಳು ಸಮೀಪಿಸಿವೆ. (bogaleragale.blogspot.com)

ಹಕ್ಕಿಗಳಿಗೆ ಮುನಿಸ್ಯಾಕೋ?

`ದಿ ಬರ್ಡ್ಸ್‌'

ಇವತ್ತಿನ ಹಾಲಿವುಡ್‌ ಹಾರರ್‌ ಸಿನಿಮಾಗಳನ್ನು ನೋಡಿದರೆ ಇರುವ ಅಲ್ಪಸ್ವಲ್ಪ `ಹಾರರ್‌' ಕಲ್ಪನೆಯೂ ಹಾರಿಹೋಗುತ್ತದೆ ಎಂಬ ಮಾತಿದೆ. ಚಿತ್ರವಿಚಿತ್ರ ಅಕರಾಳ ವಿಕರಾಳ ಮುಖಗಳ ಲಿವಿಂಗ್‌ ಡೆಡ್‌, ಜೀಪರ್ಸ್‌ ಕ್ರೀಪರ್ಸ್‌ನಂಥ ಕಲ್ಪನೆಗಳು ಒಂದು ಕಾಲದಲ್ಲಿ ಹಾಲಿವುಡ್‌ ಹಾರರ್‌ ಸಿನಿಮಾಗಳೆಂದರೆ ತುದಿಗಾಲಲ್ಲಿ ನಿಲ್ಲಿಸುವಂತಿದ್ದವು. ಆದರೆ ಇಂದಿನ ತಾಂತ್ರಿಕ ಯುಗದಲ್ಲಿ ತಂತ್ರಜ್ಞಾನಗಳ ಮೇಲಾಟವೇ ಹಾರರ್‌ ಆಗಿಬಿಟ್ಟಿದೆ. ರಿಲೀಫ್‌ಗೆ ಇರಲಿ ಅಂತಲೋ ಏನೋ, ಅದಕ್ಕೊಂದಿಷ್ಟು ಶೃಂಗಾರ ಭರಿತ ಒರಟು ಲೈಂಗಿಕತೆಯ ಲೇಪನವೂ ಆಗಿ ಹಾರರ್‌ ಅದೋ ಇದೋ ಎಂಬ ಗೊಂದಲಕ್ಕೂ ಪ್ರೇಕ್ಷಕ ಬೀಳಬೇಕಾಗುತ್ತದೆ. ಇಲ್ಲಿ ಬಳಕೆಯಾಗಿರುವ ತಾಂತ್ರಿಕತೆಯನ್ನು ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬಹುದೇ ಹೊರತು ಬೆಚ್ಚಿ ಬೀಳುವ ಅಥವಾ ಭಯಪಡುವ ಅಗತ್ಯವಿರುವುದಿಲ್ಲ!

ಕನ್ನಡಸಾಹಿತ್ಯ.ಕಾಂ ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣ - ಪೂರ್ವ‌ಭಾವಿ ಸಿದ್ಧತಾ ಸಭೆ

ಗೆಳೆಯರೆ,

"ಮಾಹಿತಿ ತಂತ್ರಜ್ಞಾನದ ಸಂದರ್ಭ‌ದಲ್ಲಿ ದೇಸಗತಿ ಭಾಷೆಗಳು ಮತ್ತು ಸಂಸ್ಕೃತಿ" - ಈ ವಿಷಯದ ಮೇಲೆ ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣವೊಂದನ್ನು, ನಡೆಸುವ ಪ್ರಸ್ತಾವನೆಯೊಂದಿಗೆ, ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದವರು ಕಳೆದ ಸೆಪ್ಟೆಂಬರ್ 16 ರಂದು ಬೆಂಗಳೂರಿನಲ್ಲಿ ಸಭೆಯೊಂದನ್ನು ನಡೆಸಿ, ಅಲ್ಲಿ, ಈ ಪ್ರಸ್ತಾವನೆಯನ್ನು ಚರ್ಚೆ‌ಗೆತ್ತಿಕೊಂಡು, ಸಭೆಯು ಸರ್ವಾ‌ನುಮತದಿಂದ ವಿಚಾರಸಂಕಿರಣವನ್ನು ನಡೆಸಲು ತೀರ್ಮಾನಿಸಿತು. ಇದರ ತಾರ್ಕಿಕ ಬೆಳವಣಿಗೆಯಾಗಿ, ವಿವಿಧ ಸಮಿತಿಗಳನ್ನು ರಚಿಸಲಾಯಿತು. ಈ ಸಮಿತಿಗಳ ನಿರ್ವಹಣೆಯ ಹೊಣೆಗಾರಿಕೆಯನ್ನು ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಹಲವಾರು ಸ್ವಯಂಪ್ರೇರಿತ ಸದಸ್ಯರು ವಹಿಸಿಕೊಂಡಿದ್ದು, ವಿಚಾರಸಂಕಿರಣದ ಸಿದ್ಧತೆಗಳಲ್ಲಿ ತೊಡಗಿದ್ದಾರೆ.