ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಾವಿನ ಚೇತೋಹಾರಿ ಆರಂಭ

ಇದೊಂದು ವಿಶಿಷ್ಟ ಪ್ರವಾಸ ಕಥನ. ಕೇವಲ ಸ್ಥಳಪುರಾಣಕ್ಕೋ, ಊಟ ತಿಂಡಿಗಳ ವರ್ಣನೆಗೋ ಕಥನವನ್ನು ಸೀಮಿತಗೊಳಿಸದೆ ಆದರೆ ಅವನ್ನೂ ಉಳಿಸಿಕೊಂಡು ಫಿನ್ಲೆಂಡ್ ಕನ್ನಡದ ಸಂಸ್ಕೃತಿಗಳ ನಡುವಣ ತುಲನೆ ಮತ್ತು ವಿಶ್ಲೇಷಣೆಗಳ ಜತೆಗೆ ಸಾಗುವ ಕಥನ ಇದು. ಇದು ಕನಿಷ್ಠ ಹತ್ತು ಭಾಗಗಳಲ್ಲಿ ಪ್ರಕಟವಾಗಲಿದೆ.

-ಸಂಪದ ನಿರ್ವಾಹಕ ಬಳಗ

ಸ್ಥಳ: ಫಿನ್ಲೆಂಡ್. ೨೦೦೪ರ ಏಪ್ರಿಲ್ ಎರಡು. ಸ್ಟುಡಿಯೊ ಒಳಕ್ಕಿರಲಿ ಫಿನ್ಲೆಂಡ್ ದೇಶದೊಳಕ್ಕೆ ಕಾಲಿಟ್ಟೇ ಕೇವಲ ಎರಡು ಗಂಟೆ ಕಾಲವಾಗಿತ್ತು. ಫೋನ್ ರಿಂಗಾಯಿತು. ಪರವಾಗಿಲ್ಲ. ಹೊರಕ್ಕೆ ಹೋಗುವ ಸೌಲಭ್ಯವಿನ್ನೂ ದೊರೆತಿರದಿಲ್ಲದಿದ್ದರೂ ಒಳ ಕರೆಗಳು ಬರುತ್ತಿವೆಯಲ್ಲ. ೨೦೦೧ರಲ್ಲಿ ಇಲ್ಲಿಗೆ ಬಂದಾಗ ಪರಿಚಯವಾಗಿದ್ದ ಛಾಯಾಗ್ರಾಹಕ ಸಕ್ಕರಿ ಇರಬಹುದೆ? ಈ ಸ್ಟುಡಿಯೊ-ಇನ್-ರೆಸಿಡೆನ್ಸಿಯ ಮುಖ್ಯಸ್ಥೆ, ಸಕ್ಕರಿಯ ಮಡದಿ ಇರ್ಮೆಲಿ ಕೊಕ್ಕೊ ಇರಬಹುದೆ? ಸದ್ಯದ ಮುಖ್ಯಸ್ಥೆ, ಕಲಾವಿದೆ ಮಿನ್ನ ಇರಬಹುದೆ?

ಫಿನ್ಲೆಂಡ್ ಒಂದು ವಿಹಂಗಮ ನೋಟಯಾರಾದರೇನು. ಫೋನ್ ರಿಂಗಾಯಿತಲ್ಲ, ಅಷ್ಟೇ ಸಾಕು. ಇಡೀ ಒಂದೆರೆಡು ಗಂಟೆ ಕಾಲ ಸಂಜೆಯ ಮಳೆ, ಮಂಜು, ಕಾರ್ಮೋಡದಲ್ಲಿ ಫೋನಿಗಾಗಿ, ಈಗಾಗಲೇ ಗೊತ್ತಿರುವ ರಸ್ತೆಗಳನ್ನೆಲ್ಲ ಅಲೆದು ಸಾಕಾಗಿತ್ತು. ಫೋನ್ ಬೂತುಗಳೇನೋ ದಂಡಿಯಾಗಿತ್ತು. ಆದರೆ ಅದಕ್ಕೆ ಬೇಕಾದ ಕಾರ್ಡ್ ಕೊಳ್ಳುವುದು ಹೇಗೆಂದು ಗೊತ್ತಿರಲಿಲ್ಲ. ಕಾರ್ಡ್ ಮಾಡುವ ಅಂಗಡಿಗಳೆಲ್ಲ ಮುಚ್ಚಿಬಿಟ್ಟಿದ್ದವು. ಯಾರನ್ನಾದರೂ ಕೇಳೋಣವೆಂದರೆ ತಪ್ಪು ವಿಳಾಸ ಹೇಳಲಿಕ್ಕಾದರೂ ಇದೇನು ತಮಿಳುನಾಡೆ? ಅಥವ ಯಾವಾಗೆಂದರೆ ಆವಾಗ, ಎಲ್ಲೆಂದರಲ್ಲಿ ಜನರು ಕಣ್ಣಿಗೆ ಬೀಳಲು ಇದೇನು ಬೆಂಗಳೂರೆ? ಕಣ್ಣಿಗೆ ಬೀಳಲೂ ಒಂದು ಹೊತ್ತುಗೊತ್ತಿರುವ'ಶಿಸ್ತಿನ ಜನ ಇವರು

ಬದುಕೆಂಬುದು ಮಿಥ್ಯ... ಸತ್ಯ?

"ನೀನು ದೊಡ್ದವನಾದಗ ಎನಾಗುತ್ತೀಯಾ?" ಎಂಬ ಪ್ರಶ್ನೆ ಕೇಳಿದಾಗ ಮಗು, ತನ್ನ ಮುಕ್ತ ಮನಸ್ಸಿನಿಂದ "ನಾನು ಏರೊಪ್ಲೇನ್ ಓಡಿಸ್ತೇನೆ!" ಎಂದು ಉತ್ತರಿಸಿತು... ಇದನ್ನು ಕೇಳಿದಾಗ, ನನ್ನ ಮನಸ್ಸಿನಲ್ಲಿ ಪ್ರಶ್ನೆಗಳ ಅಲೆಗಳು ಬಡಿದಂತಾಯಿತು! ಕೆಲವನ್ನು ಈ ಲೆಖನದಲ್ಲಿ ವ್ಯಕ್ತಪಡಿಸುತ್ತಿದ್ದೇನೆ!

ಬ್ಲಾಗ್ ಸ್ಪಾಟ್ ಬ್ಲಾಕ್ ಬಗ್ಗೆ

ಬ್ಲಾಗ್ ಸ್ಪಾಟ್ ಗಳನ್ನು ಬ್ಲಾಕ್ ಮಾಡಿ ಕೇಂದ್ರ ಸರಕಾರ ಬಹಳ ದೊಡ್ಡ ತಪ್ಪು ಮಾಡಿತು.

ಜನತೆಯ ಸ್ವಾತಂತ್ರವನ್ನು ಕಿತ್ತಿಕೊಂಡಂತೆ ಆಗ್ಗಿತ್ತು. ಯಾರು ಬ್ಲಾಗ್ ಮುಲಕ ಏನು ತಿಳಿಸುವುದಿಲ್ಲ. ಇದ್ದನ್ನು ಸಕಾ೯ರ ಒಪ್ಪಿಕೊಳ್ಳ ಬೇಕು.

ಸಂಪದದಲ್ಲಿ ಮತ್ತಷ್ಟು ಹೊಸತು

ಇಂದಿನಿಂದ ಸಂಪದ ಕುರಿತು ಚರ್ಚೆಗಾಗಿ [:http://www.sampada.info/cgi-bin/mailman/listinfo|ಹೊಸ ಅಂಚೆಪೆಟ್ಟಿಗೆಗಳು (Mailing lists) ಲಭ್ಯ]. ಸಂಪದವನ್ನು ಪ್ರತಿನಿತ್ಯ ಸಾವಿರಾರು ಓದುಗರಿಗೆ ತಲುಪಿಸುವಲ್ಲಿ, ಮತ್ತಷ್ಟು ಉತ್ತಮಪಡಿಸುವಲ್ಲಿ ಸಾಕಷ್ಟು ಶ್ರಮ ಹಿನ್ನೆಲೆಯಲ್ಲಿ ನಡೆಯುತ್ತ ಬಂದಿದೆ.

ಸರ್ವರ್‌ ನಿರ್ವಹಣೆ, ಆಕರದ ಬದಲಾವಣೆಗಳು - ಸಂಪದದೊಂದಿಗೆ ನಡೆದುಕೊಂಡು ಬಂದಿರುವ [:http://learning.sampada.net|ಲರ್ನಿಂಗ್ ಸೆಂಟರ್], [:http://kannada.sf.net|ಕನ್ನಡ ಲೋಕಲೈಸೇಶನ್] ಹಾಗೂ [:http://planet.sampada.net|ಪ್ಲಾನೆಟ್ ಕನ್ನಡಗಳಂತಹ] ತಾಣಗಳು ಹಾಗೂ ಪ್ರಾಜೆಕ್ಟುಗಳ ನಿರ್ವಹಣೆ - ಇವೆಲ್ಲ ನಮ್ಮಲ್ಲಿ ಕೆಲವರು ದಿನನಿತ್ಯದ ಕೆಲಸದ ಮಧ್ಯೆ ಬಿಡುವುಮಾಡಿಕೊಂಡು ನಡೆಸಿಕೊಂಡು ಹೋಗುತ್ತಿರುವ ಕೆಲಸಗಳು. ಇನ್ನು ಮುಂದೆ ಈ ಕೆಲಸಗಳನ್ನು ಉತ್ಸಾಹವಿದ್ದವರೊಂದಿಗೆ ಹಂಚಿಕೊಂಡು ನಿಜವಾದ ಸಮುದಾಯವೊಂದರಂತೆ ಮುಂದುವರೆಯುವ ಕನಸು ಹೊತ್ತು ಹೊಸ ಅಂಚೆಪಟ್ಟಿಗಳನ್ನು ಪ್ರಾರಂಭಿಸಲಾಗಿದೆ.

ಈ ಹಿಂದೆ ಹಲವರು ಸಂಪದದ ಹಿನ್ನೆಲೆಯ ಕೆಲಸಗಳಲ್ಲಿ ಭಾಗವಹಿಸಲು ಆಸಕ್ತಿ ತೋರಿ ನನಗೆ ಪತ್ರ ಬರೆದದ್ದುಂಟು. ದಿನನಿತ್ಯದ ಈ-ಮೇಯ್ಲುಗಳ ರಾಶಿಯಲ್ಲಿ ಓದಿ ಉತ್ತರಿಸಬೇಕೆಂದುಕೊಂಡ ಪತ್ರಗಳು ಹಾಗೆಯೇ ಕರಗಿ ಹೋಗಿ ಕಳೆದುಹೋದವು. ಉತ್ಸಾಹ ತೋರಿದವರು ಅದರಿಂದ ನಿರಾಶರಾಗದೆ ಈ ಅವಕಾಶ ಬಳಸಿಕೊಂಡು ಸಮುದಾಯದೊಂದಿಗೆ ಕೂಡಿ ಪಾಲ್ಗೊಳ್ಳುವರೆಂದು ಆಶಿಸುತ್ತೇನೆ.

ಹೊಸ ಅಂಚೆಪಟ್ಟಿಗಳು ಇಂತಿವೆ:

ನಾನು ಒಬ್ಬ ಹೊಸ ಸಧಸ್ಯನಾಗಿದ್ದೇನೆ

ನಾನು ಇಂದು ಹೊಸ ಸಧಸ್ಯ ನಾಗಿದ್ದೇನೆ.

ನಾನು ಸುಲೇಖ.ಕಾಂ ನಲ್ಲಿ ಆಂಗ್ಲ ದಲ್ಲಿ ಬರಹಗಳನ್ನು ಬರೆಯುತ್ತಿದ್ದೇನೆ.

ಉತ್ತರ ಕರ್ನಾಟಕದಲ್ಲಿ ಕನ್ನಡ-೪

....ಇದಕ್ಕೆ ಕಾರಣಗಳನ್ನು ಶ್ರೀ ದ. ರಾ. ಬೇಂದ್ರೆಯವರು ಹೀಗೆ ಕೊಡುತ್ತಾರೆ .
"ಎಷ್ಟೋ ದಿವಸಗಳಿಂದ ರಾಜಾಶ್ರಯವನ್ನು ಕಳೆದುಕೊಂಡು ತೊಳಲುತ್ತಿರುವ ಕರ್ನಾಟಕವು ಇಂಗ್ಲೀಷರ ಆಳ್ವಿಕೆಯಲ್ಲಿ ಭಿನ್ನಭಿನ್ನವಾಗಿರುವದು ಮೊದಲನೆಯದು. ಪೇಶ್ವೆಯರ ಆಳ್ವಿಕೆ ತೀರಿದ ಮೇಲೆ ಆರೇ ಅಮಲದಾರರ ಆಳ್ವಿಕೆಯು ಎರಡನೆಯದು.ರಾಜಾಶ್ರಯ ದೊರೆತ ಮೈಸೂರ ಕನ್ನಡವು ಯಾವುದೋ ಕಾರಣದಿಂದ ನಮ್ಮ ಕೂಡ ಬಳಕೆ ಮಾಡದೇ ಇದ್ದದ್ದು ಮೂರನೆಯ ಕಾರಣ. ಕಾಲಪ್ರತಿಕೂಲತೆಯು ನಾಲ್ಕನೇ ಕಾರಣ. ಮೊದಲನೆಯ ತರಗತಿಯ ಕರ್ತೃತ್ವಶಾಲಿಗಳು ಹುಟ್ಟದಿದ್ದುದು ಐದನೇಯ ಕಾರಣ".

ಗ್ರಾಮರ್ ಮತು ಗ್ಲ್ಯಾಮರ್ ! ( ನಗೆಹನಿ)

ಗುಂಡನ ಮದುವೆ ನಿಶ್ಚಯವಾಯಿತು. ತನ್ನ ಹೆಂಡತಿಯ ಹೆಸರನ್ನು ಹೇಗೆ ಬರೆಯಬೇಕು ? ಭಾಗೀರತಿ ಸರಿಯೊ ? ಅಥವಾ ಭಾಗೀರಥಿ ಸರಿಯೊ?

ಒಂದು ಶಬ್ದದ ಸುತ್ತ

ಬೆಳಗಾವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ ನನಗುಂಟಾದ ಆಡುಭಾಷೆಯ ಪ್ರಾರಂಭಿಕ ತೊಂದರೆಗಳನ್ನು ನೆನೆಸಿಕೊಂಡರೆ ಈಗಲೂ ನಗು ಬರದೇ ಇರದು. ಒಂದೆರಡು, ಆಗ 'ವಿಚಿತ್ರ'ವೆನಿಸಿದ ಶಬ್ದಗಳ ಬಗ್ಗೆ ನಾನು ತಲೆ ಕೆಡಿಸಿಕೊಂಡ ಪರಿಯನ್ನು ಇಂದಿಗೂ ನೆನೆಸಿ ಗೆಳೆಯರು ಜೋಕ್ ಮಾಡುತ್ತಾ ಇರುತ್ತಾರೆ. ಬಾಗಲಕೋಟೆಯ ಅನಿಲ್ ಢಗೆ ನನ್ನ 'ರೂಮ್ ಮೇಟ್' ಆಗಿದ್ದ. ಈ ಮರಾಠ ಹುಡುಗನ ಕನ್ನಡವೇ ವಿಚಿತ್ರವಾಗಿತ್ತು. ಅತ್ತ ಹುಬ್ಬಳ್ಳಿದ್ದೂ ಅಲ್ಲದ, ಇತ್ತ ಬಾಗಲಕೋಟೆಗೂ ಸಲ್ಲದ, ಮಧ್ಯೆ ಬೆಳಗಾವಿಗೂ ಹೊಂದದ ಕನ್ನಡವನ್ನು ಅನಿಲ್ ವಟಗುಟ್ಟುತ್ತಿದ್ದ. ಕರಾವಳಿಯ 'ಬಿಡಿಸಿ ಮಾತನಾಡುವ' ಶೈಲಿಗೆ ಹೊಂದಿಕೊಂಡಿದ್ದ ನನಗೆ ಇವರೆಲ್ಲ ವಿಚಿತ್ರ 'ಮಂದಿ'ಗಳೆನಿಸತೊಡಗಿದರು.

ವೈದ್ಯಲೋಕ

೧)

ಸಾವಿನ೦ಚಿನಲಿ ನಿ೦ತಿರುವ ರೋಗಿಯನು ಉಳಿಸುವರು
ಕಾವ ದೇವರ೦ದದಲಿ ದೇಹವನು ಕಾಪಾಡುವರು.ದೇವರೇ ಅವರು
ಆವ ಪಾಪದ ಫಲವೋ! ಉಗುರಿನಲಿ ಕಳೆವ೦ಥ ಸಣ್ಣ ಶುಶ್ರೂಷೆ
ರಣವಾಗಿ, bill ಗಳೇ 'ಬಾಣ'ವಾಗಿ,ಆಯ್ತು ಜೀವನದ ಕಡೆಯ ಪರಿಷೆ.